Uncategorized

ಸುಳ್ಯ : ತ್ಯಾಜ್ಯ ತೆರವುಗೊಳಿಸಲು ಕಲ್ಚೆರ್ಪೆ ನಿವಾಸಿಗಳಿಂದ ನಗರ ಪಂಚಾಯತ್ ಎದರು ಧರಣಿ

ಆಲೆಟ್ಟಿ ಗ್ರಾಮದ ಕಲ್ಚೆರ್ಪೆಯಲ್ಲಿ ರಾಶಿ ಹಾಕಲಾದ ಕಸವನ್ನು ತೆರವುಗೊಳಿಸಬೇಕು ಎಂದು ಸ್ಥಳೀಯ ನಿವಾಸಿಗಳು ನಗರ ಪಂಚಾಯತ್ ಎದುರು ಧರಣಿ ನಡೆಸಿದರು.ತ್ಯಾಜ್ಯಗಳನ್ನು ತೆರವುಗೊಳಿಸಬೇಕೆಂದುನಗರ ಪಂಚಾಯತ್ ಗೆ ಮನವಿ ಸಲ್ಲಿಸಲು ಸ್ಥಳೀಯ ನಿವಾಸಿಗಳು ಆಗಮಿಸಿದ್ದರು.ಈ ಸಂಧರ್ಭದಲ್ಲಿ ನಗರ ಪಂಚಾಯತ್ ನಲ್ಲಿ ಮನವಿ ಸ್ವೀಕರಿಸಿಲ್ಲವೆಂದು ಕಲ್ಚೆರ್ಪೆ ನಿವಾಸಿಗಳು ಧರಣಿ ಕುಳಿತರು.ಬಳಿಕ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಮುಖ್ಯಾಧಿಕಾರಿ ಬಸವರಾಜು ಸ್ಥಳಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆಯಿತು.ನಂತರ ಕಲ್ಚೆರ್ಪೆ ನಿವಾಸಿಗಳಿಂದ ಮನವಿ ಸ್ವೀಕರಿಸಿದರು. ಸೂಕ್ತ ಭರವಸೆಯ ಬಳಿಕ ಧರಣಿಯನ್ನು ಹಿಂದಕ್ಕೆ ಪಡೆಯಲಾಯಿತು.ಕಲ್ಚೆರ್ಪೆಯ […]

ಸುಳ್ಯ : ತ್ಯಾಜ್ಯ ತೆರವುಗೊಳಿಸಲು ಕಲ್ಚೆರ್ಪೆ ನಿವಾಸಿಗಳಿಂದ ನಗರ ಪಂಚಾಯತ್ ಎದರು ಧರಣಿ Read More »

ಕಲ್ಚೆರ್ಪೆಯಲ್ಲಿ ಗಬ್ಬೆದ್ದು ನಾರುತ್ತಿದೆ ಸುಳ್ಯ ನಗರದ ಕಸದ ರಾಶಿ

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕಲ್ಚೆರ್ಪೆಯಲ್ಲಿ ಸುಳ್ಯ ನಗರದ ತ್ಯಾಜ್ಯಗಳನ್ನು  ಬರ್ನಿಂಗ್ ಮಾಡಲಾಗುತ್ತಿದ್ದು ಕಳೆದ ಕೆಲವು ಸಮಯದಿಂದ ತ್ಯಾಜ್ಯಗಳು ಬರ್ನಿಂಗ್ ಆಗದೆ ರಾಶಿ ಬಿದ್ದುಕೊಂಡು ದುರ್ವಾಸನೆ ಬೀರುತ್ತಿದೆ‌.ಸುಳ್ಯ ನಗರದ ಪಂಚಾಯತ್ ವ್ಯಾಪ್ತಿಯ ತ್ಯಾಜ್ಯಗಳನ್ನುಇದೀಗ ನೇರವಾಗಿ   ದಿನ ನಿತ್ಯ ತಂದು ರಾಶಿ ಹಾಕಲಾಗುತ್ತದೆ.ಯಂತ್ರ ಕೆಟ್ಟು ಹೋದ ಹಿನ್ನಲೆಯಲ್ಲಿ ಅವೈಜ್ಞಾನಿಕ ವಾಗಿ ಡಿಸೇಲ್ ಪೆಟ್ರೋಲ್ ಸುರಿದು ಸ್ವಲ್ಪ ಪ್ರಮಾಣದ ಕಸವನ್ನು ಸುಡಲಾಗುತ್ತಿದೆ‌.ಇದರಿಂದ ಸುತ್ತಲ ಪರಿಸರದಲ್ಲಿ ವ್ಯಾಪಕವಾಗಿ ಹೊಗೆ ಕಾಣಿಸಿಕೊಂಡು ಸ್ಥಳೀಯರಿಗೆ ಸಮಸ್ಯೆಯಾಗಿದೆ‌ ಎಂದು ಸ್ಥಳೀಯರು ದೂರಿದ್ದಾರೆ.*ಗಬ್ಬು ವಾಸನೆ*ಕಲ್ಚೆರ್ಪೆ ತ್ಯಾಜ್ಯ ಘಟಕದಲ್ಲಿ

