Author name: Tejas

ಅರಂತೋಡು : ಬೈಕ್ ನಲ್ಲಿ ಇರಿಸಿದ್ದ ಹೆಲ್ಮೆಟ್ ಒಳಗಡೆ ಬೆಚ್ಚಗೆ ಮಲಗಿದ್ದ ಹಾವು !

ಸುಳ್ಯ ತಾಲೂಕಿನ ಅರಂತೋಡಿನಲ್ಲಿ ಬೈಕ್ ನಲ್ಲಿ ಇರಿಸಿದ್ದ ಹೆಲ್ಮೆಟ್ ಒಳಗಡೆ ಹಾವೊಂದು ಮಲಗಿಕೊಂಡಿರುವುದು ಪತ್ತೆಯಾಗಿ ಅರಿಲ್ಲದೆ ಬೈಕ್ ಸವಾರ ಅದಕ್ಕೆ ಕೈ ಹಾಕಿ ಅಪಾಯದಿಂದ ಪಾರಾದ ಘಟನೆ ವರದಿಯಾಗಿದೆ.ಅರಂತೋಡಿನ ಸೋಮಶೇಖರ ಪೈಕ ಅವರ ಮನೆಯನ್ನು ಪವರ್ ಮ್ಯಾನ್ ಬಾಡಿಗೆಗೆ ಪಡೆದುಕೊಂಡು ವಾಸವಾಗಿದ್ದಾರೆ‌.ಜೂ.1ರಂದು ರಾತ್ರಿ ಪವರ್ ಮ್ಯಾನ್ ಮಹಂತೇಶ್ ಬೈಕ್ ಅಂಗಳದಲ್ಲಿ ನಿಲ್ಲಿಸಿ ಮಲಗಿದ್ದರು.ಬೆಳಿಗ್ಗೆ ಎದ್ದು ಬೈಕ್ ಹತ್ತಿರ ಹೋಗಿ ಹೆಲ್ಮೆಟ್ ನೋಡಿ ಕೈ ಹಾಕಿದ್ದಾಗ ಅದರಲ್ಲಿ ಹಾ ವೊಂದು ಮಲಗಿಕೊಂಡಿತು‌.ಆದರೆ ಯಾವುದೇ ಅಪಾಯವಾಗದೆ ಮಹಂತೇಶ್ ಪಾರಾಗಿದ್ದಾರೆ.

ಅರಂತೋಡು : ಬೈಕ್ ನಲ್ಲಿ ಇರಿಸಿದ್ದ ಹೆಲ್ಮೆಟ್ ಒಳಗಡೆ ಬೆಚ್ಚಗೆ ಮಲಗಿದ್ದ ಹಾವು ! Read More »

ಬೆಂಗಳೂರಿನಲ್ಲಿ ಭಾರೀ ಮಳೆ: ರಸ್ತೆಗಳು ಜಲಾವೃತ

ಬೆಂಗಳೂರಿನಲ್ಲಿ ಸಂಜೆ ವೇಳೆ ದಿಢೀರನೆ ಆರಂಭವಾದ ಭಾರೀ ಮಳೆಗೆ ಇಡೀ ನಗರವೇ ಕಂಗೆಟ್ಟಿದೆ. ಪ್ರಮುಖ ರಸ್ತೆಗಳೆಲ್ಲವೂ ಸಂಪೂರ್ಣ ಜಲಾವೃತಗೊಂಡಿದ್ದು, ಕಚೇರಿಗಳಿಂದ ಮನೆಗೆ ಮರಳುತ್ತಿದ್ದ ವಾಹನ ಸವಾರರು ಗಂಟೆಗಟ್ಟಲೆ ಸಂಚಾರ ದಟ್ಟಣೆಯಲ್ಲಿ ಸಿಲುಕಿ ಪರದಾಡುವಂತಾಯಿತು. ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದ್ದು, ಬಿಬಿಎಂಪಿ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮಳೆಯ ಅಬ್ಬರಕ್ಕೆ ನಗರದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಬೆಂಗಳೂರಿನಲ್ಲಿ ಭಾರೀ ಮಳೆ: ರಸ್ತೆಗಳು ಜಲಾವೃತ Read More »

