ಪ್ರಚಲಿತ

ಸಂಪಾಜೆ ಗ್ರಾಮ ಪಂಚಾಯತ್ ಎಸ್. ಐ. ಆರ್ ಮಾಹಿತಿ ಕೇಂದ್ರಕ್ಕೆ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಜಯಲಕ್ಷ್ಮಿ ಭೇಟಿ

ಸಂಪಾಜೆ ಗ್ರಾಮ ಪಂಚಾಯತ್ ಎಸ್. ಐ. ಆರ್ ಮಾಹಿತಿ ಕೇಂದ್ರಕ್ಕೆ ಪ್ರಗತಿ ಪರಿಶೀಲನೆ ಮಾಡಲು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಜಯಲಕ್ಷ್ಮಿಭೇಟಿ ನೀಡಿ ಪರಿಶೀಲಿಸಿದರು.ಈ ಸಂದರ್ಭದಲ್ಲಿ ತಾಲೂಕು ತಹಶೀಲ್ದಾರ್ ಮಂಜುಳ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಧಿಕಾರಿ ರಾಜಣ್ಣ ಉಪಸ್ಥಿತರಿದ್ದರು‌.ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ , ಸುಂದರಿ ಮುಂಡಡ್ಡ . ಸುಮತಿ ಶಕ್ತಿವೇಲು. ಮಾಜಿ ಉಪಾಧ್ಯಕ್ಷರಾದ ಎಸ್. ಕೆ. ಹನೀಫ್. ಸದಸ್ಯರಾದ ರಜನಿ ಶರತ್. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ […]

ಸಂಪಾಜೆ ಗ್ರಾಮ ಪಂಚಾಯತ್ ಎಸ್. ಐ. ಆರ್ ಮಾಹಿತಿ ಕೇಂದ್ರಕ್ಕೆ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಜಯಲಕ್ಷ್ಮಿ ಭೇಟಿ Read More »

ತೊಡಿಕಾನ : ರೋಟರಿ ಕ್ಲಬ್ ಸುಳ್ಯ ಸಿಟಿ ವತಿಯಿಂದ ವನಮಹೋತ್ಸವ

ರೋಟರಿ ಕ್ಲಬ್ ಸುಳ್ಯ ಸಿಟಿ ವತಿಯಿಂದ ವನಮಹೋತ್ಸವ ಕಾರ್ಯಕ್ರಮವನ್ನು ತೋಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವಠಾರದಲ್ಲಿ ಹಮ್ಮಿಕೊಳ್ಳಲಾಯಿತು. ಸ್ವಚ್ಛತೆಯ ಸಲುವಾಗಿ ದೇವಸ್ಥಾನಕ್ಕೆ ಕಸದ ಬುಟ್ಟಿಗಳನ್ನು ಹಸ್ತಾಂತರಿಸಲಾಯಿತು. ನಮ್ಮೊಂದಿಗೆ ಅರಣ್ಯಇಲಾಖೆ ಅಧಿಕಾರಿ DyRFO ರೊ ವೆಂಕಟೇಶ್ ಮತ್ತು ಸಿಬ್ಬಂದಿಗಳು ಹಾಗೂ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು, ಸಿಬ್ಬಂದಿ ವರ್ಗದವರು,ರೋಟರಿ ಸದಸ್ಯರು ಹಾಗೂ ಊರಿನ ಸಮಸ್ತರು ಕೈ ಜೋಡಿಸಿದರು.

ತೊಡಿಕಾನ : ರೋಟರಿ ಕ್ಲಬ್ ಸುಳ್ಯ ಸಿಟಿ ವತಿಯಿಂದ ವನಮಹೋತ್ಸವ Read More »