ಕಲ್ಚೆರ್ಪೆಯಲ್ಲಿ ಗಬ್ಬೆದ್ದು ನಾರುತ್ತಿದೆ ಸುಳ್ಯ ನಗರದ ಕಸದ ರಾಶಿ Read More »

ಇಂದು ಹಲವು ಜಿಲ್ಲೆಗಳಲ್ಲಿ ಭಾರೀ ಸುರಿಯುವ ಸಾಧ್ಯತೆ

ಇಂದು (ಅ. 17) ರಾಜ್ಯದ ಹಲವೆಡೆ ಮಳೆಯಾಗುವ ನಿರೀಕ್ಷೆಯಿದ್ದು, 24 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರ, ಹಾಸನ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು ಭಾಗದಲ್ಲಿ ಸಾಧಾರಣ ಮಳೆಯಾಗಲಿದೆ. ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಕೊಡಗು, ಬಾಗಲಕೋಟೆ, ಬೆಳಗಾವಿ, ಗದಗ, ಧಾರವಾಡ, ಹಾವೇರಿ ಮತ್ತು ಬಳ್ಳಾರಿ ,ದ.ಕ‌ ಉಡುಪಿ ಭಾಗದಲ್ಲಿ ಸಣ್ಣ ಪ್ರಮಾಣದ ಮಳೆಯಾಗುವ ನಿರೀಕ್ಷೆ ಇದೆ. ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ಕೊಪ್ಪಳ ಮತ್ತು ಬಾಗಲಕೋಟೆಯಲ್ಲಿ ಒಣ ಹವೆ ಅಥವಾ

ಇಂದು ಹಲವು ಜಿಲ್ಲೆಗಳಲ್ಲಿ ಭಾರೀ ಸುರಿಯುವ ಸಾಧ್ಯತೆ Read More »

ಅಪ್ರಾಪ್ತ ಯುವತಿಯ ಗರ್ಭಿಣಿಯಾಗಿಸಿದ ಆರೋಪಿಯ ಬಂಧನ

ಅಪ್ರಾಪ್ತ ಯುವತಿಯೊಬ್ಬಳನ್ನು ಗರ್ಭಿಣಿಯಾಗಿಸಿದ ಆರೋಪದಲ್ಲಿ ಯುವಕನೋರ್ವನನ್ನು ಸುಳ್ಯ ‌ಬಂಧಿಸಿದ್ದಾರೆ. ಯುವತಿಯ ಮನೆಯವರ ದೂರಿನ ಮೇರೆಗೆ ಬಂಧಿಸಿರುವುದಾಗಿ ತಿಳಿದು ಬಂದಿದೆ.ಮಂಡೆಕೋಲು ಗ್ರಾಮದ ದಿವಾಕರ ಮತ್ತು ಅದೇ ಗ್ರಾಮದ 14 ವರ್ಷ ಪ್ರಾಯದ ಯುವತಿ ಪ್ರೀತಿಸುತ್ತಿದ್ದರೆನ್ನಲಾಗಿದ್ದು ಯುವಕ ಆಕೆಯನ್ನು ಕೆಲ ತಿಂಗಳ ಹಿಂದೆ ದೈಹಿಕವಾಗಿ ಬಳಸಿಕೊಂಡ ಪರಿಣಾಮ ಆಕೆ ಗರ್ಭಧರಿಸಿದ್ದಾಳೆ. ಕಳೆದ ವಾರ ಆಕೆಗೆ ಹೊಟ್ಟೆ ನೋವು ಕಾಣಿಸಿಕೊಂಡಾಗ ಮನೆಯವರು ಸುಳ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷಿಸಿದಾಗ ಐದು ತಿಂಗಳ ಗರ್ಭಿಣಿಯಾಗಿರುವುದು ಗೊತ್ತಾಯಿತು. ಬಳಿಕ ಪೋಲೀಸರಿಗೆ ದೂರು ನೀಡಿದರು. ವಿಚಾರಣೆ

