ಮಡಿಕೇರಿ ತಾಲ್ಲೂಕಿನ ಕಾಲೂರು ಗ್ರಾಮದ ದೇವಸ್ತುರು ನಿಂದ ಕಳೆದ 15 ದಿನಗಳಿಂದ ನಾಪತ್ತೆ ಯಾಗಿ ಮನೆಯವರಿಗೆ ಆತಂಕ ಮೂಡಿಸಿದ್ದ ಸೋಮೇಟ್ಟಿ ಕೀರ್ತನ್ (31) ಮಾಂದಳಲಪಟ್ಟಿ ಅರಣ್ಯದಲ್ಲಿ ಜೀವಂತವಾಗಿ ಪತ್ತೆ ಯಾಗಿದ್ದಾನೆ. 15 ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಕೀರ್ತನ್ ಸ್ಥಳೀಯವಾಗಿ ಹುಡುಕಾಟ ನಡೆಸಲಾಗಿತ್ತು, ಅಂಜನಾ ಪ್ರಶ್ನೆ ಮೂಲಕ ಅರಣ್ಯದ ಒಳಗೆ ತೆರಳಿರುವ ಬಗ್ಗೆ ಸೂಚನೆ ನೀಡಲಾಗಿತ್ತು, ಜೊತೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಹ ಪ್ರಕರಣ ದಾಖಲಾಗಿತ್ತು. ಇಂದು ಬೆಳಗ್ಗೆ ಅರಣ್ಯ ಪದೇಶದಲ್ಲಿ ಪತ್ತೆಯಾಗಿರುವ ಬಗ್ಗೆ ಮಾಹಿತಿ ದೊರೆತಿದೆ.
ನಿಜವಾಯಿತ್ತು ಅಂಜನಾ ಪ್ರಶ್ನೆ ಚಿಂತನೆ,15 ದಿವಸಗಳ ಬಳಿಕ ಯುವಕ ಕಾಡಿನಲ್ಲಿ ಪತ್ತೆ!

















