Author name: Tejas

ಸಂಪಾಜೆಯಲ್ಲಿ ಗ್ರಹಜ್ಯೋತಿ ದಾಖಲೆಗಳ ಪುನರ್ ಪರಿಶೀಲನಾ ಕೇಂದ್ರಕ್ಕೆ ಬೇಟಿ ನೀಡಿದ ವಿವಿಧ ನಾಯಕರುಗಳು

ರಾಜ್ಯ ಸರಕಾರದ ಗ್ಯಾರೆಂಟಿಗಳಲ್ಲಿ ಒಂದಾದ ಗ್ರಹ ಜ್ಯೋತಿಯನ್ನು ಕೆಲವು ಅನರ್ಹರು ಪಡೆಯುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ ಅರ್ಹರ ಆಯ್ಕೆಗಾಗಿ ಪುನರ್ ಪರಿಶೀಲನೆಗೆ ಆದೇಶ ನೀಡಿದ್ದು ಅದರಂತೆ ಸಂಪಾಜೆಯ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಕೂಡಾ ದಾಖಲೆಗಳ ಪುನರ್ ಪರಿಶೀಲನೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ಇಂದು ರಾಜ್ಯ ಕ.ಕ.ಮತ್ತು ಇ.ನಿ.ಕಾ.ಕ ಮಂಡಳಿ ನಿರ್ದೇಶಕ ಜಾನಿ.ಕೆ.ಪಿ ಹಾಗೂ ತಾಲೂಕು ಗ್ಯಾರೆಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ,ಸಂಪಾಜೆ ಗ್ರಾಮ ಪಂಚಾಯತ್ ಮಾಜೀ ಅಧ್ಯಕ್ಷರಾಗಿದ್ದ ಮಹಮ್ಮದ್ ಕುಂಞಿ ಗೂನಡ್ಕ, ಬೇಟಿ ನೀಡಿರುತ್ತಾರೆ […]

ಸಂಪಾಜೆಯಲ್ಲಿ ಗ್ರಹಜ್ಯೋತಿ ದಾಖಲೆಗಳ ಪುನರ್ ಪರಿಶೀಲನಾ ಕೇಂದ್ರಕ್ಕೆ ಬೇಟಿ ನೀಡಿದ ವಿವಿಧ ನಾಯಕರುಗಳು Read More »

ಕೋಲ್ಚಾರು ರಸ್ತೆ ಕಾಮಗಾರಿಗೆ ಶಾಸಕರಿಂದ ಗುದ್ದಲಿ ಪೂಜೆ

ಅರಂತೋಡು, ಜು. 14 :ಕೋಲ್ಚಾರು ಬಲ್ಯಾಡಿ ಸಂಪರ್ಕ ರಸ್ತೆ ಕಾಂಕ್ರೀಟ್‌ಕರಣಕ್ಕೆ ಸುಳ್ಯ ಶಾಸಕರಾದ ಭಾಗೀರಥಿ ಮುರುಳ್ಯರವರು ಬಲ್ಯಾಡಿಯಲ್ಲಿ ಗುದ್ದಲಿಪೂಜೆ ನೆರವೇರಿಸಿದರು.ಈ ಸಂದರ್ಭದಲ್ಲಿ ಸುಳ್ಯ ತಾಲೂಕು‌ ಪಂಚಾಯತ್ ‌ಮಾಜಿ ಅಧ್ಯಕ್ಷರಾದ ಜಯಪ್ರಕಾಶ್ ಕುಂಚಡ್ಕ, ಸಿ.ಎ ನಿರ್ದೇಶಕರಾದ ಚಿದಾನಂದ ಕೋಲ್ಚಾರು, ಬಿಜೆಪಿ ಜಾಲ್ಸೂರು ಶಕ್ತಿ ಕೇಂದ್ರದ ಕಾರ್ಯದರ್ಶಿ ಸುದರ್ಶನ ಪಾತಿಕಲ್ಲು,ಆಲೆಟ್ಟಿ ಪಂಚಾಯತ್ ಮಾಜಿ ಅಧ್ಯಕ್ಷರಾದ ಧನಂಜಯ ಕುಂಚಡ್ಕ, ಪುರುಷೋತ್ತಮ ಕೋಲ್ಚಾರು,ಮಾಜಿ ಉಪಾಧ್ಯಕ್ಷ ದಿನೇಶ್ ಕಣಕ್ಕೂರು ಮಾಜಿ ಸದಸ್ಯರಾದ ಸೀತಾರಾಮ ಕೊಲ್ಲರಮೂಲೆ. ಬಿಜೆಪಿ ಯುವಮೋರ್ಚಾ ತಾಲೂಕು ಕಾರ್ಯದರ್ಶಿ ಪ್ರದೀಪ್ ಕೊಲ್ಲರಮೂಲೆ ಬಿಜೆಪಿ