ಜಾಲ್ಸೂರು ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷರಾಗಿ ಜಾಕೆ ಸದಾನಂದ-ಸಂಚಾಲಕರಾಗಿ ಸದಾನಂದ ಮಾವಜಿ ಪುನರಾಯ್ಕೆ

ಸುಳ್ಯ: ಜಾಲ್ಸೂರು ಪಯಸ್ವಿನಿ ಎಜ್ಯುಕೇಶನ್ ಸೊಸೈಟಿಯ ೨೦೨೬-೨೭ನೇ ಸಾಲಿನ ಅಧ್ಯಕ್ಷರಾಗಿ ಜಾಕೆ ಸದಾನಂದ, ಸಂಚಾಲಕರಾಗಿ ಸದಾನಂದ ಮಾವಜಿ ಪುನರಾಯ್ಕೆಯಾದರು.ಜಾಲ್ಸೂರು ಪಯಸ್ವಿನಿ ಪ್ರೌಢ ಶಾಲೆಯಲ್ಲಿ ಅಧ್ಯಕ್ಷ ಜಾಕೆ ಸದಾನಂದ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಆಯ್ಕೆ ಸಭೆ ನಡೆಯಿತು.ಖಜಾಂಜಿಯಾಗಿ ಶ್ರೀನಿವಾಸ ಭಟ್ ಡಿ., ಉಪಾಧ್ಯಕ್ಷರಾಗಿ ರಾಮಚಂದ್ರ ಬುಡ್ಲೆಗುತ್ತು, ಜತೆಕಾರ್ಯದರ್ಶಿಯಾಗಿ ಜಯರಾಮ ರೈ ಕೆ., ನಿರ್ದೇಶಕರುಗಳಾಗಿ ಎ.ದೇರಣ್ಣ ಗೌಡ, ರಾಮಚಂದ್ರ ಎಂ., ಶ್ಯಾಂಕುಮಾರ್ ಎಂ.ಎಸ್., ಮೋನಪ್ಪ ಕೆ.ಎಂ., ವಸಂತ ಕೆ.ಎಸ್., ಜನಾರ್ದನ ಗೌಡ ಬರೆಮೇಲು,

ಜಾಲ್ಸೂರು ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷರಾಗಿ ಜಾಕೆ ಸದಾನಂದ-ಸಂಚಾಲಕರಾಗಿ ಸದಾನಂದ ಮಾವಜಿ ಪುನರಾಯ್ಕೆ Read More »

ಕಿರ್ಲಾಯ : ಕಾಡಾನೆಗಳಿಂದ ಕೃಷಿ ನಾಶ

ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಿರ್ಲಾಯ ಭಾಗದಲ್ಲಿ ಜೂ.1ರಂದು ರಾತ್ರಿ ಕಾಡಾನೆಗಳು ತೋಟಗಳಿಗೆ ದಾಳಿ ಮಾಡಿ ಅಪಾರ ಕೃಷಿ ನಾಶ ಪಡಿಸಿದ ಘಟನೆ ವರದಿಯಾಗಿದೆ.ಈ ಭಾಗದ ಕಿರ್ಲಾಯ ಕಿಶೋರ್ ಕುಮಾರ್ ಅವರಿಗೆ ಸೇರಿದ ಮೂರು ತೆಂಗಿನ ಮರ,ಒಂದು ಜೀಕುಜ್ಜೆ ಮರ, ಇಪ್ಪತ್ತು ಬಾಳೆ ಗಿಡಗಳನ್ನು ನಾಶ ಮಾಡಿವೆ.ಅಲ್ಲದೆ ನೆರೆಯ ಕೃಷಿಕರಾದ ಗಣೇಶ ಕಿರ್ಲಾಯ,ಕೆ.ಆರ್.ದಿನೇಶ,ಹರೀಪ್ರಸಾದ್ ಕಲ್ಲುಗದ್ದೆ,ನಾಗಪ್ಪ ಗೌಡ ಗುಂಡ್ಲ ಇತರ ತೋಟಗಳಿಗೆ ಆನೆಗಳು ನುಗ್ಗಿ ಕೃಷಿ ನಾಶ ಮಾಡಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ‌.

