ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವವು ಏ.13ರಿಂದ ಏ. 20ರ ತನನಡೆಯಲಿದ್ದು, ಆ ಪ್ರಯುಕ್ತ ಜಾತ್ರೋತ್ಸವದ ಪೂರ್ವಭಾವಿ ಸಭೆಯು ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ಜರುಗಿತು.
ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಅಧ್ಯಕ್ಷತೆ ವಹಿಸಿದ್ದರು.
ಹಸಿರುವಾಣಿ ಸಂಗ್ರಹ ಹಾಗೂ ಆಮಂತ್ರಣ ಪತ್ರಿಕೆ ವಿತರಣೆಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.ಹಸಿರುವಾಣಿ ಸಮಿತಿ ಸಂಚಾಲಕ ಕೇಶವ ಅಡ್ತಲೆ,ಆರ್ಥಿಕ ಸಮಿತಿ ಸಂಚಾಲಕ ಕಿಶೋರ್ ಯು.ಎಂ,ಸ್ಥಳೀಯರಾದ ಶಿವಪ್ರಸಾದ್ ಉಗ್ರಾಣಿ ಮನೆ ,ಕೇಶವ ಮೂರ್ತಿ ಹೆಬ್ಬಾರ್, ಅನಂತಕೃಷ್ಣ ಚಾಕೋಟೆ
ಡಿಸಿ ಬಾಲಚಂದ್ರ, ಸೊಸೖಟಿ ಮ್ಯಾನೇಜರ್ ಉದಯಕುಮಾರ್
ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಿ ಕಣೆಮರಡ್ಕ
ಚಂದ್ರಜಿತ್ ಮಾವಂಜಿ ಭಾರತಿ ಉಗ್ರಾಣಿಮನೆ ಮಂಡೆಕೋಲು ಗ್ರಾಮದ ಪ್ರಮುಖಕರು ಉಪಸ್ಥಿತರಿದ್ದರು.
ಮಂಡೆಕೋಲು : ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೋತ್ಸವ ಪೂರ್ವಭಾವಿ ಸಭೆ














































