ಅರಂಬೂರು : ಹಸಿರುವಾಣಿ ಮೆರಣಿಗೆ ಮೂಲಕ ದೈವಂಕಟ್ಟು ಮಹೋತ್ಸವಕ್ಕೆ ಅದ್ದೂರಿ ಚಾಲನೆ

ಆಲೆಟ್ಟಿ ಗ್ರಾಮದ ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಶ್ರೀ ದೈವಗಳ ದೈವಂಕಟ್ಟು ಮಹೋತ್ಸವ ಆರಂಭಗೊಂಡಿದೆ.
ಪೂರ್ವಾಹ್ನ ಅರಂಬೂರು ಶ್ರೀ ಮೂಕಾಂಬಿಕಾ ಭಜನಾ ಮಂದಿರದಲ್ಲಿ ಪ್ರಾರ್ಥಿಸಲಾಯಿತು.
ಬಳಿಕ ಪಯಸ್ವಿನಿ ಸೇತುವೆ ಬಳಿ ನಿರ್ಮಿಸಲಾದ ಮಹಾದ್ವಾರದಿಂದ ಅದ್ದೂರಿ ಹಸಿರುವಾಣಿ ಮೆರವಣಿಗೆಗೆ ಮಹೋತ್ಸವ ಸಮಿತಿ ಅಧ್ಯಕ್ಷ ಪಿ.ಬಿ.ಸುಧಾಕರ ರೈಯವರು ತೆಂಗಿನಕಾಯಿಯ ಒಡೆದು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳು, ತರವಾಡು ಮನೆಯ ಮುಖ್ಯಸ್ಥರು, ಉಪ ಸಮಿತಿ ಸಂಚಾಲಕರು ಹಾಗೂ ಭಗವದ್ಭಕ್ತರು ಉಪಸ್ಥಿತರಿದ್ದರು
ಮಹಿಳೆಯರ ಪೂರ್ಣ ಕುಂಭ ಸ್ವಾಗತದೊಂದಿಗೆ ಚೆಂಡೆ ವಾದ್ಯ ಘೋಷದೊಂದಿಗೆ ಹಾಗೂ ಕುಣಿತ ಭಜನೆಯೊಂದಿಗೆ ಆಕರ್ಷಕ ಮೆರವಣಿಗೆಯು ದೈವಸ್ಥಾನದ ತನಕ ಸಾಗಿ ಬಂತು. ಬಳಿಕ ಕುತ್ತಿಕೋಲು ಶ್ರೀ ತಂಬುರಾಟ್ಟಿ ಭಗವತಿ ಕ್ಷೇತ್ರದ ಸ್ಥಾನಿಕರು ದೈವಸ್ಥಾನದಲ್ಲಿ ದೈವಂಕಟ್ಟು ಮಹೋತ್ಸವದ ಕುರಿತು ಪ್ರಾರ್ಥನೆ ನೆರವೇರಿಸಿದರು.
ನಂತರ ದೈವದ ದರ್ಶನ ಪಾತ್ರಿಯವರಿಂದ ದರ್ಶನ ಸೇವೆಯಾಗಿ ಸುಮೂಹೂರ್ತದಲ್ಲಿ (ಕಲವರ ನಿರಕ್ಕಲ್) ಉಗ್ರಾಣ ತುಂಬುವ ಕಾರ್ಯಕ್ರಮ ನಡೆಯಿತು.

Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top