ಕೊಡಗಿನ ಮಾದಾಪುರ ಗ್ರಾಮದಲ್ಲಿ ತನ್ನ ತಮ್ಮನ ಮಗ ಸಾವಿಗೀಡಾದ ಹಿನ್ನಲೆಯಲ್ಲಿ ಅಲ್ಲಿಗೆ ಹೋಗಿ ಊರಿಗೆ ಮರಳುತ್ತಿದ್ದ ವೃದ್ದ ವ್ಯಕ್ತಿ ಕಲ್ಲು ಗುಂಡಿಯಲ್ಲಿ ಹೃದಯಾಘಾತವಾಗಿ ಕಲ್ಲುಗುಂಡಿ ಲ್ಯಾಬಿಗೆ ಕರೆದೊಯ್ಯುತ್ತಿದ್ದ ವೇಳೆ ಅವರು ನಿಧನರಾದ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಮೃತರು ಇಬ್ರಾಹಿಂ (90 ) ಎಂದು ಗುರುತಿಸಲಾಗಿದೆ.ಮೂಲತ: ಕೊಡಗಿನ ಮಾದಾಪುರ ನಿವಾಸಿ. ಆದರೆ ಕಳೆದ ಅನೇಕ ವರ್ಷಗಳಿಂದ ವಿಟ್ಲದಲ್ಲಿ ವಾಸಿಸು ತಿದ್ದರು.
ಅವರ ತಮ್ಮನ ಮಗ ಅನಾರೋಗ್ಯದಿಂದ ನಿಧನರಾಗಿದ್ದು ಮಾದಾಪುರದಲ್ಲಿ ಅಂತಿಮ ಸಂಸ್ಕಾರ ಮುಗಿಸಿ ಅವರ ಓರ್ವ ಪುತ್ರ ಅರಂತೋಡಿನಲ್ಲಿರುವ ಹಸೈನಾರ್ ಎಂಬವರ ಮನೆಗೆ ಬರುತಿದ್ದರು ಎನ್ನಲಾಗಿದೆ.
ಮ್ರತರು ಪತ್ನಿ, ಇಬ್ಬರು ಪುತ್ರರು,ನಾಲ್ಕು ಮಂದಿ ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಸಹೋದರನ ಮಗನ ಅಂತ್ಯ ಸಂಸ್ಕಾರ ಕಾರ್ಯಕ್ರಮಕ್ಕೆ ಹೋಗಿ ಹಿಂದಿರುತ್ತಿದ್ದಾಗ ಹ್ರದಯಘಾತದಿಂದ ವ್ಯಕ್ತಿ ಸಾವು
