ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ ರವರ ನಿಯೋಗ ಸಭಾಧ್ಯಕ್ಷ ಯು. ಟಿ ಖಾದರ್ ರವರನ್ನು ಮಂಗಳೂರಿನಲ್ಲಿ ಭೇಟಿ ಮಾಡಿ ರಸ್ತೆ ಅಭಿವೃದ್ಧಿ ಗೆ ಮನವಿ ನೀಡಿದ್ದರು.
ಅರಂತೋಡು ತೊಡಿಕಾನ ರಸ್ತೆಯು ತೀರಾ ಹದಗೆಟ್ಟಿದ್ದು ಅದು ಪಿಡಬ್ಲ್ಯು ರಸ್ತೆ ಆಗಿದ್ದು ಅದನ್ನು ಮೇಲ್ದರ್ಜೆಗೆ ಸೇರಿಸಿ ಅಗಲೀಕರಣ ಮಾಡಲು ಮತ್ತು ಅಭಿವೃದ್ಧಿ ಪಡಿಸಲು ಲೋಕೋಪಯೋಗಿ ಸಚಿವರಿಗೆ ಶಿಪಾರಸ್ಸು ಮಾಡಲು ಮನವಿ ನೀಡಿದರು.ತೊಡಿಕಾನ ದೇವಸ್ತಾನದ ಮೂಲಭೂತ ಸೌಕರ್ಯಗಳಿಗೆ ಅನುದಾನ ನೀಡಲು ಮನವಿ ಸಲ್ಲಿಸಿದ್ದರು ಸಭಾದ್ಯಕ್ಷರು ತಕ್ಷಣವೇ ವಿವಿಧ ಇಲಾಖೆಗಳಿಗೆ ಶಿಪಾರಸ್ಸು ಮಾಡಿ ಅನುದಾನ ದೊರಕುವಂತೆ ಕ್ರಮ ಕೈಗೊಳ್ಳಲು ತಿಳಿಸಿದರು .ಈ ಸಂದರ್ಭದಲ್ಲಿ ತೊಡಿಕಾನ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ,ವ್ಯವಸ್ಥಾಪನ ಸಮಿತಿ ಸದಸ್ಯ ಬಾಲಕೃಷ್ಣ ಕುಂಟು ಕಾಡು,ಅರಂತೋಡು ಗ್ರಾಮ ಪಂಚಾಯತ್ ಸದಸ್ಯ ರವೀಂದ್ರ ಪಂಜಿಕೋಡಿ ಇದ್ದರು.



































