Author name: Tejas

ಇಂದಿನಿಂದ ಸುಳ್ಯದ ಚಿತ್ರಮಂದಿರದಲ್ಲಿ ಭಾವ ತೀರ ಯಾನ ಚಲನಚಿತ್ರ ಪ್ರದರ್ಶನ ಆರಂಭ

ಆರೋಹ ಫಿಲಂಸ್ ಬ್ಯಾನರ್‌ ಅಡಿಯಲ್ಲಿ ಶೈಲೇಶ್ ಅಂಬೆಕಲ್ಲು ಹಾಗೂ ಲಕ್ಷ್ಮಣ ಬಿ.ಕೆ ನಿರ್ಮಿಸಿರುವ, ಮಯೂರ್ ಅಂಜಿಕಲ್ಲು ಹಾಗೂ ತೇಜಸ್ ಕಿರಣ್ ಜಂಟಿಯಾಗಿ ನಿರ್ದೇಶಿಸಿರುವ ‘ಭಾವ ತೀರ ಯಾನ’ ಸಿನಿಮಾ ಚೊಚ್ಚಲ ಪ್ರಯತ್ನದಲ್ಲೇ ಅತ್ಯುತ್ತಮ ಚಲನಚಿತ್ರ ಹೊರತಂದಿರುವುದು ಒಂದು ಸಾಧನೆ ಎಂದು ಎಂ.ಬಿ.ಪೌಂಡೇಶನ್ ಅಧ್ಯಕ್ಷ ಎಂ.ಬಿ. ಸದಾಶಿವ ಹೇಳಿದರು.ಅವರು ಸುಳ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮೇ.8 ರಂದು ಸುಳ್ಯದಲ್ಲಿ ಮರುತೆರೆ ಕಾಣಲಿರುವ ಭಾವತೀರ ಯಾನ ಚಲನಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಚಿತ್ರ ಸಮಾಜಕ್ಕೆ ಉತ್ತಮ ಸಂದೇಶ ಸಾರುವ […]

ಇಂದಿನಿಂದ ಸುಳ್ಯದ ಚಿತ್ರಮಂದಿರದಲ್ಲಿ ಭಾವ ತೀರ ಯಾನ ಚಲನಚಿತ್ರ ಪ್ರದರ್ಶನ ಆರಂಭ Read More »

ಮಡಿಕೇರಿ ಮಂಗಳೂರು‌ ರಸ್ತೆಯಲ್ಲಿ ಬಸ್ಸು ಚಾಲಕನಿಗೆ ಹೃದಯಘಾತವಾಗಿ ಬರೆಗೆ ಗುದ್ದಿದ ಬಸ್ಸು ,ಚಾಲಕ ಸಾವು,ಪ್ರಯಾಣಿಕರು ಪಾರು

ಬೆಂಗಳೂರಿನಿಂದ ಸುಳ್ಯ ಮಾರ್ಗವಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಒಂದರ ಚಾಲಕನಿಗೆ ಹೃದಯಾಘಾತವಾಗಿ ಬಸ್ ನಿಯಂತ್ರಣ ತಪ್ಪಿ ಬರೆಗೆ ಗುದ್ದಿ ನಿಂತ ಹಾಗೂ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿ ಚಾಲಕ ಹ್ರದಯಘಾತದಿಂದ ಸಾವನ್ನಪ್ಪಿದ ಮೇ.8ರಂದು ಮುಂಜಾನೆ ಮಡಿಕೇರಿ ಬಳಿಯ ಕಾಟಿಗೇರಿಯಿಂದ ವರದಿಯಾಗಿದೆ.ರಾತ್ರಿ ಬೆಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವ ಪೂರ್ಣಿಮ ಬಸ್ ನಿನ್ನೆ ರಾತ್ರಿ ಬೆಂಗಳೂರಿನಿಂದ ಹೊರಟಿತು. ಇಂದು ಮುಂಜಾನೆ ಮಡಿಕೇರಿ ದಾಟಿ ಬರುತ್ತಿರುವಾಗ ಕಾಟಿಕೇರಿ ಬಳಿ ತಿರುವಿನಲ್ಲಿ ಬಸ್ ಚಾಲಕ ಶಿವಕುಮಾರ್ ಹೃದಯಾಘಾತಕ್ಕೊಳಗಾಗಿ ಬಸ್ ನಿಯಂತ್ರಣ ತಪ್ಪಿ

