July 11, 2026

ಭಾರತೀಯ ಮಜ್ದೂರ್ ಸಂಘದ ಆಟೋ ಚಾಲಕರ ಪದಾಧಿಕಾರಿಗಳಿಂದ ಗಿರೀಶ್ ಭಾರದ್ವಾಜ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ (ರಿ.) ಬಿಎಂಎಸ್ ಸಂಯೋಜಿತ ಸುಳ್ಯ ದ ಕ ಸಂಘದ ಮಾಸಿಕ ಸಭೆಯು ಈ ಮದ್ಯಾಹ್ನ 2.30 ಕ್ಕೆ ಸಂಘದ ಕಚೇರಿ ತಿಲಕ ಸಭಾ ಭವನದಲ್ಲಿ ನಡೆಯಿತು ಈ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಪದ್ಮಶ್ರೀ ಪ್ರಶಸ್ತಿಪುರಸ್ಕೃತ ಗಿರೀಶ್ ಭಾರಧ್ವಾಜ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಮತ್ತು ಭಾವಚಿತ್ರಕ್ಕೆ ಪುಷ್ಪ ನಮನ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಪ್ರದಾನ ಕಾರ್ಯದರ್ಶಿ ನಾರಾಯಣ ಎಸ್ ಎಂ ಕೋಶಾಧಿಕಾರಿ ರವಿ ಎಸ್ ಜತೆ ಕಾರ್ಯದರ್ಶಿ ಸುರೇಂದ್ರ […]

ಭಾರತೀಯ ಮಜ್ದೂರ್ ಸಂಘದ ಆಟೋ ಚಾಲಕರ ಪದಾಧಿಕಾರಿಗಳಿಂದ ಗಿರೀಶ್ ಭಾರದ್ವಾಜ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ Read More »

ಸುಳ್ಯ ನ್ಯಾಯಾಲಯದ ಲೋಕ ಅದಾಲತ್ ನಲ್ಲಿ 360 ಪ್ರಕರಣಗಳಲ್ಲಿ 273 ಪ್ರಕರಣಗಳು ರೂ.1,24,30,486/- ಇತ್ಯರ್ಥ

ಸುಳ್ಯ ನ್ಯಾಯಾಲಯದಲ್ಲಿ ಇಂದು(ಜು.11) ಲೋಕ ಅದಾಲತ್ ನಡೆದಿದು ಒಟ್ಟು 360 ಪ್ರಕರಣಗಳಲ್ಲಿ 273 ಪ್ರಕರಣಗಳು ರೂ.1,24,30,486/- ಇತ್ಯರ್ಥ ಗೊಂಡಿರುತ್ತದೆ.ಲೋಕ ಅದಾಲತ್ ನಲ್ಲಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಒಟ್ಟು 251 ಪ್ರಕರಣಗಳಲ್ಲಿ 172 ಪ್ರಕರಣಗಳು ರೂ. 1,04,51,000/- ಇತ್ಯರ್ಥ ಗೊಂಡಿರುತ್ತದೆ… ಅದರಲ್ಲಿ (ಕ್ರಿಮಿನಲ್ ಪ್ರಕರಣಗಳು 155 ರಲ್ಲಿ 142 ಪ್ರಕರಣಗಳು ರೂ. 5,00,000/- ರ ಮೂಲಕ ಹಾಗೂ ಸಿವಿಲ್ ಪ್ರಕರಣಗಳು 96 ರಲ್ಲಿ 30 ಪ್ರಕರಣಗಳು ರೂ. 99,51,000/- ರ ಮೂಲಕ ಇತ್ಯರ್ಥಗೊಂಡಿರುತ್ತದೆ.)ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಒಟ್ಟು

ಸುಳ್ಯ ನ್ಯಾಯಾಲಯದ ಲೋಕ ಅದಾಲತ್ ನಲ್ಲಿ 360 ಪ್ರಕರಣಗಳಲ್ಲಿ 273 ಪ್ರಕರಣಗಳು ರೂ.1,24,30,486/- ಇತ್ಯರ್ಥ Read More »

