August 2026

ಸುಳ್ಯ ಎನ್ನೆoಸಿ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ವಿಶಿಷ್ಟ ಕೆಸರುಗದ್ದೆ ಕ್ರೀಡಾಕೂಟ – ಅರೆಭಾಷೆ ಸಂಸ್ಕೃತಿ ಮತ್ತು ಗ್ರಾಮೀಣ ಬದುಕಿನ ಅನಾವರಣ

ಸುಳ್ಯ, ಆ. 18: ಗ್ರಾಮೀಣ ಬದುಕಿನ ಸೊಗಡು, ಕೃಷಿ ಸಂಸ್ಕೃತಿಯ ವೈಶಿಷ್ಟ್ಯ, ಮಣ್ಣಿನೊಂದಿಗಿನ ಮನುಷ್ಯನ ಅವಿನಾಭಾವ ಸಂಬಂಧ ಹಾಗೂ ಸಾಂಪ್ರದಾಯಿಕ ಕ್ರೀಡೆಗಳ ಸಂಭ್ರಮವನ್ನು ಯುವಜನತೆಗೆ ಪರಿಚಯಿಸುವ ಉದ್ದೇಶದಿಂದ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘ (ರಿ.) ವತಿಯಿಂದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಪ್ರಯೋಜಕತ್ವದಲ್ಲಿ ಆಯೋಜಿಸಲಾಗಿದ್ದ ‘ಗದ್ದೆಗಿಳಿವ ಗಮ್ಮತ್ತ್’ ಎಂಬ ವಿಶಿಷ್ಟ ಕೆಸರುಗದ್ದೆ ಕ್ರೀಡಾಕೂಟವು ಅಗಸ್ಟ್ 19ರಂದು ಮಂಗಳವಾರ ಅಜ್ಜಾವರದ ಕೊರಂಗುಬೈಲು ಗದ್ದೆಯಲ್ಲಿ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ

ಸುಳ್ಯ ಎನ್ನೆoಸಿ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ವಿಶಿಷ್ಟ ಕೆಸರುಗದ್ದೆ ಕ್ರೀಡಾಕೂಟ – ಅರೆಭಾಷೆ ಸಂಸ್ಕೃತಿ ಮತ್ತು ಗ್ರಾಮೀಣ ಬದುಕಿನ ಅನಾವರಣ Read More »

ಛಾಯಾರತ್ನ” ಪ್ರಶಸ್ತಿಗೆ ಲೋಕೇಶ್ ಬಿ.ಎನ್ ಆಯ್ಕೆ

ವಿಶ್ವ ಛಾಯಾಗ್ರಹಣ ದಿನಾಚರಣೆಯ ಅಂಗವಾಗಿ ರೋಟರಿ ಕ್ಲಬ್ ಬ್ರಹ್ಮಾವರ ಹಾಗೂ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್‌ ಬ್ರಹ್ಮಾವರ ವಲಯದ ಜಂಟಿ ಆಶ್ರಯದಲ್ಲಿ ನೀಡಲಾಗುವ ಪ್ರತಿಷ್ಠಿತ “ಛಾಯಾರತ್ನ” ಪ್ರಶಸ್ತಿಗೆ ಸುಳ್ಯ ವಲಯದ ಛಾಯಾಗ್ರಾಹಕರಾದ ಸುಬ್ರಹ್ಮಣ್ಯದ ಲೋಕೇಶ್.ಬಿ.ಎನ್ ಆಯ್ಕೆಯಾಗಿದ್ದಾರೆ. ನಾಳೆ ಆ.18ರಂದು ಬ್ರಹ್ಮಾವರದ ರೋಟರಿ ಸಭಾಭವನದಲ್ಲಿ ಎಸ್.ಕೆ.ಪಿ.ಎ ಬ್ರಹ್ಮಾವರ ವಲಯದ ಬೆಳ್ಳಿ ಹಬ್ಬದ ವರ್ಷದ ಪ್ರಯುಕ್ತ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸುವರು.

ಛಾಯಾರತ್ನ” ಪ್ರಶಸ್ತಿಗೆ ಲೋಕೇಶ್ ಬಿ.ಎನ್ ಆಯ್ಕೆ Read More »

