Uncategorized

ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯ ಬಂಧನ

ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ಕಳೆದ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದವನನ್ನು ಶುಕ್ರವಾರ ಶುಕ್ರವಾರ ಎನ್.ಐ ಎ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಆರೋಪಿ ಅಬ್ದುಲ್‌ ರೆಹಮಾನ್ ಎಂಬಾತನಾಗಿದ್ದು, ಕತಾರ್‌ನಿಂದ ಕೇರಳಕ್ಕೆ ಆಗಮಿಸಿದಾಗ ಎನ್‌ಐಎ ತಂಡ ಆತನನ್ನು ಬಂಧಿಸಿದೆ. ಈ ವರ್ಷದ ಏಪ್ರಿಲ್‌ನಲ್ಲಿ ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ರೆಹಮಾನ್ ಮತ್ತು ತಲೆಮರೆಸಿಕೊಂಡಿದ್ದ ಇತರ ಇಬ್ಬರು ಆರೋಪಿಗಳು ಸೇರಿದಂತೆ ಒಟ್ಟು ನಾಲ್ವರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದು, ಒಟ್ಟು ಆರೋಪ ಪಟ್ಟಿ 28 […]

ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯ ಬಂಧನ Read More »

ಅಪಘಾತದಲ್ಲಿ ಗಾಯಗೊಂಡಿದ್ದ ಯುವ ವೈದ್ಯ ಸಾವು

ಕೆಲವು ದಿನಗಳ ಹಿಂದೆ ಸೋಣಂಗೇರಿ ಸಮೀಪ ಕೆ ಎಸ್ ಆರ್ ಟಿ ಸಿ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ್ದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯುವ ವೈದ್ಯರೊಬ್ಬರು ಮ್ರತಪಟ್ಟ ಘಟನೆ ವರದಿಯಾಗಿದೆ.ಕಲ್ಲುಗುಂಡಿಯ ಡಾ. ಶಮಂತ್ ರವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರು ಆಸ್ಪತ್ರೆಯಲ್ಲಿ ಜೂ.4ರಂದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ಅಪಘಾತದಲ್ಲಿ ಕಾಲಿಗೆ ಗಂಭೀರವಾಗಿ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದು, ಕಾಲು ತೀವ್ರವಾಗಿ ಜಖಂಗೊಂಡಿದ್ದ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆ ನಡೆದಿತ್ತೆನ್ನಲಾಗಿದೆ. ಡಾ. ಶಮಂತ್ ಅವರು ದುಗ್ಗಲಡ್ಕ

ಅಪಘಾತದಲ್ಲಿ ಗಾಯಗೊಂಡಿದ್ದ ಯುವ ವೈದ್ಯ ಸಾವು Read More »

ಪೆರಾಜೆ ಸಮೀಪ ಭೀಕರ ಬೈಕ್ ಅಪಘಾತ,ಬೈಕ್ ಸವಾರ ಗಂಭೀರ

ಪೆರಾಜೆ ಸಮೀಪ ಬೈಕ್ ಸ್ಕಿಡ್ ಆಗಿ ನಿಡುಬೆಯ ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡ ಘಟನೆ ಗುರುವಾರ ಸಂಜೆ ವರದಿಯಾಗಿದೆ‌. ಐವರ್ನಾಡು ಗ್ರಾಮದ. ಸುಬ್ರಹ್ಮಣ್ಯ ಅವರ ಮಗ ಗೋಪಿನಾಥ(40) ಎಂಬ ವ್ಯಕ್ತಿಯೇ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡ ವ್ಯಕ್ತಿ ಎಂದು ತಿಳಿದು ಬಂದಿದೆ.ತಲೆಗೆ ಗಂಭೀರ ಗಾಯವಾದ ವ್ಯಕ್ತಿಯನ್ನು ಸುಳ್ಯ ಖಾಸಗಿ ಆಸ್ಪತ್ರೆ ಯಲ್ಲಿ ದಾಖಲಿಸಲಾಗಿದೆ.

ಪೆರಾಜೆ ಸಮೀಪ ಭೀಕರ ಬೈಕ್ ಅಪಘಾತ,ಬೈಕ್ ಸವಾರ ಗಂಭೀರ Read More »

ಸುಳ್ಯ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಸುಳ್ಯ ತಾಲೂಕಿನಲ್ಲಿ ಭಾರೀ ಸುರಿಯುತ್ತಿರುವುದರಿಂದ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು,ಪ್ರಾಥಮಿಕ ಮತ್ತು ಪ್ರೌಢಶಾಲೆ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿಗೆ ದಿನಾಂಕ 03.07.2025 ರಂದು ರಜೆ ಘೋಷಿಸಲಾಗಿರುತ್ತದೆ.ಎಂದು ತಹಶೀಲ್ದಾರರು ಸುಳ್ಯ ತಿಳಿಸಿದ್ದಾರೆ

