ಕೇಂದ್ರೀಯ ರಬ್ಬರ್ ಪ್ರಾದೇಶಿಕ ಮಂಡಳಿ ಪುತ್ತೂರು ಶಾಖೆವತಿಯಿಂದ ಮಂಡೆಕೋಲು ಗ್ರಾಮ ಪಂಚಾಯತ್ ಮತ್ತು ಗ್ರಂಥಾಲಯದ ಸಹಯೋಗದಿಂದ 8 ದಿನಗಳ ರಬ್ಬರ್ ಮೂರ್ತೆ ಮತ್ತು ತರಬೇತಿ ಕಾರ್ಯಾಗಾರ ಗ್ರಾಮ ಪಂಚಾಯತ್ ಅರಿವು ಕೇಂದ್ರದಲ್ಲಿ ನಡೆಯಿತು, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಶಲ ಉದ್ಧಂತಡ್ಕ ಅವರ ಅಧ್ಯಕ್ಷತೆಯೊಂದಿಗೆ ಉದ್ಘಾಟನೆಗೊಂಡಿತು ಈ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ರಮೇಶ್ ಪಿ, ಕೇಂದ್ರೀಯ ರಬ್ಬರ್ ಪ್ರಾಧಿಕಾರದ ಪುತ್ತೂರು ವಿಭಾಗದ ಅಭಿವೃದ್ಧಿ ಅಧಿಕಾರಿ ಗೋಪನಾಥ್, ಉಪ ಅಭಿವೃದ್ಧಿ ಅಧಿಕಾರಿ ಟೋನಿ ಮೖಕಲ್, ಸುಳ್ಯ ಪ್ರಾಧಿಕಾರದ ಫೀಲ್ಡ್ ಆಫೀಸರ್ ಪವಿತ್ರ ಮೇಡಂ, ಶ್ರೀಯುತ ಡಿಸಿ ಬಾಲಚಂದ್ರ ದೇವರಗುಂಡ, ಶ್ರೀಯುತ ಅನಿಲ ತೋಟಪ್ಪಾಡಿ, ಉಪಸ್ಥಿತರಿದ್ದರು ಮತ್ತು ತರಭೇತಿಗೆ ಆಗಮಿಸಿದ ಎಲ್ಲಾ ಗ್ರಾಮಸ್ಥರು ಕಾರ್ಯಕ್ರಮ ಸಂಯೋಜಕರಾದ ಸತ್ಯಶಾಂತಿ ತ್ಯಾಗ ಮೂರ್ತಿಯವರು ಉಪಸ್ಥಿತರಿದ್ದರು ಮುರಳೀಧರ ರೖ ಪೇರಾಲ್ ರವರು ಪ್ರಾರ್ಥಿಸಿದರು,ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಿ ಕಣೆಮರಡ್ಕ ನಿರೂಪಿಸಿದರೆ ಅಭಿವೃದ್ಧಿ ಸ್ವಾಗತಿಸಿದರು ಸಂಯೋಜಕರು ಎಲ್ಲರನ್ನು ವಂದಿಸಿದರು
ಮಂಡೆಕೋಲು : ರಬ್ಬರ್ ಮೂರ್ತೆ ಮತ್ತು ತರಬೇತಿ ಕಾರ್ಯಾಗಾರ

















