.
ಆರಂತೋಡು ಗ್ರಾಮ ಅಡ್ತಲೆ ವಾರ್ಡ್ನ ಅರಮನೆಗಯಾ ಎಂಬಲ್ಲಿ ಬಲ್ನಾಡ್ ಹೊಳೆಗೆ ಸೇತುವೆ ನಿರ್ಮಾಣ ಮಾಡಬೇಕೆಂದು ಆ ಭಾಗದ ಜನರು ಸುಮಾರು 30ವರ್ಷ ಗಳಿಂದ ಸರಕಾರ ಕ್ಕೆ, ಜನಪ್ರತಿನಿದಿಗಳಿಗೆ ಮನವಿ ಸಲ್ಲಿಸುತ್ತಾ ಬರುತ್ತಿದ್ದರು. ಅದಕ್ಕಾಗಿ ಪ್ರತಿಭಟನೆ, ಮತದಾನ ಬಹಿಷ್ಕಾರ ನಿಲುವು ವ್ಯಕ್ತಪಡಿಸುತ್ತಿದ್ದರು.ಕಳೆದ ವಿಧಾನಸಭಾ ಚುನಾವಣೆ. ಕಳೆದ ನಂತರ ಮಾನ್ಯ ಶಾಸಕರಾದ ಕು l ಭಾಗೀರಥಿ ಮುರುಳ್ಯ ರವರು ಭೇಟಿ ನೀಡಿದ ಸಂದರ್ಭದಲ್ಲಿ ಸೇತುವೆ ನಿರ್ಮಾಣಕ್ಕೆ ಅನುದಾನದ ಭರವಸೆ ನೀಡಿದ್ದರು. ಇದೀಗ ಮಾನ್ಯ ಶಾಸಕರು ಕೊಟ್ಟ ಮಾತಿನಂತೆ ಸರಕಾರದಿಂದ ಅನುದಾನ ಒದಗಿಸಿ ನಾಳೆ ಅಂದರೆ 12.11.2025ಬುಧವಾರ ದಂದು ಅಪರಾಹ್ನ ಗಂಟೆ 4ಕ್ಕೆ ಶಾಸಕರ ನೇತೃತ್ವದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಪಕ್ಷದ ಪ್ರಮುಖರ ಹಾಗೂ ನಾಗರಿಕರ ಸಮ್ಮುಖದಲ್ಲಿ ಸೇತುವೆಯ ಕಾಮಗಾರಿಯ ಗುದ್ದಲಿ ಪೂಜೆ ನಡೆಯಲಿದೆ.. ಈ ಕಾರ್ಯಕ್ರಮದಲ್ಲಿ ಎಲ್ಲಾ ಭಾಗವಹಿಸಬೇಕೆಂದು ಆರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷರು ವಿನಂತಿಸಿಕೊಂಡಿದ್ದಾರೆ



































