ಫೆ.16ಕ್ಕೆ ಸುಳ್ಯದಲ್ಲಿ ಅರೆಭಾಷೆ ಕಾಮಿಡಿ(ಹಾಸ್ಯ) ಆಡಿಷನ್,ಅರೆಭಾಷೆ ಪ್ರಿಯರಿಗೊಂದು ವಿನೂತನ ಕೊಡುಗೆ

Ad Widget . Ad Widget
Ad Widget . Ad Widget . . Ad Widget . Ad Widget . Ad Widget .
Ad Widget
Ad Widget Ad Widget . Ad Widget . Ad Widget . Ad Widget . Ad Widget . Ad Widget .1 Ad Widget .
. Ad Widget . Ad Widget . Ad Widget . Ad Widget 1 Ad Widget . Ad Widget . Ad Widget 1 Ad Widget 1 Ad Widget . Ad Widget . . Ad Widget .

ಕರ್ನಾಟಕದಾದ್ಯಂತ ಮತ್ತು ಕರಾವಳಿಯಲ್ಲಿ ಸುದ್ದಿ ಮತ್ತು ಮನೋರಂಜನಾ ಕ್ಷೇತ್ರದ ವಿಶೇಷ ಚಾಪನ್ನು ಮೂಡಿಸಿರುವ V4 ನ್ಯೂಸ್ ಮತ್ತು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮತ್ತು ಎಂಬಿ ಫೌಂಡೇಶನ್‌ನ ಎಂ.ಬಿ. ಸದಾಶಿವ ಸಹಯೋಗದಲ್ಲಿ “ಅರೆಭಾಷೆ ಕಾಮಿಡಿ”(ಹಾಸ್ಯ) ಎಬಿಸಿ ಆಡಿಷನ್ ಕಾರ್ಯಕ್ರಮವು ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ಫೆಬ್ರವರಿ 16, 2025ರ ಅದಿತ್ಯವಾರ ನಡೆಯಲಿದೆ

Ad Widget 1 Ad Widget . Ad Widget . Ad Widget 1 Ad Widget . Ad Widget . Ad Widget . Ad Widget . Ad Widget . Ad Widget .1 Ad Widget .

ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, V4 ನ್ಯೂಸ್‌ ಆಡಳಿತ ನಿರ್ದೇಶಕ ಲಕ್ಷ್ಮಣ್ ಕುಂದ‌ರ್ ಹಾಗೂ ಎಂ.ಬಿ.ಫೌಂಡೇಷನ್‌ನ ಅಧ್ಯಕ್ಷ ಎಂ.ಬಿ..ಸದಾಶಿವ ತಿಳಿಸಿದ್ದಾರೆ. ಸುಳ್ಯ ಪ್ರೆಸ್‌ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಳ್ಯ ಮತ್ತು ಮಡಿಕೇರಿಯಲ್ಲಿ ಆಡಿಷನ್ ನಡೆಯಲಿದ್ದು ಪ್ರತಿಭಾವಂತ ಕಲಾವಿದರು ಹಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ವಿವರಿಸಿದರು.
V4ನ್ಯೂಸ್ ಕಳೆದ 20 ಸಂವತ್ಸರಗಳಿಂದ ಸುದ್ದಿ ಮತ್ತು ಮನೋರಂಜಾ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಬಂದಿದೆ. ಕರಾವಳಿಯ ಪ್ರಮುಖ ಸಂಸ್ಕೃತಿ, ಪರಂಪರೆಗಳ ಬಗ್ಗೆ ಬೆಳಕು ಚೆಲ್ಲುವ ಕಾರ್ಯಕ್ರಮಗಳನ್ನು ನೀಡುತ್ತಾ ಬರುತ್ತಿದೆ. ಜೊತೆಗೆ ಕರಾವಳಿಯ ದೈವ ದೇವರುಗಳ ಮತ್ತು ದೇವಾಲಯಗಳಲ್ಲಿ ನಡೆಯುವ ಉತ್ಸವಗಳು, ವಿಶೇಷ ಕಾರ್ಯಕ್ರಮಗಳ ನೇರಪ್ರಸಾರ, ಕಾರ್ಯಕ್ರಮದ ಚಿತ್ರೀಕರಣವನ್ನು ಮಾಡುತ್ತಾ ಅಲ್ಲಿನ ಇತಿಹಾಸ, ಪರಂಪರೆಯನ್ನು ತಿಳಿಸುವ ಕೆಲಸವನ್ನು ಮಾಡಲಾಗುತ್ತಿದೆ. ಈಗಾಗಲೇ ಸಿಪಿಎಲ್- ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್ -4 ತುಳು ಕಾಮಿಡಿ ರಿಯಾಲಿಟಿ ಶೋ ಯಶಸ್ವಿಯಾಗಿ ನಡೆದು ಜನಮೆಚ್ಚುಗೆಯನ್ನು ಪಡೆದಿದೆ.
