ಕುದ್ಪಾಜೆ ತರವಾಡು ಮನೆತನದ ನಾಗನ ಪ್ರತಿಷ್ಠೆ

ಸುಳ್ಯ ಕಸಬಾ ಗ್ರಾಮದ ಪ್ರತಿಷ್ಟಿತ ಕುದ್ಪಾಜೆ ತರವಾಡು ಮನೆತನದ ನಾಗನ ಪ್ರತಿಷ್ಠಾಪನೆಯ ಪೆ 22 ರಂದು ನಡೆಯಿತು.
ವೇದಮೂರ್ತಿ ಕುಂಟಾರು ಶ್ರೀ ರವೀಶ್ ತಂತ್ರಿ ಯವರ ಆಶೀರ್ವಾದ ಗಳೊಂದಿಗೆ ನಾಲ್ಕು ಮಂದಿ ಅರ್ಚಕರು ಪೆ 21ರಂದು ರಾತ್ರಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮೊದಲ್ಗೊಂಡು ಪೆ22 ರಂದು ನಾಗನ ಪ್ರತಿಷ್ಠಾಪನೆ ಮಾಡಲಾಯಿತು.
ಐತಿಹಾಸಿಕ ಹಿನ್ನೆಲೆ ಹೊಂದಿರುವ ಕುದ್ಪಾಜೆ ತರವಾಡು ಮನೆತನದ ನಾಗನ ಪ್ರತಿಷ್ಠಾಪನೆಯಲ್ಲಿ ಕುಟುಂಬದ ಹಿರಿಯರಾದ ಶ್ರೀ ಕುದ್ಪಾಜೆ ಸೋಮಯ್ಯ ಮಾಸ್ತರ್ ರವರ ನೇತೃತ್ವದಲ್ಲಿ ನೆರವೇರಿತು.
ಈ ಸಂದರ್ಭದಲ್ಲಿ ಕುಟುಂಬದ ಆಡಳಿತ ಮೊಕ್ತೇಸರರು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರು ಸೇರಿದಂತೆ ಕುಟುಂಬದ ಎಲ್ಲಾ ಮನೆಯಿಂದ ಸಕ್ರೀಯವಾಗಿ ತೊಡಗಿಸಿಕೊಂಡು ಅಲ್ಲದೇ ಊರ ಪರವೂರ ಭಕ್ತಾದಿಗಳು ನಾಗನ ಪ್ರತಿಷ್ಠಾಪನೆಯಲ್ಲಿ ಭಾಗಿಯಾಗಿದ್ದರು.
ಶ್ರೀ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಬಂದಿರುವ ಎಲ್ಲಾ ಭಕ್ತಾಭಿಮಾನಿಗಳು ಅನ್ನ ಪ್ರಸಾದವನ್ನು ಸ್ವೀಕರಿಸಿ ನಾಗನ ಪ್ರತಿಷ್ಠಾಪನೆಯ ಪುಣ್ಯ ಕ್ಷಣದಲ್ಲಿ ಸಾಕ್ಷಿಯಾದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top