ಕಿರ್ಲಾಯ : ಕಾಡಾನೆಗಳಿಂದ ಕೃಷಿ ನಾಶ Read More »

ಸುಳ್ಯದ ಕಲ್ಕುಡ ದೈವಸ್ಥಾನಕ್ಕೆ ಒಂದು ಕೇಜಿ ಬೆಳ್ಳಿ ಹರಕೆ ಒಪ್ಪಿಸಿದ ದಂಪತಿ

ಸುಳ್ಯ ನಾವೂರು ಕಲ್ಕುಡ ದೈವಸ್ಥಾನಕ್ಕೆ ನಿವೃತ್ತ ಶಿಕ್ಷಕರೊಬ್ಬರು 2.60 ಲಕ್ಷ ಮೌಲ್ಯದ 1 ಕೆ.ಜಿ ಬೆಳ್ಳಿಯನ್ನು ಹರಕೆಯ ರೂಪದಲ್ಲಿ ನೀಡಿದ್ದಾರೆ.ಸುಳ್ಯ ಅಂಬಟೆಡ್ಕದ ನಿವಾಸಿಯಾಗಿರುವ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ನಿವೃತ್ತ ಶಿಕ್ಷಕರಾದ ವಿಶಾಲಾಕ್ಷ ಮತ್ತು ಮುಕ್ತಾ ದಂಪತಿಯವರು ಹರಕೆಯ ಬಾಬ್ತು ದೈವದ ಮಣೆ ಮಂಚದ ಹೊದಿಕೆಗಾಗಿ ಸುಮಾರು ರೂ. 2.60 ಲಕ್ಷ ಮೌಲ್ಯದ ಬೆಳ್ಳಿಯನ್ನು ಒಪ್ಪಿಸಿದರು‌.ಈ ಸಂದರ್ಭದಲ್ಲಿ ಧರ್ಮ ದರ್ಶಿ ಮಂಡಳಿಯ ಸದಸ್ಯರು, ಜೀರ್ಣೋದ್ಧಾರ ಸಮಿತಿಯವರು ಉಪಸ್ಥಿತರಿದ್ದರು.

ಸುಳ್ಯದ ಕಲ್ಕುಡ ದೈವಸ್ಥಾನಕ್ಕೆ ಒಂದು ಕೇಜಿ ಬೆಳ್ಳಿ ಹರಕೆ ಒಪ್ಪಿಸಿದ ದಂಪತಿ Read More »

ನಾಗತೀರ್ಥ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಾರಂಭೋತ್ಸವ

ಪಂಜ ನಾಗತೀರ್ಥ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವವು ನಡೆಯಿತು. ವಿದ್ಯಾರ್ಥಿಗಳನ್ನು ಮತ್ತು ಅತಿಥಿಗಳನ್ನು ಮೆರವಣಿಗೆಯ ಮೂಲಕ ಸ್ವಾಗತಿಸಲಾಯಿತು. ಶಾಲಾ ಹೊಸ ಕಟ್ಟಡವನ್ನು ಅತಿಥಿಗಳು ಉದ್ಘಾಟನೆ ಮಾಡಿದರು. ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಮಂಡಳಿಯ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರು ದೀಪೋಜ್ವಲನೆಯ ಮೂಲಕ ಶಾಲಾ ಪ್ರಾರಂಭೋತ್ಸವಕೆ ಚಾಲನೆಯನ್ನು ನೀಡಿದರು. ವಿದ್ಯಾರ್ಥಿಗಳಿಗೆ ಕಬ್ ಬುಲ್ ಬುಲ್ ಸಮವಸ್ತ್ರ ಮತ್ತು ಯೋಗ ಮ್ಯಾಟ್ ವಿತರಿಸುವುದರ ಮೂಲಕ ಹಾಗೂ ವಿದ್ಯಾರ್ಥಿಗಳನ್ನು ಕರಕುಶಲ ಕಲೆಯಲ್ಲಿ ಪರಿಣಿತರನ್ನಾಗಿಸಲು ಹೊಲಿಗೆ ತರಬೇತಿಗೆ ಬೇಕಾದ ಹೊಲಿಗೆ

ನಾಗತೀರ್ಥ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಾರಂಭೋತ್ಸವ Read More »

ಸ್ಟಾರ್ ಟೈಲ್ಸ್ ನ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಲ್ಲೇ ಅತೀ ದೊಡ್ಡ ಶೋರೂಂ ಸುಳ್ಯದಲ್ಲಿ ಶುಭಾರಂಭ

