ಪ್ರಚಲಿತ

ಆಂಕರ್‌ ಅನುಶ್ರೀ ಹೇಳಿದ ಮೆಂಟಲ್‌ ರೇಪ್‌ ಮತ್ತು ಸಾಮಾನ್ಯ ಹೆಣ್ಣು ಮಕ್ಕಳ ಕತೆ

ಪಾಡ್‌ಕಾಸ್ಟ್‌ ಒಂದರಲ್ಲಿ ಆಂಕರ್‌ ಅನುಶ್ರೀ ಮಾತಾಡಿದ ವೀಡಿಯೋವೊಂದು ಎಲ್ಲೆಡೆ ವೈರಲ್ ಆಗುತ್ತಿದೆ. ಹೆಣ್ಣು ಮಕ್ಕಳನ್ನು ಅದರಲ್ಲೂ ಸೆಲೆಬ್ರಿಟಿ ಹೆಣ್ಣು ಮಕ್ಕಳಿಗೆ ಸೋಶಿಯಲ್‌ ಮೀಡಿಯಾದಲ್ಲಿ ಕೆಲವರು ಎಷ್ಟು ತುಚ್ಚವಾಗಿ ಕಾಮೆಂಟ್‌ ಮಾಡುತ್ತಾರೆ ಎಂಬುದನ್ನು ಅನುಶ್ರೀಯವರು ಹೇಳಿದ್ದರು. ಕೆಲವೊಂದು ಅನಾಗರಿಕ ಪದ ಬಳಕೆಗಳಿಂದ ಮನಸ್ಸಿಗಾಗುವ ಸಂಕಟವನ್ನು ವಿವರಿಸುತ್ತಾ ಫಿಸಿಕಲ್‌ ರೇಪ್‌ನಂತೆಯೇ ಮೆಂಟಲ್‌ ರೇಪ್‌ ಎಷ್ಟು ಕ್ರೂರವಾಗಿ ನಡೆಯುತ್ತಿದೆ ಎಂಬುದನ್ನು ಹೇಳಿದ್ದರು. ಅನುಶ್ರೀ ಹೇಳಿದ ಈ ಮಾತುಗಳು ಕೇವಲ ಅನುಶ್ರೀಗಷ್ಟೇ ಅಲ್ಲ, ನಮ್ಮಂತ ಸಾಮಾನ್ಯ ಹೆಣ್ಣು ಮಕ್ಕಳಿಂದ ಹಿಡಿದು ಸಂಸ್ಕಾರವಂತ ಎಲ್ಲಾ […]

ಆಂಕರ್‌ ಅನುಶ್ರೀ ಹೇಳಿದ ಮೆಂಟಲ್‌ ರೇಪ್‌ ಮತ್ತು ಸಾಮಾನ್ಯ ಹೆಣ್ಣು ಮಕ್ಕಳ ಕತೆ Read More »

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ‌ ದೇವಳದಲ್ಲಿ ಜಾತ್ರೆ ಪ್ರಯುಕ್ತ ಉತ್ಸವ ಬಲಿ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದಲ್ಲಿ ಏ.13ರಂದು ಧ್ವಜಾರೋಹಣದ ಮೂಲಕ ಕಾಲಾವಧಿ ಜಾತ್ರೋತ್ಸವ ಆರಂಭಗೊಂಡಿದ್ದು ಏ.15ರಂದು ರಾತ್ರಿ ಉತ್ಸವ ಬಲಿ ನಡೆಯಿತು.ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಸಮಿತಿಯವರು ಮಾಜಿ ವ್ಯವಸ್ಥಾಪನಾ ಸಮಿತಿಯವರು,,ಜಾತ್ರೋತ್ಸವ ಸಮಿತಿಯವರು,ಜೀರ್ಣೋದ್ಧಾರ ಸಮಿತಿಯವರು ಸೀಮೆ ಭಕ್ತಾಧಿಗಳು ಉಪಸ್ಥಿತರಿದ್ದು ಉತ್ಸವ ಬಲಿಯಲ್ಲಿ ಭಾಗಿಯಾಗಿ ದೇವರ ದರ್ಶನ ಪಡೆದರು.

