July 28, 2026

ಅರಂತೋಡು-ಎಲಿಮಲೆ ರಸ್ತೆಯ ಎರಡು ಬದಿ ಕಾಡು ಕಡಿಯಲು‌ ನಾಗರೀಕ ಹಿತರಕ್ಷಣಾ ವೇದಿಕೆ ಅಡ್ತಲೆ ಮನವಿ

ಲೋಕೋಪಯೋಗಿ ಇಲಾಖೆಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅವರಿಗೆಅರಂತೋಡು-ಎಲಿಮಲೆ ರಸ್ತೆಯ ಎರಡು ಬದಿ ಕಾಡು ಕಡಿಯಬೇಕೆಂದು ನಾಗರೀಕ ಹಿತರಕ್ಷಣಾ ವೇದಿಕೆ ಅಡ್ತಲೆ ಪತ್ರ ಬರೆದು ಮನವಿ ಮಾಡಿಕೊಂಡಿದೆ.ನಮ್ಮೂರಿನ ಮಧ್ಯದಲ್ಲಿ ಹಾದು ಹೋಗುವ ಅರಂತೋಡು-ಎಲಿಮಲೆ ಜಿಲ್ಲಾ ಮುಖ್ಯರಸ್ತೆಯ ಎರಡು ಬದಿಗಳಲ್ಲಿ ಹುಲ್ಲು, ಕಾಡುಗಳು ತುಂಬಿ ಪೊದೆಗಳಂತಾಗಿದ್ದು ರಸ್ತೆಯಲ್ಲಿ ಸಂಚಾರಕ್ಕೆ ತೊಡಕು ಉಂಟಾಗಿದೆ. ರಸ್ತೆಯ ತಿರುವುಗಳಲ್ಲಿ ಎದುರುಗಡೆಯಿಂದ ವಾಹನಗಳು ಬರುವುದು ಕಾಣದೆ ಕೆಲವು ದಿನಗಳ ಹಿಂದೆ ಅಪಘಾತಗಳು ಸಂಭವಿಸಿದೆ. ಅಲ್ಲದೇ ಆನೆ, ಕಾಡುಕೋಣ ಮುಂತಾದ ಕಾಡುಪ್ರಾಣಿಗಳು ಸಂಚರಿಸುವ ಪ್ರದೇಶವಾಗಿದ್ದು ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು,ಸರಕಾರಿ […]

ಅರಂತೋಡು-ಎಲಿಮಲೆ ರಸ್ತೆಯ ಎರಡು ಬದಿ ಕಾಡು ಕಡಿಯಲು‌ ನಾಗರೀಕ ಹಿತರಕ್ಷಣಾ ವೇದಿಕೆ ಅಡ್ತಲೆ ಮನವಿ Read More »

ಕಲ್ಚೆರ್ಪೆ : ಶ್ರೀ ಗುಳಿಗ ದೈವಕ್ಕೆ ಹರಕೆ ಸಮ್ಮಾನ

ಆಲೆಟ್ಟಿ ಗ್ರಾಮದ ಕಲ್ಚೆರ್ಪೆ ಸಿರಿಕುರಲ್ ನಗರದ ಶ್ರೀ ವನದುರ್ಗಾ ಮತ್ತು ಸಹಪರಿವಾರ ದೈವಸ್ಥಾನದಲ್ಲಿ‌ ಜು.28ರಂದು ಶ್ರೀ ಗುಳಿಗ ದೈವಕ್ಕೆ ಹರಕೆ ಸಮ್ಮಾನ ನಡೆಯಿತು.ಈ ಸಂದರ್ಭದಲ್ಲಿ ಪ್ರಮುಖರಾದ ಗೋಕುಲದಾಸ್,ಅಶೋಕ ಪೀಚೆ ಅರವಿಂದ ಕರಕರಣ, ರಾಮ ನಾಯ್ಕ, ವೆಂಕಟೇಶ, ಪುರುಷೋತ್ತಮ, ಲೋಕೇಶ್ ಸುಳ್ಳಿ “ನವೀನ, ಕೃಷ್ಣನಾಯ್ಕ, ಉದಯ ಆಚಾರಿ, ಶಿವಕುಮಾರ್ ಆಚಾರಿ, ಜಗದೀಶ್ ಸರಳಿ ಕುಂಜ, ಸುದೇಶ್ ಅರಂಬೂರು, ಮುರಳಿ ಅರಂತೋಡು, ನಾಗೇಂದ್ರ ಆಚಾರಿ, ದಾಸಪ್ಪ ಮಡಿವಾಳ, ಪರಮೇಶ್ವರ ನೆಡ್ಚಿಲ್ ,ರಾಜು ಪಂಡಿತ್ ಇತರರು ಉಪಸ್ಥಿತರಿದ್ದರು.

