ಅಳಿಕೆ ಬೀಡು – ಅಗರಿತ ಮಾಡ ಅರಂತೋಡು ತೋಟಂಪ್ಪಾಡಿ ಶ್ರೀ ಉಳ್ಳಾಕುಳು – ಉಳ್ಳಾಳ್ತಿ ಮತ್ತು ಪರಿವಾರ ದೈವಗಳ ವಾರ್ಷಿಕ ನೇಮೋತ್ಸವವು ಎ.24 ಮತ್ತು ಎ.25ರಂದು ಶ್ರದ್ಧಾ ಭಕ್ತಿಯಿಂದ ನಡೆಯಿತು.
ಈ ಸಂದರ್ಭದಲ್ಲಿ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯು.ಕೆ ಕೇಶವ ಕೊಳಲು ಮೂಲೆ, ದೈವಸ್ಥಾನದ,ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ,ಹಸಿರುವಾಣಿ ಸಮಿತಿ ಸಂಚಾಲಕ ಕೇಶವ ಅಡ್ತಲೆ, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೆ.ಕೆ ಬಾಲಕ್ರಷ್ಣ ಕುಂಟುಕಾಡು,ತೀರ್ಥರಾಮ ಪರ್ನೋಜಿ,ತಿಮ್ಮಯ್ಯ ಮೆತ್ತಡ್ಕ ದೇವಳದ ವ್ಯವಸ್ಥಾಪಕ ಆನಂದ ಕಲ್ಲಗದ್ದೆ,ದೈವಸ್ಥಾನದ ಗೌರವಾಧ್ಯಕ್ಷ ಮೇದಪ್ಪ ಯು.ಎಸ್., ಆಡಳಿತ ಸಮಿತಿ ಅಧ್ಯಕ್ಷರಾದ ಕಿಶೋರ್ ಯು.ಎಂ., ಆಡಳಿತ ಸಮಿತಿ ಕಾರ್ಯದರ್ಶಿ ಚಿದಾನಂದ ಮಾಸ್ತರ್ ಅಡ್ತಲೆ, ಕೋಶಾಧಿಕಾರಿ ಕೆ.ಆರ್. ಪುಂಡರೀಕ, ಉಪಾಧ್ಯಕ್ಷ ಎ.ಎಸ್. ಹರಿಶ್ಚಂದ್ರ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪುರುಷೋತ್ತಮ ಯು.ಸಿ., ಸರ್ವಸದಸ್ಯರು ಮತ್ತು ಪದಾಧಿಕಾರಿಗಳು, ಶ್ರೀ ಉಳ್ಳಾಕುಲು -ಉಳ್ಳಾಳ್ತಿ ಆಡಳಿತ ಸಮಿತಿ ಮತ್ತು ಜೀರ್ಣೋದ್ಧಾರ ಸಮಿತಿ, ಊರ ಹಾಗೂ ಪರವೂರ ಭಕ್ತಾಧಿಗಳು ಉಪಸ್ಥಿತರಿದ್ದರು.
ಶ್ರದ್ಧಾ ಭಕ್ತಿಯಿಂದ ನಡೆದ ಅಳಿಕೆ ಬೀಡು – ಅಗರಿತ ಮಾಡ ಅರಂತೋಡು ತೋಟಂಪ್ಪಾಡಿ ಶ್ರೀ ಉಳ್ಳಾಕುಳು – ಉಳ್ಳಾಳ್ತಿ ಮತ್ತು ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ














