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ‌ ದೇವಳದಲ್ಲಿ ಜಾತ್ರೆ ಪ್ರಯುಕ್ತ ಉತ್ಸವ ಬಲಿ Read More »

ಅಮರ ಮುಡ್ನೂರು ಗ್ರಾಮದ ಮುಂಡಕಜೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ,ತುರ್ತು ಸ್ಪಂದಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು

ಅಮರ ಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಂಡಕಜೆಯಲ್ಲಿ ಕಳೆದ ಕೆಲವು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆಯಿಂದಾಗಿ ನಾಗರಿಕರು ಪರದಾಡುವಂತಾಗಿದ್ದು ಸ್ಥಳೀಯರ ಕೋರಿಕೆ ಮೇರೆಗೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಸ್ಥಳಕ್ಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜೊತೆಗೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯ ಕುರಿತು ಅವಲೋಕಿಸಿದರು. ನೀರಿನ ಟ್ಯಾಂಕಿಯಿಂದ ಬರುವ ಪೈಪ್ ತುಂಡಾಗಿರುವುದು ಮತ್ತು ಇಲ್ಲಿನ ಪಂಪ್ ಆಪರೇಟರ್ ಸರಿಯಾಗಿ ಕರ್ತವ್ಯ ನಿರ್ವಹಿಸದೇ ಇರುವ ಬಗ್ಗೆ ಸ್ಥಳೀಯರು ದೂರು ನೀಡಿದರು.ಪಂಚಾಯತ್ ಅಭಿವೃದ್ಧಿ ಅಧಿಕಾರಿಯೊಂದಿಗೆ ಕೂಡಲೇ ಸಮಸ್ಯೆ

ಅಮರ ಮುಡ್ನೂರು ಗ್ರಾಮದ ಮುಂಡಕಜೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ,ತುರ್ತು ಸ್ಪಂದಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು Read More »

ಪಂಜ : ದೇವಳದಲ್ಲಿ ವಿಷುಕಣಿ ಆಚರಣೆ

ಪಂಜ ಸೀಮೆ ಶ್ರೀ ಸಧಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದಲ್ಲಿ ವಿಷುಕಣಿ ಪೂಜೆ ಪೂರ್ವಹ್ನ ಜರುಗಿತು. ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತೂರ್, ವ್ಯವಸ್ಥಾಪನ ಸಮಿತಿ ಸದಸ್ಯರು ಹಾಗೂ ಊರ ಭಕ್ತರು ವಿಷು ಕಣಿ ನೋಡಿ ಪ್ರಸಾದ ಸ್ವೀಕರಿಸಿದರು

ಪಂಜ : ದೇವಳದಲ್ಲಿ ವಿಷುಕಣಿ ಆಚರಣೆ Read More »

ತೊಡಿಕಾನದಲ್ಲಿ ಮನರಂಜಿಸಿದ ನೂತನ‌ ಯಕ್ಷಗಾನ ಪ್ರಸಂಗ ವರ್ಣಪಲ್ಲಟ

ಸುಳ್ಯ ಸೀಮೆ ತೊಡಿಕಾನ ಶ್ರೀಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವ ಪ್ರಯುಕ್ತ ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ ಇದರ ಪ್ರಾಯೋಜಕತ್ವದಲ್ಲಿ ಶ್ರೀ ಕೋದಂಡರಾಮ ಕ್ರಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಮೇಳದವರಿಂದ ಏ.13ರಂದು ದೇವಳದ ವಠಾರದಲ್ಲಿ ನಡೆದ ವರ್ಣಪಲ್ಲಟ ಯಕ್ಷಗಾನ ಬಯಲಾಟ ಉತ್ತಮವಾಗಿ ಮೂಡಿ ಬಂದು ಯಕ್ಷಭಿಮಾನಿಗಳ ಮನರಂಜಿಸಿತು.ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿಯವರು,ಜಾತ್ರೋತ್ಸವ ಸಮಿತಿಯವರು,ಜೀರ್ಣೋದ್ಧಾರ ಸಮಿತಿಯವರು ಸೀಮೆಯ ಭಕ್ತಾಧಿಗಳು ಉಪಸ್ಥಿತರಿದ್ದು ಯಕ್ಷಗಾನ ವೀಕ್ಷಿಸಿದರು.

