ಸುಳ್ಯ ತಾಲೂಕು ಸಮಸ್ತ ಸಂಯುಕ್ತ ಜಮಾಅತ್ ನ 2024-25 ನೇ ಸಾಲಿನ ವಾರ್ಷಿಕ ಮಹಾಸಭೆಯು ಅಧ್ಯಕ್ಷರಾದ ಹಾಜಿ ಅಬ್ದುಲ್ ಖಾದರ್ ಬಾಯಾಂಬಾಡಿಯವರ ಅಧ್ಯಕ್ಷತೆಯಲ್ಲಿ ನ.01ರಂದು ಸುಳ್ಯದ ಸುಪ್ರೀಮ್ ಹಾಲ್ ನಲ್ಲಿ ನಡೆಯಿತು. ಗೌರಧ್ಯಕ್ಷರಾದ ಬಹು| ಸಯ್ಯದ್ ಎನ್ ಪಿ ಎಂ , ಝೈನುಲ್ ಅಬಿದೀನ್ ತಂಙಳ್ ದುವಾಃ ನೇರವೇರಿಸಿದರು. ಉಪಾಧ್ಯಕ್ಷರಾದ ಹಾಜಿ ಹೆಚ್ ಎ ಅಬ್ಬಾಸ್ ಸಂಟ್ಯಾರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಆಶ್ರಫ್ ಗುಂಡಿವರದಿ ವಾಚಿಸಿ, ಲೆಕ್ಕಪತ್ರವನ್ನು ಮಂಡಿಸಿದರು. ಸಭೆಯಲ್ಲಿ ಸಂಸ್ಥೆಗೆ ಸುಳ್ಯದಲ್ಲಿ ಸ್ಥಳ ಖರೀದಿ, ಅಲ್ ಬೀರ್ ಸ್ಕೂಲ್ ಸ್ಥಾಪನೆ, ಸದಸ್ಯತ್ವ ಶುಲ್ಕ ವಸೂಲಾತಿ, ಸಕ್ರೀಯ ಇಲ್ಲದ ಜಮಾಅತ್ ಪ್ರತಿನಿಧಿಗಳ ಬದಲಾವಣೆ ಮತ್ತು ಪ್ರತಿನಿಧಿ ಸಂಖ್ಯೆಗಳ ಹೆಚ್ಚಳ ಮುಂತಾದ ಬಗ್ಗೆ ಚರ್ಚೆ ನಡೆಸಲಾಯಿತು.
ಹಾಜಿ ಅಬೂಬಕ್ಕರ್ ಮಂಗಳ, ಹಾಜಿ ಅಹ್ಮದ್ ಸುಪ್ರೀಮ್, ಹಾಜಿ ಅಹ್ಮದ್ ಪಾರೆ, ಆಲಿಹಾಜಿಕಲ್ಲುಗುಂಡಿ, ಜಮಾಲ್ ಬೆಳ್ಳಾರೆ, ತಾಜ್ ಮೊಹಮ್ಮದ್ ಸಂಪಾಜೆ, ಅಬ್ದುಲ್ ಖಾದರ್ ಹಾಜಿ ಅಜ್ಜಾವರ, ಇರ್ಷಾದ್ ಕಲ್ಲುಗುಂಡಿ, ಜಿ ಕೆ ಹಮೀದ್ ಗೂನಡ್ಕ, ಶರೀಫ್ ರಿಲ್ಯಾಕ್ಸ್ ಅಜ್ಜಾವರ, ಅಬ್ದುಲ್ಲ ಅಜ್ಜಾವರ, ಕೆ ಎಂ ಅಬೂಬಕ್ಕರ್ ಪಾರೆಕಲ್, ಅಮೀರ್ ಕುಕ್ಕುಂಬಳ, ಇಕ್ಬಾಲ್ ಸುಣ್ಣಮೂಲೆ, ಅಬ್ದುಲ್ ಕೋಟುಗೇರೆ, ಶರೀಫ್ ಭಾರತ್ ಅತ್ತಿಕೆರೆಮಜಲು, ಮೊಹಮ್ಮದ್ ಹಮೀದಿಯಾ ಸಂಪಾಜೆ, ಅಬ್ದುಲ್ ಖಾದರ್ ಬೊಂಬೈ, ಸಿ ಪಿ ಇಸ್ಮಾಯಿಲ್, ಎಸ್ ಕೆ ಹನೀಫ್ ಸಂಪಾಜೆ, ಹನೀಫ್ ಹಾಜಿ ಕುಂಭರ್ಚೋಡ್, ಎ ಬಿ ಮೋಯಿದ್ಧೀನ್ ಕಳಂಜ, ಮಜೀದ್ ಕಳಂಜ, ನಝೀರ್ ಕಳಂಜ, ಪಿ ಎಸ್ ಇಸ್ಮಾಯಿಲ್ ಕಳಂಜ, ಇಬ್ರಾಹಿಂ ನಿಡುಬೆ, ಅಬೂಬಕ್ಕರ್ ಐವರ್ನಾಡು, ಆಶಿಕ್ ಸುಳ್ಯ ಮೊದಲಾದವರು ಉಪಸ್ಥಿತರಿದ್ದು. ಸಭೆಯ ಆರಂಭದಲ್ಲಿ ನಮ್ಮನ್ನು ಅಗಲಿದ ಸಮಸ್ತ ಪ್ರೇಮಿ ಬೆಳ್ಳಾರೆ ಪ್ರತಿನಿಧಿ ನಝೀರ್ ಬಿಝಬೆಳ್ಳಾರೆ ರವರ ತಂದೆ ಅಬೂಬಕ್ಕರ್ ಹಾಜಿ ಯವರ ಹೆಸರಿನಲ್ಲಿ ಯಾಸೀನ್ ಪಾರಾಯಣ ಮತ್ತು ತಹ್ ಲೀಲ್ ಸಮರ್ಪಿಸಲಾಯಿತು. ತಾಜ್ ಮೊಹಮ್ಮದ್ ಸಂಪಾಜೆ ವಂದಿಸಿದರು



































