ವಿಶ್ವ ಹಿಂದು ಪರಿಷತ್ ನಲ್ಲಿ ತರುಣರು ಜವಾಬ್ದಾರಿ ಹೊತ್ತು ಹೊಸ ಸತ್ವ ಜೋಡಿಸುವ ಅಗತ್ಯ ಇದೆ. ಸೂಲಿಬೆಲೆ

ವಿಶ್ವ ಹಿಂದು ಪರಿಷತ್ ಗೆ ಇಂದು 6೦ರ ಸಂಭ್ರಮ . ಸಂಘಟನೆಗೆ ಇಂದು ತರುಣರು ಜವಾಬ್ದಾರಿ ಹೊತ್ತು ಹೊಸ ಸತ್ವದ ಮೂಲಕ ಕೈ ಜೋಡಿಸುವ ಅಗತ್ಯ ಇದೆ ಎಂದು ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ವಿಶ್ವ ಹಿಂದೂ ಪರಿಷದ್, ಬಜರಂಗದಳ, ಮಾತೃ ಶಕ್ತಿ, ದುರ್ಗಾ ವಾಹಿನಿ ಸುಳ್ಯ ಪ್ರಖಂಡಮತ್ತು ಮೊಸರು ಕುಡಿಕೆ ಉತ್ಸವ ಸಮಿತಿ ಇದರ ಆಶ್ರಯದಲ್ಲಿ ವಿಶ್ವ ಹಿಂದೂ ಪರಿಷದ್ ಸ್ಥಾಪನಾ ದಿನಾಚರಣೆಯ ಅಂಗವಾಗಿ ಸುಳ್ಯದ ಚೆನ್ನಕೇಶವ ದೇವಸ್ಥಾನದ ಮುಂಭಾಗ ದಲ್ಲಿ ಆ.19 ರಂದು ನಡೆದ 12 ನೇ ವರ್ಷದ ಮೊಸರು ಕುಡಿಕೆ ಉತ್ಸವದ ಧಾರ್ಮಿಕ ಸಭೆಯಲ್ಲಿ ಅವರು ಉಪನ್ಯಾಸ ನೀಡಿದರು.
ನಮ್ಮ ಪ್ರಧಾನಿ ಕೇವಲ ನಾಲ್ಕು ದಿನಗಳಲ್ಲಿ ಆಪರೇಷನ್ ಸಿಂಧೂರ ಯುದ್ಧವನ್ನು ಮುಗಿಸಿ ಪಾಕಿಸ್ತಾನವನ್ನು ಭಾರತಕ್ಕೆ ಶರಣಾಗುವಂತೆ ಮಾಡಿದ್ದಾರೆ‌. ಅಮೇರಿಕಕ್ಕೂ ಸಡ್ಡು ಹೊಡೆಯುವಂತೆ ಪ್ರಧಾನಿ ಮೋದಿಯವರು ದೇಶವನ್ನು ಅಭಿವೃದ್ಧಿ ಮಾಡಿದ್ದಾರೆ.ಜಗತ್ತಿನಲ್ಲಿರುವ ಎಲ್ಲಾ ಧರ್ಮದವರಿಗೆ ಬೇರೆ ದೇಶ ಸಿಗಬಹುದು. ಹಿಂದುಗಳಿಗೆ ಭಾರತ ದೇಶ ಒಂದೇ ಇರುವುದು. ಇದೀಗ ಕಾಲ ಸನ್ನಿಹಿತವಾಗಿದ್ದು ಸದೃಢ ಭಾರತ ನಿರ್ಮಾಣ ಮಾಡಲು ಸೂಕ್ತ ಸಮಯ ಬಂದಿದೆ.ಇದಕ್ಕೆಲ್ಲ ತರುಣರು ಮನಸ್ಸು ಮಾಡಬೇಕೆಂದರು ಅವರು ಹೇಳಿದರು.