ತೊಡಿಕಾನದಲ್ಲಿ ಮನರಂಜಿಸಿದ ನೂತನ‌ ಯಕ್ಷಗಾನ ಪ್ರಸಂಗ ವರ್ಣಪಲ್ಲಟ Read More »

ಪ್ರತಿ ಗ್ರಾಮಗಳಲ್ಲೂ ಭಜನಾ ತರಬೇತಿ ನಡೆಸುವ ಗುರಿ ತಾಲೂಕು ಭಜನಾ ಪರಿಷತ್ ಗೆ ಇದೆ : ಸೋಮಶೇಖರ ಪೈಕ

ಶ್ರೀ ಶಾರದಾಂಬಾ ಭಜನಾ ಮಂಡಳಿ (ರಿ. ಪಂಜ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ (ರಿ.) ಪಂಜ ಮತ್ತು ನಿಂತಿಕಲ್ಲು ವಲಯ, ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್‌ ಸುಳ್ಯ ತಾಲೂಕು, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಪಂಜ ವಲಯ ಇದರ ಆಶ್ರಯದಲ್ಲಿ17ನೇ ವರ್ಷದ ಭಜನಾ ತರಬೇತಿ ಪಂಜದ ಶಾರದಾಂಭಾ ವೇದಿಕೆಯಲ್ಲಿ ಏ.13ರಂದು ಉದ್ಘಾಟನೆಗೊಂಡಿದೆ.ಭಜನಾ ತರಬೇತಿಯನ್ನು ಒಡಿಯೂರು ಶ್ರೀ ಕ್ಷೇತ್ರ ಗ್ರಾಮ ವಿಕಾಸ ಯೋಜನೆ ಸಾರ್ವಜನಿಕ ಸಂಪರ್ಕಾಧಿಕಾರಿ ಮಾತೇಶ್ ಭಂಡಾರಿ ಉದ್ಘಾಟಿಸಿದರು‌.

ಪ್ರತಿ ಗ್ರಾಮಗಳಲ್ಲೂ ಭಜನಾ ತರಬೇತಿ ನಡೆಸುವ ಗುರಿ ತಾಲೂಕು ಭಜನಾ ಪರಿಷತ್ ಗೆ ಇದೆ : ಸೋಮಶೇಖರ ಪೈಕ Read More »

ಸುಳ್ಯ: ನೆನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನದ ವಠಾರದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿಶಿಷ್ಠವಾಗಿ ಅಂಬೇಡ್ಕರ್ ಜಯಂತಿ ಆಚರಣೆ

ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಂವಿಧಾನ ಶಿಲ್ಪಿ, ಸಾಮಾಜಿಕ ಸಮಾನತೆಯ ಹರಿಕಾರ ಡಾ. ಬಿ ಆರ್ ಅಂಬೇಡ್ಕರ್ 135ನೇ ಜಯಂತಿ ಆಚರಣೆಯನ್ನು ಇಂದು ಸುಳ್ಯದಲ್ಲಿ ಸುಮಾರು 15 ವರ್ಷಗಳಿಂದ ನಿರ್ಮಾಣ ಕಾರ್ಯ ಕುಂಠಿತ ಗೊಂಡು ನೆನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನದ ವಠಾರದಲ್ಲಿ ಇಂದು ಆಯೋಜಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರುರವರು ಅಧ್ಯಕ್ಷತೆ ವಹಿಸಿ ಪ್ರಸ್ತಾವಿಕವಾಗಿ ಮಾತನಾಡಿ ಡಾ. ಬಿ ಆರ್ ಅಂಬೇಡ್ಕರ್ ರವರು ಸಾಮಾಜಿಕ ಶೋಷಿತವರ್ಗದ ಧ್ವನಿಯಾಗಿ, ತಮ್ಮ ಅಪಾರ ಬುದ್ದಿಮತ್ತೆಯಿಂದ ಸಂವಿಧಾನ ರಚನೆ ಮಾಡಿ

ಸುಳ್ಯ: ನೆನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನದ ವಠಾರದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿಶಿಷ್ಠವಾಗಿ ಅಂಬೇಡ್ಕರ್ ಜಯಂತಿ ಆಚರಣೆ Read More »