ಅಪ್ರಾಪ್ತ ಯುವತಿಯ ಗರ್ಭಿಣಿಯಾಗಿಸಿದ ಆರೋಪಿಯ ಬಂಧನ Read More »

ಎಲಿಮಲೆ-ಅರಂತೋಡು ಜಿಲ್ಲಾ ಮುಖ್ಯ ರಸ್ತೆಯ ಅಪಾಯಕಾರಿ ಮರಗಳ ತೆರವು

ಎಲಿಮಲೆ-ಅರಂತೋಡು ಜಿಲ್ಲಾ ಮುಖ್ಯ ರಸ್ತೆಯ ಹಾಸ್ಪಾರೆ ಎಂಬಲ್ಲಿ ರಸ್ತೆಗೆ ಹಾಗೂ ವಿದ್ಯುತ್ ಲೈನ್ ಗೆ ಬಾಗಿಕೊಂಡಿದ್ದ ಎರಡು ಮರಗಳನ್ನು ತೆರವುಗೊಳಿಸಲಾಯಿತು.ಸ್ಪಂದನ ಗೆಳೆಯರ ಬಳಗ (ರಿ.) ಅಡ್ತಲೆ ಇದರ ಸದಸ್ಯರ ಉಸ್ತುವಾರಿಯಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಗ್ರಾಮ ಪಂಚಾಯತ್ ಅರಂತೋಡು, ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಇಲಾಖೆಯವರ ಸಮನ್ವಯ ಕಾರ್ಯಾಚರಣೆಯೊಂದಿಗೆ ತೆರವುಗೊಳಿಸಲಾಯಿತು.ಅಪಾಯಕಾರಿ ಮರ ತೆರವುಗೊಳಿಸುವಲ್ಲಿ ಅನೇಕ ಮಂದಿ ಸಹಕರಿಸಿದರು.

ಎಲಿಮಲೆ-ಅರಂತೋಡು ಜಿಲ್ಲಾ ಮುಖ್ಯ ರಸ್ತೆಯ ಅಪಾಯಕಾರಿ ಮರಗಳ ತೆರವು Read More »

ನಾಳೆ ತಲಕಾವೇರಿಯಲ್ಲಿ ಶ್ರೀ ಕಾವೇರಿ ಮಾತೆ ತೀರ್ಥರೂಪಿಣಿಯಾಗಿ ಅವತರಿಸುವ ಕಾವೇರಿ ಜಾತ್ರೆಯ ಸಂಭ್ರಮ

ನಾಳೆ ದಿನ (ಅ.17) ಕೊಡಗು ಜಿಲ್ಲೆಯ ಕುಲ ದೇವತೆ, ಆರಾಧ್ಯ ದೇವಿ ಶ್ರೀ ಕಾವೇರಿ ಮಾತೆಯು ಐತಿಹಾಸಿಕ ಹಿನ್ನಲೆಯಂತೆ ವರ್ಷದ ಒಂದು ದಿನವಾದ ತುಲಾ ಸಂಕ್ರಮಣ ದಿನದಂದು ತಲಕಾವೇರಿಯಲ್ಲಿ ಶ್ರೀ ಕಾವೇರಿಯಮ್ಮ ತೀರ್ಥ ರೂಪಿಣಿಯಾಗಿ ಕಾಣಿಸಿಕೊಳ್ಳುವ ತೀರ್ಥ್ತೋದ್ಭವದ ಸಂಭ್ರಮ, ಸಡಗರದ ಕಾವೇರಿ ಜಾತ್ರೆಯ ಪುಣ್ಯ ದಿನ. ಮಧ್ಯಾಹ್ನ 1ಗಂಟೆ, 44 ನಿಮಿಷದ ಶುಭ ಮುಹೂರ್ತದಲ್ಲಿ ತೀರ್ಥ್ತೋದ್ಭವದ ಆಗಲಿದೆ.ಇದನ್ನು ಸಾವಿರಾರು ಭಕ್ತರು ಕಣ್ತುಂಬಿಕೊಳ್ಳಲಿದ್ದಾರೆ.ಕನ್ನಡ ನಾಡಿನ ಜೀವ ನದಿ ಕಾವೇರಿಯ ಹುಟ್ಟಿನ ಇತಿಹಾಸದ ಹಿನ್ನಲೆಯೇ ರೋಚಕ.ಸ್ಕಂದ ಪುರಾಣದಂತೆ ಕವೇರ ಮುನಿಗಳು