ಜುಲೈ 31 ರವರೆಗೆ ಸುಳ್ಯದ ಸ್ವರ್ಣಂ ಜ್ಯುವೆಲ್ಸ್ ನಲ್ಲಿ  ” ಸ್ವರ್ಣಂ ವಿಶೇಷ

ಸುಳ್ಯದ ಕೆ.ಎಸ್.ಆರ್. ಟಿ.ಸಿ ಬಸ್ ನಿಲ್ದಾಣ ಮುಂಭಾಗದ ಸೂಂತೋಡು ಎಂಪೋರಿಯಂ ಬಿಲ್ಡಿಂಗ್ ನಲ್ಲಿರುವ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಗ್ರಾಹಕರಿಗೆ “ಸ್ವರ್ಣಂ ವಿಶೇಷ “ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್ ಆರಂಭಗೊಂಡಿಗೆ. ಸ್ವರ್ಣಂ ಜ್ಯುವೆಲ್ಸ್ ಮಳಿಗೆಯು ದಿನದಿಂದ ದಿನಕ್ಕೆ ಗ್ರಾಹಕರಿಗೆ ಹೊಸ ಹೊಸ ಆಯೋಜನೆಯನ್ನು ತರುತ್ತಿದ್ದು , ಇದೀಗ ಗ್ರಾಹಕರಿಗೋಸ್ಕರ ಸ್ವರ್ಣಂ ವಿಶೇಷ ಆಯೋಜನೆಯೊಂದಿಗೆ ಸ್ವರ್ಣಂ ವಿಶೇಷ ಆಫರ್ ಆಯೋಜನೆಗೊಳಿಸಲಾಗಿದೇ . .ಅಲ್ಲದೆ ಗ್ರಾಹಕರಿಗೆ ಚಿನ್ನಾಭರಣ ಖರೀದಿಗೆ ಪ್ರತೀ ಚಿನ್ನಾಭರಣಗಳ ಪ್ರತೀ ಪವನಿಗೆ 3000 ಕಡಿತ ಹಾಗೂ ಗ್ರಾಂ ಗೆ

ಜುಲೈ 31 ರವರೆಗೆ ಸುಳ್ಯದ ಸ್ವರ್ಣಂ ಜ್ಯುವೆಲ್ಸ್ ನಲ್ಲಿ  ” ಸ್ವರ್ಣಂ ವಿಶೇಷ Read More »

ಅರಂತೋಡು : ಪ್ರಥಮ‌ ಹಂತದ ಗ್ರಾಮ‌ ಸಭೆ

ಆರಂತೋಡು ಗ್ರಾಮ ಪಂಚಾಯತ್ ನ 2026-27 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಜುಲೈ 14ರಂದು ಗ್ರಾಮ ಪಂಚಾಯತ್ ನ ಅಮೃತ ಸಭಾವನದಲ್ಲಿ ನಡೆಯಿತು.ಆಡಳಿತಾಧಿಕಾರಿ ಪ್ರಮೋದ್ ಸಿ.ಎಂ. ಅಧ್ಯಕ್ಷತೆ ವಹಿಸಿದ್ದರು.ಸಭೆಯಲ್ಲಿ ಗ್ರಾಮಸ್ಥರು ಹಲವು ಬೇಡಿಕೆ ಮತ್ತು ಸಮಸ್ಯೆಗಳನ್ನು ಮುಂದಿಟ್ಟರು‌.ಬಿಳಿಯಾರು ಮಾಡದಕಾನ ಗ್ರಾಮ ಪಂಚಾಯತ್ ರಸ್ತೆಯ ಕೆಲ ಭಾಗಗಳಲ್ಲಿ ಕಾಂಕ್ರೀಟೀಕರಣ ಮಾಡುವಂತೆ ಕೆ.ಆರ್.ಗಂಗಾಧರ್ ಮನವಿ ಮಾಡಿ ಕಳೆದ ವರ್ಷದ ಕ್ರಿಯಾಯೋಜನೆಯಲ್ಲಿ ಈ ರಸ್ತೆಯ ಅಭಿವ್ರದ್ದಿಗೆ ಅನುದಾನ ಮೀಸಲು ಇಟ್ಟ ಬಗ್ಗೆ ಸಭೆಯ ಗಮನ ಸೆಳೆದ್ದಾಗ ಪಿ.ಡಿ.ಒ ಜಯಪ್ರಕಾಶ್

ಅರಂತೋಡು : ಪ್ರಥಮ‌ ಹಂತದ ಗ್ರಾಮ‌ ಸಭೆ Read More »

ಸುಳ್ಯ ತಾಲೂಕು ಟೈಲರಿಂಗ್ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷ ಲಿಗೋಧರ ಆಚಾರ್ಯ ನಿಧನ

ಸುಳ್ಯ ಜಯನಗರ ನಿವಾಸಿ ಹಾಗೂ ಸುಳ್ಯ ತಾಲೂಕು ಟೈಲರಿಂಗ್ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷ ಲಿಗೋಧರ ಆಚಾರ್ಯರವರು ಜುಲೈ 15 ರಂದು ನಿಧನರಾದರು.ಹೃದಯ ಸಂಬಂಧಿ ಕಾಯಿಲೆಯ ಹಿನ್ನೆಲೆಯಲ್ಲಿ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.ಮೃತರು ಪತ್ನಿ ಜಯಂತಿ ಹಾಗೂ ಪುತ್ರಅಭಿಷೇಕ್ ಹಾಗೂ ಪುತ್ರಿ ಅರ್ಚನಾ ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.