ಸುಳ್ಯ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ Read More »

ಪ್ರಧಾನಿಮೋದಿ,ಗ್ರಹ ಸಚಿವರಿಗೆ ಅವಹೇಳನ ಪ್ರಕರಣ ದಾಖಲು

ಜುಲೈ 1 ರಂದು ಅಜಿ.ಎಂ.ಜೋಸ್ ಎಂಬವರ ವಾಟ್ಸಾಪ್ ಸ್ಟೇಟಸ್ ನಲ್ಲಿ ಭಾರತದ ಪ್ರಧಾನ ಮಂತ್ರಿ ಹಾಗೂ ಕೇಂದ್ರ ಸರ್ಕಾರದ ಗೃಹ ಮಂತ್ರಿಯ ಚಿತ್ರದೊಂದಿಗೆ ಮಧ್ಯದಲ್ಲಿ ಮಹಿಳೆಯೋರ್ವರ ನಗ್ನ ಫೋಟೋವನ್ನು ಅಳವಡಿಸಿ ಹಿಂದೂ ಧರ್ಮದ ದೇವರುಗಳ ಪೋಟೋಗಳನ್ನು ಬಿಂಬಿಸುವ ರೀತಿಯಲ್ಲಿ ಕಾರ್ಟೂನ್ ಚಿತ್ರ ಇರುವ ಫೋಟೋಗಳ ಕೆಳಗೆ ಶೀರ್ಷಿಕೆಯನ್ನು ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟು ಧಾರ್ಮಿಕ ಭಾವನೆಗೆ ಧಕ್ಕೆಯಾಗುವಂತೆ, ದ್ವೇಷ ಭಾವನೆ ಮೂಡಿಸುವ ಪೋಸ್ಟ್ ನ್ನು ಉದ್ದೇಶ ಪೂರ್ವಕವಾಗಿ ಹಾಕಿದ್ದಾರೆನ್ನಲಾಗಿದೆ.ಈ ಬಗ್ಗೆ ವೇಣೂರು

ಪ್ರಧಾನಿಮೋದಿ,ಗ್ರಹ ಸಚಿವರಿಗೆ ಅವಹೇಳನ ಪ್ರಕರಣ ದಾಖಲು Read More »

ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿಯವರಿಗೆ ವರ್ಗಾವಣೆ

ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ್ ಅವರಿಗೆ ವರ್ಗಾವಣೆಯಾಗಿದೆ ಎಂದು ತಿಳಿದು ಬಂದಿದೆ.ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರಸಭೆಯ ಕಚೇರಿ ವ್ಯವಸ್ಥಾಪಕರಾಗಿ ಅವರಿಗೆ ವರ್ಗಾವಣೆಯಾಗಿದೆ. ಇವರ ವರ್ಗಾವಣೆಯಿಂದ ತೆರವಾಗಿರುವ ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿ ಹುದ್ದೆಗೆ ಯಾರು ವರ್ಗಾಣೆಗೊಂಡು ಬರುತ್ತಾರೆ ಎಂದು ತಿಳಿದು ಬಂದಿಲ್ಲ.ಸುಧಾಕರ ಎಂ.ಎಚ್.ಅವರು ಕಳೆದ ಮೂರು ವರ್ಷದಿಂದ ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿಯವರಿಗೆ ವರ್ಗಾವಣೆ Read More »

ಬಾವಿಗೆ ಬಿದ್ದು‌ ಮಹಿಳೆ ಸಾವು

ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಬಂಟ್ರಬೈಲು ಎಂಬಲ್ಲಿ ಬಾಲಕೃಷ್ಣ ಎಂಬವರ ಪತ್ನಿ ದೇವಮ್ಮ (72) ಎಂಬವರು ಬಾವಿಗೆ ಬಿದ್ದು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.ಸ್ಥಳಕ್ಕೆ ಅಗ್ನಿ ಶಾಮಕ ಮತ್ತು ಪೊಲೀಸರ ಸಿಬ್ಬಂದಿ ಆಗಮಿಸಿ ಶವವನ್ನು‌ ಮೇಲಕ್ಕೆ ಎತ್ತಿದರು ಎಂದು ತಿಳಿದು ಬಂದಿದೆ.