ಪ್ರಖ್ಯಾತ ಗಾಯಕಿ, ಗಾನಕೋಗಿಲೆ ಎಸ್.ಜಾನಕಿ ವಿಧಿವಶ

ಕರುನಾಡಿನ ಖ್ಯಾತ ಗಾಯಕಿ ಚಿತ್ರರಂಗದಲ್ಲಿ ಅದೆಷ್ಟೋ ಜನರ ಮನಗೆದ್ದಿದ್ದ ಗಾಯಕಿ ಎಸ್.ಜಾನಕಿ ಶನಿವಾರ ಮೈಸೂರಿನಲ್ಲಿ ನಿಧನರಾಗಿದ್ದಾರೆ. ಹಳ್ಳಿಯ ಸೊಗಡಿನ ಹಾಡುಗಳಿಂದ ಹಿಡಿದು ಎಲ್ಲಾ ಪ್ರಕಾರದ ಗೀತೆಗಳನ್ನೂ ಹಾಡಿದ್ದ ಎಸ್.ಜಾನಕಿ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.

ಪ್ರಖ್ಯಾತ ಗಾಯಕಿ, ಗಾನಕೋಗಿಲೆ ಎಸ್.ಜಾನಕಿ ವಿಧಿವಶ Read More »

ಅರಂಬೂರು : ಸಾಜ್ ಸ್ಪೋರ್ಟ್ಸ್ ರವರ ನೇತೃತ್ವದ ಟರ್ಫ್ ಗ್ರೌಂಡ್ ಇಂದು ಉದ್ಘಾಟನೆ

ಸುಳ್ಯದಿಂದ ಮಡಿಕೇರಿ ರಸ್ತೆ ಮಧ್ಯೆ ರಸಪಾಕ ಹೋಟೆಲ್ ಬಳಿಯಲ್ಲಿ ನಿರ್ಮಿಸಿರುವ ಸಾಜ್ ಸ್ಪೋರ್ಟ್ಸ್ ರವರ ನೇತೃತ್ವದ ಅರಂಬೂರು ಟರ್ಫ್ ಗ್ರೌಂಡ್ ಇಂದು (ಜು.11, ಸಂಜೆ 6.30ಕ್ಕೆ) ಉದ್ಘಾಟನೆಗೊಳ್ಳಲಿದೆ.ಹಿರಿಯ ಉದ್ಯಮಿ ಕೃಷ್ಣ ಕಾಮತ್ ಅರಂಬೂರು ಮತ್ತು ಟೀಮ್ ಸಾಜ್ ಸ್ಪೋರ್ಟ್ಸ್ ನ ಶರತ್ ಅರಂಬೂರು ರವರ ನೇತೃತ್ವದಲ್ಲಿ ಸುಳ್ಯದಲ್ಲಿ ಪ್ರಥಮ ಬಾರಿಗೆ ನಿರ್ಮಿಸಿದ ಟರ್ಫ್ ಗೌಂಡ್ ಇದರ ಉದ್ಘಾಟನೆಯು ಸಂಜೆ ಗಂಟೆ 6.30 ನಡೆಯಲಿರುವುದು.ಸುಮಾರು 9 ಸಾವಿರ ಚದರ ಅಡಿಯ ಮೈದಾನದಲ್ಲಿ ಫುಟ್ ಬಾಲ್,ಕ್ರಿಕೆಟ್‌ ಪಂದ್ಯಾಟವನ್ನು ಆಡಲು ಅವಕಾಶ

ಅರಂಬೂರು : ಸಾಜ್ ಸ್ಪೋರ್ಟ್ಸ್ ರವರ ನೇತೃತ್ವದ ಟರ್ಫ್ ಗ್ರೌಂಡ್ ಇಂದು ಉದ್ಘಾಟನೆ Read More »

ಸುರತ್ಕಲ್ : 8 ಮಂದಿ ಅಕ್ರಮ ಬಾಂಗ್ಲಾ ದೇಶದ ಪ್ರಜೆಗಳು ಪತ್ತೆ!