ಕೋಲ್ಚಾರು ರಸ್ತೆ ಕಾಮಗಾರಿಗೆ ಶಾಸಕರಿಂದ ಗುದ್ದಲಿ ಪೂಜೆ Read More »

ದೇವಾಲಯಗಳ ಕಾಣಿಕೆ ಹುಂಡಿಗಳ ಹಣದ ದುರುಪಯೋಗವನ್ನು ತಡೆಯಲು 19 ಅಂಶಗಳ ಮಾರ್ಗಸೂಚಿ ಬಿಡುಗಡೆ

ದೇವಸ್ಥಾನಗಳ ಹುಂಡಿಗಳಲ್ಲಿ ಭಕ್ತರು ನೀಡುವ ಕಾಣಿಕೆಯ ಭದ್ರತೆಗಾಗಿ ಮತ್ತು ಹಣದ ದುರುಪಯೋಗವನ್ನು ತಡೆಯಲು ಕರ್ನಾಟಕ ಸರ್ಕಾರವು ಕಟ್ಟುನಿಟ್ಟಾದ 19 ಅಂಶಗಳ ಮಾರ್ಗಸೂಚಿ (SOP) ಬಿಡುಗಡೆ ಮಾಡಿದೆ. ಸಿಸಿಟಿವಿ ಕಣ್ಗಾವಲು, ಡಿಜಿಟಲ್ ಪಾವತಿ ವ್ಯವಸ್ಥೆ ಮತ್ತು ಅಧಿಕಾರಿಗಳ ನೇತೃತ್ವದಲ್ಲಿ ಹಣ ಎಣಿಕೆಗೆ ಕಡ್ಡಾಯ ಆದೇಶ ನೀಡಲಾಗಿದೆ.ಮುಖ್ಯವಾಗಿ ಅನುಸರಿಸಬೇಕಾದ ಕ್ರಮಗಳು ಮತ್ತು ಭದ್ರತಾ ವ್ಯವಸ್ಥೆಗಳು ಈ ಕೆಳಗಿನಂತಿವೆ:ಸಿಸಿಟಿವಿ ಕಣ್ಗಾವಲು: ಎಲ್ಲಾ ಹುಂಡಿಗಳಿಗೆ ನಾಲ್ಕು ದಿಕ್ಕುಗಳಿಂದ ಕಾಣುವಂತೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದು ಕಡ್ಡಾಯವಾಗಿದೆ.ನೇರ ಮೇಲ್ವಿಚಾರಣೆ: ಕರ್ಪೂರ ಹಚ್ಚಿ ಸಿಸಿಟಿವಿ ಮಸುಕಾಗಿಸುವುದನ್ನು ತಡೆಯಲು

ದೇವಾಲಯಗಳ ಕಾಣಿಕೆ ಹುಂಡಿಗಳ ಹಣದ ದುರುಪಯೋಗವನ್ನು ತಡೆಯಲು 19 ಅಂಶಗಳ ಮಾರ್ಗಸೂಚಿ ಬಿಡುಗಡೆ Read More »

