Uncategorized

ಚೂರಿಯಿಂದ ಇರಿದು ಪತ್ನಿಯ ಕೊಲೆ ಮಾಡಿದ ಪತಿ

ಪತಿ ತನ್ನ ಪತ್ನಿಗೆ ಚೂರಿಯಿಂದ ಇರಿದುಕೊಲೆ ಮಾಡಿದ ಘಟನೆ ಜು.17ರ ಗುರುವಾರ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಸಮೀಪದ ಬಾಜಾರು ಎಂಬಲ್ಲಿ ನಡೆದಿದೆ.ಬಾಜಾರು ನಿವಾಸಿ ಝೀನತ್ (41) ಮೃತ ಮಹಿಳೆ. ಪತಿ ರಫೀಕ್ ಕೊಲೆ ಮಾಡಿದ ಆರೋಪಿ ಎಂದು‌ ತಿಳಿದು ಬಂದಿದೆ.ಮುಂಜಾನೆ ಬೆಳಗ್ಗೆ ಪತಿ-ಪತ್ನಿ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಪತ್ನಿಗೆ ರಫೀಕ್ ಚೂರಿಯಿಂದ ಇರಿದು ಹತ್ಯೆ ಮಾಡಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಚೂರಿಯಿಂದ ಇರಿದು ಪತ್ನಿಯ ಕೊಲೆ ಮಾಡಿದ ಪತಿ Read More »

ಗ್ರಾಮ ಪಂಚಾಯತ್ ಅಧ್ಯಕ್ಷ ನಿಧನ

ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಸಂತಶೆಟ್ಟಿ (48) ಎನ್ಮಾಡಿ ಯವರು ಅಲ್ಪ ಕಾಲದ ಅಸೌಖ್ಯದಿಂದ ಜುಲೈ 16 ರಂದು ರಾತ್ರಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ. ಅವರು ಪತ್ನಿ, ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧು ಬಳಗದವರನ್ನು ಆಗಲಿದ್ದಾರೆ.

ಗ್ರಾಮ ಪಂಚಾಯತ್ ಅಧ್ಯಕ್ಷ ನಿಧನ Read More »

ಅರಂತೋಡು : ಹೊಟೇಲ್ ಮಾಲೀಕ ನಿಧನ

ಅರಂತೋಡು ತೆಕ್ಕಿಲ್ ಕಾಂಪ್ಲೆಕ್ಸ್ ನಲ್ಲಿ ಸುಮಾರು 24 ವರ್ಷ ಗಳಿಂದ ಹೋಟೆಲ್ ಉದ್ಯಮ ನಡೆಸುತ್ತಿದ್ದ ಯೋಗೀಶ( 42 ವ)ರವರು ಇಂದು ನಿಧನ ರಾದರು. ಮೃತರ ತಾಯಿ ಮೀನಾಕ್ಷಿ, ಪತ್ನಿ ಲಲಿತಾ (ರೇಶ್ಮಾ) ಧನುಷ್ ,ಗೌಶಿಕ್, ಎರಡು ಗಂಡು ಮಕ್ಕಳನ್ನು ಅಗಲಿದ್ದಾರೆ

ಅರಂತೋಡು : ಹೊಟೇಲ್ ಮಾಲೀಕ ನಿಧನ Read More »

ಸಂಪಾಜೆ : ಕುಡಿಯುವ ನೀರು ಪೂರೈಕೆ ಹಾಗೂ ಬಳಕೆ ಬಗ್ಗೆ ಮಾಹಿತಿ ಹಾಗೂ ವಿಶೇಷ ಗ್ರಾಮ ಸಭೆ

ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಅದ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಕುಡಿಯುವ ನೀರು ಪೂರೈಕೆ ಹಾಗೂ ಬಳಕೆ ಬಗ್ಗೆ ಮಾಹಿತಿ ಹಾಗೂ ವಿಶೇಷ ಗ್ರಾಮ ಸಭೆ ನಡೆಯಿತು ಕುಡಿಯುವ ನೀರಿನ ಯೋಜನೆ ಜಾರಿ ಬಳಕೆ ಕುರಿತು ಮಾಹಿತಿ ಹಾಗೂ ಮೀಟರ್ ಆಧಾರದಲ್ಲಿ ಎಷ್ಟು ನೀರನ್ನು ಪ್ರತಿ ಮನೆಗೆ ತಲುಪಿಸುವ ಬಗ್ಗೆ ಸುರೇಶ್ ಮಾಹಿತಿ ನೀಡಿದರು. ನೋಡೆಲ್ ಅಧಿಕಾರಿಯಾಗಿ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಸಹಾಯಕ ಅಭಿಯಂತರಾರದ ಚೈತ್ರಾ ಮಾಹಿತಿ ನೀಡಿದರು ಪಂಚಾಯತ್ ಅಬಿವೃದಿ ಆಧಿಕಾರಿ