ಮಡಿಕೇರಿ ಮಂಗಳೂರು‌ ರಸ್ತೆಯಲ್ಲಿ ಬಸ್ಸು ಚಾಲಕನಿಗೆ ಹೃದಯಘಾತವಾಗಿ ಬರೆಗೆ ಗುದ್ದಿದ ಬಸ್ಸು ,ಚಾಲಕ ಸಾವು,ಪ್ರಯಾಣಿಕರು ಪಾರು Read More »

ಕಲ್ಲುಗುಂಡಿ : ಹಿರಿಯ ಯಕ್ಷಗಾನ ಕಲಾವಿದ ಪಕೀರಪ್ಪ ಪೂಜಾರಿ ನಿಧನ

ಸಂಪಾಜೆ ಗ್ರಾಮದ ಕಲ್ಲುಗುಂಡಿಯ ಚೆಟ್ಟಕಲ್ಲು ನಿವಾಸಿ, ಹಿರಿಯ ಯಕ್ಷಗಾನ ಕಲಾವಿದ, ಪಕೀರಪ್ಪ ಪೂಜಾರಿಯವರು ಅಲ್ಪಕಾಲದ ಅಸೌಖ್ಯದಿಂದ ಮೇ. 7 ರಂದು ನಿಧನರಾದರು.ಮೃತರು ಪುತ್ರರಾದ ರಾಮಕೃಷ್ಣ, ತೇಜಪ್ರಕಾಶ್, ಚಂದ್ರಶೇಖ‌ರ್, ಪುತ್ರಿಯನ್ನು ಸೊಸೆಯಂದಿರು, ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ.

ಕಲ್ಲುಗುಂಡಿ : ಹಿರಿಯ ಯಕ್ಷಗಾನ ಕಲಾವಿದ ಪಕೀರಪ್ಪ ಪೂಜಾರಿ ನಿಧನ Read More »

ಬೆಂಗಳೂರು, ಮೈಸೂರು ಸೇರಿದಂತೆ ದಕ್ಷಿಣ ಕರ್ನಾಟಕದಲ್ಲಿ ಭಾರೀ ಮಳೆ ಅಲರ್ಟ್‌!

ರಾಜ್ಯದಲ್ಲಿ ಪೂರ್ವ ಮುಂಗಾರು ಚುರುಕುಗೊಂಡಿದ್ದು, ಭಾರತೀಯ ಹವಾಮಾನ ಇಲಾಖೆ ಮೇ 6ರಿಂದ 12ರವರೆಗೆ ಮಳೆಯ ಮುನ್ಸೂಚನೆ ನೀಡಿದೆ. ಉತ್ತರ ತೆಲಂಗಾಣದಿಂದ ಮನ್ನಾರ್ ಕೊಲ್ಲಿವರೆಗೆ ಉಂಟಾದ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಮಳೆ ವಾತಾವರಣ ನಿರ್ಮಾಣವಾಗಿದೆ. ಮೇ 7 ಮತ್ತು 8ರಂದು ಹಾಸನ, ಕೊಡಗು, ಚಾಮರಾಜನಗರ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಭಾರಿ ಮಳೆಯ ಎಚ್ಚರಿಕೆ ನೀಡಲಾಗಿದೆ. ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಂದಿನ 3 ದಿನ ಸಾಧಾರಣದಿಂದ

ಬೆಂಗಳೂರು, ಮೈಸೂರು ಸೇರಿದಂತೆ ದಕ್ಷಿಣ ಕರ್ನಾಟಕದಲ್ಲಿ ಭಾರೀ ಮಳೆ ಅಲರ್ಟ್‌! Read More »

