August 2026

ಇಂದು ಸುಳ್ಯದಲ್ಲಿ ಬಾಲ ಆಧಾರ್ ನೋಂದಣಿ ಕ್ಯಾಂಪ್

ಇಂದು (ಜು.21) ನಗರ ಪಂಚಾಯತ್ ಸಭಾಭವನದಲ್ಲಿ ಸೊನ್ನೆಯಿಂದ ಆರು ವರ್ಷದ ಒಳಗಿನ ಮಕ್ಕಳಿಗೆ ಬಾಲ ಆಧಾರ್ ನೋಂದಣಿ ಶಿಬಿರ ಮತ್ತು ಅದೇ ಪೋಷಕರ ಆಧಾರ್ ತಿದ್ದುಪಡಿ ಶಿಬಿರ ನಡೆಯುತ್ತಿದೆ..ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಮತ್ತು ಅಜ್ಜಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಧಾ‌ರ್ ನೋಂದಣಿ ಮಾಡಲು ಬಾಕಿ ಇರುವ ಸೊನ್ನೆಯಿಂದ ಆರು ವರ್ಷದ ಒಳಗಿನ ಮಕ್ಕಳನ್ನು ಮತ್ತು ಪೋಷಕರು ಹಾಜರಾಗಿ ಆಧಾರ್ ನೋಂದಣಿ ಮಾಡಿಸಲು ಕೋರಿದೆ. ಆಧಾರ್ ನೋಂದಣಿಗೆ ಬರುವಾಗ ಒಟಿಪಿ ಬರುವ ಮೊಬೈಲ್ ,ಮೂಲ ವಿಳಾಸ ಹೊಂದಿರುವ ಪೋಷಕರು

ಇಂದು ಸುಳ್ಯದಲ್ಲಿ ಬಾಲ ಆಧಾರ್ ನೋಂದಣಿ ಕ್ಯಾಂಪ್ Read More »

ಎಲೆಕ್ಟ್ರೀಷನ್ ಪುರುಶೋತ್ತಮ‌ ಕೇರ್ಪಳ ನಿಧನ

ಸುಳ್ಯ ಕೇರ್ಪಳ ನಿವಾಸಿ ಪುರುಷೋತ್ತಮ ರಾವ್ (55ವರ್ಷ) ಎಂಬವರು ಮಂಗಳೂರಿನ ಆಸ್ಪತ್ರೆಯಲ್ಲಿ ಆ.21ರಂದು ಮುಂಜಾನೆ ನಿಧನರಾದರು. ಎಲೆಕ್ಟ್ರೀಷನ್ ಕೆಲಸ ಮಾಡುತ್ತಿದ್ದ ಅವರು ಎರಡು ವಾರಗಳ ಹಿಂದೆ ಅವರಿಗೆ ಜ್ವರ ಬಂದ ಹಿನ್ನಲೆಯಲ್ಲಿ ಅವರು ಸುಳ್ಯದಿಂದ ಔಷಧ ಪಡೆದಿದ್ದರು. ಮೂರು ದಿನಗಳ ಹಿಂದೆ ಜ್ವರ ಉಲ್ಬಣಗೊಂಡಾಗ ಸುಳ್ಯದ ಆಸ್ಪತ್ರೆಗೆ ದಾಖಲಾದರು. ಬಳಿಕ ವೈದ್ಯರ ಸಲಹೆ ಮೇರೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರು ಕೊನೆಯುಸಿರೆಳೆದರೆಂದು ತಿಳಿದುಬಂದಿದೆಮೃತರು ತಾಯಿ ಮೋಹಿನಿ,ಪತ್ನಿ ಉಷಾ, ಸಹೋದರ ಕಮಲಾಕ್ಷ ರಾವ್ ಕೇರ್ಪಳ, ಇಬ್ಬರು ಮಕ್ಕಳು

ಎಲೆಕ್ಟ್ರೀಷನ್ ಪುರುಶೋತ್ತಮ‌ ಕೇರ್ಪಳ ನಿಧನ Read More »

