ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಸುಳ್ಯ ಕ್ಷೇತ್ರದ 21 ಕಾಮಗಾರಿಗಳಿಗೆ ಶಾಸಕಿ ಭಾಗೀರಥಿ ಮುರುಳ್ಯರ ಶಿಫಾರಸ್ಸಿನ ಮೇರೆಗೆ ರಾಜ್ಯ ವಿಪತ್ತು ಉಪಶಮನ (SDMF) ನಿಧಿಯಿಂದ ಅನುದಾನ1082ಲಕ್ಷ ಬಿಡುಗಡೆಯಾಗಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದ್ದಾರೆ. ಈ ನಿಧಿಯಿಂದ ವಿಶೇಷವಾಗಿ ನೆಲ್ಯಾಡಿ ಗ್ರಾಮದ ಬೈಲು-ಕುತ್ಯಾಡಿ ಸೇತುವೆಗೆ 60ಲಕ್ಷ ರೂ ಮತ್ತು ಆಲಂಕಾರು ಗ್ರಾಮದ ಕಕ್ವೆ ರಸ್ತೆ ಮರುನಿರ್ಮಾಣಕ್ಕೆ 50ಲಕ್ಷ ರೂ ಹಾಗೂ ಸುಳ್ಯ ತಾಲೂಕಿನ ವಿವಿಧ ರಸ್ತೆ ಮತ್ತು ಸೇತುವೆಗಳು ಹಾಗೂ ತಡೆಗೊಡೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಂಡಿದೆ ಎಂದು ತಿಳಿಸಿದ್ದಾರೆ.
ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ 1082 ಲಕ್ಷ ರೂ ಅನುದಾನ ಬಿಡುಗಡೆ.



































