ಸುಳ್ಯ ಸೀಮಾಧಿಪತಿ ತೊಡಿಕಾನ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಕಾಲಾವದಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಹಂಚಿಕೆ ಮತ್ತು ಹಸಿರುವಾಣಿ ಸಂಗ್ರಹಣೆ ಕುರಿತಾದ ಸಭೆ ನಾಳೆ (ಮಾ 26)ರಂದು ಉಬರಡ್ಕ ಮತ್ತು ತೊಡಿಕಾನ ಗ್ರಾಮಗಳಲ್ಲಿ ನಡೆಯಲಿದ್ದು ಗ್ರಾಮ /ಬೈಲಿಗೆ ಸಂಬಂಧಪಟ್ಟ ಮನೆಯವರು ಕೆಳಗೆ ತಿಳಿಸಿದ ಸ್ಥಳದಲ್ಲಿ ಸೇರಬೇಕಾಗಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಯು.ಕೆ ಮತ್ತು ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ವಿನಂತಿಸಿಕೊಂಡಿದ್ದಾರೆ.
ಉಬರಡ್ಕ
ಸ್ಥಳ :ಶ್ರೀ ಶಾಸ್ತಾವು ನರಸಿಂಹ ದೇವಸ್ಥಾನ -ಸಂಜೆ 5:30ಕ್ಕೆ
ತೊಡಿಕಾನ
1)ಊರುಪಂಜ
ಸ್ಥಳ: ಊರುಪಂಜ ರತ್ನಾಕರ ರವರ ಮನೆ
ಸಮಯ :ಸಂಜೆ 3:00ಕ್ಕೆ
2) ಕಾಡುಪಂಜ
ಸ್ಥಳ : ಕಾಡುಪಂಜ ಕುಟುಂಬದ ದೈವಸ್ಥಾನದ ಉಗ್ರಾಣದ ಬಳಿಯಲ್ಲಿ
ಸಮಯ ಸಂಜೆ 4:00 ಕ್ಕೆ.
ನಾಳೆ(ಮಾ.26) ಉಬರಡ್ಕ,ಕಾಡುಪಂಜ,ಊರುಪಂಜದಲ್ಲಿ ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೋತ್ಸವ ಪೂರ್ವಭಾವಿ ಸಭೆ














































