ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಬೆಳ್ಳಿರಥವನ್ನು ಸಮರ್ಪಿಸಿರುವ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಬಿ ಕಮಿಟಿ ಅಧ್ಯಕ್ಷ ಡಾ.ಕೆ.ವಿ.ರೇಣುಕಾಪ್ರಸಾದ್ ರವರು ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಪ್ರಥಮವಾಗಿ ಬೆಳ್ಳಿರಥೋತ್ಸವ ಸೇವೆ ನಡೆಸಿದರು.ರಥೋತ್ಸವ ವೈಭದಿಂದ ನಡೆದು ಸಾವಿರಾರು ಭಕ್ತರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರನ್ನು ಬೆಳ್ಳಿ ರಥದಲ್ಲಿ ಕಣ್ತುಂಬಿಕೊಂಡರು.
ಈ ಸಂದರ್ಭದಲ್ಲಿ ಡಾ.ರೇಣುಕಾ ಪ್ರಸಾದ್ ಅವರ ಪತ್ನಿ ಡಾ.ಜ್ಯೋತಿ ರೇಣುಕಾಪ್ರಸಾದರು, ಪುತ್ರಿ ಡಾ.ಅಭಿಜ್ಞಾ ಹಾಗೂ ಅಳಿಯ ಗೋಕುಲ್, ಪುತ್ರ ಮೌರ್ಯ ಆರ್.ಪ್ರಸಾದ್, ಅತ್ತೆ, ಮಾವ, ಅವರ ಶಿಕ್ಷಣ ಸಂಸ್ಥೆಗಳ ವಿವಿಧ ಸಮಿತಿಗಳ ಪ್ರಮುಖರು, ಉದ್ಯೋಗಿಗಳು, ಹಲವು ವಿದ್ಯಾರ್ಥಿಗಳು ಹಾಗೂ ಸಾವಿರಾರು ಭಕ್ತರು ಉಪಸ್ಥಿತರಿದ್ದರು.
ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಪ್ರಥಮವಾಗಿ ಬೆಳ್ಳಿ ರಥ ಸೇವೆ ನಡೆಸಿದ ಡಾ.ಕೆ.ವಿ ರೇಣುಕಾಪ್ರಸಾದ್ ಮತ್ತು ಮನೆಯವರು

















