Author name: Tejas

ಭಾರತೀಯ ಕ್ರಿಕೆಟ್ ತಂಡದ ಅಬ್ಬರದ ಬ್ಯಾಟಿಂಗ್, ಇಗ್ಲೆಂಡ್ ತಂಡಕ್ಕೆ 253 ರನ್ ಟಾರ್ಗೆಟ್

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್‌ನ 2ನೇ ಸೆಮಿ ಫೈನಲ್ ಪಂದ್ಯದಲ್ಲಿ, ಭಾರತದ ಆರಂಭಿಕ ಆಟಗಾರ ಸಂಜು ಸ್ಯಾಟ್ಸನ್ 42 ಎಸೆತಗಳಲ್ಲಿ 89 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ. ಇಶಾನ್ ಕಿಶನ್ 18 ಎಸೆತಗಳಲ್ಲಿ 39 ರನ್, ದುಬೆ 25 ಬಾಲ್‌ಗೆ 43 ರನ್, ತಿಲಕ್ ವರ್ಮಾ 7 ಬಾಲ್‌ಗೆ 21 ರನ್ ಗಳಿಸಿದರು. ಈ ಉತ್ತಮ ಪ್ರದರ್ಶನದ ಮೂಲಕ ಭಾರತ ತಂಡವು ಇಂಗ್ಲೆಂಡ್ ತಂಡಕ್ಕೆ 253 ರನ್‌ಗಳ ಬೃಹತ್ ಗುರಿಯನ್ನು ನೀಡಿದೆ.

ಭಾರತೀಯ ಕ್ರಿಕೆಟ್ ತಂಡದ ಅಬ್ಬರದ ಬ್ಯಾಟಿಂಗ್, ಇಗ್ಲೆಂಡ್ ತಂಡಕ್ಕೆ 253 ರನ್ ಟಾರ್ಗೆಟ್ Read More »

ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ

ಮಡಿಕೇರಿಯಲ್ಲಿ ವ್ಯಕ್ತಿಯೊಬ್ಬರು ಕೋವಿಯಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ‌.ಆಮೆಮನೆ ದೇವಿಪ್ರಸಾದ್ (43 ವರ್ಷ) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾರೆ‌‌ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಹಿಂಬದಿ ಬಡಾವಣೆ ರಸ್ತೆಯಲ್ಲಿ ಕೋವಿಯಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಪನ್ಯಾಸಕಿ ಪತ್ನಿ ಕವಿತಾ, ನಗರ ಠಾಣೆ ಅಧಿಕಾರಿ ಅನ್ನಪೂರ್ಣ, ಡಿವೈಎಸ್ ಪಿ ಸೂರಜ್,ಸರ್ಕಲ್ ಇನ್ಸ್‌ಪೆಕ್ಟ‌ರ್ ರಾಜು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ Read More »

ಕೊರಂಬಡ್ಕ : ಶ್ರೀ ನಾಗಬ್ರಹ್ಮ ಅದಿಮೋಗೇರ್ಕಳ, ಗುಳಿಗ, ಕೊರಗಜ್ಜ ಕ್ಷೇತ್ರದ ನೇಮೋತ್ಸವ ಸಮಿತಿ ರಚನೆ

