Uncategorized

ಸಂಪಾಜೆ : ಕೊಡಗು ದ.ಕ ಗಡಿಭಾಗದಲ್ಲಿ ಭಾರೀ ಮಳೆ

ಅರಂತೋಡು : ಫೆ.18ರಂದು ದ.ಕ ಕೊಡಗು ಗಡಿಭಾಗವಾದ ಸಂಪಾಜೆ ಚೆಕ್ ಪೋಸ್ಟ್ ವಠಾರದಲ್ಲಿ ಸಾಧಾರಣ ಮಳೆ ಸುರಿದ ಘಟನೆ ವರದಿಯಾಗಿದೆ.ಕಳೆದ ಕೆಲವು ದಿನಗಳಿಂದ ಸುಡು ಬಿಸಿಲಿನ ವಾತಾವರಣ ಇದ್ದು, ಇಂದು ಸುಮಾರು 11 ಗಂಟೆಯ ವೇಳೆಗೆ ಮೋಡ ಕವಿದ ವಾತಾವರಣವಿತ್ತು. ಸಂಜೆ ೪.೩೦ರ ವೇಳೆಗೆ ಧಾರಾಕಾರ ಮಳೆ ಸುರಿಯಿತು. ಸುಮಾರು ೧೦ ನಿಮಿಷಗಳ ಕಾಲಮಳೆ ಸುರಿದು ಇಳೆ ತಂಪಾಯಿತು.ಅರೆಕಲ್ಲು,ಕೊಯನಾಡು,ಜೋಡುಪಾಲ,ಮದೆನಾಡು,ದೇವರಕೊಲ್ಲಿ ಇತರೆಡೆ ಮಳೆ ಸುರಿದಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಸುಳ್ಯ ನಗರ ಸೇರಿದಂತೆ ತಾಲೂಕಿನ ಗ್ರಾಮಗಳಲ್ಲಿ ಕಳೆದ ಮೂರು ದಿವಸಗಳಿಂದ […]

ಸಂಪಾಜೆ : ಕೊಡಗು ದ.ಕ ಗಡಿಭಾಗದಲ್ಲಿ ಭಾರೀ ಮಳೆ Read More »

ತೊಡಿಕಾನ : ವೈಭವದಿಂದ ನಡೆದ ಮಲ್ಲಿಕಾರ್ಜುನ ದೇವರ ದರ್ಶನ ಬಲಿ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪೂರ್ವ ಸಂಪ್ರದಾಯದಂತೆ ಬ್ರಹ್ಮಶ್ರೀ ಆರೋತ್ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿಮಹಾಶಿವರಾತ್ರಿ ಉತ್ಸವದ ಪ್ರಯಕ್ತ ಫೆ.16ರಂದು ಶ್ರೀ ದೇವರ ದರ್ಶನ ಬಲಿ ನಡೆಯಿತು.ಬಳಿಕ ಮಹಾಪೂಜೆ ನಡೆದು ಪ್ರಸಾದ ವಿತರಣೆ,ತುಲಾಭಾರ ಸೇವೆ ನಡೆಯಿತು.ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವ ಯು.ಕೆ,ಸದಸ್ಯರಾದ ಕೆ.ಕೆ ಬಾಲಕ್ರಷ್ಣ ಕುಂಟುಕಾಡು,ಮಾಲತಿ ಬೋಜಪ್ಪ ಗೌಡ,ವಸಂತ ಪೆಲ್ತಡ್ಕ, ತಿಮ್ಮಯ್ಯ ಮೆತ್ತಡ್ಕ,ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯು.ಎಂ ಕಿಶೋರ್ ಉಳುವಾರು,ಸದಸ್ಯರಾದ ಚಂದ್ರಕಲಾ ಕುತ್ತಮೊಟ್ಟೆ,ಎಸ್.ಪಿ ಲೋಕನಾಥ ,ಅರಂತೋಡು ತೊಡಿಕಾನ ಪ್ರಾಥಮಿಕ ಕ್ರಷಿ ಪತ್ತಿನ

ತೊಡಿಕಾನ : ವೈಭವದಿಂದ ನಡೆದ ಮಲ್ಲಿಕಾರ್ಜುನ ದೇವರ ದರ್ಶನ ಬಲಿ Read More »