ಸುಳ್ಯ ತಾಲೂಕು ಟೈಲರಿಂಗ್ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷ ಲಿಗೋಧರ ಆಚಾರ್ಯ ನಿಧನ Read More »

ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ 210ಲಕ್ಷ ಅನುದಾನ ಬಿಡುಗಡೆ

2025-26 ನೇ ಸಾಲಿನ ಲೆಕ್ಕ ಶೀರ್ಷಿಕೆ 5054 ಕಾರ್ಯಕ್ರಮದಡಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಅನುಮೋದನೆಗೊಂಡ ಕಾಮಗಾರಿಗಳಿಗೆ ರೂ 210ಲಕ್ಷ ಬಿಡುಗಡೆಗೊಂಡಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದ್ದಾರೆ.

ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ 210ಲಕ್ಷ ಅನುದಾನ ಬಿಡುಗಡೆ Read More »

ಸಂಪಾಜೆಯಲ್ಲಿ ಗ್ರಹಜ್ಯೋತಿ ದಾಖಲೆಗಳ ಪುನರ್ ಪರಿಶೀಲನಾ ಕೇಂದ್ರಕ್ಕೆ ಬೇಟಿ ನೀಡಿದ ವಿವಿಧ ನಾಯಕರುಗಳು

ರಾಜ್ಯ ಸರಕಾರದ ಗ್ಯಾರೆಂಟಿಗಳಲ್ಲಿ ಒಂದಾದ ಗ್ರಹ ಜ್ಯೋತಿಯನ್ನು ಕೆಲವು ಅನರ್ಹರು ಪಡೆಯುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ ಅರ್ಹರ ಆಯ್ಕೆಗಾಗಿ ಪುನರ್ ಪರಿಶೀಲನೆಗೆ ಆದೇಶ ನೀಡಿದ್ದು ಅದರಂತೆ ಸಂಪಾಜೆಯ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಕೂಡಾ ದಾಖಲೆಗಳ ಪುನರ್ ಪರಿಶೀಲನೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ಇಂದು ರಾಜ್ಯ ಕ.ಕ.ಮತ್ತು ಇ.ನಿ.ಕಾ.ಕ ಮಂಡಳಿ ನಿರ್ದೇಶಕ ಜಾನಿ.ಕೆ.ಪಿ ಹಾಗೂ ತಾಲೂಕು ಗ್ಯಾರೆಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ,ಸಂಪಾಜೆ ಗ್ರಾಮ ಪಂಚಾಯತ್ ಮಾಜೀ ಅಧ್ಯಕ್ಷರಾಗಿದ್ದ ಮಹಮ್ಮದ್ ಕುಂಞಿ ಗೂನಡ್ಕ, ಬೇಟಿ ನೀಡಿರುತ್ತಾರೆ

ಸಂಪಾಜೆಯಲ್ಲಿ ಗ್ರಹಜ್ಯೋತಿ ದಾಖಲೆಗಳ ಪುನರ್ ಪರಿಶೀಲನಾ ಕೇಂದ್ರಕ್ಕೆ ಬೇಟಿ ನೀಡಿದ ವಿವಿಧ ನಾಯಕರುಗಳು Read More »

ಜುಲೈ 16 ; ಅರಂತೋಡು ಕೊಡಂಕೇರಿ ಕೊರಗಜ್ಜ ದೈವಸ್ಥಾನದಲ್ಲಿ ಅಗೇಲು ಸೇವೆ

ಸ್ವಾಮಿ ಕೊರಗಜ್ಜ ದೈವಸ್ಥಾನ ಅರಂತೋಡು ಕೊಡಂಕೇರಿ ಯಲ್ಲಿ ದಿನಾಂಕ 16-07-2026 ರ ಕರ್ಕಟಕ ಸಂಕ್ರಮಣದಂದು ಕೊರಗಜ್ಜ ದೈವದ ಅಗೇಲು ಸೇವೆ ರಾತ್ರಿ ಗಂಟೆ 7:00 ಕ್ಕೆ ನಡೆಯಲಿದೆ. ನಂತರ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.ವಿ. ಸೂ : ಅಗೇಲು ಸೇವೆ ಮಾಡಿಸುವವರು ದಿನ ಮುಂಚಿತವಾಗಿ ತಿಳಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿಸಂಪರ್ಕಿಸಿ:7022077809

ಜುಲೈ 16 ; ಅರಂತೋಡು ಕೊಡಂಕೇರಿ ಕೊರಗಜ್ಜ ದೈವಸ್ಥಾನದಲ್ಲಿ ಅಗೇಲು ಸೇವೆ Read More »

ಸಂಪಾಜೆ ವಲಯ ಕಾಂಗ್ರೆಸ್ ವತಿಯಿಂದ SIR ಪ್ರಗತಿ ಪರಿಶೀಲನೆಗಾಗಿ ಗ್ರಾಮದ ವಿವಿಧ ವಾರ್ಡುಗಳಿಗೆ ಬಿರುಸಿನ ಭೇಟಿ

