ಸೇವಾಭಾರತಿ ಹೆಲ್ಪ್ ಲೈನ್ ಟ್ರಸ್ಟ್ (ರಿ) ಸುಳ್ಯ , ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್( ರಿ) ಸುಳ್ಯ ,ರೋಟರಿ ಕ್ಲಬ್ ಸುಳ್ಯ, ರೋಟರಿ ಕ್ಲಬ್ ಸುಳ್ಯ ಸಿಟಿ, ಇನ್ನರ್ ವೀಲ್ ಕ್ಲಬ್ ಸುಳ್ಯ ಇವುಗಳ ಆಶ್ರಯದಲ್ಲಿ ಬಾಲಸಂಗಮ ಕಾರ್ಯಕ್ರಮ ರೋಟರಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ, ರಥ ಬೀದಿ ಸುಳ್ಯ ನಗರ ಇಲ್ಲಿ ನಡೆಯಿತು.
ರೋಟರಿ ಕ್ಲಬ್ ಅಧ್ಯಕ್ಷರಾದ ಡಾ| ರಾಮ್ ಮೋಹನ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸೇವ ಪ್ರಮುಖ್ ನ. ಸೀತಾರಾಮ್ ಪ್ರಸ್ತಾವಿಕವಾಗಿ ಮಾತನಾಡಿದರು .ಶಾಲಾ ಸಂಚಾಲಕರಾದ ಪ್ರಭಾಕರನ್ ನಾಯರ್ ,ರೋಟರಿ ಕ್ಲಬ್ ಕಾರ್ಯದರ್ಶಿ ಭಾಸ್ಕರನ್ ನಾಯರ್ , ರೋಟರಿ ಕ್ಲಬ್ ಸಿಟಿ ಅಧ್ಯಕ್ಷರಾದ ಹೇಮಂತ್ ಕಾಮತ್ ಕಾರ್ಯದರ್ಶಿಯಾದ ಸುಹಾಸ್ ಭಟ್, ಇನ್ನರ್ ವಿೀಲ್ ಅಧ್ಯಕ್ಷರಾದ ಡಾ| ಸವಿತಾ ಸಿ .ಕೆ.,ಕಾರ್ಯದರ್ಶಿ ಡಾ|ಪ್ರಜ್ಞಾ ಮನುಜೇಶ್, ಲೋಲಾಕ್ಷಿ ದಾಸನ ಕಜೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಮಕ್ಕಳಿಗೆ ಏಕಕಾಲಕ್ಕೆ ,ವಿವಿಧ ವೇದಿಕೆಗಳಲ್ಲಿ ಸ್ಪರ್ಧೆಗಳು ನಡೆಯಿತು. ದೇಶಭಕ್ತಿ ಗೀತೆ ಕಬೀರನ ದೋಹ, ಕುಣಿತ ಭಜನೆ, ಕೋಲಾಟ ,ರಸಪ್ರಶ್ನೆ, ಸ್ಮರಣಶಕ್ತಿ, ಅಭಿನಯ ಗೀತೆ ಸ್ಪರ್ಧೆಗಳು ನಡೆಯಿತು. ತಾಲೂಕಿನ ವಿವಿಧ 27 ಬಾಲ ಗೋಕುಲ ಕೇಂದ್ರಗಳಿಂದ 375 ಬಾಲಕ ಬಾಲಕಿಯರು 112 ತಾಯಂದಿರು ಭಾಗವಹಿಸಿದ್ದರು ಸ್ಪರ್ಧೆಗಳ ನಿರ್ವಹಣೆಗಾಗಿ ಶಿಕ್ಷಕರು, ಶಿಕ್ಷಕಿಯರು, ಮಾತಾಜಿಯವರು, ಮತ್ತು 15 ಜನ ಸ್ಪರ್ಧೆಗಳ ನಿರ್ಣಾಯಕ ರಾಗಿ ಭಾಗವಹಿಸಿದ್ದರು. ಸಮಾರೋಪ ಕಾರ್ಯಕ್ರಮವನ್ನು ಸೇವಾ ಭಾರತಿ help lineಟ್ರಸ್ಟ್ ನ ಅಧ್ಯಕ್ಷರಾದ ಡಾ| ಮನೋಜ್ ಅಡ್ಡಂತಡ್ಕ ನಡೆಸಿಕೊಟ್ಟರು. ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ಅಧ್ಯಕ್ಷೆ ಪುಷ್ಪಾ ಮೇದಪ್ಪ ಸ್ವಾಗತಿಸಿ ,ಶಶಿಕಲಾ ಹರ ಪ್ರಸಾದ್ ಧನ್ಯವಾದ ನೀಡಿದರು. ಸುದರ್ಶನ್, ರಾಜೇಶ್ ಮೇನಾಲ ಕಾರ್ಯಕ್ರಮ ನಿರೂಪಿಸಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು



