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭ ಸುಳ್ಯ ಪ್ರೆಸ್ ಕ್ಲಬ್ ವಠಾರದಲ್ಲಿ ನಡೆಯಿತು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಪತ್ರಕರ್ತಕರಿಗೆ ಪಿಂಚನಿ ಯೋಜನೆ ಜಾರಿಗೆ ತರಲು ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.ಅಖಿಲ ಭಾರತ ಸಂತ ಸಮಿತಿಯ ರಾಷ್ಟ್ರೀಯ ಉಪಾಧ್ಯಕ್ಷ ಮರ್ಕಂಜದ ಅನ್ನಪೂರ್ಣೇಶ್ವರಿ ಸಿದ್ದಮಠದ ಸ್ವಾಮೀಜಿಗಳಾದ ರಾಜೇಶನಾಥಜೀಯವರು ಸಭಾ ಕಾರ್ಯಕ್ರಮ ಉದ್ಘಾಟಿಸಿದರು.ಜಿಲ್ಲಾ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಪ್ರತಿಜ್ಞಾವಿಧಿ ಬೋಧಿಸಿ ಪದಗ್ರಹಣ ನೆರವೇರಿಸಿದರು. ರಾಜ್ಯ

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ Read More »

ಪಂಜ :: ರಕ್ತೇಶ್ವರಿ ದೈವದ ಕೋಲ

ಸುಳ್ಯ ತಾಲೂಕಿನ ಪಂಜ ಸೀಮೆ ದೇವಾಲಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಾಲಯದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವವು ಜ.24 ರಿಂದ ಫೆ.9 ರ ತನಕ, ವಿವಿಧ ವೈಧಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.2 ರಂದು ಮುಂಜಾನೆ ಪೂರ್ವ ಸಂಪ್ರದಾಯದಂತೆ ನಾಗತೀರ್ಥದ ಮೂಲಸ್ಥಾನ ಬಂಟಮಲೆಯಲ್ಲಿ ಶ್ರೀ ದೇವಾಲಯಕ್ಕೆ ತೀರ್ಥ ತರಲಾಯಿತು, ಸಂಜೆ ಶ್ರೀ ರಕೇಶ್ವರಿ ದೈವದ ಸನ್ನಿಧಿಯಲ್ಲಿ ತಂಬಿಲ ಸೇವೆ ಹಾಗೂ ಭಂಡಾರ ತೆಗೆಯುವುದು. ರಾತ್ರಿ ದೇಗುಲದಲ್ಲಿ ಮಹಾಪೂಜೆ. ನಿತ್ಯ ಬಲಿ, ಅನ್ನಸಂತರ್ಪಣೆ. ಶ್ರೀ ರಕೇಶ್ವರಿ ದೈವದ

ಪಂಜ :: ರಕ್ತೇಶ್ವರಿ ದೈವದ ಕೋಲ Read More »

ಪೆರುವಾಜೆ : ಜ.30ಕ್ಕೆ ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವರ ವರ್ಷಾವಧಿ ಉತ್ಸವ

ಸುಳ್ಯ ತಾಲೂಕು ಪೆರುವಾಜೆ ಗ್ರಾಮದ ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವರ ವರ್ಷಾವಧಿ ಉತ್ಸವವುಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಜ.30ರಂದು ನಡೆಯಲಿದೆ.ಆ ಪ್ರಯುಕ್ತ ಶ್ರೀ ದೇವರ ಸನ್ನಿಧಿಯಲ್ಲಿ ಜರಗಲಿರುವ ಈ ದೇವತಾ ಕಾರ್ಯದಲ್ಲಿ ಭಕ್ತಾಭಿಮಾನಿಗಳಾದ ತಾವೆಲ್ಲರೂ ಭಾಗಿಗಳಾಗಿ ಶ್ರೀ ದೇವರ ಗಂಧ ಪ್ರಸಾದವನ್ನು ಸ್ವೀಕರಿಸಿ. ಶ್ರೀ ವಿಷ್ಣುಮೂರ್ತಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಳದ ಆಡಳಿತ ಮಂಡಳಿಯವರು ವಿನಂತಿಸಿಕೊಂಡಿದ್ದಾರೆ.ಮಕರ ಮಾಸ ೧೬ನೇ ದಿನಾಂಕ 30-01-2026ನೇ ಶುಕ್ರವಾರಪೂರ್ವಾಹ್ನ ಘಂಟೆ 8.00 ರಿಂದದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ ಮತ್ತು ಶುದ್ದಿ ಕಲಶ

ಪೆರುವಾಜೆ : ಜ.30ಕ್ಕೆ ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವರ ವರ್ಷಾವಧಿ ಉತ್ಸವ Read More »

ತಂದೆಗೆ ಚಾಕುವಿನಿಂದ ಮಗ ಇರಿದು ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ತಾನು ಶರಣಾಗಲು ಕಾರಣವೇನು ?