ಜುಲೈ 16 ; ಅರಂತೋಡು ಕೊಡಂಕೇರಿ ಕೊರಗಜ್ಜ ದೈವಸ್ಥಾನದಲ್ಲಿ ಅಗೇಲು ಸೇವೆ

ಸ್ವಾಮಿ ಕೊರಗಜ್ಜ ದೈವಸ್ಥಾನ ಅರಂತೋಡು ಕೊಡಂಕೇರಿ ಯಲ್ಲಿ ದಿನಾಂಕ 16-07-2026 ರ ಕರ್ಕಟಕ ಸಂಕ್ರಮಣದಂದು ಕೊರಗಜ್ಜ ದೈವದ ಅಗೇಲು ಸೇವೆ ರಾತ್ರಿ ಗಂಟೆ 7:00 ಕ್ಕೆ ನಡೆಯಲಿದೆ. ನಂತರ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.ವಿ. ಸೂ : ಅಗೇಲು ಸೇವೆ ಮಾಡಿಸುವವರು ದಿನ ಮುಂಚಿತವಾಗಿ ತಿಳಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿಸಂಪರ್ಕಿಸಿ:7022077809

ಜುಲೈ 16 ; ಅರಂತೋಡು ಕೊಡಂಕೇರಿ ಕೊರಗಜ್ಜ ದೈವಸ್ಥಾನದಲ್ಲಿ ಅಗೇಲು ಸೇವೆ Read More »

ಸಂಪಾಜೆ ವಲಯ ಕಾಂಗ್ರೆಸ್ ವತಿಯಿಂದ SIR ಪ್ರಗತಿ ಪರಿಶೀಲನೆಗಾಗಿ ಗ್ರಾಮದ ವಿವಿಧ ವಾರ್ಡುಗಳಿಗೆ ಬಿರುಸಿನ ಭೇಟಿ

ಸಂಪಾಜೆ: ಜು: 13 ವಲಯ ಕಾಂಗ್ರೆಸ್ ನಾಯಕರು ಮತ್ತು ಬಿ.ಎಲ್.ಒ-2 ರವರ ವತಿಯಿಂದ SIR ಪ್ರಗತಿ ಪರಿಶೀಲನೆಗಾಗಿ ಗ್ರಾಮದ ವಿವಿಧ ವಾರ್ಡುಗಳಿಗೆ ಭೇಟಿ ನೀಡಲಾಯಿತು. ಈ ಸಂದರ್ಭದಲ್ಲಿ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಬಿ.ಎಲ್.ಓ ರವರನ್ನು ಸಂಪರ್ಕಿಸಿ ಪರಿಹಾರಕ್ಕೆ ಸೂಚಿಸಲಾಯಿತು. ಈ ತಂಡದಲ್ಲಿ ಕೆ.ಪಿ.ಸಿ.ಸಿ. ಪ್ರಚಾರ ಸಮಿತಿಯ ಮುಖ್ಯ ಸಂಯೋಜಕರಾದ ಜಾನಿ.ಕೆ.ಪಿ, ದ.ಕ.ಜಿಲ್ಲಾ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಮಹಮ್ಮದ್ ಕುಂಞಿ ಗೂನಡ್ಕ , ದ.ಕ.ಜಿಲ್ಲಾ ಅಸಂಘಟಿತ ಕಾರ್ಮಿಕ ಜಿಲ್ಲಾಸಮಿತಿ ಪ್ರದಾನ ಕಾರ್ಯದರ್ಶಿ ಜ್ಞಾನಶೀಲನ್ ರಾಜು, ಸಂಪಾಜೆ ವಲಯ ಕಾಂಗ್ರೆಸ್

ಸಂಪಾಜೆ ವಲಯ ಕಾಂಗ್ರೆಸ್ ವತಿಯಿಂದ SIR ಪ್ರಗತಿ ಪರಿಶೀಲನೆಗಾಗಿ ಗ್ರಾಮದ ವಿವಿಧ ವಾರ್ಡುಗಳಿಗೆ ಬಿರುಸಿನ ಭೇಟಿ Read More »

