ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜನವರಿ 30 ರಂದು ನಡೆಯುವ ಜಾತ್ರೋತ್ಸವದ ಅಂಗವಾಗಿ ಸಂಪ್ರದಾಯಬದ್ಧ ವಿಧಿವಿಧಾನಗಳೊಂದಿಗೆ ಅರ್ಚಕರ ಮಾರ್ಗದರ್ಶನದಲ್ಲಿ ಗೊನೆ ಮುಹೂರ್ತ ನಡೆಯಿತು,ಈ ಸಂದರ್ಭದಲ್ಲಿ ಮೊತ್ತೇಸರರಾದ ಕುಂಬ್ರ ದಯಾಕರ ಆಳ್ವ,ಕುಶಾಲಪ್ಪ ಗೌಡ ಜಾತ್ರೋತ್ಸವ ಸಮಿತಿ ಅಧ್ಯಕ್ಷರಾದ ದಯಾನಂದ ಗೌಡ ಜಾಲು,ದೈವದ ಪೂಜಾರಿ ಕುಶಾಲಪ್ಪ ಗೌಡ ಬೋಣ್ಯಕುಕ್ಕು ಊರಿನ ಪ್ರಮುಖರಾದ ರಾಮಚಂದ್ರ ಭಟ್ ಕೋಡಿಬೈಲು, ಉಮೇಶ್ ಕೆ ಎಂ ಬಿ,ಗುಡ್ಡಪ್ಪ ಗೌಡ ಅಡ್ಯತಕಂಡ, ಮಂಜುನಾಥ ಗೌಡ ಕಂಡಿಪ್ಪಾಡಿ, ಕೇಶವ ಗೌಡ ಕಂಡಿಪ್ಪಾಡಿ,ಸಂಜೀವ ಗೌಡ ಬೈಲಂಗಡಿ,ವಿಜಯ ಕುಮಾರ್ ರೈ ಪೆರುವೋಡಿ, ಚಂದ್ರಶೇಖರ ಕಾನಾವು ಕಂಪ, ಜನಿತ್ ಸಂಕೇಶ ಮೊದಲಾದವರು ಉಪಸ್ಥಿತರಿದ್ದರು.
ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಕಾಲಾವಧಿ ಜಾತ್ರೋತ್ಸವಕ್ಕೆ ಗೊನೆ ಮೂಹೂರ್ತ



