ಸಂಸತ್ತಿನ ಮಳೆಗಾಲದ ಅಧಿವೇಶನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ನಾಪತ್ತೆ: ಅಮಳ ರಾಮಚಂದ್ರ

ಇತ್ತೀಚೆಗೆ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಎಲ್ಲಿದ್ದಾರೆ ಎಂಬ ಪ್ರಶ್ನೆ ಇಡೀ ದೇಶದಲ್ಲಿ ಮತ್ತೆ ಮತ್ತೆ ಕೇಳಿ ಬರುತ್ತಿತ್ತು. 19 ದಿನಗಳ ಕಾಲ ಭಾರತದ ಪಾರ್ಲಿಮೆಂಟಿನಲ್ಲಿ ನಡೆದ ಸಂಸತ್ ಅಧಿವೇಶನದಲ್ಲಿ ಅವರಿಬ್ಬರೂ ಅಧಿವೇಶನದ ಕೊನೆಯ ದಿನದವರೆಗೆ ನಾಪತ್ತೆಯಾಗಿದ್ದರು ಎಂದು ಕೆ.ಪಿ.ಸಿ.ಸಿ ವಕ್ತಾರ ಅಮಳ ರಾಮಚಂದ್ರ ಹೇಳಿದ್ದಾರೆ.ಅವರು‌ ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಆ.2೦ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಕಟ್ಟಕಡೆಗೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅಧಿವೇಶನದ ಕೊನೆಯ

ಸಂಸತ್ತಿನ ಮಳೆಗಾಲದ ಅಧಿವೇಶನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ನಾಪತ್ತೆ: ಅಮಳ ರಾಮಚಂದ್ರ Read More »

ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ದ.ಕ.- 2 ಅಧ್ಯಕ್ಷರಾಗಿ ವಿಶ್ವನಾಥ ರೈ ಕಳಂಜರವರು ಆಯ್ಕೆ

, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ದ.ಕ.- 2 ಅಧ್ಯಕ್ಷರಾಗಿ ಶ್ರೀ ವಿಶ್ವನಾಥ ರೈ ಕಳಂಜರವರು ಆಯ್ಕೆಯಾಗಿರುತ್ತಾರೆ. ಇವರು ಸುಳ್ಯ ತಾಲೂಕಿನ ಕಳಂಜದವರಾಗಿದ್ದು, 2020ರಿಂದ 2023ರ ವರೆಗೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸುಳ್ಯ ತಾಲೂಕು ಅಧ್ಯಕ್ಷರಾಗಿ, ಪ್ರಸ್ತುತ ಜಿಲ್ಲಾ ಸದಸ್ಯರಾಗಿ ,ಕಳಂಜ ಮಂಡಲ ಪಂಚಾಯತ್‌ ಅಧ್ಯಕ್ಷರಾಗಿ 10ವರ್ಷಗಳ ಕಾಲ, ಕೃಷಿ ಉತ್ಪನ್ನ ಮಾರುಕಟ್ಟೆ ಸಂಘ, ಸುಳ್ಯ ತಾಲೂಕಿನ 3 ಬಾರಿ ಉಪಾಧ್ಯಕ್ಷರಾಗಿ, APMC ಸುಳ್ಯದ ಎರಡು ಬಾರಿ ನಿರ್ದೇಶಕರಾಗಿ , KMF ಮಂಗಳೂರಿನ ನಿರ್ದೇಶಕರಾಗಿ

ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ದ.ಕ.- 2 ಅಧ್ಯಕ್ಷರಾಗಿ ವಿಶ್ವನಾಥ ರೈ ಕಳಂಜರವರು ಆಯ್ಕೆ Read More »

ಪುತ್ತೂರು: ಗಾಂಜಾ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ ಅಬಕಾರಿ ಇಲಾಖೆಯ ಅಧಿಕಾರಿಗಳು