ಕಡಬ ತಾಲೂಕಿನ ರಾಮಕುಂಜ ಗ್ರಾಮದಲ್ಲಿ ತಂದೆ-ಮಗನ ನಡುವೆ ನಡೆದ ಗಲಾಟೆಯಲ್ಲಿ ತಂದೆಗೆ ಚಾಕುವಿನಿಂದ ಇರಿದು, ಬಳಿಕ ಮಗನೂ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ವಸಂತ ಅಮೀನ್ ಹಾಗೂ ಅವರ 15 ವರ್ಷದ ಮಗ ಮೋಕ್ಷ ಇಬ್ಬರೇ ವಾಸವಿದ್ದರು. ಗಲಾಟೆ ವೇಳೆ ಮೋಕ್ಷ ತಂದೆಯ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ವಸಂತ ಅಮೀನ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.ಗಾಯಗೊಂಡ ತಂದೆಯನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.,ಈ ಘಟನೆಗೆ ಕಾರಣವೇನು ಎಂದು

ತಂದೆಗೆ ಚಾಕುವಿನಿಂದ ಮಗ ಇರಿದು ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ತಾನು ಶರಣಾಗಲು ಕಾರಣವೇನು ? Read More »

ಪಂಜ : ಜಾತ್ರೆಗೆ ಗೊನೆ ಮೂಹೂರ್ತ

ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವಕ್ಕೆ ಜ.24ರಂದು ಗೊನೆ ಮುಹೂರ್ತ ನಡೆಯಿತು.ಕುದ್ವ ತೋಟದಲ್ಲಿ ಗೊನೆ ಕಡಿದು ಬ್ಯಾಂಡ್‌ ವಾಲಗದ ಮೆರವಣಿಗೆಯಲ್ಲಿ ದೇವಳಕ್ಕೆ ತಂದು ಪೂಜೆ ಸಲ್ಲಿಸಲಾಯಿತು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಧರ್ಮಣ್ಣ ನಾಯ್ಕ ಗರಡಿ, ಮಾಯಿಲಪ್ಪ ಗೌಡ ಪಟ್ಟೆ ಎಣ್ಣೂರು, ಸಂತೋಷ್ ಕುಮಾ‌ರ್ ರೈ ಬಳ್ಳ, ಧರ್ಮಪಾಲ ಗೌಡ ಮರಕ್ಕಡ, ಧರ್ಮಣ್ಣ ನಾಯ್ಕ ಗರಡಿ, ಮಾಲಿನಿ ಕುದ್ದ, ಪವಿತ್ರ ಮಲ್ಲೆಟಿ, ಸತ್ಯನಾರಾಯಣ ಭಟ್

ಪಂಜ : ಜಾತ್ರೆಗೆ ಗೊನೆ ಮೂಹೂರ್ತ Read More »

ಜ.24ಕ್ಕೆ ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಮೈದಾನದಲ್ಲಿ ಜಾತ್ರೋತ್ಸವಕ್ಕೆ ಅಂಗಡಿ ಸ್ಥಳ ಬಹಿರಂಗ ಏಲಂ

ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಮೈದಾನದಲ್ಲಿ ಜಾತ್ರೋತ್ಸವಕ್ಕೆ ಜ.24 ಶನಿವಾರ ದಂದು ಮುಂಜಾನೆ 10 ರಿಂದ ಅಂಗಡಿ ಸ್ಥಳ ಬಹಿರಂಗ ಏಲಂ ನಡೆಯಲಿದೆ.ಮಧ್ಯಾಹ್ನ ಗಂಟೆ 3 ಕ್ಕೆ ಲೈಟಿಂಗ್ಸ್- ಸೌಂಡ್ಸ್, ಶಾಮಿಯಾನ, ದಿನಸಿ ಸಾಮಗ್ರಿಗಳಿಗೆ ಪ್ರತ್ಯೇಕವಾಗಿ ಟೆಂಡ‌ರ್ ಕರೆಯಲಾಗಿದೆ. ಟೆಂಡ‌ರ್ ಪಾಲ್ಗೊಳ್ಳುವವರು ಮುಚ್ಚಿದ ಲಕೋಟೆಯಲ್ಲಿ ಟೆಂಡ‌ರ್ ಅರ್ಜಿ ಅಧ್ಯಕ್ಷರಿಗೆ ನೀಡುವುದು. ಬಳಿಕ ಟೆಂಡರ್ ದಾರರ ಸಮಕ್ಷಮದಲ್ಲಿ 3.30ಕ್ಕೆ ಟೆಂಡರ್ ಅರ್ಜಿ ತೆರೆಯಲಾಗುತ್ತದೆ ಎಂದು ದೇವಳದ ಪ್ರಕಟಣೆಯಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್

ಜ.24ಕ್ಕೆ ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಮೈದಾನದಲ್ಲಿ ಜಾತ್ರೋತ್ಸವಕ್ಕೆ ಅಂಗಡಿ ಸ್ಥಳ ಬಹಿರಂಗ ಏಲಂ Read More »