ದಬ್ಬಡ್ಕ ಕಾಂತಬೈಲು : ಶ್ರೀ ರಾಮ ಯುವಕ ಸಂಘ (ರಿ) ನೇತೃತ್ವದಲ್ಲಿ ಶ್ರಮ ಸೇವೆ

ದಬ್ಬಡ್ಕ ಕಾಂತಬೈಲು ಶ್ರೀ ರಾಮ ಯುವಕ ಸಂಘ ಇವರ ನೇತ್ರತ್ವದಲ್ಲಿ ಜು.12ರಂದು ವಿದ್ಯುತ್ ತಂತಿಗಳಿಗೆ ತಾಗಿಕೊಂಡಿರುವಂತಹ ಮರದ ಕೊಂಬೆಗಳನ್ನು ಹಾಗೂ ರಸ್ತೆಯ ಎರಡು ಬದಿಯ ಬೆಳೆದಿರುವ ಚಿಕ್ಕ ಗಿಡಗಳನ್ನು ಕಡೆಯುವ ಶ್ರಮ‌ ಸೇವೆ ನಡೆಸಲಾಯಿತು.ಗ್ರಾಮ ಪಂಚಾಯತ್ ಚೆಂಬು ಸದಸ್ಯರುಗಳ, ಸಹಕಾರಿ ಸಂಘದ ನಿರ್ದೇಶಕರುಗಳ, ಹಾಗೂ ಅರಣ್ಯ ಸಮಿತಿ ಚೆಂಬು ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಸಂಪಾಜೆ ಹಾಗೂ ಊರಿನ ಎಲ್ಲಾ ಜನರ ಸಹಯೋಗದೊಂದಿಗೆ ನಡೆದ ಶ್ರಮ ಸೇವೆಯಲ್ಲಿ ಜನರು ಪ್ರತ್ಯಕ್ಷ ಹಾಗೂ ಕೆಲವು ಜನರು ಪರೋಕ್ಷವಾಗಿ

ದಬ್ಬಡ್ಕ ಕಾಂತಬೈಲು : ಶ್ರೀ ರಾಮ ಯುವಕ ಸಂಘ (ರಿ) ನೇತೃತ್ವದಲ್ಲಿ ಶ್ರಮ ಸೇವೆ Read More »

ನಿಡ್ಯಮಲೆ ಬಾಲಕೃಷ್ಣ ಎನ್. ಪಿ ನಿಧನ

ಪೆರಾಜೆ ಗ್ರಾಮದ ನಿಡ್ಯಮಲೆ ಬಾಲಕೃಷ್ಣ ಎನ್. ಪಿ (64:ವರ್ಷ) ಮೆದುಳಿನ ರಕ್ತಸ್ರಾವದಿಂದ ಜು.13ರಂದು ಆಸ್ಪತ್ರೆಯಲ್ಲಿ ನಿಧನರಾದರು.ಮೃತರು ಪತ್ನಿ ಯಶೋಧ, ಪುತ್ರರಾದ ಶಿವಪ್ರಸಾದ್‌, ಸಚಿನ್, ಪುತ್ರಿ ಮಮತಾ ಮುಕುಂದ ನಾರ್ಕೋಡು, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.