ಇದೇ ಮಾದರಿಯಲ್ಲಿ ಅರೆಭಾಷೆ ಕಾಮಿಡಿ(ಹಾಸ್ಯ) ರಿಯಾಲಿಟಿ ಶೋವನ್ನು ನಡೆಸಲು ಒಂದು ಹೆಜ್ಜೆ ಮುಂದಿಟ್ಟಿದ್ದೇವೆ. ಅರೆಭಾಷಿಕರಿಗೆ ಅರೆಭಾಷೆ ಕಾಮಿಡಿ(ಹಾಸ್ಯ) ತರಬೇತಿ ಕಾರ್ಯಾಗಾರ ಜರುಗಿಸುವ ಕುರಿತಂತೆ, ಕಾರ್ಯಕ್ರಮದ ಸಂಪೂರ್ಣ ಮಾಹಿತಿ, ವಿವರಗಳನ್ನು ಲಗತ್ತಿಸಿದ್ದೇವೆ. ಕಿರುನಾಟಕಗಳ ರಚನೆ. ನಿರ್ದೇಶನ ಮತ್ತು ನಟನೆಯ ಸಾಮರ್ಥ್ಯಗಳನ್ನು ಅರೆಭಾಷೆ ಕಲಾವಿದರಿಗೆ ಪರಿಚಯ ಮಾಡುವುದು. ಜೊತೆಗೆ ಅರೆಭಾಷೆಯನ್ನು ಅಕಾಡೆಮಿಯ ಮೂಲಕ ಕಟ್ಟಿ ಕಡೆಯ ವ್ಯಕ್ತಿಗೂ ತಲುಪಿಸುವ ಮತ್ತು ಶಾಲಾ, ಕಾಲೇಜುಗಳಲ್ಲಿ ರಂಗಭೂಮಿ ಚಟುವಟಿಕೆಯ ಮೂಲಕ ಪರಿಚಯಿಸುವುದು ನಮ್ಮ ಉದ್ದೇಶ. ಅಕಾಡೆಮಿ ಮತ್ತು ಎಂ.ಬಿ ಫೌಂಡೇಶನ್ ಸಹಯೋಗದೊಂದಿಗೆ ಈ ಕಾರ್ಯಕ್ರಮ ಜರುಗಿಸಲು ನಾವು ಉತ್ಸುಕರಾಗಿದ್ದೇವೆ.
ಅರೆಭಾಷೆ ಕಾಮಿಡಿ(ಹಾಸ್ಯ) ಕಿರುನಾಟಕ ತರಬೇತಿ ಕಾರ್ಯಾಗಾರ : ಬದಲಾದ ಸನ್ನಿವೇಶಗಳಲ್ಲಿ ಇತ್ತೀಚೆಗೆ ಕಿರುನಾಟಕ ಅಥವಾ ಪ್ರಹಸನಗಳು ಜನಮೆಚ್ಚುಗೆ ಪಡೆಯುತ್ತಿದೆ. ಅಲ್ಪಸಮಯದ ಅವಧಿಯಲ್ಲಿ ಮುಗಿಯುವ ಈ ಪ್ರದರ್ಶನಗಳು ನವರಸಗಳ ಎಲ್ಲಾ ಆಯಾಮಗಳನ್ನು ಒಳಗೊಂಡ ರಂಗಭೂಮಿಯ ವಿಶಿಷ್ಟ ಪ್ರಕಾರ. ಹಾಸ್ಯಪ್ರಹಸನಗಳಂತೂ ಎಲ್ಲಾ ಕಡೆಯೂ ಯಶಸ್ವಿ ಪ್ರದರ್ಶನಗಳನ್ನು ನಡೆಸಲು ಹಾಗಾಗಿ ಅರೆಭಾಷೆಯ ಕಾಮಿಡಿ (ಹಾಸ್ಯ) ಪ್ರಕಾರವನ್ನು ತುಂಬಾ ಇಷ್ಟಪಡುತ್ತಾರೆ ಮಾತ್ರವಲ್ಲ ತುಂಬಾ ಆಸಕ್ತಿಯಿಂದ ಪಾಲ್ಗೊಳ್ಳುತ್ತಾರೆ ಎನ್ನುವುದು ನಮ್ಮ ಆಶಯ. ಅರೆಭಾಷಿಕರಿಗೆ ತರಬೇತಿ : ಅರೆಭಾಷಿಗರು ಇರುವ ಪ್ರದೇಶದಲ್ಲಿ ಈ ತರಬೇತಿ ಕಾರ್ಯಾಗಾರ ನಡೆಸುವುದು ಸೂಕ್ತ ಎನ್ನುವುದು ನಮ್ಮ ಅಭಿಪ್ರಾಯ, ದಕ್ಷಿಣಕನ್ನಡ ಹಾಗೂ ಮಡಿಕೇರಿ ಜಿಲ್ಲೆಯ ಆಯ್ದ 5 ಅರೆಭಾಷೆ ಕಾಮಿಡಿಯ ತಂಡವನ್ನು ಆಯ್ಕೆ ಮಾಡಿ ಒಂದು ಪರಿಸರದಲ್ಲಿ ಒಟ್ಟು 25 ಕಲಾವಿದರನ್ನು ಆಯ್ಕೆಮಾಡಿ ವೇದಿಕೆಯಲ್ಲಿ ನಟಿಸಲು ಗರಿಷ್ಠ 5 ಮಂದಿ ಕಲಾವಿದರು ಹಾಗೂ ಸಂಗೀತ, ರಂಗಪರಿಕರ, ರಂಗಸಜ್ಜಿಕೆ. ಹಿಮ್ಮೇಳಗಳಿಗೆ ಉಳಿದ ಅರೆಭಾಷಿಗರನ್ನು ತರಬೇತಿಗೊಳಿಸುವುದು.ಪ್ರಬುದ್ಧ ನಿರ್ದೇಶಕರಿಂದ ತರಬೇತಿ : ಈಗಾಗಲೇ ಜಿಲ್ಲೆಯಲ್ಲಿ ತಮ್ಮ ಕಿರುನಾಟಕ ಪ್ರದರ್ಶನಗಳ ಮೂಲಕ ಪ್ರಸಿದ್ಧರಾದ ಹಿರಿಯ ಕಲಾವಿದರುಗಳು ಆಯ್ಕೆಗಾರರಿಗೆ ತರಬೇತಿ ನೀಡುತ್ತಾರೆ. ಆಯ್ದ ಆಯ್ಕೆಗಾರರಿಗೆ ಅವರು ತೆರಳಿ ನಿರ್ದೇಶನ ನೀಡಲಿದ್ದಾರೆ. ಆಯ್ಕೆಗಾರರಿಗೆ ಉಚಿತ ಸಮಯವನ್ನು ಆಯ್ಕೆಮಾಡಿ ಸರಿಸುಮಾರು 15 ದಿನಗಳ ಕಾಲ ಒಂದು ಪರಿಪಕ್ವ ಪ್ರದರ್ಶನಕ್ಕೆ ಸಿದ್ಧತೆ ನಡೆಯಲಿದೆ.ಚಾನೆಲ್ ಕಾರ್ಯಕ್ರಮದಲ್ಲಿ ಅರೆಭಾಷೆ ಕಾಮಿಡಿ(ಹಾಸ್ಯ) ಎಬಿಸಿ ಪ್ರದರ್ಶನ : ತರಬೇತುಗೊಂಡ ತಂಡಗಳು ನಿಗದಿ ಪಡಿಸಿದ ದಿನಾಂಕದಂದು ತಮ್ಮ ಅರೆಭಾಷೆ ಕಾಮಿಡಿ(ಹಾಸ್ಯ) ಎಬಿಸಿ ಸಾರ್ವಜನಿಕವಾಗಿ ಪ್ರದರ್ಶಿಸುವರು. ಎಬಿಸಿ ಅರೆಭಾಷೆ ಕಾಮಿಡಿ (ಹಾಸ್ಯ) ಪ್ರದರ್ಶನಗೊಳ್ಳುವ ಚಾನೆಲ್‌ನಲ್ಲಿ ನಂತರ ಪ್ರಸಾರಗೊಳ್ಳುವುದು.ಎಬಿಸಿ (ಅರೆಭಾಷೆ ಕಾಮಿಡಿ(ಹಾಸ್ಯ) : ಪ್ರಸ್ತುತ ಜರುಗುತ್ತಿರುವ ಅರೆಭಾಷೆ ಕಾಮಿಡಿ(ಹಾಸ್ಯ) ಫೆಬ್ರವರಿ 16ರ ಆದಿತ್ಯವಾರ ಆಡಿಷನ್
ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ತಮ್ಮ ಪ್ರದರ್ಶನ ನೀಡುವ ಅವಕಾಶವನ್ನು ಅರೆಭಾಷೆ ಕಾಮಿಡಿ (ಹಾಸ್ಯ) ತಂಡಗಳು ಪಡೆದುಕೊಳ್ಳಲಿವೆ.ಅರೆಭಾಷೆ ಕಲಿಕೆಗೆ ಪೂರಕ ವೇದಿಕೆ : ಅರೆಭಾಷೆ ಕಾಮಿಡಿ(ಹಾಸ್ಯ) ತರಬೇತಿ ಕಾರ್ಯಾಗಾರ ಮತ್ತು ಭಾಷೆ ಕಲಿಕೆಗೆ ಇನ್ನಷ್ಟು ಪೂರಕ ವಾತಾವರಣ ಸೃಷ್ಟಿಸಬಲ್ಲುದು.ಅರೆಭಾಷೆ ಕಾಮಿಡಿ (ಹಾಸ್ಯ)ಚಟುವಟಿಕೆಗೆ ಅವಕಾಶವನ್ನು ಒದಗಿಸುವ ಈ ಕಾರ್ಯಾಗಾರ ಮುಂದಿನ ದಿನಗಳಲ್ಲಿ ಅರೆಭಾಷೆ ಕಾಮಿಡಿ(ಹಾಸ್ಯ) ಕಲಾವಿದರು ಎಲ್ಲಾ ರಂಗಗಳಲ್ಲಿಯೂ ರಂಗಭೂಮಿ ಚಟುವಟಿಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಗಲಿದೆ.
ಸ್ಕ್ರಿಪ್ಟ್ ರೈಟರ್ ತರಬೇತಿ: ಅರೆಭಾಷೆ ಕಾಮಿಡಿ(ಹಾಸ್ಯ), ಎಬಿಸಿಗೆ ಸ್ಕ್ರಿಪ್ಟ್ ರೈಟರ್ ಆಗಿ ಸಾಹಿತಿ, ನಾಟಕ ರಚನೆಕಾರ. ಸಂಭಾಷಣೆಗಾರ, ಚಿತ್ರಕಥೆ, ಬರಹಗಾರ, ನಟ, ಹಾಗೂ ಕಾಂತಾರ ಸಿನಿಮಾ ಖ್ಯಾತಿಯ ಮತ್ತು ವಕೀಲರಾಗಿಯೂ ಸೇವೆ ಸಲ್ಲಿಸುತ್ತಿರುವ ಶಶಿರಾಜ್ ಕಾವೂರು ಅವರು ತರಬೇತಿ ನೀಡಲಿದ್ದಾರೆ.ಆ್ಯಕ್ಷನ್ ಟೈನರ್: ನಟ, ಸಂಗೀತಗಾರ, ಚಲನಚಿತ್ರ ನಟ ಕಾಂತಾರ ಸಿನಿಮಾ ಖ್ಯಾತಿಯ ಮೈಮ್ ರಾಮದಾಸ್ ಮತ್ತು ಮಿಮಿಕ್ರಿ ಆರ್ಟಿಸ್ಟ್, ಚಲನಚಿತ್ರ ನಟ ವಿಸ್ಮಯ್ ವಿನಾಯಕ್ ಅವರು ತರಬೇತಿ ನೀಡಲಿದ್ದಾರೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾದ ಚಂದ್ರಶೇಖರ ಪೇರಾಲು, V4 ನ್ಯೂಸ್‌ನ ಮಾರ್ಕೇಟಿಂಗ್ ಮ್ಯಾನೇಜರ್ ಮಾಣಿಕ್, V4ನ್ಯೂಸ್‌ನ ಪ್ರಾದೇಶಿಕ ಸುದ್ದಿ ಸಂಪಾದಕ ಪುಷ್ಪರಾಜ್ ಶೆಟ್ಟಿ,ಅರೆಭಾಷೆ ಅಕಾಡೆಮಿ ಸದಸ್ಯರಾದ ಚಂದ್ರಾವತಿ ಬಡ್ಡಡ್ಕ,ಲತಾ ಕುದ್ಪಾಜೆ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top