ಸಂಪಾಜೆ : ಕುಡಿಯುವ ನೀರು ಪೂರೈಕೆ ಹಾಗೂ ಬಳಕೆ ಬಗ್ಗೆ ಮಾಹಿತಿ ಹಾಗೂ ವಿಶೇಷ ಗ್ರಾಮ ಸಭೆ Read More »

ಪೆರಾಜೆಯಿಂದ ಓಡಿಸಿದ ಕಾಡಾನೆ ತೊಡಿಕಾನದಲ್ಲಿ ತಡರಾತ್ರಿ ಪತ್ಯಕ್ಷ! ಸ್ಥಳೀಯರ ನಿದ್ದೆಗೆಡಿಸಿದ ಕಾಡಾನೆ

ಪೆರಾಜೆ ಗ್ರಾಮದ ಖಾಸಗಿ ತೋಟದಲ್ಲಿ ಬೀಡುಬಿಟ್ಟ ಒಂಟಿ ಕಾಡನೆಯನ್ನು ಕೊಡಗಿನ ಪೆರಾಜೆ ಗ್ರಾಮದಿಂದ ಜು.15ರಂದು ದ.ಕ. ಜಿಲ್ಲೆಯ ತೊಡಿಕಾನ ಗ್ರಾಮಕ್ಕೆ ಅರಣ್ಯ ಇಲಾಖೆಯ ಕಾರ್ಯಾಚರಣೆ ಮೂಲಕ ಅಟ್ಟಿಸಲಾಗಿದ್ದು ಆ ಕಾಡಾನೆ ತೊಡಿಕಾನ ಗ್ರಾಮದಲ್ಲಿ ತಡರಾತ್ರಿ ಕಾಣಿಸಿಕೊಂಡು ಗ್ರಾಮದ ಕೆಲವು ಜನರ ತೋಟಗಳಿಗೆ ದಾಳಿ ಮಾಡಿದೆ.ಅಮಚೂರು ಬೆಟ್ಟದಪುರ ಚಿಪ್ಪುರುಗುಡ್ಡೆಗೆ ಅಟ್ಟಿಸಲಾದ ಕಾಡಾನೆ ಬಳಿಕ ಕುಂಟುಕಾಡು ಭಾಗದಲ್ಲಿ ಕಾಣಿಸಿಕೊಂಡಿದೆ.ಅಲ್ಲಿಂದ ಕಾಡಾನೆಯನ್ನು ಸ್ಥಳೀಯರು ಓಡಿಸಿದ್ದು ಬಳಿಕ ಅದು ನಾಗನಮೂಲೆ,ಚಿಟ್ಟನ್ನೂರು,ಎಡ್ಚಾರ್ ಭಾಗದ ರೈತರ ತೋಟಗಳಿಗೆ ನುಗ್ಗಿ ಬೆಳೆನಾಶ ಮಾಡಿವೆ ಎಂದು ತ ರೈತರು

ಪೆರಾಜೆಯಿಂದ ಓಡಿಸಿದ ಕಾಡಾನೆ ತೊಡಿಕಾನದಲ್ಲಿ ತಡರಾತ್ರಿ ಪತ್ಯಕ್ಷ! ಸ್ಥಳೀಯರ ನಿದ್ದೆಗೆಡಿಸಿದ ಕಾಡಾನೆ Read More »

ಗೂನಡ್ಕ ತೆಕ್ಕಿಲ್ ಚೆರೂರ್ ಬೀಫಾತಿಮ ನಿಧನ

ಸುಳ್ಯ,ಸಂಪಾಜೆ ಗ್ರಾಮದ ಗೂನಡ್ಕ ಪೇರಡ್ಕ ಮೋಹಿಯದ್ದಿನ್ ಜುಮಾ ಮಸೀದಿ ಜಮಾಅತ್ ಗೆ ಒಳಪಟ್ಟ‌ ಗೂನಡ್ಕ ದಿವಂಗತ ಚೆರೂರ್ ಮೊಹಮದ್ ಕುಂಞಿ ಹಾಗು ದಿವಂಗತ ಗೂನಡ್ಕ ತೆಕ್ಕಿಲ್ ದೈನಾಬಿ ಅವರ ಪುತ್ರಿ ಬೀಫಾತಿಮಾ (70)ವರ್ಷ ಅಲ್ಪ ಕಾಲದ ಅಸೌಖ್ಯದಿಂದ ಇಂದು ಗೂನಡ್ಕದ ಮನೆಯಲ್ಲಿ ನಿಧನರಾದರು, ಪತಿ ದಿವಂಗತ ಗೂನಡ್ಕ ಮಹಮದ ಕುಂಞಿ,ಪುತ್ರರಾದ ಜಿ ಎಂ ಅಬ್ದುಲ್ಲ ಕುಂಞಿ ಗೂನಡ್ಕ, ಜಿ ಎಂ ಅಬ್ಬಾಸ್ ಪೆರಾಜೆ, ಜಿ ಎಂ ಉಮ್ಮರ್ ಬೆಳ್ಳಾರೆ, ಜಿ ಎಂ ಅಮೀರ್ ಗೂನಡ್ಕ, ಪುತ್ರಿಯರಾದ ಜಿ

