ಉಬರಡ್ಕಮಿತ್ತೂರು ಗ್ರಾಮದ ಮಿತ್ತೂರು ಹಾಗೂ ಕೆದಂಬಾಡಿ ಪರಿಸರದಲ್ಲಿ ಕಾಡಾನೆಗಳು ದಾಳಿ ನಡೆಸಿ ಅಪಾರ ಕೃಷಿ ಹಾನಿಯಾದ ಘಟನೆ ಜು. 22 ರ ರಾತ್ರಿ ವರದಿಯಾಗಿದೆ.
ಮಾಧವ ರೈ, ಸುರೇಶ್ ಗೌಡ ಕೆದಂಬಾಡಿ, ಶ್ರೀಧರ ಗೌಡ ಕೆದಂಬಾಡಿ, ವೆಂಕಟ್ರಮಣ ಗೌಡ ಕೆದಂಬಾಡಿ, ಲೋಕಯ್ಯ ಗೌಡ ಮೂರ್ಜೆ, ಬಾಲಕೃಷ್ಣ ಮೂರ್ಜೆ, ಅಶ್ವಥ್ ಬಳ್ಳಡ್ಕರವರ ತೋಟಗಳಿಗೆ ನುಗ್ಗಿದ ಆನೆಗಳು ಅಪಾರ ಕೃಷಿಯನ್ನು ನಾಶ ಮಾಡಿವೆ.





































