ಅಜ್ಜಾವರ ಚೈತನ್ಯ ಸೇವಾಶ್ರಮದಲ್ಲಿ ಮೂರನೇ ವಾರ ನಡೆದ ವೇದ ಪಾರಾಯಣ ಮತ್ತು ಉಪನಿಷತ್ತುಗಳ ತರಗತಿ

ಚೈತನ್ಯ ಸೇವಾಶ್ರಮ ದೇವರಕಳಿಯ ಅಜ್ಜಾವರದಲ್ಲಿ ಆಗಸ್ಟ್ 2ರಂದು ವೇದ ಪಾರಾಯಣ ಮತ್ತು ಉಪನಿಷತ್ತುಗಳ ತರಗತಿ ಆರಂಭಗೊoಡಿದ್ದು ಆ.16ರಂದು ಮೂರನೇ ವಾರ ತರಗತಿ ನಡೆಯಿತು.ಆಶ್ರಮದ ಸ್ವಾಮಿ ಶ್ರೀ ಯೋಗೇಶ್ವರಾನಂದ ಸರಸ್ವತಿಜೀಯವರು ತರಗತಿ ನಡೆಸಿ ಕೊಟ್ಟರು.ಈ ಸಂದರ್ಭದಲ್ಲಿ ಆಶ್ರಮದ ಟ್ರಸ್ಟಿ ಪ್ರಣವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು‌.ಪ್ರತೀ ಭಾನುವಾರ ಬೆಳಿಗ್ಗೆ ಗಂಟೆ 10ರಿಂದ 11ರ ತನಕ ತರಗತಿ ನಡೆಯಲಿದೆ.ಜಪ, ಧ್ಯಾನ, ಪ್ರಾಣಾಯಾಮದ ಅಭ್ಯಾಸ ಮಾಡಲು ಉಚಿತವಾಗಿ ತರಬೇತಿ ನೀಡಲಾಗುವುದು. ಇದಕ್ಕೆ ಜಾತಿ, ಮತ, ಗಂಡು ಹೆಣ್ಣೆಂಬ ಭೇದವಿಲ್ಲದೆ ಎಲ್ಲರೂ ತರಗತಿಯಲ್ಲಿ ಭಾಗವಹಿಸಲು ಅವಕಾಶವಿದೆ

ಅಜ್ಜಾವರ ಚೈತನ್ಯ ಸೇವಾಶ್ರಮದಲ್ಲಿ ಮೂರನೇ ವಾರ ನಡೆದ ವೇದ ಪಾರಾಯಣ ಮತ್ತು ಉಪನಿಷತ್ತುಗಳ ತರಗತಿ Read More »

ಮೇದಿನಡ್ಕ .. ನಾಗರ ಪಂಚಮಿ ಆಚರಣೆ

ಅಜ್ಜಾವರ ಗ್ರಾಮದ ಮೇದಿನಡ್ಕ ಶ್ರೀ ಮುತ್ತುಮಾರಿಯಮ್ಮ ದೇವಿ ದೇವಸ್ಥಾನದ ನಾಗನ ಕಟ್ಟೆಯಲ್ಲಿ ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜೆ, ನಾಗ ತಂಬಿಲ ನಡೆಯಿತು, ಪೂಜಾ ವಿಧಿ ವಿಧಾನಗಳನ್ನು ಗಣೇಶ್ ಭಟ್ ನೆರವೇರಿಸಿದರು.ಈ ಸಂದರ್ಭದಲ್ಲಿ ಊರ ಭಕ್ತಾದಿಗಳು ಸೇರಿದಂತೆ ದೇವಸ್ಥಾನದ ಆಡಳಿತ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮೇದಿನಡ್ಕ .. ನಾಗರ ಪಂಚಮಿ ಆಚರಣೆ Read More »

ಪಂಜ : ದೇವಳದ ಕಟ್ಟೆಗಳಲ್ಲಿ ನಡೆದ ನಾಗರ ಪಂಚಮಿ ಪೂಜೆ

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ನಾಗನಕಟ್ಟೆಗಳಲ್ಲಿ ನಾಗರಪಂಚಮಿ ಪೂಜೆ ಪ್ರಯುಕ್ತ ಪೂಜೆ ನಡೆದು ನಾಗನಕಲ್ಲಿಗೆ ಹಾಲೆರೆಯಲಾಯಿತು.ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಕಾನತ್ತೂರು ಹಾಗೂ ವ್ಯವಸ್ಥಾಪನ ಸಮಿತಿ ಸದಸ್ಯರು ಹಾಗೂ ಊರ ಭಕ್ತಾದಿಗಳು ಉಪಸ್ಥಿತರಿದ್ದರು

ಪಂಜ : ದೇವಳದ ಕಟ್ಟೆಗಳಲ್ಲಿ ನಡೆದ ನಾಗರ ಪಂಚಮಿ ಪೂಜೆ Read More »

ಕಾನತ್ತಿಲ ನಾಗಕಟ್ಟೆಯಲ್ಲಿ ನಾಗರ ಪಂಚಮಿ ಪ್ರಯುಕ್ತ ನಾಗನಿಗೆ ಪೂಜೆ

ಸುಳ್ಯದ ಕಾನತ್ತಿಲ ನಾಗಕಟ್ಟೆಯಲ್ಲಿ ನಾಗಕಲ್ಲಿಗೆ ಪೂಜೆ ಸಲ್ಲಿಸಿ ನಾಗನಿಗೆ ಹಾಲೆರೆಯಲಾಯಿತು.ಈ ಸಂದರ್ಭದಲ್ಲಿ ಸ್ಥಳೀಯರು ಉಪಸ್ಥಿತರಿದ್ದರು.