ಸುಳ್ಯ ಜಯನಗರದ ಕೊರಂಬದ್ಕದಲ್ಲಿರುವ ಶ್ರೀ ನಾಗಬ್ರಮ್ಮ ಅದಿಮೊಗೇರ್ಕಳ, ಗುಳಿಗ, ಕೊರಗಜ್ಜ ಕ್ಷೇತ್ರದಲ್ಲಿ ಇತ್ತೀಚೆಗೆ ನೇಮೋತ್ಸವ ಮತ್ತು ಆಡಳಿತ ವ್ಯವಸ್ಥಾಪನ ಸಮಿತಿಯ ಜಂಟಿ ಸಭೆ ನಡೆಯಿತು.ಸಭೆಯಲ್ಲಿ ಉತ್ಸವ ಸಮಿತಿಯನ್ನು ನೂತನವಾಗಿ ರಚಿಸಲಾಯಿತು.ಗೌರವಧ್ಯಕ್ಷರಾಗಿ ರಮೇಶ್ ಇರಂತಮಜಲು, ಅಧ್ಯಕ್ಷರಾಗಿ ಸೋಮಶೇಖರ ದೋಳ ಎರಡನೇ ಬಾರಿಗೆ ಆಯ್ಕೆಗೊಂಡರು. ಕಾರ್ಯದರ್ಶಿಯಾಗಿ ಪ್ರಸನ್ನ ಕುದ್ಪಾಜೆ, ಉಪಾಧ್ಯಕ್ಷ ದಯಾನಂದ ಕುದ್ಪಾಜೆ. ಖಜಾಂಜಿಯಾಗಿ ಪ್ರಶಾಂತ್ ಕುದ್ಪಾಜೆ ಮತ್ತು ಜೊತೆಕಾರ್ಯದರ್ಶಿಯಾಗಿ ಸಚಿನ್ ಕೊಯಿಂಗೋಡಿ i ಆಯ್ಕೆ ಆದರು.ಇದೇ ಸಭೆಯಲ್ಲಿ ಮಹಿಳಾ ಸಮಿತಿಯನ್ನೂ ರಚಿಸಲಾಯಿತು. ಮಹಿಳಾ ಸಮಿತಿ ಅಧ್ಯಕ್ಷರಾಗಿ ಶ್ರೀಮತಿ ಪಾರ್ವತಿ

ಕೊರಂಬಡ್ಕ : ಶ್ರೀ ನಾಗಬ್ರಹ್ಮ ಅದಿಮೋಗೇರ್ಕಳ, ಗುಳಿಗ, ಕೊರಗಜ್ಜ ಕ್ಷೇತ್ರದ ನೇಮೋತ್ಸವ ಸಮಿತಿ ರಚನೆ Read More »

ಅಡುಗೆ ವಿಚಾರವಾಗಿ ಅತ್ತೆ ಸೊಸೆ ಜಗಳ,ಸೊಸೆ ನೇಣು ಬಿಗಿದು ಆತ್ಮಹತ್ಯೆ

ಅಡುಗೆ ವಿಷಯದಲ್ಲಿ ಅತ್ತೆ ಜೊತೆ ಜಗಳವಾಗಿ ಸೊಸೆಯೊಬ್ಬರು ನೇಣಿಗೆ ಶರಣಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಟೆಕ್ಕಿ ಸುಷ್ಮಾ(35) ಆತ್ಮಹತ್ಯೆಗೆ ಶರಣಾದವರು ಎಂದು ಗುರುತಿಸಲಾಗಿದೆ.ಸುಷ್ಮಾ ಅವರು ಐದು ವರ್ಷಗಳ ಹಿಂದೆ ಪುನೀತ್ ಕುಮಾರ್ ಎಂಬುವವರನ್ನು ವಿವಾಹವಾಗಿದ್ದರು ಮತ್ತು ದಂಪತಿಗೆ ನಾಲ್ಕು ವರ್ಷದ ಮಗನಿದ್ದಾನೆ. ಸಣ್ಣಪುಟ್ಟ ವಿಷಯಗಳಿಗೆ ಮನೆಯಲ್ಲಿ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.ನಿನ್ನೆ ಸುಷ್ಮಾ ಮತ್ತು ಅವರ ಅತ್ತೆ ಕಲ್ಪನಾ ನಡುವೆ ಅಡುಗೆ ಮಾಡುವ ವಿಚಾರವಾಗಿ ಜಗಳ ನಡೆದಿತ್ತು ಎನ್ನಲಾಗಿದೆ.ಕಲ್ಪನಾ ಅವರು ಸುಷ್ಮಾ ಅವರಿಗೆ ಅಡುಗೆ

ಅಡುಗೆ ವಿಚಾರವಾಗಿ ಅತ್ತೆ ಸೊಸೆ ಜಗಳ,ಸೊಸೆ ನೇಣು ಬಿಗಿದು ಆತ್ಮಹತ್ಯೆ Read More »