ದ.ಕ ಜಿಲ್ಲೆಯ ಸುರತ್ಕಲ್ ನ ಆಸ್ಪತ್ರೆಯೊಂದರ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ 8 ಮಂದಿ ಅಕ್ರಮ ಬಾಂಗ್ಲಾದೇಶದ ಪ್ರಜೆಗಳನ್ನು ಸುರತ್ಕಲ್ ಪೊಲೀಸರು ಗುರುವಾರ ರಾತ್ರಿ ವಶಕ್ಕೆ ಪಡೆದುಕೊಂಡು ವಿಚಾರಣೆಯ ಬಳಿಕ ಬಂಧಿಸಿದ್ದಾರೆ.ಇವರೆಲ್ಲರೂ ಮೂರು ತಿಂಗಳ ಹಿಂದೆ ಅಕ್ರಮವಾಗಿ ಬಾಂಗ್ಲಾದೇಶದಿಂದ ಪಶ್ಚಿಮ ಬಂಗಾಳದ ಮುರ್ಶಿದಾಬಾದ್‌ ಮೂಲಕ ಭಾರತಕ್ಕೆ ಬಂದು ನಂತರ ಅಲ್ಲಿನ ವಿಳಾಸದಲ್ಲಿದ್ದವರ ಆಧಾರ್‌ ಕಾರ್ಡ್‌ಗಳಿಗೆ ಅವರ ಭಾವಚಿತ್ರ ಅಂಟಿಸಿ ಕಲರ್‌ ಜೆರಾಕ್ಸ್‌ ಪಡೆದುಕೊಂಡು ಎರಡು ತಿಂಗಳಿನಿಂದ ಮುಕ್ಕದಲ್ಲಿ ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್‌

ಸುರತ್ಕಲ್ : 8 ಮಂದಿ ಅಕ್ರಮ ಬಾಂಗ್ಲಾ ದೇಶದ ಪ್ರಜೆಗಳು ಪತ್ತೆ! Read More »

ಅಂಗವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅಂಗವಾಡಿ ಕಾರ್ಯಕರ್ತೆಯಾಗಬಯಸುವರಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ. ಸುಳ್ಯ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯ ಸುಳ್ಯ ಮತ್ತು ಕಡಬ ತಾಲೂಕಿನಲ್ಲಿ ತೆರವಾಗಿರುವ ಮರ್ಕಂಜ ಗ್ರಾಮದ ಮಿತ್ತಡ್ಕ, ಅಮರ ಮುಡ್ನೂರು ಗ್ರಾಮದ ದೊಡ್ಡತೋಟ, ಮತ್ತು ಕಡಬ ತಾಲೂಕಿನ ಐನೆಕಿದು ಗ್ರಾಮದ ಐನೆಕಿದು ಅಂಗನವಾಡಿ ಕೇಂದ್ರಗಳಿಗೆ ಕಾರ್ಯಕರ್ತೆಯರ ಹುದ್ದೆಗೆ ಮತ್ತು ಸುಳ್ಯ ಕಸಬಾ ಗ್ರಾಮದ ವಾರ್ಡ್-13ರ ಬೂಡು, ವಾರ್ಡ್-16ರ ಕಾಯರ್ತೋಡಿ, ವಾರ್ಡ್-4ರ ಬೆಟ್ಟಂಪಾಡಿ, ಮರ್ಕಂಜ ಗ್ರಾಮದ ದಾಸರಬೈಲು, ದೇವಚಳ್ಳ ಗ್ರಾಮದ ಸೇವಾಜೆ, ವಾಲ್ತಾಜೆ, ಕಂದ್ರಪ್ಪಾಡಿ, ಮುಪ್ಪೇರಿಯ ಗ್ರಾಮದ ಇಂದ್ರಾಜೆ, ನಾಲ್ಕೂರು

ಅಂಗವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ Read More »