ಪುತ್ತೂರು: ಅಬಕಾರಿ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ 64 ಗ್ರಾಂ ಗಾಂಜಾ ಹಾಗೂ ಮೊಬೈಲ್‌ವೊಂದನ್ನು ವಶಪಡಿಸಿಕೊಂಡು, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.ಮಾನ್ಯ ಅಬಕಾರಿ ಜಂಟಿ ಆಯುಕ್ತರು, ಮಂಗಳೂರು ವಿಭಾಗ ಇವರ ನಿರ್ದೇಶನದಂತೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ, ಆಗಸ್ಟ್ 18ರಂದು ರಾತ್ರಿ ಸುಮಾರು 11.30ಕ್ಕೆ ಪುತ್ತೂರು ವಲಯದ ಅಬಕಾರಿ ನಿರೀಕ್ಷಕ ಲೋಕೇಶ್ ಸಿ. ಅವರ ನೇತೃತ್ವದಲ್ಲಿ ಸಿಬ್ಬಂದಿ ರಾಷ್ಟ್ರೀಯ ಹೆದ್ದಾರಿ 75ರ ಪಡುಪು ವಳಲು ಎಂಬಲ್ಲಿ ತಪಾಸಣೆ ನಡೆಸಿದರು.ಈ ವೇಳೆ ಬೆಳ್ತಂಗಡಿ ತಾಲೂಕಿನ

ಪುತ್ತೂರು: ಗಾಂಜಾ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ ಅಬಕಾರಿ ಇಲಾಖೆಯ ಅಧಿಕಾರಿಗಳು Read More »

ಅರಂತೋಡು ಮದರಸದಲ್ಲಿ ಶಿಕ್ಷಕ – ರಕ್ಷಕರ ಸಭೆ

ನುಸ್ರತುಲ್ ಇಸ್ಲಾಂ ಮದರಸ ಅರಂತೋಡು ಇದರ ಆಶ್ರಯದಲ್ಲಿ ಶಿಕ್ಷಕ – ರಕ್ಷಕರ ಸಭೆಯು ಆ.14 ರಂದು ನುಸ್ರತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ನಡೆಯಿತು.ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ ವಹಿಸಿದರು. ಮದರಸ ಮ್ಯಾನೇಜ್ ಮೆಂಟ್ ಅಧ್ಯಕ್ಷ ಅಮೀರ್ ಕುಕ್ಕುಂಬಳ ಸ್ವಾಗತಿಸಿದರು. ಸದರ್ ರವೂಫ್ ಅಝ್ ಹರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಖತೀಬರಾದ ಬಹು| ಆಸಿಫ್ ಅಝ್ ಹರಿ ವಿಷಯ ಮಂಡಿಸಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತನ್ನು ಮೈಗೂಡಿಸಬೇಕೆಂದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಉಪನ್ಯಾಸಕ ಎ.ಅಬ್ದುಲ್ಲ ಭಾಗವಹಿಸಿದರು. ಜಮಾಅತ್ ಕಾರ್ಯದರ್ಶಿ

ಅರಂತೋಡು ಮದರಸದಲ್ಲಿ ಶಿಕ್ಷಕ – ರಕ್ಷಕರ ಸಭೆ Read More »

ಬಿಜೆಪಿಯವರು, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು ನಮ್ಮನ್ನು ಜೈಲಿಗೆ ಹಾಕಿದರೂ, ನೇಣಿಗೆ ಹಾಕಿದರೂ ನಾವು ವಂದೇ ಮಾತರಂ ಗೀತೆಯ ಎರಡೇ ಚರಣವನ್ನು ಹಾಡುವುದು!

‘ವಂದೇ ಮಾತರಂ’ ಗೀತೆಯ ಎರಡು ಚರಣಗಳನ್ನು ಮಾತ್ರ ಹಾಡುವುದೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.ದೆಹಲಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಹರಿಪ್ರಸಾದ್, ‘ವಂದೇ ಮಾತರಂ ಗೀತೆ ಹಾಡಿದ್ದಕ್ಕೆ ಜೈಲು ಸೇರಿದ್ದು ಕಾಂಗ್ರೆಸ್‌ನವರು. ನಾವು ವಂದೇ ಮಾತರಂ ಗೀತೆಯನ್ನು ಒಪ್ಪಿಕೊಳ್ಳುತ್ತೇವೆ. ಆದರೆ 2 ಚರಣವನ್ನು ಮಾತ್ರ ಹಾಡುತ್ತೇವೆ. ಬಿಜೆಪಿಯವರು, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು ನಮ್ಮನ್ನು ಜೈಲಿಗೆ ಹಾಕಿದರೂ, ನೇಣಿಗೆ ಹಾಕಿದರೂ ನಾವು ಎರಡೇ ಚರಣವನ್ನು ಹಾಡುತ್ತೇವೆ’ ಎಂದು ಒತ್ತಿ ಹೇಳಿದ್ದಾರೆ.

ಬಿಜೆಪಿಯವರು, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು ನಮ್ಮನ್ನು ಜೈಲಿಗೆ ಹಾಕಿದರೂ, ನೇಣಿಗೆ ಹಾಕಿದರೂ ನಾವು ವಂದೇ ಮಾತರಂ ಗೀತೆಯ ಎರಡೇ ಚರಣವನ್ನು ಹಾಡುವುದು! Read More »

ಮಾಜಿ ಶಿಕ್ಷಣ ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ಬಿ.ಸಿ ನಾಗೇಶ್ ಇನ್ನಿಲ್ಲ

ಕರ್ನಾಟಕದ ಮಾಜಿ ಶಿಕ್ಷಣ ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ಬಿ.ಸಿ. ನಾಗೇಶ್ (67) ಅವರು ಅನಾರೋಗ್ಯದಿಂದ ಆ.18ರಂದು ಬೆಂಗಳೂರಿನಲ್ಲಿ ನಿಧನರಾದರು.ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಬೆಂಗಳೂರಿನಲ್ಲಿರುವ ತಮ್ಮ ಪುತ್ರಿಯ ನಿವಾಸದಲ್ಲಿ ಕೊನೆಯುಸಿರೆಳೆದರು.ಅವರ ಸ್ವಕ್ಷೇತ್ರವಾದ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ನಾಳೆ (ಬುಧವಾರ) ಅಂತಿಮ ಸಂಸ್ಕಾರ ನೆರವೇರಲಿದೆ.ತುಮಕೂರು ಜಿಲ್ಲೆಯ ತಿಪಟೂರು ಕ್ಷೇತ್ರದಿಂದ 2008 ಮತ್ತು 2018 ರಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ನಾಗೇಶ್ ಅವರು, ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಮಾಜಿ ಶಿಕ್ಷಣ ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ಬಿ.ಸಿ ನಾಗೇಶ್ ಇನ್ನಿಲ್ಲ Read More »

ಕಸ್ತೂರಿ ರಂಗನ್ ವರದಿ ವಿರೊಧಿಸಿ ಬಳ್ಪ ಗ್ರಾಮಸ್ಥರಿಂದ ಪ್ರತಿಭಟನೆಗೆ ನಿರ್ಧಾರ

ಕಸ್ತೂರಿ ರಂಗನ್ ವರದಿಯಲ್ಲಿ ಬಳ್ಪ‌ ಗ್ರಾಮವು ಸೇರ್ಪಡೆಗೊಂಡಿದ್ದು ಈ ಹಿನ್ನಲೆಯಲ್ಲಿ ಬಳ್ಪ ಗ್ರಾಮವು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಿದ ಪರಿಣಾಮ ಮುಂದೆ ಆಗುವ ಪರಿಣಾಮಗಳನ್ನು ಎದುರಿಸುವ ಬಗ್ಗೆ ಬೀದಿಗುಡ್ಡೆಯಲ್ಲಿ ಗ್ರಾಮಸ್ಥರ ಸಭೆ ನಡೆಯಿತು.ಸಭೆಯಲ್ಲಿ ಪ್ರತಿಯೊಬ್ಬರೂ ವೈಯಕ್ತಿಕವಾಗಿ ಕೇಂದ್ರ ಪರಿಸರ ಸಚಿವಾಲಯದ ಕಾರ್ಯದರ್ಶಿಗೆ ಆಕ್ಷೇಪಣೆ ಸಲ್ಲಿಸುವುದು ಮತ್ತು ಗ್ರಾ.ಪಂ. ಎದುರು ಪ್ರತಿಭಟನೆ ನಡೆಸುವುದೆಂದು ನಿರ್ಣಯಿಸಲಾಯಿತೆಂದು ಸಂಘಟಕರಾದ ಸುಬ್ರಹ್ಮಣ್ಯ ಕುಳ ತಿಳಿಸಿದರು.ಈ ಸಂದರ್ಭದಲ್ಲಿ ಪಂಜ ಸಿ.ಎ. ಬ್ಯಾಂಕ್ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಕುಳ, ಬಳ್ಳ ಗ್ರಾ.ಪಂ. ಮಾಜಿ ಅಧ್ಯಕ್ಷ