ಅರಂತೋಡು ಮದರಸಕ್ಕೆ ಶೇ100 ಫಲಿತಾಂಶ

ಸಮಸ್ತ ಮತ ವಿದ್ಯಾಬ್ಯಾಸ ಬೋರ್ಡ್ ನಡೆಸಿದ 2025-26 ನೇ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ಅರಂತೋಡು ನುಸ್ರತುಲ್ ಇಸ್ಲಾಂ ಮದರಸಕ್ಕೆ ಶೇ.100 ಪಲಿತಾಂಶ ಬಂದಿರುತ್ತದೆ. ಕಳೆದ ಹಲವಾರು ವರ್ಷದಿಂದ ಮದರಸವು ಶೇ.100 ಪಲಿತಾಂಶ ದಾಖಲಿಸುತ್ತಾ ಬಂದಿದ್ದು, ಈ ಬಾರಿ 10 ನೇತರಗತಿಯ ವಿದ್ಯಾರ್ಥಿಗಳಾದ ಫಾತಿಮತ್ ರಿಯಾನ, ತಿಶ ಖದೀಜ ಮತ್ತು ಅನ ಫಾತಿಮ, 7 ನೇತರಗತಿಯ ಶಾಕಿರ್, ಫಾತಿಮತ್ ಲುಬಾಬ, ಫಾತಿಮತ್ ಝಾಹಿರ, ಆಯಿಷ ನಿಮ್ರ ಹಾಗೂ 5 ನೇ ತರಗತಿಯ ಎಸ್.ಎಂ.ರಿಫಾ ಮತ್ತು ನದಾ ಫಾತಿಮ ಡಿಸ್ಟಿಂಕ್ಷನ್

ಅರಂತೋಡು ಮದರಸಕ್ಕೆ ಶೇ100 ಫಲಿತಾಂಶ Read More »

ಸುಳ್ಯ ತಾಲೂಕನ್ನು ಕೇಂದ್ರವಾಗಿರಿಸಿ ಮಂಗಳೂರು ಅರಣ್ಯ ವಿಭಾಗಕ್ಕೆ ಎಲಿಫೆಂಟ್ ಟಾಸ್ಕ್ ಫೋರ್ಸ್ ನ್ನು ನಿಯೋಜನೆಗೊಳಿಸಿ ಸರಕಾರ ಆದೇಶ

ಕಾಡಾನೆಗಳಿಂದ ಆಗುತ್ತಿರುವ ಸಮಸ್ಯೆಗಳನ್ನು ತಡೆಯಲು ಸುಳ್ಯ ತಾಲೂಕನ್ನು ಕೇಂದ್ರವಾಗಿರಿಸಿ ಮಂಗಳೂರು ಅರಣ್ಯ ವಿಭಾಗಕ್ಕೆ ಎಲಿಫೆಂಟ್ ಟಾಸ್ಕ್ ಫೋರ್ಸ್ ನ್ನು ನಿಯೋಜನೆಗೊಳಿಸಿ ಸರಕಾರ ಆದೇಶ ಮಾಡಿದೆ. ತತ್ ಕ್ಷಣದಿಂದ ಈ ಕಾರ್ಯಪಡೆಗೆ ಸಿಬ್ಬಂದಿ ನೇಮಕಗೊಳಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.ಮಂಗಳೂರು ವಿಭಾಗದ ಉಪ್ಪಿನಂಗಡಿ, ಸುಳ್ಯ, ಬೆಳ್ತಂಗಡಿ, ಪುತ್ತೂರು, ಪಂಜ ಮತ್ತು ಸುಬ್ರಹ್ಮಣ್ಯ ವಲಯಗಳ ವ್ಯಾಪ್ತಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗುತ್ತಿದ್ದು, ಪ್ರತಿ ವರ್ಷವೂ ಬೆಳೆ ಪರಿಹಾರ ಹಾಗೂ ಮಾನವ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಹಾಗೂ ಜನವಸತಿ ಪ್ರದೇಶಗಳಿಗೆ ಆನೆಗಳು ನುಗ್ಗಿದಾಗ