ಸುಳ್ಯ ಪಯಸ್ವಿನಿ ಜೆಸಿಐ ಅಧ್ಯಕ್ಷೆ ‌ಲತಾಶ್ರೀ ಸುಪ್ರೀತ್ ಮೋಂಟಡ್ಕ ತಂಡದ ಪದಪ್ರದಾನ ಸಮಾರಂಭ

ಜೆಸಿಐ ಸುಳ್ಯ ಪಯಸ್ವಿನಿ ಇದರ 2026 ನೇ ಸಾಲಿನ ಅಧ್ಯಕ್ಷೆ ಶ್ರೀಮತಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ತಂಡದ ಪದಪ್ರದಾನ ಸಮಾರಂಭ ಜ.20ರಂದು ಸುಳ್ಯ ಅರಂಬೂರು ಗ್ರ್ಯಾಂಡ್ ರಸಪಾಕ ಹೋಟೆಲ್ ಸಭಾಂಗಣದಲ್ಲಿ ‌ನಡೆಯಿತು. ಸಭೆಯ ಪೂರ್ವಾರ್ದ ಭಾಗದ ಅಧ್ಯಕ್ಷತೆಯನ್ನು ಜೆಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷ ಸುರೇಶ್ ಕಾಮತ್ ರ ವಹಿಸಿ 2025ರ ವಾರ್ಷಿಕ ಕಾರ್ಯ ಚಟುವಟಿಕೆಗಳನ್ನು ವಿವರಿಸಿದರು. ಜೇಸಿಐ ಭಾರತದ ವಲಯ 15ರ ನಿಕಟಪೂರ್ವ ವಲಯಾಧ್ಯಕ್ಷರಾದ ಜೇಸಿ ಸನೇಟರ್ ಅಭಿಲಾಸ್ ಬಿ. ಎ. ಇವರ ಉಪಸ್ಥಿತಿಯಲ್ಲಿ ಪದಪ್ರಧಾನ ಕಾರ್ಯ

ಸುಳ್ಯ ಪಯಸ್ವಿನಿ ಜೆಸಿಐ ಅಧ್ಯಕ್ಷೆ ‌ಲತಾಶ್ರೀ ಸುಪ್ರೀತ್ ಮೋಂಟಡ್ಕ ತಂಡದ ಪದಪ್ರದಾನ ಸಮಾರಂಭ Read More »

ಸುಳ್ಯ ತಾಲೂಕು ರಚನೆಯಾಗಿ 60 ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಷಷ್ಟ್ಯಬ್ಧ ಆಚರಣೆ : ವೈಭವದ ಮೆರವಣಿಗೆ

ಸುಳ್ಯ ತಾಲೂಕು ರಚನೆಯಾಗಿ 60 ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಷಷ್ಟ್ಯಬ್ಧ ಆಚರಣೆ ಜ.21ರಂದುಬ ನಡೆಯಿತು.ಸುಳ್ಯ ಜ್ಯೋತಿ ಸರ್ಕಲ್ ಬಳಿಯಿಂದ ವಿವಿಧ ಸಂಘ ಸಂಸ್ಥೆಗಳು ಗ್ರಾಮ ಪಂಚಾಯತ್ ನವರು ಸೇರಿ ಸಾವಿರಾರು ಮಂದಿಯ ಕೂಡುವಿಕೆಯೊಂದಿಗೆ ಬೃಹತ್ ಮೆರವಣಿಗೆ ಸುಳ್ಯನಗರದಲ್ಲಿ ನಡೆಯಿತು.ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ.ಕೆ.ವಿ.ರೇಣುಕಾಪ್ರಸಾದ್ ಮೆರವಣಿಗೆಗೆ ಚಾಲನೆ ನೀಡಿದರು. ನಮ್ಮ ತಾಲೂಕು ಆಗುವಲ್ಲಿ ನಮ್ಮಕೆ.ವಿಜಿ ನಮ್ಮ‌ ತಂದೆ ಮುಂಚೂಣಿಯಲ್ಲಿದ್ದರು. ಜತೆಗೆ ಹಲವರು ಶ್ರಮಿಸಿದ್ದಾರೆ. ಆ ಎಲ್ಲ ವ್ಯಕ್ತಿಗಳನ್ನು ನಾವು ಸ್ಮರಿಸಿಕೊಳ್ಳಬೇಕು. ಸುಳ್ಯ ತಾಲೂಕು ರಚನೆಯ ಆದುದರಿಂದ ಸುಳ್ಯ

ಸುಳ್ಯ ತಾಲೂಕು ರಚನೆಯಾಗಿ 60 ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಷಷ್ಟ್ಯಬ್ಧ ಆಚರಣೆ : ವೈಭವದ ಮೆರವಣಿಗೆ Read More »

error: Content is protected !!
Scroll to Top