ಕಾನತ್ತಿಲ ನಾಗಕಟ್ಟೆಯಲ್ಲಿ ನಾಗರ ಪಂಚಮಿ ಪ್ರಯುಕ್ತ ನಾಗನಿಗೆ ಪೂಜೆ Read More »

ತೊಡಿಕಾನ ಅಂಗನವಾಡಿಯಲ್ಲಿ ಎಲ್. ಕೆ. ಜಿ ಮತ್ತು ಯುಕೆಜಿ ತರಗತಿಗಳು ಆರಂಭ

ತೊಡಿಕಾನ ಅಂಗನವಾಡಿ ಶಾಲೆಯಲ್ಲಿ ಎಲ್ ಕೆ ಜಿ ಮತ್ತು ಯುಕೆಜಿ ತರಗತಿಗಳು ಆಗಸ್ಟ್ 15 ಸ್ವಾತಂತ್ರೋತ್ಸವದ ದಿನದಂದು ಶುಭಾರಂಭಗೊಂಡಿತು. ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಮತ್ತು ತೊಡಿಕನ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಚಂದ್ರಾವತಿ ತರಗತಿಗಳನ್ನು ಉದ್ಘಾಟಿಸಿದರು. ಅಂಗನವಾಡಿ ಬಾಲವಿಕಾಸ ಸಮಿತಿಯ ಅಧ್ಯಕ್ಷೆ ವಾಸವಿ ಮುಪ್ಪಸೇರುಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಭವಾನಿ ಚಿಟ್ಟನೂರು , ಮಾಜಿ ಸಸ್ಯರಾದ ರವೀಂದ್ರ ಪಂಜಿಕೋಡಿ, ಉಷಾ ಅಡ್ಯಡ್ಕ,

ತೊಡಿಕಾನ ಅಂಗನವಾಡಿಯಲ್ಲಿ ಎಲ್. ಕೆ. ಜಿ ಮತ್ತು ಯುಕೆಜಿ ತರಗತಿಗಳು ಆರಂಭ Read More »

ಕಲ್ಚೆರ್ಪೆಯಲ್ಲಿ ನಾಗರ ಪಂಚಮಿ‌ ಆಚರಣೆ

ಆಲೆಟ್ಟಿ ಗ್ರಾಮದ ಸಿರಿಕುರಲ್ ನಗರ, ಕಲ್ಬರ್ಪೆಶ್ರೀ ವನದುರ್ಗಾ ಮತ್ತು ಸಹಪರಿವಾರ ದೈವಸ್ಥಾನದ ನಾಗನ‌ ಕಟ್ಟೆಯಲ್ಲಿನಾಗರ ಪಂಚಮಿ ಪ್ರಯುಕ್ತ ಪೂಜೆ ನಡೆದು ನಾಗನ ಕಲ್ಲಿಗೆ ಹಾಲೆರೆಯಲಾಯಿತು.ಸಮಿತಿಯರು,ಸ್ಥಳೀಯರು ಭಾಗವಹಿಸಿದರು.

ಕಲ್ಚೆರ್ಪೆಯಲ್ಲಿ ನಾಗರ ಪಂಚಮಿ‌ ಆಚರಣೆ Read More »

ಕಾಡಾನೆ ದಾಳಿಗೆ ಕೂಲಿಕಾರ್ಮಿಕ ಬಲಿ

ಕೊಡಗಿ ವಿರಾಜಪೇಟೆ ತಾಲೂಕಿನ ಮಾಲ್ದಾರೆ ಸಮೀಪದ ಘಟ್ಟದಳ ಸಮೀಪದ ಕಾಫಿ ತೋಟದಲ್ಲಿ ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಬಲಿಯಾದ ಘಟನೆ ವರದಿಯಾಗಿದೆ.ಇನ್ನಿಬ್ಬರು ಕಾರ್ಮಿಕರು ಗಂಭೀರ ಗಾಯಗೊಂಡಿದ್ದಾರೆ. ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ದಾಳಿ ಮಾಡಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಾಡಾನೆ ದಾಳಿಗೆ ಕೂಲಿಕಾರ್ಮಿಕ ಬಲಿ Read More »

ಪೆರುವೊಡಿ : ನಾಗರ ಪಂಚಮಿ ಆಚರಣೆ

ಪೆರುವೂಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ (ಬೈಲಂಗಡಿ) ನಾಗನ ಕಟ್ಟೆಯಲ್ಲಿ ಭಕ್ತಾಧಿಗಳ ಭಕ್ತಿಪೂರ್ವಕವಾಗಿ ನಾಗರ ಪಂಚಮಿ ಆಚರಿಸಿದರು.ಈ ಸಂದರ್ಭದಲ್ಲಿ ದೇವಳದ ಸಮಿತಿಯವರು,ಭಕ್ತಾಧಿಗಳು ಉಪಸ್ಥಿತರಿದ್ದರು.

ಪೆರುವೊಡಿ : ನಾಗರ ಪಂಚಮಿ ಆಚರಣೆ Read More »

error: Content is protected !!
Scroll to Top