ಅಜ್ಜಾವರ ದೇವರಕಳಿಯ ಚೈತನ್ಯ ಸೇವಾಶ್ರಮದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ಗಣಪತಿ ಪೂಜೆ ಮತ್ತು ಇಲ್ಲಿಯ ಸ್ವಾಮೀಜಿ ಶ್ರೀ ಯೋಗೇಶ್ವರಾನಂದ ಸರಸ್ವತಿಯವರ 229ನೇ ಕ್ರತಿ ಶರಣಾಗು ಶಿವಗೆ ಬಿಡುಗಡೆಗೊಳಿಸಲಾಯಿತು.
ಕು.ವೈಷ್ಣವಿ ಪುಸ್ತಕ ಬಿಡುಗಡೆಗೊಳಿಸಿದರು.
ಸಮಾರಂಭದಲ್ಲಿ ಮಾತನಾಡಿದ ಸ್ವಾಮೀಜಿಯವರು ಮೊದಲು ಪೂಜಿಸುವ ದೇವರು ಗಣಪತಿ.ಶಿವನ ಮೊದಲ ಪುತ್ರ ಗಣಪತಿ ಆದಿ ಮಾಯೆಯ ಶ್ರೇಷ್ಠ ಪುತ್ರರಲ್ಲಿ ಗಣಪತಿ ಮತ್ತು ಶಣ್ಮುಖ.ವಿಘ್ನ ನಿವಾರಕ ಗಣಪತಿ.ದೇಶದ ಎಲ್ಲೆಡೆ ಗಣತಿ ಆರಾಧನೆ ಮಾಡಲಾಗುತ್ತಿದೆ.ಗಣೇಶ ಚತುರ್ಥಿ ಎಲ್ಲರಿಗೂ ಶುಭವನ್ನು ತರಲಿ ಎಂದು ಹೇಳಿದರು.
ನಿವೃತ್ತ ಎಸ್.ಐ ಕುಶಾಲಪ್ಪ ಗೌಡ,ಅನಂತರಾಮ ಅಡ್ಪಂಗಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.ಆಶ್ರಮದ ಟ್ರಸ್ಟಿ ಪ್ರಣವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಜ್ಜಾವರ : ಸ್ವಾಮೀಜಿ ಶ್ರೀ ಯೋಗೇಶ್ವರಾನಂದ ಸರಸ್ವತಿಯವರ 229ನೇ ಪುಸ್ತಕ ಬಿಡುಗಡೆ

















