ಸುಳ್ಯ: ಪೇರಡ್ಕ ಗೂನಡ್ಕ ವಲಿಯುಲ್ಲಾಹಿ ದರ್ಗಾ ಶರೀಫ್ ಉರೂಸ್ ಸಮಾರಂಭದ ಪ್ರಥಮ ದಿನದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ಹಾಗೂ ಉದ್ಘಾಟನಾ ಸಮಾರಂಭ ತೆಕ್ಕಿಲ್ ಮಹಮ್ಮದ್ ಹಾಜಿ ವೇದಿಕೆಯಲ್ಲಿ ಜ. 31 ರಂದು ನಡೆಯಿತು. ಸಮಾರಂಭದ ಉದ್ಘಾಟನೆಯನ್ನು ಬಹು| ಸಯ್ಯದ್ ಅಲ್ಹಾಜ್ ಹಮಿದಾಲಿ ಶಿಹಾಬ್ ತಂಘಳ್ ಪಾಣಕ್ಕಾಡ್ ನೆರವೇರಿಸಿ, ಮಾತನಾಡಿ ಇವತ್ತಿನ ಕಾಲಘಟ್ಟದಲ್ಲಿ ಯುವಕ–ಯುವತಿಯರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಲಹರಿ ಪದಾರ್ಥಗಳಿಂದ ಆಕರ್ಷಣೆಯಾಗಿ, ಸಮಾಜ ಕಟ್ಟುವ ಬದಲು ಸಮಾಜವನ್ನು ಹಾಳು ಮಾಡುತ್ತಿದ್ದಾರೆ. ಸ್ವತಃ ತಂದೆ- ತಾಯಿಯವರನ್ನು ಕೊಲೆ ಮಾಡುವಂತ ಕೆಟ್ಟ ಪ್ರವೃತ್ತಿಗೆ ಇಳಿದಿರುವುದು ಖೇದಕರ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೇರಡ್ಕ ಮುಹಿಧೀನ್ ಜುಮಾ ಮಸೀದಿಯ ಅಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ವಹಿಸಿದರು. ಖತೀಬರಾದ ಬಹು| ಅಹಮ್ಮದ್ ನಈಮ್ ಫೈಝಿ ಅಲ್ ಮುಹ್ ಬರಿ ದುವಾ ನೆರವೇರಿಸಿದರು ಖ್ಯಾತ ವಾಗ್ಮಿ ಬಹು| ಅಬ್ದುಲ್ ರಝಾಕ್ ಅಬ್ರಾರಿ ಪತ್ತನಂತಿಟ್ಟ ಧಾರ್ಮಿಕ ಉಪನ್ಯಾಸ ನೀಡಿದರು.
ಸಮಾರಂಭದಲ್ಲಿ ಬಹು| ರಿಯಾಝ್ ಫೈಝಿ ಎಮ್ಮೆಮ್ಮಾಡು, ಸಂಪಾಜೆ ಜುಮಾ ಮಸೀದಿ ಖತೀಬರಾದ ಜಮಾಲುದ್ದೀನ್ ಅಮಾನಿ,ಅರಂಬೂರು ಜುಮಾ ಮಸೀದಿ ಖತೀಬರಾದ ಮೊಯಿನುದ್ಧೀನ್ ಫೈಝಿ, ಕಲ್ಲುಗುಂಡಿ ಜಮಾಅತ್ ಅಧ್ಯಕ್ಷ ಆಲಿಹಾಜಿ, ಸಂಪಾಜೆ ಜಮಾಅತ್ ಅಧ್ಯಕ್ಷ ಮಹಮ್ಮದ್ ಹಮೀದಿಯ, ಅರಂತೋಡು ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ, ಸುಳ್ಯ ತಾಲೂಕು ಮದರಸ ಮ್ಯಾನೇಜ್ ಮೆಂಟ್ ಅಧ್ಯಕ್ಷ ತಾಜ್ ಮೊಹಮ್ಮದ್ ಸಂಪಾಜೆ, ಸಮಸ್ತ ಸಂಯುಕ್ತ ಜಮಾಅತ್ ಕೋಶಾಧಿಕಾರಿ ಹಮೀದ್ ಹಾಜಿ ಸುಳ್ಯ, ಗಾಂಧಿನಗರ ಜಮಾಅತ್ ಕಾರ್ಯದರ್ಶಿ ಹಾಜಿ ಮೊಯಿದ್ದೀನ್ ಪ್ಯಾನ್ಸಿ, ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹಮೀದ್ ಕುತ್ತಮೊಟ್ಟೆ, ಸುಳ್ಯ ಅನ್ಸಾರಿಯ ಎಜ್ಯುಕೇಶನ್ ಸೆಂಟರ್ ಕಾರ್ಯದರ್ಶಿ ಲತೀಫ್ ಹರ್ಲಡ್ಕ, ಅರಂತೋಡು ಎ.ಹೆಚ್.ವೈ.ಎ ಅಧ್ಯಕ್ಷ ಎಸ್.ಎಂ ಅಬ್ದುಲ್ ಮಜೀದ್, ಉದ್ಯಮಿ ಸೈಫುದ್ದೀನ್ ಪಠೇಲ್, ಅಬ್ದುಲ್ ರಝಾಕ್ ಹಾಜಿ ಸುಳ್ಯ, ಅಕ್ಬರ್ ಕರಾವಳಿ, ನೌಶಾದ್ ಅಝ್ಹರಿ, ಕಾರ್ಯದರ್ಶಿ ಪಿ.ಕೆ ಉಮ್ಮರ್ ಗೂನಡ್ಕ, ಕೋಶಾಧಿಕಾರಿ ತೆಕ್ಕಿಲ್ ಮೊಹಮ್ಮದ್ ಕುಂಇ’ಪೇರಡ್ಕ, ಉಪಾಧ್ಯಕ್ಷ ಟಿ.ಬಿ ಹನೀಫ್ ದರ್ಖಾಸ್, ಎಸ್.ಕೆ.ಎಸ್ .ಎಸ್ .ಎಫ್ ಅಧ್ಯಕ್ಷ ಮುನೀರ್ ದಾರಿಮಿ, ಕಲ್ಲುಗುಂಡಿ ಎಸ್.ಕೆ.ಎಸ್ .ಎಸ್ .ಎಫ್ ಹಸೈನಾರ್ ಚಟ್ಟೆಕಲ್ಲು ಮೊದಲಾದವರು ಉಪಸ್ಥಿತರಿದ್ದರು. ಎಂ.ಆರ್.ಡಿ.ಎ ಅಧ್ಯಕ್ಷ ಜಿ.ಕೆ ಹಮೀದ್ ಗೂನಡ್ಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಇದೆ ಸಂಧರ್ಭದಲ್ಲಿ ಪಾನಕ್ಕಾಡ್ ಹಮೀದ್ ಅಲಿ ತಂಘಳ್ ಅವರನ್ನು ಪೇರಡ್ಕ ಜಮಾಅತ್ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಯುವಕ,ಯುವತಿಯರು ಲಹರಿ ಪಧಾರ್ಥದ ವ್ಯಾಮೋಹಕ್ಕೆ ಒಳಗಾಗಿರುವುದು ಖೇದಕರ : ಪಾಣಕ್ಕಾಡ್ ಹಮೀದಾಲಿ ಶಿಹಾಬ್ ತಂಘಳ್