ಆಪರೇಷನ್‌ ಸಿಂಧೂರ್‌ಗೆ ವರ್ಷದ ಸಂಭ್ರಮ : ವೀಡಿಯೊ ಹಂಚಿಕೊಂಡ ಭಾರತೀಯ ಸೇನೆ

ಭಾರತೀಯ ಸೇನೆಯು ‘ಆಪರೇಷನ್ ಸಿಂಧೂರ್’ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ ಸಂಭ್ರಮದಲ್ಲಿದ್ದು ಈ ಹಿನ್ನೆಲೆಯಲ್ಲಿ, ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಅಡಗಿದ್ದ ಉಗ್ರರ ವಿರುದ್ಧ ನಡೆದಿದ್ದ ಕಾರ್ಯಾಚರಣೆಯ ವಿಶೇಷ ವೀಡಿಯೊವನ್ನು ಬಿಡುಗಡೆ ಮಾಡಿದೆ. ಒಂದು ವರ್ಷದ ಹಿಂದೆ, ಭಾರತದ ಭದ್ರತೆಗೆ ಸವಾಲಾಗಿದ್ದ ಭಯೋತ್ಪಾದಕ ತಾಣಗಳನ್ನು ಗುರಿಯಾಗಿಸಿಕೊಂಡು ರಹಸ್ಯ ಕಾರ್ಯಾಚರಣೆ ನಡೆಸಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಲಾಗಿತ್ತು. ಭಾರತದ ಮೇಲೆ ಕಣ್ಣು ಹಾಕುವ ಅಥವಾ ಭಯೋತ್ಪಾದನೆಗೆ ಬೆಂಬಲ ನೀಡುವ ಶಕ್ತಿಗಳನ್ನು ಭಾರತೀಯ ಸೇನೆ ಹುಡುಕಿ ಶಿಕ್ಷಿಸುತ್ತದೆ ಎಂಬಸಂದೇಶವನ್ನು ಈ ವೀಡಿಯೊ ನೀಡಿದೆ.

ಆಪರೇಷನ್‌ ಸಿಂಧೂರ್‌ಗೆ ವರ್ಷದ ಸಂಭ್ರಮ : ವೀಡಿಯೊ ಹಂಚಿಕೊಂಡ ಭಾರತೀಯ ಸೇನೆ Read More »

ಚೆಂಬು : ಮಾಡ ಉಳ್ಳಾಕ್ಲು ದೈವಸ್ಥಾನದಲ್ಲಿ ನೇಮೋತ್ಸವ

ಚೆಂಬು ಗ್ರಾಮದ ಶ್ರೀ ಮಾಡ ದೇವಸ್ಥಾನ ಉಳ್ಳಾ ಕುಲು ದೈವಸ್ಥಾನದಲ್ಲಿ ಕಾಲಾವಧಿ ಪಗ್ಗು ನೇಮೋತ್ಸವವು ಮೇ 6 ರಂದು ನಡೆಯಿತು.ಉಳ್ಳಾಕುಲು ದೈವದ ಕುದುರೆ ಬಂಡಿ ಉತ್ಸವ, ಬಳಿಕ ಉಳ್ಳಾಕುಲು ದೈವದ ಪಗ್ಗು ನೇಮೋತ್ಸವ, ಬಳಿಕ ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನಡೆಯಿತು. ದೈವಸ್ಥಾನದ ಸಮಿತಿಯವರು ಊರ – ಪರವೂರ ಭಕ್ತಾಧಿಗಳು ಆಗಮಿಸಿ ದೈವದ ಪ್ರಸಾದವನ್ನು ಪಡೆದು ಕೃಪೆಗೆ ಪಾತ್ರರಾದರು..

ಚೆಂಬು : ಮಾಡ ಉಳ್ಳಾಕ್ಲು ದೈವಸ್ಥಾನದಲ್ಲಿ ನೇಮೋತ್ಸವ Read More »

ಪಿ.ಬಿ ದಿವಾಕರ ರೈಯವರ ಪತ್ನಿ ವಿದ್ಯಾ ಡಿ.ರೈ ನಿಧನ

ದ.ಕ ಜಿಲ್ಲೆಯ ಹಿರಿಯ ಸಹಕಾರಿ ದುರೀಣ ಅರಂತೋಡು ತೊಡಿಕಾನ ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಸುಳ್ಯ ಸೀಮೆ ತೊಡಿಕಾನ‌ ಶ್ರೀ ಮಲ್ಲಿಕಾರ್ಜುನ ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಪಿ.ಬಿ.ದಿವಾಕರ ರೈಯವರ ಧರ್ಮಪತ್ನಿ ವಿದ್ಯಾ ಡಿ.ರೈ (55 ವರ್ಷ ) ಅವರು ಮೇ 5ರಂದು ಮಂಗಳೂರಿನ ಖಾಸಗಿ ಆಸ್ಪತ್ರಯಲ್ಲಿ ನಿಧನರಾದರು. ಮ್ರತರು ಪತಿ,ಮಗಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಪಿ.ಬಿ ದಿವಾಕರ ರೈಯವರ ಪತ್ನಿ ವಿದ್ಯಾ ಡಿ.ರೈ ನಿಧನ Read More »