ಸಂಪಾಜೆ: ಜು: 13 ವಲಯ ಕಾಂಗ್ರೆಸ್ ನಾಯಕರು ಮತ್ತು ಬಿ.ಎಲ್.ಒ-2 ರವರ ವತಿಯಿಂದ SIR ಪ್ರಗತಿ ಪರಿಶೀಲನೆಗಾಗಿ ಗ್ರಾಮದ ವಿವಿಧ ವಾರ್ಡುಗಳಿಗೆ ಭೇಟಿ ನೀಡಲಾಯಿತು. ಈ ಸಂದರ್ಭದಲ್ಲಿ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಬಿ.ಎಲ್.ಓ ರವರನ್ನು ಸಂಪರ್ಕಿಸಿ ಪರಿಹಾರಕ್ಕೆ ಸೂಚಿಸಲಾಯಿತು. ಈ ತಂಡದಲ್ಲಿ ಕೆ.ಪಿ.ಸಿ.ಸಿ. ಪ್ರಚಾರ ಸಮಿತಿಯ ಮುಖ್ಯ ಸಂಯೋಜಕರಾದ ಜಾನಿ.ಕೆ.ಪಿ, ದ.ಕ.ಜಿಲ್ಲಾ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಮಹಮ್ಮದ್ ಕುಂಞಿ ಗೂನಡ್ಕ , ದ.ಕ.ಜಿಲ್ಲಾ ಅಸಂಘಟಿತ ಕಾರ್ಮಿಕ ಜಿಲ್ಲಾಸಮಿತಿ ಪ್ರದಾನ ಕಾರ್ಯದರ್ಶಿ ಜ್ಞಾನಶೀಲನ್ ರಾಜು, ಸಂಪಾಜೆ ವಲಯ ಕಾಂಗ್ರೆಸ್

ಸಂಪಾಜೆ ವಲಯ ಕಾಂಗ್ರೆಸ್ ವತಿಯಿಂದ SIR ಪ್ರಗತಿ ಪರಿಶೀಲನೆಗಾಗಿ ಗ್ರಾಮದ ವಿವಿಧ ವಾರ್ಡುಗಳಿಗೆ ಬಿರುಸಿನ ಭೇಟಿ Read More »

ದಬ್ಬಡ್ಕ ಕಾಂತಬೈಲು : ಶ್ರೀ ರಾಮ ಯುವಕ ಸಂಘ (ರಿ) ನೇತೃತ್ವದಲ್ಲಿ ಶ್ರಮ ಸೇವೆ

ದಬ್ಬಡ್ಕ ಕಾಂತಬೈಲು ಶ್ರೀ ರಾಮ ಯುವಕ ಸಂಘ ಇವರ ನೇತ್ರತ್ವದಲ್ಲಿ ಜು.12ರಂದು ವಿದ್ಯುತ್ ತಂತಿಗಳಿಗೆ ತಾಗಿಕೊಂಡಿರುವಂತಹ ಮರದ ಕೊಂಬೆಗಳನ್ನು ಹಾಗೂ ರಸ್ತೆಯ ಎರಡು ಬದಿಯ ಬೆಳೆದಿರುವ ಚಿಕ್ಕ ಗಿಡಗಳನ್ನು ಕಡೆಯುವ ಶ್ರಮ‌ ಸೇವೆ ನಡೆಸಲಾಯಿತು.ಗ್ರಾಮ ಪಂಚಾಯತ್ ಚೆಂಬು ಸದಸ್ಯರುಗಳ, ಸಹಕಾರಿ ಸಂಘದ ನಿರ್ದೇಶಕರುಗಳ, ಹಾಗೂ ಅರಣ್ಯ ಸಮಿತಿ ಚೆಂಬು ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಸಂಪಾಜೆ ಹಾಗೂ ಊರಿನ ಎಲ್ಲಾ ಜನರ ಸಹಯೋಗದೊಂದಿಗೆ ನಡೆದ ಶ್ರಮ ಸೇವೆಯಲ್ಲಿ ಜನರು ಪ್ರತ್ಯಕ್ಷ ಹಾಗೂ ಕೆಲವು ಜನರು ಪರೋಕ್ಷವಾಗಿ

ದಬ್ಬಡ್ಕ ಕಾಂತಬೈಲು : ಶ್ರೀ ರಾಮ ಯುವಕ ಸಂಘ (ರಿ) ನೇತೃತ್ವದಲ್ಲಿ ಶ್ರಮ ಸೇವೆ Read More »

error: Content is protected !!
Scroll to Top