ಸುಳ್ಯ ತಾಲೂಕನ್ನು ಕೇಂದ್ರವಾಗಿರಿಸಿ ಮಂಗಳೂರು ಅರಣ್ಯ ವಿಭಾಗಕ್ಕೆ ಎಲಿಫೆಂಟ್ ಟಾಸ್ಕ್ ಫೋರ್ಸ್ ನ್ನು ನಿಯೋಜನೆಗೊಳಿಸಿ ಸರಕಾರ ಆದೇಶ Read More »

ಬಿ . ಎಸ್. ಡಬ್ಲ್ಯೂ. ಅಂತಿಮ ಪದವಿ ಪರೀಕ್ಷೆಯಲ್ಲಿ ಜ್ಯೋತಿ ಬೆದ್ರುಪಣೆಯವರಿಗೆ ಪ್ರಥಮ ರ‌್ಯಾಂಕ್

ಮಂಗಳೂರು ವಿಶ್ವ ವಿದ್ಯಾನಿಲಯ ನಡೆಸಿದ ಬಿ . ಎಸ್. ಡಬ್ಲ್ಯೂ. ಅಂತಿಮ ಪದವಿ ಪರೀಕ್ಷೆಯಲ್ಲಿ ಜ್ಯೋತಿ ಬೆದ್ರುಪಣೆಪ್ರಥಮ ರ‌್ಯಾಂಕ್ ಪಡೆದಿದ್ದಾರೆ.ಅವರು ಸುಳ್ಯದ ನೆಹರು ಮೆಮೋರಿಯಲ್ಲಿಬಿ ಎಸ್ ಡಬ್ಲ್ಯೂ ಅಧ್ಯಯನ ಮಾಡಿ ಪೆರುವಾಜೆ ಡಾ.ಶಿವರಾಮ ಕಾರಂತ ಕಾಲೇಜಿನಲ್ಲಿ ಎಂ.ಎಸ್.ಡಬ್ಲ್ಯೂ ಅಧ್ಯಾಯನ ಮಾಡುತ್ತಿದ್ದಾರೆ.ಸುಳ್ಯ ತಾಲೂಕಿನ‌ ಅರಂತೋಡು ಗ್ರಾಮದ ಬೆದ್ರುಪಣೆ ಹರೀಶ ರುಕ್ಮಿಣಿ ದಂಪತಿ ಪುತ್ರಿ.

ಬಿ . ಎಸ್. ಡಬ್ಲ್ಯೂ. ಅಂತಿಮ ಪದವಿ ಪರೀಕ್ಷೆಯಲ್ಲಿ ಜ್ಯೋತಿ ಬೆದ್ರುಪಣೆಯವರಿಗೆ ಪ್ರಥಮ ರ‌್ಯಾಂಕ್ Read More »

ಬೈಕ್ ಅಪಘಾತದಲ್ಲಿ ಭುವನ್ ಗೌಡ ಸಾವು

ಬೈಕ್ ಅಪಘಾತದಲ್ಲಿ ಕುಂಬ್ರ ನಿವಾಸಿ ಭುವನ್ ಗೌಡ ( 34 ವ) ಸಾವಿಗೀಡಾದ ಘಟನೆ ಮಾ.3 ರಂದು ವರದಿಯಾಗಿದೆ.ತಿಂಗಳಾಡಿ ಸಮೀಪದ ತ್ಯಾಗರಾಜ ನಗರದಲ್ಲಿ ಈ ದುರ್ಘಟನೆ ನಡೆದಿದೆ.ಕುಂಬ್ರ ಶಾಲಾ ಬಳಿಯ ನಿವಾಸಿಯಾಗಿರುವ ಧರ್ಮಪಾಲ ಮತ್ತು ಮೋಹಿನಿ ಅವರ ಪುತ್ರರಾಗಿರುವ ಭುವನ್ ಗೌಡ ರವರು ನಿಂತಿಕಲ್ಲುನಲ್ಲಿರುವ ಕುಬೇರ ಬಾರ್ ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದು ಮಾ.3 ರಂದು ಸಂಜೆ ಕೆಲಸ ಮುಗಿಸಿ ಮನೆ ಕಡೆಗೆ ಬೈಕಿನಲ್ಲಿ ಬರುತ್ತಿದ್ದ ವೇಳೆ ತ್ಯಾಗರಾಜನಗರದಲ್ಲಿ ಮಜ್ಞಾರಡ್ಕಕ್ಕೆ ತಿರುಗುವ ಬಳಿ ಬೈಕ್ ಸ್ಕಿಡ್

