ಬಸ್ಸಲ್ಲಿ ಮಹಿಳೆಯೋರ್ವರು ಕುಸಿದು ಬಿದ್ದು ಅಸ್ವಸ್ಥಗೊಂಡು ನಂತರ ಆಸ್ಪತ್ರೆಯಲ್ಲಿ ಹೃದಯಘಾತದಿಂದ ಮೃತಪಟ್ಟ ಘಟನೆ ಅ.29 ರಂದು ನಡೆದಿದೆ.
ಸಂಪಾಜೆಯಿಂದ ಸುಳ್ಯ ಕಡೆಗೆ ಬರುತ್ತಿರುವ ಬಸ್ಸು ದೊಡ್ಡಡ್ಕ ಬಳಿ ಬರುತ್ತಿರುವಾಗ ಕೊಯನಾಡಿನ ಕಮಲ ಎಂಬವರು ಕುಸಿದು ಬಿದ್ದರು.ಬಳಿಕ ಅವರನ್ನು ಸುಳ್ಯ ಖಾಸಗಿ ಆಸ್ಪತ್ರೆಗೆ ಕರೆತಂದು ದಾಖಲಿಸಲಾಯಿತು.
ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತದಿಂದ ನಿಧನರಾದರೆಂದು ತಿಳಿದು ಬಂದಿದೆ.
ಮಕ್ಕಳಾದ ಜಯಶ್ರೀ, ಶೋಭಾ ಮತ್ತು ಹೇಮಂತ್ ಅಗಲಿದ್ದಾರೆ.
ಬಸ್ಸಲ್ಲಿ ಮಹಿಳೆ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಸಾವು



