ಸ್ಟಾರ್ ಟೈಲ್ಸ್ ಗ್ರೂಪ್ ಆಫ್ ಕಂಪೆನಿಯ 4ನೇಯ ನೂತನ ಶೋರೂಂ ಮತ್ತು ದಾಸ್ತನು ಮಳಿಗೆ ಜೂನ್ 1 ರಂದು ಸುಳ್ಯದಲ್ಲಿ ಶುಭಾರಂಭಗೊಂಡಿದೆ.ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‌ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಹಾಗೂ ಸುಳ್ಯದ ಸೈಂಟ್ ಬ್ರಿಜಿಡ್ಸ್ ಚರ್ಚ್‌ನ ಧರ್ಮಗುರು ಫಾ.ಅಲ್ವಿನ್ ಡಿ‌.ಕುನ್ಹಾ ಟೈಲ್ಸ್ ಮಳಿಗೆ ಉದ್ಘಾಟಿಸಿದರು.ಸಯ್ಯದ್ ಸಹೀರ್ ತಂಗಳ್ ಕುಂಬೋಳ್ ಮಳಿಗೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಶುಭ ಹಾರೈಸಿದರು. ಸುಳ್ಯ ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಸ್ಟಾರ್ ಟೈಲ್ಸ್ ಮಳಿಗೆಯ ಮಾಲಕ ರಿಯಾಝ್.ಪಿ.ಬಿ, ಸ್ಟಾರ್ ಗ್ರೂಪ್‌ನ ಸ್ಥಾಪಕ

ಸ್ಟಾರ್ ಟೈಲ್ಸ್ ನ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಲ್ಲೇ ಅತೀ ದೊಡ್ಡ ಶೋರೂಂ ಸುಳ್ಯದಲ್ಲಿ ಶುಭಾರಂಭ Read More »

ಸವಣೂರು : ಅಕ್ರಮವಾಗಿ ಗೋವುಗಳನ್ನು ಕಡಿದು ಮಾಂಸ ಮಾಡುತ್ತಿದ್ದ ಮೂವರು ಆರೋಪಿಗಳ ಬಂಧನ

ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸವಣೂರು ಗ್ರಾಮದ ಮಾಂತೂರು ಮುಂಡತಡ್ಕದಲ್ಲಿ ತೋಟವೊಂದರಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಕಡಿದು ಮಾಂಸ ಮಾಡುತ್ತಿದ್ದ ಅಡ್ಡೆಗೆ ಬೆಳ್ಳಾರೆ ಪೊಲೀಸರು ದಾಳಿ ನಡೆಸಿದ್ದಾರೆ. ಉಪ ನಿರೀಕ್ಷಕ ಸಂತೋಷ್ ಬಿ. ಪಿ. ಅವರಿಗೆ ಲಭಿಸಿದ ಖಚಿತ ಮಾಹಿತಿ ಮೇರೆಗೆ, ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿದಾಗ ಜಾನುವಾರನ್ನು ವಧೆ ಮಾಡಿ ಮಾಂಸ ಮಾಡುತ್ತಿರುವುದು ಪತ್ತೆಯಾಗಿದೆ. ಈ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸವಣೂರು : ಅಕ್ರಮವಾಗಿ ಗೋವುಗಳನ್ನು ಕಡಿದು ಮಾಂಸ ಮಾಡುತ್ತಿದ್ದ ಮೂವರು ಆರೋಪಿಗಳ ಬಂಧನ Read More »

ಆರ್‌ಸಿಬಿ ಐತಿಹಾಸಿಕ ಐಪಿಎಲ್‌ ಚಾಂಪಿಯನ್ಸ್

ಗುಜರಾತ್ ಟೈಟಾನ್ಸ್ ವಿರುದ್ಧದ ರೋಮಾಂಚನಕಾರಿ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಜಯ ಸಾಧಿಸಿ, ಐಪಿಎಲ್ 2026ರ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ. ವಿರಾಟ್ ಕೊಹ್ಲಿ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಆರ್‌ಸಿಬಿ 156 ರನ್‌ಗಳ ಗುರಿಯನ್ನು 18 ಓವರ್‌ಗಳಲ್ಲಿ ಯಶಸ್ವಿಯಾಗಿ ಬೆನ್ನಟ್ಟಿತು. ಇದರೊಂದಿಗೆ ಕೋಟ್ಯಂತರ ಅಭಿಮಾನಿಗಳ “ಈ ಸಲಾನು ಕಪ್ ನಮ್ಹು” ಕನಸು ಕೊನೆಗೂ ನನಸಾಗಿದೆ. RCB ಪರ ವೆಂಕಟೇಶ್‌ ಅಯ್ಯರ್ 32, ವಿರಾಟ್ 75 ರನ್ ಗಳಿಸಿ ಮಿಂಚಿದರು.