ತೊಡಿಕಾನ : ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವಕ್ಕೆ ವೈಭದ ಧ್ವಜಾರೋಹಣ ಮೂಲಕ ಚಾಲನೆ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವಕ್ಕೆ ಧ್ವಜಾರೋಹಣ ನಡೆಯಿತು.ಈ ಸಂದರ್ಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ,ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ರೇಣುಕಾ ಪ್ರಸಾದ್ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ,ಜೀರ್ಣೊದ್ದಾರ ಸಮಿತಿ ಅಧ್ಯಕ್ಷ ಪಿ.ಬಿ ದಿವಾಕರ ರೈ,ಜಾತ್ರೋತ್ಸವ ಸಮಿತಿ ಅಧ್ಯಕ್ಣ ಸಂತೋಷ್ ಕುತ್ತಮೊಟ್ಟೆ,ದೇವಳದ ಇ.ಒ ಅವಿನ್ ರಂಗತ್ ಮಲೆ, ಹಸಿರುವಾಣಿ ಸಮಿತಿ ಅಧ್ಯಕ್ಷ ಕೇಶವ ಅಡ್ತಲೆ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ ಬಿ.ಸಿ ಟ್ರಸ್ಟ್ ಸುಳ್ಯದ ಯೋಜನಾಧಿಕಾರಿ ಮಾದವ ಗೌಡ,ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಾಲಕ್ರಷ್ಣ

ತೊಡಿಕಾನ : ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವಕ್ಕೆ ವೈಭದ ಧ್ವಜಾರೋಹಣ ಮೂಲಕ ಚಾಲನೆ Read More »

ತೊಡಿಕಾನ : ಜಾತ್ರೋತ್ಸವಕ್ಕೆ ಹಸಿರುವಾಣಿ ಮೆರವಣಿಗೆ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವ ಏ.13ರಿಂದ ಆರಂಭಗೊಂಡಿದೆ‌.ಈ ದಿನ ಕೇರಳ ಚೆಂಡೆವಾದನ,ಕುಣಿತ ಭಜನೆ,ಯಕ್ಷಗಾನ ವೇಷಗಳೊಂದಿಗೆ ಅದ್ದೂರಿ ಹಸಿರು ವಾಣಿ ಮೆರವಣಿಗೆ ನಡೆಯಿತು.ಅರಂತೋಡು ತೋಟಂಪ್ಪಾಡಿ ಉಳ್ಳಾಕುಲು ಉಳ್ಳಾಕ್ಲು ದೈವದ ಭಂಡಾರ ಆಗಮಿಸಿದ ಬಳಿಕ ದೇವರ ಜಳಕದ ಗುಂಡಿ ಸಮೀಪ ರಾಜರಾಮ್ ಕೀಲಾರು ಅವರು ಹಸಿರುವಾಣಿ ಮೆರವಣಿಗೆಗೆ ತೆಂಗಿನ ಕಾಯಿ ಒಡೆಯುವುದರ ಮೂಲಕ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ,ಜೀರ್ಣೊದ್ದಾರ ಸಮಿತಿ ಅಧ್ಯಕ್ಷ ಪಿ.ಬಿ ದಿವಾಕರ ರೈ,ಜಾತ್ರೋತ್ಸವ ಸಮಿತಿ

ತೊಡಿಕಾನ : ಜಾತ್ರೋತ್ಸವಕ್ಕೆ ಹಸಿರುವಾಣಿ ಮೆರವಣಿಗೆ Read More »

ಕಲ್ಚೆರ್ಪೆ :ಬಾವಿಗೆ ಬಿದ್ದ ಕಾಡಾನೆ

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕಲ್ಚೆರ್ಪೆಯಲ್ಲಿ ಕಾಡಾನೆಯೊಂದು ಏ.12ರಂದು ಬಾವಿಗೆ ಬಿದ್ದ ಘಟನೆ ವರದಿಯಾಗಿದೆ.ಅರಣ್ಯ ಇಲಾಖೆಯವರು ಸ್ಥಳಕ್ಕೆ ಆಗಮಿಸಿದ್ದು ಆನೆಯನ್ನು ತೆರವುಗೊಳಿಸುವ ಕಾರ್ಯಚರಣೆ ನಡೆಯುತ್ತಿದೆ‌.

ಕಲ್ಚೆರ್ಪೆ :ಬಾವಿಗೆ ಬಿದ್ದ ಕಾಡಾನೆ Read More »

error: Content is protected !!
Scroll to Top