ಪ್ರಚಲಿತ

ಸುಳ್ಯ : ಮಕ್ಕಳಲ್ಲಿ ಕಾಲು ಬಾಯಿ ಜ್ವರದ ಪ್ರಕಣಗಳು ಪತ್ತೆ!

ಸುಳ್ಯ ತಾಲೂಕಿನಲ್ಲಿ ಮಕ್ಕಳ ಕಾಲು ಬಾಯಿ ಜ್ವರದ ಅನೇಕ ಪ್ರಕರಣಗಳು ಕಾಣಿಸಿಕೊಂಡಿವೆ.ಇದು ಹೆಚ್ಚಾಗಿ ಚಿಕ್ಕ ಮಕ್ಕಳಲ್ಲಿ ಕಂಡುಬರುವ ಸಾಮಾನ್ಯ ವೈರಲ್ ಸೋಂಕು. ಇದರ ಲಕ್ಷಣಗಳೆಂದರೆ ಜ್ವರ, ಬಾಯಿಯಲ್ಲಿ ಹುಣ್ಣುಗಳು, ಮತ್ತು ಕೈ ಹಾಗೂ ಪಾದಗಳ ಮೇಲೆ ಸಣ್ಣ ಗುಳ್ಳೆಗಳುಳ್ಳ ಕಜ್ಜಿಗಳು.ಕಜ್ಜಿಗಳ ನೋವಿಗೆ ಜ್ವರ ಬರುತ್ತವೆ.ಈ ರೋಗ ಸಾಮಾನ್ಯವಾಗಿ 7 ರಿಂದ 10 ದಿನಗಳಲ್ಲಿ ತನ್ನಷ್ಟಕ್ಕೆ ತಾನೇ ಗುಣವಾಗುತ್ತದೆ.ಮಕ್ಕಳಲ್ಲಿ ಕೈ, ಕಾಲು ಮತ್ತು ಬಾಯಿ ರೋಗದ ಲಕ್ಷಣಗಳು ಸಾಮಾನ್ಯವಾಗಿ ಸೋಂಕು ತಗುಲಿದ 2 ದಿನಗಳ ನಂತರ ಈ ಕೆಳಗಿನ […]

ಸುಳ್ಯ : ಮಕ್ಕಳಲ್ಲಿ ಕಾಲು ಬಾಯಿ ಜ್ವರದ ಪ್ರಕಣಗಳು ಪತ್ತೆ! Read More »

ನಿಡ್ಯಮಲೆ ಬಾಲಕೃಷ್ಣ ಎನ್. ಪಿ ನಿಧನ

ಪೆರಾಜೆ ಗ್ರಾಮದ ನಿಡ್ಯಮಲೆ ಬಾಲಕೃಷ್ಣ ಎನ್. ಪಿ (64:ವರ್ಷ) ಮೆದುಳಿನ ರಕ್ತಸ್ರಾವದಿಂದ ಜು.13ರಂದು ಆಸ್ಪತ್ರೆಯಲ್ಲಿ ನಿಧನರಾದರು.ಮೃತರು ಪತ್ನಿ ಯಶೋಧ, ಪುತ್ರರಾದ ಶಿವಪ್ರಸಾದ್‌, ಸಚಿನ್, ಪುತ್ರಿ ಮಮತಾ ಮುಕುಂದ ನಾರ್ಕೋಡು, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.

ನಿಡ್ಯಮಲೆ ಬಾಲಕೃಷ್ಣ ಎನ್. ಪಿ ನಿಧನ Read More »

ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ಇಬ್ಬರು ಆರೋಪಿಗಳ ಬಂಧನ

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್.ಐ.ಎ. ಅಧಿಕಾರಿಗಳು ಬೆಂಗಳೂರು ಮತ್ತು ಕೇರಳದ ಕೊಚ್ಚಿಯಲ್ಲಿ ಏಕಕಾಲದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ಕೊಡಗು ಜಿಲ್ಲೆಯ ಸೋಮರಪೇಟೆ ನಿವಾಸಿ ಅಬ್ದುಲ್ ನಾಸೀರ್(41), ಬೆಳ್ತಂಗಡಿ ತಾಲೂಕಿನ ನೌಷದ್(32) ಬಂಧಿತ ಆರೋಪಿಗಳು.ಆರೋಪಿಗಳು ತಲೆಮರೆಸಿಕೊಳ್ಳಲು ಸಹಕರಿಸಿದ ಆರೋಪದ ಮೇಲೆ ಇವರನ್ನು ಬಂಧಿಸಲಾಗಿದೆ.

ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ಇಬ್ಬರು ಆರೋಪಿಗಳ ಬಂಧನ Read More »

ಶ್ರೀ ಶಾರದಾಂಬಾ ಭಜನಾ ಮಂದಿರಕ್ಕೆ ನಿವೇಶನ ಖರೀದಿಯ ದೇಣಿಗೆ ಸಂಗ್ರಹಣದ ಕರಪತ್ರ ಬಿಡುಗಡೆ

ಶ್ರೀ ಶಾರದಾಂಬ ಭಜನಾ ಮಂದಿರ ಪಂಜ ಇದರ ಅಭಿವೃದ್ಧಿ ಹಾಗೂ ನೂತನ ನಿವೇಶನ ಖರೀದಿಗಾಗಿ ದೇಣಿಗೆ ಸಂಗ್ರಹಣೆಯ ಕರಪತ್ರವನ್ನು ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಕಾನತ್ತೂರು ಇವರು ಬಿಡುಗಡೆಗೊಳಿಸಿ ಪ್ರಥಮ ದೇಣಿಗೆಯನ್ನು ನೀಡಿ ಶುಭ ಹಾರೈಸಿದರು.ವೇದಿಕೆಯಲ್ಲಿ ಶಾರದಾಂಬಾ ಭಜನಾ ಮಂಡಳಿಯ ಅಧ್ಯಕ್ಷರಾದ ಬಾಲಕೃಷ್ಣ ಪುತ್ಯ, ನಿವೇಶನ ಖರೀದಿ ಸಂಚಾಲಕರಾದ ಲೋಕೇಶ್ ಬರೆಮೇಲು, ಕಾರ್ಯದರ್ಶಿ ಗುರುಪ್ರಸಾದ್ ತೋಟ, ಜೊತೆ ಕಾರ್ಯದರ್ಶಿ ರಾಜಕುಮಾರ್ ಬೇರ್ಯ ಸದಸ್ಯರಾದ ಕುಶಾಲಪ್ಪ ನೆಲ್ಲಿಕಟ್ಟೆ,

ಶ್ರೀ ಶಾರದಾಂಬಾ ಭಜನಾ ಮಂದಿರಕ್ಕೆ ನಿವೇಶನ ಖರೀದಿಯ ದೇಣಿಗೆ ಸಂಗ್ರಹಣದ ಕರಪತ್ರ ಬಿಡುಗಡೆ Read More »

ಅರಂಬೂರು : ಟರ್ಫ್ ಗ್ರೌಂಡ್ ಲೋಕಾರ್ಪಣೆ

ಸುಳ್ಯದಿಂದ ಮಡಿಕೇರಿ ರಸ್ತೆ ಮಧ್ಯೆ ರಸಪಾಕ ಹೋಟೆಲ್ ಬಳಿಯಲ್ಲಿ ನಿರ್ಮಿಸಿರುವ ಸಾಜ್ ಸ್ಪೋರ್ಟ್ಸ್ ರವರ ನೇತೃತ್ವದ ಅರಂಬೂರು ಟರ್ಫ್ ಗ್ರೌಂಡ್ ಜು.11 ರಂದು ಉದ್ಘಾಟನೆಗೊಂಡಿತು.ಶಾಸಕಿ ಭಾಗೀರಥಿ ಮುರಳ್ಯ, ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್ ಉದ್ಘಾಟಿಸಿದರು. ಸುಳ್ಯ ನಗರ ಪಂಚಾಯತ್ ಸೂಡ ಅಧ್ಯಕ್ಷ ಮುಸ್ತಾಪ, ಕಾಯರತೋಡಿ ಮಹಾವಿಷ್ಣು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ,ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷೆ ಲತಾ ಮಧುಸೂದನ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್.ಎ ರಾಮಚಂದ್ರ, ಹಿರಿಯ ಉದ್ಯಮಿಗಳಾದಕೃಷ್ಣ ಕಾಮತ್ ಅರಂಬೂರು,ಹಮೀದ್

ಅರಂಬೂರು : ಟರ್ಫ್ ಗ್ರೌಂಡ್ ಲೋಕಾರ್ಪಣೆ Read More »

ಭಾರತೀಯ ಮಜ್ದೂರ್ ಸಂಘದ ಆಟೋ ಚಾಲಕರ ಪದಾಧಿಕಾರಿಗಳಿಂದ ಗಿರೀಶ್ ಭಾರದ್ವಾಜ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ (ರಿ.) ಬಿಎಂಎಸ್ ಸಂಯೋಜಿತ ಸುಳ್ಯ ದ ಕ ಸಂಘದ ಮಾಸಿಕ ಸಭೆಯು ಈ ಮದ್ಯಾಹ್ನ 2.30 ಕ್ಕೆ ಸಂಘದ ಕಚೇರಿ ತಿಲಕ ಸಭಾ ಭವನದಲ್ಲಿ ನಡೆಯಿತು ಈ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಪದ್ಮಶ್ರೀ ಪ್ರಶಸ್ತಿಪುರಸ್ಕೃತ ಗಿರೀಶ್ ಭಾರಧ್ವಾಜ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಮತ್ತು ಭಾವಚಿತ್ರಕ್ಕೆ ಪುಷ್ಪ ನಮನ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಪ್ರದಾನ ಕಾರ್ಯದರ್ಶಿ ನಾರಾಯಣ ಎಸ್ ಎಂ ಕೋಶಾಧಿಕಾರಿ ರವಿ ಎಸ್ ಜತೆ ಕಾರ್ಯದರ್ಶಿ ಸುರೇಂದ್ರ