ಧರ್ಮಸ್ಥಳದಂತ ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿರಿಸಿಕೊಂಡು ಮಾವೋವಾದಿಗಳು ಷಡ್ಯಂತ್ರ ಹೆಣೆದು ಜಿಹಾದಿಗಳ ಮೂಲಕ ಅಪಪ್ರಚಾರಕ್ಕೆ ಮುಂದಾಗಿದ್ದಾರೆ. ಯುವ ಪಡೆ ಮೊಬೈಲ್ ಲೋಕದಲ್ಲಿ ಮುಳುಗಿ ಹೋಗುತ್ತಿರುವುದು ಅಪಾಯಕಾರಿ ಮುನ್ಸೂಚನೆ ಯಾಗಿದೆ. ಧರ್ಮ ಮತ್ತು ಸಮಾಜಕ್ಕಾಗಿ ಸೇವೆ ಸಲ್ಲಿಸುತ್ತಿರುವ ತರುಣರಿಗೆ ಹಿಂದೂ ಸಮಾಜವು ರಕ್ಷಕರಾಗಿ ನಿಂತು ಬೆಂಬಲ ನೀಡಿ ಶಕ್ತಿ ತುಂಬುವ ಕೆಲಸ ಮಾಡಬೇಕು. ಭಾರತ ದೇಶ ಇನ್ನಿತರ ದೇಶಗಳ ಮಧ್ಯಸ್ಥಿಕೆ ವಹಿಸುವ ಮಟ್ಟಕ್ಕೆ ಬೆಳೆದು ನಿಂತಿದೆ. ಜಗತ್ತಿನ ಎಲ್ಲ ರಾಷ್ಟ್ರಗಳಿಗೆ ಭಾರತದ ತಾಕತ್ತು ಏನು ಎಂಬುದು ಮಾನವರಿಕೆಯಾಗಿದೆ. ಸುಳ್ಯದಂತಹ ಪ್ರದೇಶದಲ್ಲಿರುವ ಪ್ರತಿ ಹಿಂದೂವಿನ ಮನೆಯಲ್ಲಿರುವ ಸದಸ್ಯರ ಪೈಕಿ ಓರ್ವನಾದರೂ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವುದು ಹೆಮ್ಮೆ ಎನಿಸಿಸಿಕೊಂಡಿದೆ. ಇಲ್ಲಿ ಪ್ರಸ್ತುತ ಪಡಿಸುವ ಎಲ್ಲ ವಿಚಾರಗಳಿಗೆ ಮೌಲ್ಯವಿದೆ ಎಂದು ಹೇಳಿದರು. ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಬಾಲಚಂದ್ರ ಅಡ್ಕಾರ್ ಅಧ್ಯಕ್ಷತೆ ವಹಿಸಿದ್ದರು.
ಆರ್‌.ಎಸ್.ಎಸ್ ಸಂಘ ಚಾಲಕರಾದ ಚಂದ್ರಶೇಖರ ತಳೂರು ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.
ಮಂಗಳೂರು ವಿಭಾಗದ ವಿ. ಹೆಚ್.ಪಿ ಸಹಕಾರ್ಯದರ್ಶಿ ಶಿವಾನಂದ ಮೆಂಡನ್, ಪುತ್ತೂರು ಜಿಲ್ಲೆ ವಿ.ಹೆಚ್. ಪಿ
ಸಹ ಕಾರ್ಯದರ್ಶಿ ಪ್ರಮೋದ್ ,ವಿಶ್ವ ಹಿಂದೂ ಪರಿಷದ್ ಸುಳ್ಯ ಪ್ರಖಂಡದ ಅಧ್ಯಕ್ಷ ಶ್ರೀಕಾಂತ್ ಗೋಳ್ವಾಲ್ಕರ್, ಪೂರ್ವಾಧ್ಯಕ್ಷ ಸೋಮಶೇಖರ ಪೖಕ, ದೈವ ನರ್ತಕ ಸರಸಿಂಗ ಪರವ, ಮೊಸರು ಕುಡಿಕೆ ಉತ್ಸವ ಸಮಿತಿ ಗೌರವಾಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ, ಪ್ರಧಾನ ಕಾರ್ಯದರ್ಶಿ
ಭಾನುಪ್ರಕಾಶ್ ಪೆರುಮುಂಡ, ಉಪಾಧ್ಯಕ್ಷ ಹರಿಪ್ರಸಾದ್ ಸುಲಾಯ, ಬಜರಂಗದಳ ಸಂಚಾಲಕ ಹರಿಪ್ರಸಾದ್ ಎಲಿಮಲೆ,
ಸತ್ಸಂಗ ಪ್ರಮುಖ ಸತೀಶ್ ಟಿ. ಎನ್, ಕೋಶಾಧಿಕಾರಿ ನವೀನ್ ಎಲಿಮಲೆ, ಮಾತೃ ಶಕ್ತಿ ಸಂಯೋಜಕಿ ರೀನಾ ಚಂದ್ರಶೇಖರ, ದುರ್ಗವಾಹಿನಿ ಸಂಯೋಜಕಿ ವಿಶಾಲ ಸೀತಾರಾಮ, ಉಪಸ್ಥಿತರಿದ್ದರು.
ಸವಿತ ಸುಂತೋಡು ಪ್ರಾರ್ಥಿಸಿದರು.
ಬಜರಂಗದಳ ಸುಳ್ಯ ಪ್ರಖಂಡದ ಸಂಯೋಜಕ ಹರಿಪ್ರಸಾದ್ ಎಲಿಮಲೆ ಸ್ವಾಗತಿಸಿದರು.
ವಿ.ಹೆಚ್.ಪಿ.ಅಧ್ಯಕ್ಷ ಶ್ರೀಕಾಂತ್ ಗೋಳ್ವಾಲ್ಕರ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಕು. ವೖಷ್ಣವಿ ರಾವ್ ವೖಯಕ್ತಿಕ ಗೀತೆ ಹಾಡಿದರು‌ .ನವೀನ್ ಎಲಿಮಲೆ ವಂದಿಸಿದರು. ವಿಶಾಖ್ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು. ವ್ಯವಸ್ಥಾ ಪ್ರಮುಖ ವರ್ಷಿತ್ ಚೊಕ್ಕಾಡಿ, ಪ್ರಕಾಶ್ ಮೇನಾಲ ಇತರ ಪದಾಧಿಕಾರಿಗಳು ಸಹಕರಿಸಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top