ಗೂನಡ್ಕ ತೆಕ್ಕಿಲ್ ಚೆರೂರ್ ಬೀಫಾತಿಮ ನಿಧನ Read More »

ಪೆರಾಜೆ ಗಡಿ‌ದಾಟಿದ ಒಂಟಿ ಸಲಗ

ಪೆರಾಜೆ ಗ್ರಾಮದ ಖಾಸಗಿ ತೋಟದಲ್ಲಿ ಬೀಡುಬಿಟ್ಟ ಒಂಟಿ ಕಾಡನೆಯನ್ನು ಕೊಡಗಿನ ಪೆರಾಜೆ ಗ್ರಾಮದಿಂದ ದ.ಕ ಜಿಲ್ಲೆಯ ತೊಡಿಕಾನ ಗ್ರಾಮಕ್ಕೆ ಅರಣ್ಯ ಇಲಾಖೆಯ ಕಾರ್ಯಾಚರಣೆ ಮಂಗಳವಾರ ಅಟ್ಟಿಸಲಾಗಿದೆ ಎಂದು ತಿಳಿದು ಬಂದಿದೆ‌.ಬಂಗಾರಕೋಡಿ ಮಾರ್ಗವಾಗಿ ಭಾಗಮಂಡಲ ಮೀಸಲು ಅರಣ್ಯಕ್ಕೆ ಓಡಿಸಲು ನಿರ್ಧಾರ ಮಾಡಲಾಗಿತ್ತು.ಆದರೆ ಆನೆ ತಾನು ಓಡಿದ ಪಥ ಬದಲಾದ ಕಾರಣ ಈ ನಿರ್ಧಾರದಂತೆ ನಡೆದಿಲ್ಲ ಎಂದು ತಿಳಿದು ಬಂದಿದೆ. ಗ್ರಾಮಸ್ತರು,ಸಾರ್ವಜನಿಕರು, ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು, ಶಾಲಾ ಮಕ್ಕಳು ಎಚ್ಚರಿಕೆಯಿಂದ ಇರುವಂತೆ ಹಾಗೂ ಕಾರ್ಯಚರಣೆಗೆ ಸಹಕಾರ ನೀಡುವಂತೆ ವಲಯ

ಪೆರಾಜೆ ಗಡಿ‌ದಾಟಿದ ಒಂಟಿ ಸಲಗ Read More »

ಮೂಡಬಿದಿರೆ ಇಲ್ಲಿನ ಪ್ರತಿಷ್ಠಿತ ಕಾಲೇಜಿನ ಉಪನ್ಯಾಸಕರಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

ಈ ಕಾಲದಲ್ಲಿ ಯಾರನ್ನೂ ನಂಬುವ ಹಾಗಿಲ್ಲ.ಮೂಡಬಿದಿರೆ ಇಲ್ಲಿನ ಪ್ರತಿಷ್ಠಿತ ಕಾಲೇಜಿನ ಇಬ್ಬರು ಉಪನ್ಯಾಸಕರು ಮತ್ತು ಅವರ ಸ್ನೇಹಿತರು ಬೆಂಗಳೂರು ಮೂಲದ ವಿದ್ಯಾರ್ಥಿಯೋರ್ವಳ ಮೇಲೆ ಅತ್ಯಾಚಾರ ಎಸಗಿದ್ದು, ಮೂವರು ಆರೋಪಿಗಳನ್ನು ಬೆಂಗಳೂರಿನ ಮಾರತಹಳ್ಳಿ ಪೊಲೀಸರು ಬಂಧಿಸಿದ್ದಾರೆ.ವಿದ್ಯಾರ್ಥಿನಿ ಸೇರಿದಂತೆ ಆಕೆಯ ಪೋಷಕರು ಈ ಕುರಿತಂತೆ ಮಹಿಳಾ ಆಯೋಗಕ್ಕೆ ನೀಡಿದ ದೂರಿನ ಆಧಾರದ ಮೇಲೆ ಎಫ್ ಐ ಆರ್ ದಾಖಲಿಸಿ ಉಪನ್ಯಾಸಕರಾದ ನರೇಂದ್ರಸಂದೀಪ್ ಮತ್ತು ಸ್ನೇಹಿತ ಅನೂಪ್ ಅವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.ಘಟನೆಯ ಹಿನ್ನೆಲೆ: ವಿದ್ಯಾರ್ಥಿನಿ ಮೂಡುಬಿದಿರೆಯ ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದ

ಮೂಡಬಿದಿರೆ ಇಲ್ಲಿನ ಪ್ರತಿಷ್ಠಿತ ಕಾಲೇಜಿನ ಉಪನ್ಯಾಸಕರಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ Read More »

ಅಜ್ಜಾವರ : ಔಷಧ ಸಸ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸ್ಪರ್ಧೆ

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ತಾಲೂಕು ಘಟಕ ಇದರ ಸಹಕಾರ ದೊಂದಿಗೆ ಪರಿಸರ ಜಾಗೃತಿಯಾನ ಸರಣಿ ಕಾರ್ಯಕ್ರಮದ ಪ್ರಯುಕ್ತ ಔಷಧೀಯ ಸಸ್ಯಗಳನ್ನು ಗುರುತಿಸುವ ಸ್ಪರ್ಧೆಯನ್ನು ಸರಕಾರಿ ಪ್ರೌಢಶಾಲೆ ಅಜ್ಜಾವದಲ್ಲಿ ಹಮ್ಮಿಕೊಳ್ಳಲಾಗಿತ್ತು.ಈ ಸಂದರ್ಭದಲ್ಲಿ ಸುಮಾರು ಮೂವತ್ತು ವಿಧದ ಔಷಧೀಯ ಸಸ್ಯಗಳನ್ನು ಗುರುತಿಸಲು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.ಈ ಸ್ಪರ್ಧೆಯ ಬಹುಮಾನ ಪ್ರಾಯೋಜಕತ್ವವನ್ನು ಸುಳ್ಯ ತಾಲೂಕು ಸಾಹಿತ್ಯ ಪರಿಷತ್ತು ಘಟಕ ವಹಿಸಿಕೊಂಡಿದೆ. ಪ್ರಕೃತಿಯಲ್ಲಿರುವ ಹಲವಾರು ಔಷಧೀಯ ಸಸ್ಯಗಳ ಬಗ್ಗೆ ಇಂದಿನ ಯುವಜನತೆಗೆ ಅರಿವಿಲ್ಲದಿರುವ ಕಾರಣ ಅರಿವು ಮೂಡಿಸಲು ಈ

ಅಜ್ಜಾವರ : ಔಷಧ ಸಸ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸ್ಪರ್ಧೆ Read More »

ಅಗ್ನಿ ಅವಘಡ ಸಂಭವಿಸಿದ ಅರಂತೋಡು ಗ್ರಾಮ ಪಂಚಾಯತ್ ಘನ ತ್ಯಾಜ್ಯ ನಿರ್ವಹಣಾ  ಘಟಕ ಸ್ಥಳಕ್ಕೆ  ಸುಳ್ಯ ಕಾಂಗ್ರೆಸ್ ನಿಯೋಗ ಭೇಟಿ

ಆಕಸ್ಮಿಕ ಬೆಂಕಿಗೆ ಆಹುತಿ ಯಾದ ಗ್ರಾಮ ಪಂಚಾಯತ್ ಘನ ತ್ಯಾಜ್ಯ ಘಟಕಕ್ಕೇ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ ಸಿ ಜಯರಾಮ್, ಕಾರ್ಯದರ್ಶಿ ಪಿ ಎಸ್ ಗಂಗಾಧರ್, ಸುಳ್ಯ ನಗರ ಪ್ರಾಧಿಕಾರದ ಅಧ್ಯಕ್ಷ ಕೆ ಎಂ ಮುಸ್ತಫಾ ರವರು ಜು 14 ರಂದು ಭೇಟಿ ನೀಡಿದರು.ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ಘಟನೆ ಬಗ್ಗೆ ವಿವರಿಸಿ ಸುಮಾರು 60ಲಕ್ಷ ನಷ್ಟ ಸಂಭವಿಸಿದೆ ಎಂದರು.ಈ ಸಂರ್ಭದಲ್ಲಿ ಪಿ ಸಿ ಜಯರಾಮ ಮಾತನಾಡಿ ಘಟನೆ ಬಗ್ಗೆ ಉಸ್ತುವಾರಿ ಸಚಿವರ

ಅಗ್ನಿ ಅವಘಡ ಸಂಭವಿಸಿದ ಅರಂತೋಡು ಗ್ರಾಮ ಪಂಚಾಯತ್ ಘನ ತ್ಯಾಜ್ಯ ನಿರ್ವಹಣಾ  ಘಟಕ ಸ್ಥಳಕ್ಕೆ  ಸುಳ್ಯ ಕಾಂಗ್ರೆಸ್ ನಿಯೋಗ ಭೇಟಿ Read More »

error: Content is protected !!
Scroll to Top