ಚೆಸ್ಕಾಂ ನ ಪ್ರಭಾರ ಸಹಾಯಕ ಇಂಜಿನಿಯರ್ ಪ್ರವೀಣ್ ಕುಮಾರ್ ಪಾನತ್ತಿಲ ನಿಧನ

ಚೆಸ್ಕಾಂ ನ ಮಡಿಕೇರಿ ಶಾಖೆಯಲ್ಲಿ ಪ್ರಭಾರ ಸಹಾಯಕ ಎಂಜಿನಿಯರ್ ಆಗಿದ್ದ ಅರಂತೋಡು ಗ್ರಾಮದ ಬೆದ್ರುಪಣೆ ಪ್ರವೀಣ್ ಕುಮಾ‌ರ್ ಪಾನತ್ತಿಲ ಇಂದು ಮುಂಜಾನೆ (ಮೇ.5)ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಮೃತರು ತಾಯಿ ಪೂವಮ್ಮ,, ಪತ್ನಿ ರೇಖಾ, ಪುತ್ರ ಮೌರ್ಯ, ಸಹೋದರಿ ಪ್ರಮೀಳ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.ಮೃತರು ಸ್ಪಂದನ ಗೆಳೆಯರ ಬಳಗ ರಿ ಅಡ್ತಲೆ ಇದರ ಸಾಂಸ್ಕೃತಿಕ ಕಾರ್ಯದರ್ಶಿಯಾಗಿದ್ದರು

ಚೆಸ್ಕಾಂ ನ ಪ್ರಭಾರ ಸಹಾಯಕ ಇಂಜಿನಿಯರ್ ಪ್ರವೀಣ್ ಕುಮಾರ್ ಪಾನತ್ತಿಲ ನಿಧನ Read More »

ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು : ಸುಳ್ಯದಲ್ಲಿ ಬಿಜೆಪಿಯಿಂದ ಸಿಹಿತಿಂಡಿ ಹಂಚಿ ಸಂಭ್ರಮಾಚರಣೆ

ಪಂಚರಾಜ್ಯ ರಾಜ್ಯ ಚುನಾವಣೆಯ ಮೂರು ರಾಜ್ಯಗಳ್ಲಿ ಬಿಜೆಪಿ ಅಭೂತಪೂರ್ವ ಗೆಲುವು ದಾಖಲಿಸಿದ ಹಿನ್ನೆಲೆಯಲ್ಲಿ ಸುಳ್ಯ ಬಿಜೆಪಿ ವತಿಯಿಂದ ಖಾಸಗಿ ಬಸ್ ನಿಲ್ದಾಣದ ಬಳಿಯಲ್ಲಿ ವಿಜಯೋತ್ಸವ ಆಚರಿಸಲಾಯಿತು.ಈ ಸಂದರ್ಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ಜಿಲ್ಲಾ ಬಿಜೆಪಿ ಮುಖಂಡ ರಾಕೇಶ್ ರೈ ಕೆಡೆಂಜಿ, ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ, ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಪುಷ್ಪಾ ಮೇದಪ್ಪ,ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ ಬಿ.ಕೆ. ಸುಳ್ಯ ಸಿ‌.ಎ ವಿಕ್ರಂ ಅಡ್ಪಂಗಾಯ,

ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು : ಸುಳ್ಯದಲ್ಲಿ ಬಿಜೆಪಿಯಿಂದ ಸಿಹಿತಿಂಡಿ ಹಂಚಿ ಸಂಭ್ರಮಾಚರಣೆ Read More »

ಪ್ರತಿ ಮನೆಯಲ್ಲಿ ಭಜನೆಯ ನಾದ ಮೊಳಗಬೇಕು : ಮಾಧವ ಗೌಡ

ಭಜನೆಯ ಮೂಲಕ ಭಗವಂತನ ನಾಮಸ್ಮರಣೆ ಮಾಡುವುದಿಂದ ಮನಸ್ಸಿಗೆ ಶ್ರೇಷ್ಠ ಸುಖ ಸಿಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಯ ಸುಳ್ಯ ಯೋಜನಾ ಕಚೇರಿಯ ಯೋಜನಾಧಿಕಾರಿ ಮಾಧವ ಗೌಡ ಹೇಳಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಸುಳ್ಯ ,ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್,ಸುಳ್ಯ ವಲಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಇದರ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿಯಲ್ಲಿ ಮಕ್ಕಳ ಭಜನಾ ತರಬೇತಿ ಮತ್ತು ಸಂಸ್ಕಾರ ಶಿಬಿರದ ಉದ್ಘಾಟನಾ

ಪ್ರತಿ ಮನೆಯಲ್ಲಿ ಭಜನೆಯ ನಾದ ಮೊಳಗಬೇಕು : ಮಾಧವ ಗೌಡ Read More »

error: Content is protected !!
Scroll to Top