ಬಾವಿಗೆ ಬಿದ್ದು‌ ಮಹಿಳೆ ಸಾವು Read More »

ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಯ ಕ್ರಷಿ ಮೇಲ್ವಿಚಾರಕ ಭೀಕರ ಅಪಘಾತದಲ್ಲಿ ಸಾವು

ಟ್ಯಾಂಕ‌ರ್ ಮತ್ತು ಬೈಕ್ ಮಧ್ಯೆ ಅಪಘಾತ ಸಂಭವಿಸಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕ್ರಷಿ ಮೇಲ್ವಿಚಾರಕ ಮೃತಪಟ್ಟಿರುವ ಘಟನೆ ಬಂಟ್ವಾಳ: ಬಿ.ಸಿ.ರೋಡಿನ ಅಜ್ಜಿಬೆಟ್ಟು ಕ್ರಾಸ್ ಬಳಿ ನಡೆದಿದೆ.ಶಂಭೂರು ಕೊಪ್ಪಳ ನಿವಾಸಿ ಚಿದಾನಂದ (50) ಮೃತ ದುರ್ದೈವಿ.ಚಿದಾನಂದ ಅವರು ಬಿಸಿರೋಡು ಪೇಟೆಯಿಂದ ಅಜ್ಜಿಬೆಟ್ಟು ಕ್ರಾಸ್ ನಲ್ಲಿ ಕ್ರಾಸ್ ಮಾಡುವ ವೇಳೆ ಬಿಸಿರೋಡಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಟ್ಯಾಂಕರ್ ಲಾರಿ ಢಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಿದಾನಂದ ಅವರು ಬಂಟ್ವಾಳ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ಯೋಜನಾ

ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಯ ಕ್ರಷಿ ಮೇಲ್ವಿಚಾರಕ ಭೀಕರ ಅಪಘಾತದಲ್ಲಿ ಸಾವು Read More »

ಕಡೆಪಾಲದಲ್ಲಿ ಕೆ.ಎಸ್.ಆರ್.ಟಿ .ಸಿ ಬಸ್ಸು ಅಪಘಾತ

ಮಡಿಕೇರಿ – ಮಂಗಳೂರು ರಾಷ್ಟ್ರೀಯ ಹೆದ್ದಾರಿ ನಡುವಿನ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಕಲ್ಲುಗುಂಡಿ ಸಮೀಪದ ಕಡೆಪಾಲ ಎಂಬಲ್ಲಿ KSRTC ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ಬರೆಗೆ ಗುದ್ದಿ ವಾಲಿಕೊಂಡು ನಿಂತಿದೆ. ಇಂದು ಬೆಳಿಗ್ಗೆ ಈ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಬಸ್ಸಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಅಲ್ಲದೇ ಹೆಚ್ಚಿನ ಅನಾಹುತ ತಪ್ಪಿದೆ ಎಂದು ಹೇಳಲಾಗಿದೆ.ಪ್ರಯಾಣಿಕರು ಚಿಕ್ಕ ಪುಟ್ಟ ಗಾಯಗೊಂಡಿದ್ದಾರೆ.

ಕಡೆಪಾಲದಲ್ಲಿ ಕೆ.ಎಸ್.ಆರ್.ಟಿ .ಸಿ ಬಸ್ಸು ಅಪಘಾತ Read More »

ಪೇಸ್ ಬುಕ್ ನಲ್ಲಿ ಜೈನ ಧರ್ಮಕ್ಕೆ ಮೋದಿಗೆ ಅವಹೇಳನ,ದೂರು ದಾಖಲು

ಫೇಸ್ ಬುಕ್ ನಲ್ಲಿ ಜೈನ ಧರ್ಮದ ಸ್ವಾಮೀಜಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಅವಹೇಳನ ಮಾಡಲಾಗಿದೆ ಎಂದು ಪುತ್ತೂರಿನ ಪಡೂರು ಗ್ರಾಮದ ನಿವಾಸಿ ಜೀವಂದರ್‌ ಜೈನ್ ಎಂಬವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ದಿನಾಂಕ 29-06-2025 ರಂದು ಸಂಜೆ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ಅನ್ನು ನೋಡಿದ್ದಾಗ, “ಕರುನಾಡಿನ ಮಿನುಗುವ ನಕ್ಷತ್ರ” ಎಂಬ ಪೇಸ್ ಬುಕ್ ಪೇಜ್ ಹೊಂದಿರುವ ವ್ಯಕ್ತಿಯು, ಫೇಸ್ ಬುಕ್ ನಲ್ಲಿ ಪೋಸ್ಟ್ ಒಂದಕ್ಕೆ ಕಮೆಂಟ್ ಮಾಡುವ ವೇಳೆ, ಜೈನ ಧರ್ಮದ ಸ್ವಾಮೀಜಿಗೆ

ಪೇಸ್ ಬುಕ್ ನಲ್ಲಿ ಜೈನ ಧರ್ಮಕ್ಕೆ ಮೋದಿಗೆ ಅವಹೇಳನ,ದೂರು ದಾಖಲು Read More »

error: Content is protected !!
Scroll to Top