ಸಂಪಾಜೆ ಗ್ರಾಮದ ಪೇರಡ್ಕ ಗೂನಡ್ಕ ಮೊಹಿಯುದ್ದಿನ್ ಜುಮ ಮಸ್ಜಿದ್ ನಲ್ಲಿ ಈದ್ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರ ದೊಂದಿಗೆ ಆಚರಿಸಲಾಯಿತು ಖತೀಬ್ ನಹೀಮ್ ಫೈಜಿ ಅಲ್ ಮಹಬರಿ ಈದ್ ಸಂದೇಶ ನೀಡಿದರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆ ಸಹಾಬಾಳ್ವೆಗೆ ಒತ್ತು ನೀಡಲು ಗಾಸದಲ್ಲಿ ಪಾಲೇಸ್ತೇನಿನ ಜನತೆ ಅನುಭವಿಸುತ್ತಿರುವ ಪ್ರಾಣ ಹಾನಿ ಕಷ್ಟ ನಷ್ಟಗಳನ್ನು ನೆನೆಪಿಸಿ ಹಜ್ ಕರ್ಮಕ್ಕೆ ತೆರಳಿದ ಹಜ್ಜಾಜ್ ಅವರ ಸೌಭಾಗ್ಯವನ್ನು ತಿಳಿಸಿ ಮುಂದಿನ ದಿನದಲ್ಲಿ ಹಜ್ ಯಾತ್ರೆಗೆ ಅವಕಾಶ ಸಿಗಲಿ ತ್ಯಾಗ ಬಲಿದಾನ ಬಗ್ಗೆ ಇಬ್ರಾಹಿಂ ನೆಬಿ,ಪತ್ನಿ ಹಾಜಿರ ಬೀಬಿ ಮತ್ತು ಮಗ ಇಸ್ಮಾಯಿಲ್ ಅವರನ್ನು ನೆನಪಿಸಿ ಹಬ್ಬದಲ್ಲಿ ಮಾಂಸವನ್ನು ಬಡವರಿಗೆ ಹಂಚಿ ಕುಟುಂಬ ಸಂಬಂಧವನ್ನು ಬಳಗೊಳಿಸಲು ಪ್ರೀತಿ ವಿಶ್ವಾಸದಲ್ಲಿ ಜೀವಿಸಲು ಕರೆ ನೀಡುವುದರ ಮುಖಾಂತ ಈದ್ ಸಂದೇಶ ನೀಡಿದರು. ನಂತರ ಎಲ್ಲರು ಪರಸ್ಪರ ಈದ್ ಹಬ್ಬದ ಶುಭಾಶಯ ವಿನಿಮಯ ಮಾಡಿ ಖಬರಸ್ಥಾನದಲ್ಲಿ ಮರಣ ಹೊಂದಿದವರಿಗೆ ಹಾಗು ಪೇರಡ್ಕ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ನೆರೆವೇರಿಸಿದರು. ಪೇರಡ್ಕ ಗೂನಡ್ಕ ಜಮಅತ್ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಎಂ ಆರ್ ಡಿ ಎ ಗೂನಡ್ಕ ಇದರ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ, ಜಮಾತ್ ಉಪಾಧ್ಯಕ್ಷರಾದ ಟಿ ಬಿ ಹನೀಫ್ ತೆಕ್ಕಿಲ್ ಗೂನಡ್ಕ, ಕಾರ್ಯದರ್ಶಿ ಪಿ ಕೆ ಉಮ್ಮರ್ ಜಡ್ಜ್ ಗೂನಡ್ಕ, ಜೊತೆ ಕಾರ್ಯದರ್ಶಿ ಸಿನಾನ್ ಜಡ್ಜ್ ಗೂನಡ್ಕ, ಸದಸ್ಯರುಗಳಾದ ಮೊಯಿದು ದರ್ಕಾಸ್ ಗೂನಡ್ಕ,ಇಬ್ರಾಹಿಂ ಸೆಟ್ಯಡ್ಕ,ಬಾತಿಶ ತೆಕ್ಕಿಲ್ ಸೇಟ್ಯಡ್ಕ, ಉಸ್ಮಾನ್ ಪಾಂಡಿ ಗೂನಡ್ಕ,ಖಜಾಂಜಿ ತೆಕ್ಕಿಲ್ ಮೊಹಮದ್ ಕುಂಞಿ ಪೇರಡ್ಕ,ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷರಾದ ಮುನೀರ್ ದಾರಿಮಿ ದರ್ಕಾಸ್ ಗೂನಡ್ಕ ಸಹಿತ ನೂರಾರು ಜನ ಭಾಗವಹಿಸಿದರು.
ಪೇರಡ್ಕ : ಸಂಭ್ರಮ ಸಡಗರದಿಂದ ಈದ್ ಹಬ್ಬ ಆಚರಣೆ