ಬೈಕ್ ಅಪಘಾತದಲ್ಲಿ ಭುವನ್ ಗೌಡ ಸಾವು Read More »

ಹಿಂದು ಸಂಘಟನೆಯ ಮುಖಂಡನಿಗೆ ಚೂರಿ ಇರಿತ

ಉಡುಪಿ ಜಿಲ್ಲೆಯ ಹಿಂದೂ ಸಂಘಟನೆಯ ಮುಖಂಡ ಮಂಜು ಕೊಳ ಅವರಿಗೆ ಯುವಕರ ತಂಡ ಚೂರಿಯಿಂದ ಇರಿದ ಘಟನೆ ಕಳೆದ ರಾತ್ರಿ ಮಲ್ಪೆಯಲ್ಲಿ ಸಂಭವಿಸಿದೆ.ಉಡುಪಿಯ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ. .ಹಿಂದೂ ಯುವಸೇನೆಯ ಮುಖಂಡ, ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಅವರ ಪತಿ ಮಂಜುಕೊಳ ಅವರು ಇಂದು ಬೀಚ್ ಬಳಿ ಜೋಡಿಯೊಂದರ ಪ್ರೇಮದ ವಿಚಾರವಾಗಿ ರಾಜಿಪಂಚಾಯಿತಿಗೆ ಕರೆದಿದ್ದರು. ಧನುಷ್ ಎಂಬ ಯುವಕನ ವಿಚಾರದಲ್ಲಿ ಈ ಜಗಳ ನಡೆದಿದೆ.ಈ ಸಂದರ್ಭ ಮಾತಿಗೆ ಮಾತು ಬೆಳೆದಾಗ ಯುವಕ ಚೂರಿಯಿಂದ

ಹಿಂದು ಸಂಘಟನೆಯ ಮುಖಂಡನಿಗೆ ಚೂರಿ ಇರಿತ Read More »

ಏ.27ರಿಂದ ಬಳ್ಪ ಬುಡೆಂಗಿ ವಿಷ್ಣುಮೂರ್ತಿ ದೈವದ ಒತ್ತೆಕೋಲ

ಬಳ್ಪ ಬುಡೆಂಗಿ ಶ್ರೀ ವಿಷ್ಣು ಮೂರ್ತಿ ದೈವದ ಒತ್ತೆ ಕೋಲವು ಏ.27ರ ಸೋಮವಾರ ಹಾಗೂ ಏ. 28ರ ಮಂಗಳವಾರದಂದು ನಡೆಯಲಿದೆ.ಕೊಳ್ಳಿ ಮುಹೂರ್ತವು ದಿನಾಂಕ 7-3-26 ಶನಿವಾರ ಪೂರ್ವಾಹ್ನ 10 ಗಂಟೆಗೆ ನಡೆಯಲಿದೆ. ಎಲ್ಲಾ ಭಕ್ತರೂ ಆಗಮಿಸಿ ಪ್ರಸಾದ ಸ್ವೀಕರಿಸಿ ದೈವದ ಕ್ರಪೆಗೆ ಪಾತ್ರರಾಗಬೇಕೆಂದುಆಡಳಿತ ಮಂಡಳಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರು ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ.

ಏ.27ರಿಂದ ಬಳ್ಪ ಬುಡೆಂಗಿ ವಿಷ್ಣುಮೂರ್ತಿ ದೈವದ ಒತ್ತೆಕೋಲ Read More »

error: Content is protected !!
Scroll to Top