ನಾಳೆ ತಲಕಾವೇರಿಯಲ್ಲಿ ಶ್ರೀ ಕಾವೇರಿ ಮಾತೆ ತೀರ್ಥರೂಪಿಣಿಯಾಗಿ ಅವತರಿಸುವ ಕಾವೇರಿ ಜಾತ್ರೆಯ ಸಂಭ್ರಮ Read More »

ಇಹ ಲೋಕ ತ್ಯಜಿಸಿದ ಪ್ರಸಿದ್ಧ ಭಾಗತ ದಿನೇಶ್ ಅಮ್ಮಣ್ಣಾಯ

ತೆಂಕುತಿಟ್ಟು ಯಕ್ಷಗಾನ ರಂಗದ ಪ್ರಸಿದ್ಧ ಭಾಗವತ ದಿನೇಶ್ ಅಮ್ಮಣ್ಣಾಯ ಅವರು ಗುರುವಾರ(ಅ16) ಅರಸಿನಮಕ್ಕಿಯ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ 65 ವರ್ಷ ಪ್ರಾಯವಾಗಿತ್ತು.ದಾಮೋದರ ಮಂಡೆಚ್ಚರ ಶಿಷ್ಯರಾಗಿ ಪುತ್ತೂರು ಮೇಳದ ಮೂಲಕ ಕಲಾ ಜೀವನ ಆರಂಭಿಸಿ ನಾಲ್ಕು ದಶಕಕ್ಕೂ ಹೆಚ್ಚು ಕಾಲ ಯಕ್ಷಗಾನ ಭಾಗವತರಾಗಿ ಕಲಾ ಸೇವೆ ಮಾಡಿ ಯಕ್ಷ ಅಭಿಮಾನಿಗಳ ಮನಗೆದ್ದಿದ್ದರು.ಆ ಕಾಲದ ಪ್ರಸಿದ್ಧ ಡೇರೆ ಮೇಳವಾಗಿದ್ದ ಕರ್ನಾಟಕ ಮೇಳದಲ್ಲಿ ದಿಗ್ಗಜ ಕಲಾವಿದರನ್ನು ರಂಗದಲ್ಲಿ ಕುಣಿಸಿದ ಕೀರ್ತಿ ಅಮ್ಮಣ್ಣಾಯರದ್ದು.ತುಳು ಪ್ರಸಂಗಗಳಿಗೆ ತನ್ನ ಕಂಠ ಮಾಧುರ್ಯದಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದರ‌.ಎಡನೀರು

ಇಹ ಲೋಕ ತ್ಯಜಿಸಿದ ಪ್ರಸಿದ್ಧ ಭಾಗತ ದಿನೇಶ್ ಅಮ್ಮಣ್ಣಾಯ Read More »

