ತೊಡಿಕಾನ : ವೈಭವದಿಂದ ನಡೆದ ಶ್ರೀ ಮಲ್ಲಿಕಾರ್ಜುನ ದೇವರ ದೊಡ್ಡ ದರ್ಶನ ಬಲಿ

ಸುಳ್ಯ ಸೀಮೆ ಮಹತೋಭಾರ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವ ಅಂಗವಾಗಿ ಏ.17ರಂದು ರಾತ್ರಿ ಶ್ರೀ‌ ದೇವರ ದೊಡ್ಡ ಬೆಳಗು ಉತ್ಸವ ಏ.18ರಂದು ಬೆಳಿಗ್ಗೆ ದೇವರ ದೊಡ್ಡ ದರ್ಶನ ಬಲಿ ವೈಭವದಿಂದ ನಡೆಯಿತು.

Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಭಕ್ತರ ಸಂಖ್ಯೆ ಹೆಚ್ಚಳ
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ದೊಡ್ಡ ದರ್ಶನ ಬಲಿಗೆ ಭಕ್ತರು ಆಧಿಕ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಅನ್ನಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ತಹಶೀಲ್ದಾರ್ ಮಂಜುಳಾ, ಉಪತಹಶೀಲ್ದಾರ್ ಮಂಜುನಾಥ,ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ,ಜಾತ್ರೋತ್ಸವ ಸಮಿತಿ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ,ಕಾರ್ಯನಿರ್ವಾಹಣಾಧಿಕಾರಿ ಅವಿನ್ ರಂಗತ್ ಮಲೆ, ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ,ಬಿಜೆಪಿ ಶಾಸಕಾಂಗ ಪಕ್ಷದ ಕಾರ್ಯದರ್ಶಿ ಸಿ.ಟಿ ಸುರೇಶ ,ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಉಳುವಾರು,ವ್ಯವಸ್ಥಾಪನಾ ಸಮಿತಿ ಸದಸ್ಯರಾರ ಕೇಶವಮೂರ್ತಿ(ಪ್ರ.ಅರ್ಚಕರು) ತೀರ್ಥರಾಮ ಯು.ಕೆ, ಉಳುವಾರು,ಸತ್ಯಪ್ರಸಾದ್ ಗಬ್ಬಲ್ಕಜೆ,ಕೆ.ಕೆ ಬಾಲಕೃಷ್ಣ ಕುಂಟುಕಾಡು,ತಿಮ್ಮಯ್ಯ ಮೆತ್ತಡ್ಕ,ವಸಂತ ಪೆಲ್ತಡ್ಕ,ಮಾಲತಿ ಬೋಜಪ್ಪ ಹಾಸ್ಪಾರೆ,ಚಂಚಲಾಕ್ಷಿ ನಾಗೇಂದ್ರ ಕುಲ್ಚಾರ್,
ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೆ.ಕೆ ನಾರಾಯಣ ಕುಂಟುಕಾಡು,ಭವಾನಿಶಂಕರ ಅಡ್ತಲೆ,ಎ.ಜಿ ಉಮಾಶಂಕರ, ಎಸ್.ಪಿ ಲೋಕನಾಥ ವರ್ತಕ ಸಂಘದ ಅಧ್ಯಕ್ಷ ಪಿ.ಬಿ ಸುಧಾಕರ ರೈ,ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಭವಾನಿ ಚಿಟ್ಟನ್ನೂರು,ಸದಸ್ಯ ರವೀಂದ್ರ ಪೂಜಾರಿ ದೇವಳದ ವ್ಯವಸ್ಥಾಪಕ ಆನಂದ ಕಲ್ಲಗದ್ದೆ ಸಿಬ್ಬಂದಿಗಳು,ಸೀಮೆಯ ವಿವಿಧ ದೇವಾಲಯಗಳ ವ್ಯವಸ್ಥಾಪನಾ ಸಮಿತಿ‌ ಅಧ್ಯಕ್ಷರು ಸದಸ್ಯರು ಸುಳ್ಯ ಸೀಮೆಯ ಭಕ್ತರು ಉಪಸ್ಥಿತರಿದ್ದರು.
ಏ.18ರಂದು ರಾತ್ರಿ ಬಲಿ ಹೊರಟು ವಾಲಸಿರಿ ಉತ್ಸವ ನಡೆಯಲಿದೆ.ಏ.19ರಂದು ಬೆಳಿಗ್ಗೆ 7 ಗಂಟೆಗೆ ಆರಾಟ ಬಾಗಿಲು ತೆರೆಯುವುದು.ಸಂಜೆ 5 ಗಂಟೆಗೆ ಮಿತ್ತೂರು ನಾಯರ್ ದೈವದ ಭಂಡಾರ ಬರುವುದು.
ಸಂಜೆ 6.30 ಗಂಟೆಗೆ ಉತ್ಸವ ಬಲಿ,ಅವಭ್ರತ ಸ್ನಾನವಾಗಿ ಬಂದು ದರ್ಶನ ಬಲಿ,ಬಟ್ಟಲು ಕಾಣಿಕೆ,ಧ್ವಜಾರೋಹಣ ನಡೆಯಲಿದೆ.
ಏ.20ರಂದು ಮಧ್ಯಾಹ್ನ ಸಂಪ್ರೋಕ್ಷಣೆ,ಮಂತ್ರಾಕ್ಷತೆ ನಡೆಯಲಿದೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top