ಆರ್‌ಸಿಬಿ ಐತಿಹಾಸಿಕ ಐಪಿಎಲ್‌ ಚಾಂಪಿಯನ್ಸ್ Read More »

ಜೇಸಿಐ ಸುಳ್ಯ ಪಯಸ್ವಿನಿ ಘಟಕ್ಕಕ್ಕೆ ಜೇಸಿಐ ಮಧ್ಯಂತರ ಸಮ್ಮೇಳನ(MIDCON)ನಲ್ಲಿ ಡೈಮಂಡ್ ಘಟಕ ಪ್ರಶಸ್ತಿ ಯೊಂದಿಗೆ, ಔಟ್ ಸ್ಟಾಂಡಿಂಗ್ ಘಟಕ ಪ್ರಶಸ್ತಿ, ಮೌರ್ಯ ದಳಪತಿ ಪುರಸ್ಕಾರ

ಘಟಕದ ವೈಯಕ್ತಿಕ ಅಭಿವೃದ್ಧಿ, ಸಮುದಾಯ ಸೇವೆ, ಮತ್ತು ನಾಯಕತ್ವ ಕ್ಷೇತ್ರಗಳಲ್ಲಿನ ಅತ್ಯುತ್ತಮ ಸಂಘಟನೆ ಹಾಗೂ ಸಾಧನೆಗಾಗಿ ಹಲವು ಪ್ರಶಸ್ತಿಗಳನ್ನು ಇಂದು ಕಾಪುವಿನ ಇನಾಸನ್ ಸಭಾಂಗಣದಲ್ಲಿ ನಡೆದ ವಲಯ ಮಟ್ಟದ ಮಧ್ಯಂತರ ಸಮ್ಮೇಳನದಲ್ಲಿ ವಲಯಾಧ್ಯಕ್ಷರಾದ ಜೆ.ಎಫ್. ಎಸ್‌. ಸಂತೋಷ್ ಶೆಟ್ಟಿಯವರ ಉಪಸ್ಥಿತಿಯಲ್ಲಿ ಹಲವಾರು ಪ್ರಶಸ್ತಿ ಪುರಸ್ಕಾರಗಳ ಮನ್ನಣೆಯನ್ನು ಘಟಕಾಧ್ಯಕ್ಷರಾದ ಜೆ.ಎಫ್.ಎಂ. ಲತಾಶ್ರೀ ಸುಪ್ರೀತ್ ಮೋಂಟಡ್ಕರವರ ತಂಡ ಪಡೆದುಕೊಂಡಿದ್ದಾರೆ‌.ರೀಜನ್ ಬಿ ವಲಯಮಟ್ಟದ ಜೇಸಿಐ ಔಟ್ ಸ್ಟಾಂಡಿಂಗ್ ಘಟಕ ದಲ್ಲಿ ರನ್ನರ್ ಆಫ್, ಔಟ್ ಸ್ಟಾಂಡಿಂಗ್ ಪ್ರೆಸಿಡೆಂಟ್ ದ್ವಿತೀಯ ಪ್ರಶಸ್ತಿ, ಡೈಮಂಡ್

ಜೇಸಿಐ ಸುಳ್ಯ ಪಯಸ್ವಿನಿ ಘಟಕ್ಕಕ್ಕೆ ಜೇಸಿಐ ಮಧ್ಯಂತರ ಸಮ್ಮೇಳನ(MIDCON)ನಲ್ಲಿ ಡೈಮಂಡ್ ಘಟಕ ಪ್ರಶಸ್ತಿ ಯೊಂದಿಗೆ, ಔಟ್ ಸ್ಟಾಂಡಿಂಗ್ ಘಟಕ ಪ್ರಶಸ್ತಿ, ಮೌರ್ಯ ದಳಪತಿ ಪುರಸ್ಕಾರ Read More »

error: Content is protected !!
Scroll to Top