ಪತ್ನಿಯನ್ನು ಇಂಜೆಕ್ಷನ್ ಕೊಟ್ಟು ಕೊಲೆ ಮಾಡಿದ ಪಾಪಿ ವೈದ್ಯ

ಬೆಂಗಳೂರು; ಪತ್ನಿಯನ್ನು ಇಂಜೆಕ್ಷನ್ ಕೊಟ್ಟು ಕೊಲೆ ಮಾಡಿದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ವೈದ್ಯ 6 ತಿಂಗಳ ಬಳಿಕ ಸಿಕ್ಕಿಬಿದ್ದ ಘಟನೆ ವರದಿಯಾಗಿದೆ. ಎಫ್‌ಎಸ್‌ಎಲ್ ವರದಿಯಲ್ಲಿ ಆರೋಪಿ ವೈದ್ಯನ ನೀಚ ಕೆಲಸ ಬಯಲಾಗಿದ್ದು ಆತನನ್ನು ಉಡುಪಿಯ ಮಣಿಪಾಲದಲ್ಲಿ ಪೊಲೀಸರು ಬಂಧಿಸಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯ ಜನರಲ್ ಸರ್ಜನ್ ಡಾ. ಮಹೇಂದ್ರ ರೆಡ್ಡಿ ಬಂಧಿತ ಆರೋಪಿ‌ ಎಂದು ತಿಳಿದು ಬಂದಿದೆ. ವಿಕ್ಟೋರಿಯಾ ಆಸ್ಪತ್ರೆಯಯಲ್ಲಿ ಸಿಬ್ಬಂದಿಯಾಗಿದ್ದ ಆಗಿದ್ದ ಕೃತಿಕಾ ರೆಡ್ಡಿ ಕೊಲೆಯಾದವರು.ಡಾ ಮಹೇಂದ್ರ ರೆಡ್ಡಿ ಹಾಗೂ ಕೃತಿಕಾ ರೆಡ್ಡಿ ಇಬ್ಬರು 2024ರ ಮೇ

ಪತ್ನಿಯನ್ನು ಇಂಜೆಕ್ಷನ್ ಕೊಟ್ಟು ಕೊಲೆ ಮಾಡಿದ ಪಾಪಿ ವೈದ್ಯ Read More »

ಇಂದು ಭಾರೀ ಮಳೆ ಸಾಧ್ಯತೆ

ಕರಾವಳಿ ಮತ್ತು ದಕ್ಷಿಣ ಒಳನಾಡು ಭಾಗಗಳಲ್ಲಿ ನಿನ್ನೆಯಿಂದ ಭಾರೀ ಮಳೆಯಾಗುತ್ತಿದೆ. ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಇಂದೂ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಹಲವು ಭಾಗಗಳಲ್ಲಿ ಇನ್ನೂ ಮೂರು ದಿನ ಸಾಧಾರಣ ಮಳೆ ಮುಂದುವರಿಯುವ ನಿರೀಕ್ಷೆಯಿದೆ. ಅಕ್ಟೋಬ‌ರ್ 18ರಿಂದ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ.

ಇಂದು ಭಾರೀ ಮಳೆ ಸಾಧ್ಯತೆ Read More »

ಪುಣಚ ಗ್ರಾಪಂ ಪ್ರಭಾರ ಪಿಡಿಓ ಆಗಿ ಸಂಪಾಜೆ ಗ್ರಾಮದ ಸೃಜನ್ ಎ.ಜಿ ಅಧಿಕಾರ ಸ್ವೀಕಾರ

ಪುಣಚ ಗ್ರಾಮ ಪಂಚಾಯತ್‌ನ ನೂತನ ಪ್ರಭಾರ ಅಭಿವೃದ್ಧಿ ಅಧಿಕಾರಿಯಾಗಿ ಸೃಜನ್ ಎ.ಜಿಯವರು ಅಧಿಕಾರ ವಹಿಸಿಕೊಂಡಿದ್ದಾರೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿದ್ದ ರವಿಯವರು ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಸೃಜನ್ ಎ.ಜಿಯವರು ಅಧಿಕಾರ ವಹಿಸಿಕೊಂಡಿದ್ದಾರೆ.ಸಂಪಾಜೆ ಗ್ರಾಮದ ದೊಡ್ಡಡ್ಕ ನಿವಾಸಿಯಾಗಿರುವ ಸೃಜನ್‌ರವರು ಈ ಹಿಂದೆ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮ ಪಂಚಾಯತ್‌ನಲ್ಲಿ ಗ್ರೇಡ್-1 ಕಾರ್ಯದರ್ಶಿಯಾಗಿ ಪ್ರಭಾರ ಪಿಡಿಓ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಲ್ಲಿಂದ ಪುಣಚ ಗ್ರಾಪಂ ಗೆ ವರ್ಗಾವಣೆಗೊಂಡು ಹೆಚ್ಚುವರಿಯಾಗಿ ಕರೋಪಾಡಿ ಗ್ರಾಪಂನ ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಲಿದ್ದಾರೆ.

ಪುಣಚ ಗ್ರಾಪಂ ಪ್ರಭಾರ ಪಿಡಿಓ ಆಗಿ ಸಂಪಾಜೆ ಗ್ರಾಮದ ಸೃಜನ್ ಎ.ಜಿ ಅಧಿಕಾರ ಸ್ವೀಕಾರ Read More »

error: Content is protected !!
Scroll to Top