ಮರದಿಂದ ಆಯ ತಪ್ಪಿ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸಾವು

ಮರದಿಂದ ಆಯ ತಪ್ಪಿ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಮೃತ ಪಟ್ಟ ಘಟನೆ ಸಂಪಾಜೆ ಗ್ರಾಮದಿಂದ ವರದಿಯಾಗಿದೆ.ಮೃತ ವ್ಯಕ್ತಿ ದಂಡಕಜೆ ನಿವಾಸಿ ಮರಿಯಾ ರಾಜು (ಚಾರ್ಲಿ) ಎಂದು ಗುರುತಿಸಲಾಗಿದೆ.ಜು 8 ರಂದು ಕೂಲಿ ಕಾರ್ಮಿಕರಾದ ಅವರು ಮರದ ಗೆಲ್ಲು ಕಡಿಯುತ್ತಿದ್ದಾಗ ಮರದಿಂದ ಕೆಳಗೆ ಬಿದ್ದು ತಲೆಗೆ ಗಂಭೀರ ಗಾಯವಾದ ಪರಿಣಾಮ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಜೂನ್ 11ರಂದು ಬೆಳಿಗ್ಗೆ ಅವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.ಗಾಯಗೊಂಡ ಸಂದರ್ಭದಲ್ಲಿ ಸ್ಥಳೀಯರು ತಾಜುದ್ದೀನ್ ಟರ್ಲಿ ಯವರ ಆಂಬುಲೆನ್ಸ್‌ ಮೂಲಕ

ಮರದಿಂದ ಆಯ ತಪ್ಪಿ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸಾವು Read More »

ಚಲಿಸುವ ಬಸ್‌ನಲ್ಲಿ ವಿದ್ಯಾರ್ಥಿನಿಯರಿಗೆ ಗುಪ್ತಾಂಗ ಪ್ರದರ್ಶಿಸಿದ ವಿಕೃತ ಕಾಮಿ ಕಂಡೆಕ್ಟರ್ !

ಬಸ್ಸಿನ ಕಂಡೆಕ್ಟರ್ ಓರ್ವನು ವಿದ್ಯಾರ್ಥಿನಿಯರಿಗೆ ಗುಪ್ತಾಂಗ ಪ್ರದರ್ಶಿಸಿ ಲೈಂಗಿಕ ಕಿರುಕುಳ ನೀಡಿದ ಘಟನೆ ವರದಿಯಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು-ವಿಟ್ಲ ನಡುವೆ ಸಂಚರಿಸುವ ಖಾಸಗಿ ಬಸ್‌ನ ಕಂಡಕ್ಟರ್ ಇರ್ಫಾನ್ (32) ಕಾಲೇಜು ವಿದ್ಯಾರ್ಥಿನಿಯರಿಗೆ ಚಲಿಸುವ ಬಸ್‌ನಲ್ಲೇ ಲೈಂಗಿಕ ಕಿರುಕುಳ, ಅಸಭ್ಯ ಸನ್ನೆ ಹಾಗೂ ಗುಪ್ತಾಂಗ ಪ್ರದರ್ಶನ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ವಿದ್ಯಾರ್ಥಿನಿಯರ ದೂರಿನ ಮೇರೆಗೆ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸರು ಪ್ರಕರಣ ದಾಖಲಿಸಿ, ಜುಲೈ 10ರಂದು ಆರೋಪಿಯನ್ನು ಬಂಧಿಸಿ ತನಿಖೆ ಆರಂಭಿಸಿದ್ದಾರೆ. ಮಂಗಳೂರು ನಗರ ಪೊಲೀಸ್ ಕಮಿಷನ‌ರ್

ಚಲಿಸುವ ಬಸ್‌ನಲ್ಲಿ ವಿದ್ಯಾರ್ಥಿನಿಯರಿಗೆ ಗುಪ್ತಾಂಗ ಪ್ರದರ್ಶಿಸಿದ ವಿಕೃತ ಕಾಮಿ ಕಂಡೆಕ್ಟರ್ ! Read More »

ಅರಂತೋಡು ಬಿಳಿಯಾರು ಸಮೀಪ ಕಾರು ಬೈಕ್ ಅಪಘಾತ

ಅರಂತೋಡು ಬಳಿ ಬಿಳಿಯಾರು ಸಮೀಪ ಕಾರು ಬೈಕ್ ಡಿಕ್ಕಿ ಯಾಗಿ ಬೈಕ್ ಸವಾರರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಷ್ಟೆ.ಕಲ್ಲುಗುಂಡಿ ಹೊರಾ ಠಾಣಾ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

ಅರಂತೋಡು ಬಿಳಿಯಾರು ಸಮೀಪ ಕಾರು ಬೈಕ್ ಅಪಘಾತ Read More »

error: Content is protected !!
Scroll to Top