ಕಲ್ಚೆರ್ಪೆ : ಶ್ರೀ ಗುಳಿಗ ದೈವಕ್ಕೆ ಹರಕೆ ಸಮ್ಮಾನ Read More »

ಪಂಜ : ಒಕ್ಕೂಟ ಪದಗ್ರಹಣ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್(ರಿ) ಸುಳ್ಯ ತಾಲೂಕು ಪಂಜ-ವಲಯ ಇದರ ಕೂತ್ಕುಂಜ, ಕೇನ್ಯ, ಐವತ್ತೊಕ್ಕು ಪ್ರಗತಿ ಬಂದು ಸ್ವಸಹಾಯ ಸಂಘಗಳ ನೂತನ ಒಕ್ಕೂಟಗಳ ಪದಗ್ರಹಣ ಸಮಾರಂಭ ಜು. 26 ರಂದು ಪಂಜ ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ಜರುಗಿತು.ಪ್ರಗತಿ ಪರ ಕೃಷಿಕ ಕುಶಾಲಪ್ಪ ಗೌಡ ದೊಡ್ಡಮನೆ ಉದ್ಘಾಟಿಸಿ ಶುಭಹಾರೈಸಿದರು.ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪಂಜ ವಲಯ ಅಧ್ಯಕ್ಷ ಧರ್ಮಪಾಲ ಕಲ್ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಂಜ ಶ್ರೀ ಸದಾಶಿವ

ಪಂಜ : ಒಕ್ಕೂಟ ಪದಗ್ರಹಣ ಕಾರ್ಯಕ್ರಮ Read More »

ಶಾಲಾ ಆವರಣದೊಳಗೆ ನುಗ್ಗಿ ಕೃಷಿ ನಾಶ ಮಾಡಿದ ಕಾಡಾನೆಗಳ ಹಿಂಡು

ಎರಡು ವರ್ಷಗಳ ಹಿಂದೆ ಕಾಡಾನೆಯೊಂದು ರೈತನನೋರರ್ವರನ್ನು ಕೊಂದು ಹಾಕಿದ ಚೆಂಬು ಗ್ರಾಮದ ಡಬ್ಬಡ್ಕ ಪರಿಸರದಲ್ಲಿ ಕಾಡಾನೆಗಳ ಸಮಸ್ಯೆ ಹೆಚ್ಚುತ್ತಿದ್ದು ಜು.27ರಂದು ಮುಂಜಾನೆ ದಬ್ಬಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದ ಒಳಗೆ ನುಗ್ಗಿದ ಕಾಡಾನೆ ಹಿಂಡು ನುಗ್ಗಿ ಶಾಲಾ ಕೃಷಿಯನ್ನು ನಾಶ ಮಾಡಿದ ಘಟನೆ ವರದಿಯಾಗಿದೆ.ಡಬ್ಬಡ್ಕ ಶಾಲಾ ಆವರಣಕ್ಕೆ ನುಗ್ಗಿದ ಕಾಡಾನೆ ಹಿಂಡು ಶಾಲೆಯ ಆವರಣದಲ್ಲಿರುವ ಬಾಳೆ ಗಿಡ, ತೆಂಗಿನ ಗಿಡ ಸೇರಿದಂತೆ ಕೃಷಿಯನ್ನು ಸಂಪೂರ್ಣ ಧ್ವಂಸ ಮಾಡಿದೆ.ಅಲ್ಲದೆ ಕೆದಂಬಾಡಿ, ಕಾಂತಬೈಲು ಸೇರಿದಂತೆ ಇತರ ಭಾಗಗಳ ಕೃಷಿಕರ

ಶಾಲಾ ಆವರಣದೊಳಗೆ ನುಗ್ಗಿ ಕೃಷಿ ನಾಶ ಮಾಡಿದ ಕಾಡಾನೆಗಳ ಹಿಂಡು Read More »

error: Content is protected !!
Scroll to Top