ಮನೆಯಲ್ಲಿ ದುಡಿದ ಹಣ ಉಳಿಯದೆ, ಅಶಾಂತಿ ಕಾಡುತ್ತಿದ್ದರೆ ವಾಸ್ತು ಪ್ರಕಾರ ಸಣ್ಣ ಬದಲಾವಣೆಗಳು ಉತ್ತಮ ಫಲ ನೀಡುತ್ತವೆ. ಕಾಮಧೇನು ಅಥವಾ ಗೋಮಾತೆಯ ವಿಗ್ರಹವನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಐಶ್ವರ್ಯ ವೃದ್ಧಿಗೆ ಸಹಾಯಕವೆಂದು ನಂಬಲಾಗಿದೆ. ಈಶಾನ್ಯ ದಿಕ್ಕು ಅತ್ಯುತ್ತಮವಾಗಿದ್ದು, ಇಲ್ಲಿ ಇಟ್ಟರೆ ಶಾಂತಿ ಮತ್ತು ಸಮೃದ್ಧಿ ಹೆಚ್ಚುತ್ತದೆ. ಜಾಗವಿಲ್ಲದಿದ್ದರೆ ಉತ್ತರ ಅಥವಾ ಪೂರ್ವ ದಿಕ್ಕು ಬಳಸಬಹುದು. ಕರುವಿಗೆ ಹಾಲುಣಿಸುವ ಹಸುವಿನ ವಿಗ್ರಹ ಮಂಗಳಕರ. ದಕ್ಷಿಣ ಅಥವಾ ನೈರುತ್ಯದಲ್ಲಿ ಇಡುವುದು ಬೇಡ. ಒಡೆದ ವಿಗ್ರಹಗಳನ್ನು ಇಡುವುದನ್ನು ತಪ್ಪಿಸಬೇಕು ಎಂದು ವಾಸ್ತು ತಜ್ಞರು ಹೇಳುತ್ತಾರೆ.
ಮನೆಯಲ್ಲಿ ಏನೇ ಮಾಡಿದ್ರೂ ಹಣ ಉಳಿತಾಯವಾಗ್ತಿಲ್ವಾ? ಹೀಗೆ ಮಾಡಿ ನೋಡಿ














