ನಿಡ್ಯಮಲೆ ಬಾಲಕೃಷ್ಣ ಎನ್. ಪಿ ನಿಧನ Read More »

ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ಇಬ್ಬರು ಆರೋಪಿಗಳ ಬಂಧನ

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್.ಐ.ಎ. ಅಧಿಕಾರಿಗಳು ಬೆಂಗಳೂರು ಮತ್ತು ಕೇರಳದ ಕೊಚ್ಚಿಯಲ್ಲಿ ಏಕಕಾಲದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ಕೊಡಗು ಜಿಲ್ಲೆಯ ಸೋಮರಪೇಟೆ ನಿವಾಸಿ ಅಬ್ದುಲ್ ನಾಸೀರ್(41), ಬೆಳ್ತಂಗಡಿ ತಾಲೂಕಿನ ನೌಷದ್(32) ಬಂಧಿತ ಆರೋಪಿಗಳು.ಆರೋಪಿಗಳು ತಲೆಮರೆಸಿಕೊಳ್ಳಲು ಸಹಕರಿಸಿದ ಆರೋಪದ ಮೇಲೆ ಇವರನ್ನು ಬಂಧಿಸಲಾಗಿದೆ.

ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ಇಬ್ಬರು ಆರೋಪಿಗಳ ಬಂಧನ Read More »

ಶ್ರೀ ಶಾರದಾಂಬಾ ಭಜನಾ ಮಂದಿರಕ್ಕೆ ನಿವೇಶನ ಖರೀದಿಯ ದೇಣಿಗೆ ಸಂಗ್ರಹಣದ ಕರಪತ್ರ ಬಿಡುಗಡೆ

ಶ್ರೀ ಶಾರದಾಂಬ ಭಜನಾ ಮಂದಿರ ಪಂಜ ಇದರ ಅಭಿವೃದ್ಧಿ ಹಾಗೂ ನೂತನ ನಿವೇಶನ ಖರೀದಿಗಾಗಿ ದೇಣಿಗೆ ಸಂಗ್ರಹಣೆಯ ಕರಪತ್ರವನ್ನು ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಕಾನತ್ತೂರು ಇವರು ಬಿಡುಗಡೆಗೊಳಿಸಿ ಪ್ರಥಮ ದೇಣಿಗೆಯನ್ನು ನೀಡಿ ಶುಭ ಹಾರೈಸಿದರು.ವೇದಿಕೆಯಲ್ಲಿ ಶಾರದಾಂಬಾ ಭಜನಾ ಮಂಡಳಿಯ ಅಧ್ಯಕ್ಷರಾದ ಬಾಲಕೃಷ್ಣ ಪುತ್ಯ, ನಿವೇಶನ ಖರೀದಿ ಸಂಚಾಲಕರಾದ ಲೋಕೇಶ್ ಬರೆಮೇಲು, ಕಾರ್ಯದರ್ಶಿ ಗುರುಪ್ರಸಾದ್ ತೋಟ, ಜೊತೆ ಕಾರ್ಯದರ್ಶಿ ರಾಜಕುಮಾರ್ ಬೇರ್ಯ ಸದಸ್ಯರಾದ ಕುಶಾಲಪ್ಪ ನೆಲ್ಲಿಕಟ್ಟೆ,

ಶ್ರೀ ಶಾರದಾಂಬಾ ಭಜನಾ ಮಂದಿರಕ್ಕೆ ನಿವೇಶನ ಖರೀದಿಯ ದೇಣಿಗೆ ಸಂಗ್ರಹಣದ ಕರಪತ್ರ ಬಿಡುಗಡೆ Read More »

ಅಡ್ತಲೆ ಕೃಷ್ಣವೇಣಿ ನಿಧನ

ಅರಂತೋಡು ಗ್ರಾಮದ ಅಡ್ತಲೆ ಕುಟುಂಬದ ದಿ. ನಾಗಪ್ಪ ಗೌಡರ ಪತ್ನಿ ಕೃಷ್ಣವೇಣಿ ( 77) ಜು.11ರಂದು ಸ್ಚಗ್ರಹದಲ್ಲಿ ನಿಧನರಾದರು. ಪುತ್ರ ಬಾಲಚಂದ್ರ, ಪುತ್ರಿ ವನಿತಾ, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂದುಗಳನ್ನು ಅಗಲಿದ್ದಾರೆ.

ಅಡ್ತಲೆ ಕೃಷ್ಣವೇಣಿ ನಿಧನ Read More »

error: Content is protected !!
Scroll to Top