ಸುಳ್ಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿಯವರು ವರ್ಗಾವಣೆಗೊಂಡಿದ್ದಾರೆ.
ಸುಳ್ಯಕ್ಕೆ ಮಂಗಳೂರು ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ಎ.ಸಿ.ಎಫ್. ಆಗಿರುವ ಪ್ರಶಾಂತ್ ಪೈ ಯವರನ್ನು ನೇಮಕಗೊಳಿಸಿ ಸರಕಾರ ಆದೇಶ ಮಾಡಿದೆ.
ಪ್ರವೀಣ್ ಕುಮಾರ್ ಶೆಟ್ಟಿಯವರ ನ್ನು ಪ್ರಶಾಂತ್ ಕುಮಾರ್ ಪೈ ಯವರ ಜಾಗಕ್ಕೆ ವರ್ಗಾವಣೆಗೊಳಿಸಲಾಗಿದೆ. ಪ್ರಶಾಂತ್ ಪೈಯವರು ಜೂ.20ರಂದು ಸುಳ್ಯಕ್ಕೆ ಬಂದು ಅಧಿಕಾರ ಸ್ವೀಕರಿಸಲಿದ್ದಾರೆಂದು ತಿಳಿದುಬಂದಿದೆ.
ಸುಳ್ಯದ ಎ.ಸಿ.ಎಫ್ ವರ್ಗಾವಣೆ

