ಭಾರತೀಯ ಮಜ್ದೂರ್ ಸಂಘದ ಆಟೋ ಚಾಲಕರ ಪದಾಧಿಕಾರಿಗಳಿಂದ ಗಿರೀಶ್ ಭಾರದ್ವಾಜ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ Read More »

ಸುಳ್ಯ ನ್ಯಾಯಾಲಯದ ಲೋಕ ಅದಾಲತ್ ನಲ್ಲಿ 360 ಪ್ರಕರಣಗಳಲ್ಲಿ 273 ಪ್ರಕರಣಗಳು ರೂ.1,24,30,486/- ಇತ್ಯರ್ಥ

ಸುಳ್ಯ ನ್ಯಾಯಾಲಯದಲ್ಲಿ ಇಂದು(ಜು.11) ಲೋಕ ಅದಾಲತ್ ನಡೆದಿದು ಒಟ್ಟು 360 ಪ್ರಕರಣಗಳಲ್ಲಿ 273 ಪ್ರಕರಣಗಳು ರೂ.1,24,30,486/- ಇತ್ಯರ್ಥ ಗೊಂಡಿರುತ್ತದೆ.ಲೋಕ ಅದಾಲತ್ ನಲ್ಲಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಒಟ್ಟು 251 ಪ್ರಕರಣಗಳಲ್ಲಿ 172 ಪ್ರಕರಣಗಳು ರೂ. 1,04,51,000/- ಇತ್ಯರ್ಥ ಗೊಂಡಿರುತ್ತದೆ… ಅದರಲ್ಲಿ (ಕ್ರಿಮಿನಲ್ ಪ್ರಕರಣಗಳು 155 ರಲ್ಲಿ 142 ಪ್ರಕರಣಗಳು ರೂ. 5,00,000/- ರ ಮೂಲಕ ಹಾಗೂ ಸಿವಿಲ್ ಪ್ರಕರಣಗಳು 96 ರಲ್ಲಿ 30 ಪ್ರಕರಣಗಳು ರೂ. 99,51,000/- ರ ಮೂಲಕ ಇತ್ಯರ್ಥಗೊಂಡಿರುತ್ತದೆ.)ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಒಟ್ಟು

ಸುಳ್ಯ ನ್ಯಾಯಾಲಯದ ಲೋಕ ಅದಾಲತ್ ನಲ್ಲಿ 360 ಪ್ರಕರಣಗಳಲ್ಲಿ 273 ಪ್ರಕರಣಗಳು ರೂ.1,24,30,486/- ಇತ್ಯರ್ಥ Read More »

ಪ್ರಖ್ಯಾತ ಗಾಯಕಿ, ಗಾನಕೋಗಿಲೆ ಎಸ್.ಜಾನಕಿ ವಿಧಿವಶ

ಕರುನಾಡಿನ ಖ್ಯಾತ ಗಾಯಕಿ ಚಿತ್ರರಂಗದಲ್ಲಿ ಅದೆಷ್ಟೋ ಜನರ ಮನಗೆದ್ದಿದ್ದ ಗಾಯಕಿ ಎಸ್.ಜಾನಕಿ ಶನಿವಾರ ಮೈಸೂರಿನಲ್ಲಿ ನಿಧನರಾಗಿದ್ದಾರೆ. ಹಳ್ಳಿಯ ಸೊಗಡಿನ ಹಾಡುಗಳಿಂದ ಹಿಡಿದು ಎಲ್ಲಾ ಪ್ರಕಾರದ ಗೀತೆಗಳನ್ನೂ ಹಾಡಿದ್ದ ಎಸ್.ಜಾನಕಿ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.

ಪ್ರಖ್ಯಾತ ಗಾಯಕಿ, ಗಾನಕೋಗಿಲೆ ಎಸ್.ಜಾನಕಿ ವಿಧಿವಶ Read More »

ಅರಂಬೂರು : ಸಾಜ್ ಸ್ಪೋರ್ಟ್ಸ್ ರವರ ನೇತೃತ್ವದ ಟರ್ಫ್ ಗ್ರೌಂಡ್ ಇಂದು ಉದ್ಘಾಟನೆ

ಸುಳ್ಯದಿಂದ ಮಡಿಕೇರಿ ರಸ್ತೆ ