ಸಮಾಜದ ನಡುವೆ ಕೆಲಸ ಮಾಡುವ ಸಂಘಟನೆ ಆರ್.ಎಸ್.ಎಸ್: ರಾಜೇಶ್ ಪದ್ಮಾರು

ಜಾಲ್ಸೂರು : ಆರ್.ಎಸ್.ಎಸ್ ಶತಾಬ್ಲಿ ಹಿನ್ನಲೆಯಲ್ಲಿ ಜಾಲ್ಸೂರು ಮಂಡಲ ಅರ್.ಎಸ್.ಎಸ್ ಸಾಂಘಿಕ್ ಅಡ್ಕಾರು ಸುಬ್ರಮಣ್ಯ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮ ಮುಖ್ಯ ವಕ್ತಾರರಾಗಿ ಪ್ರಾಂತ್ಯ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರು ಬೌದ್ದಿಕ್ ನೀಡಿ ಅರ್.ಎಸ್.ಎಸ್ ಕಳೆದ ನೂರು ವರ್ಷಗಳಿಂದ ಸಮಾಜದ ನಡುವೆ ಕೆಲಸ ಮಾಡುತ್ತ ಬರುತ್ತಿದೆ. ಸಂಘ ಸ್ಥಾಪನೆ ಕಾಲದಲ್ಲಿ ಅರ್.ಎಸ್‌.ಎಸ್ ಬಗ್ಗೆ ಅನೇಕ ಜನ ಅಪಹಾಸ್ಯ,ವ್ಯಂಗ್ಯ ಮಾಡಿದರು. ನಂತರ ಕಾಲದಲ್ಲಿ ಪ್ರತಿರೋಧ, ಆಕ್ರಮಣ ಗಳು ನಡೆದವು.
ಆದರೆ ಕಾರ್ಯಕರ್ತರ ನಿಸ್ವಾರ್ಥ ಕಾರ್ಯ ದ ಪರಿಣಾಮ ಇಂದು ಅವೆಲ್ಲವನ್ನು ಮೆಟ್ಟಿ ನಿಂತು ಸಮಾಜ ಅರ್.ಎಸ್.ಎಸ್ ನ್ನು ಒಪ್ಪಿಕೊಳ್ಳುವ ಹಂತಕ್ಕೆ ಬಂದಿರವುದು ಈ ಸಂಘಟನೆಯ ವಿಶೇಷ. ವ್ಯಕ್ತಿ ನಿರ್ಮಾಣ ದಿಂದ ರಾಷ್ಟ್ರ ನಿರ್ಮಾಣ ಧೈಯ ದಲ್ಲಿ ಸಂಘ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತ ಬಂದಿದೆ.ಅನೇಕ ಸ್ವಯಂ ಸೇವಕರು ತಮ್ಮ ಜೀವನವನ್ನು ಈ ಯಾತ್ರೆಯಲ್ಲಿ ನೀಡಿದ್ದಾರೆ ಎಂದು‌ ತಿಳಿಸಿದರು.ನೂರಾರು ಸ್ವಯಂ ಸೇವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top