ಕಸ್ತೂರಿ ರಂಗನ್ ವರದಿ ವಿರೊಧಿಸಿ ಬಳ್ಪ ಗ್ರಾಮಸ್ಥರಿಂದ ಪ್ರತಿಭಟನೆಗೆ ನಿರ್ಧಾರ Read More »

ಭಾರತೀಯ ಮಜ್ದೂರ್ ಸಂಘದ ವತಿಯಿಂದ ಮಂಗಳೂರು ಜಿಲ್ಲಾ ಕೇಂದ್ರದಲ್ಲಿ ಹಲವು ಬೇಡಿಕೆಗಳನ್ನು ಈಡೇರಿಸಲು ಪ್ರತಿಭಟನೆ

ಭಾರತೀಯ ಮಜ್ದೂರ್ ಸಂಘದ ವತಿಯಿಂದ ಮಂಗಳೂರು ಜಿಲ್ಲಾ ಕೇಂದ್ರದಲ್ಲಿ ಹಲವು ಬೇಡಿಕೆಗಳನ್ನು ಈಡೇರಿಸಲು ಆ.18ರಂದು ಪ್ರತಿಭಟನೆ ನಡೆದಿದ್ದು ಈ ಪ್ರತಿಭಟನೆಯಲ್ಲಿ ಸುಳ್ಯ ತಾಲೂಕಿನ‌ ನೂರಾರು ಆಟೋಚಾಲಕರು(ಬಿ.ಎಂ.ಎಸ್ ಸಂಯೋಜಿತ) ಭಾಗಿಯಾದರು.ತಾಲೂಕಿನಾದ್ಯಂತ ಸುಳ್ಯ ನಗರ ಕಲ್ಲುಗುಂಡಿ, ಪಂಜ, ಎಡಮಂಗಲ, ಗುತ್ತಿಗಾರು ಸುಬ್ರಮಣ್ಯ, ಹರಿಹರ, ಕಲ್ಮಕಾರು ಜಾಲ್ಸೂರು, ಕುಕ್ಕುಜಡ್ಕ, ಪೆರಾಜೆ ಘಟಕಗಳಿಂದ ಆಟೋ ಚಾಲಕರು ಭಾಗಿಯಾಗಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು. ತಾಲೂಕು ಆಟೋ ಚಾಲಕರ ಅಧ್ಯಕ್ಷರಾದ ಪ್ರಕಾಶ್ ಎಂ .ಎಸ್ ಪ್ರಧಾನ ಕಾರ್ಯದರ್ಶಿ ನಾರಾಯಣ ಎಸ್ ಎಂ ಪೈಚಾರ್, ಕೋಶಾಧಿಕಾರಿ

ಭಾರತೀಯ ಮಜ್ದೂರ್ ಸಂಘದ ವತಿಯಿಂದ ಮಂಗಳೂರು ಜಿಲ್ಲಾ ಕೇಂದ್ರದಲ್ಲಿ ಹಲವು ಬೇಡಿಕೆಗಳನ್ನು ಈಡೇರಿಸಲು ಪ್ರತಿಭಟನೆ Read More »

error: Content is protected !!
Scroll to Top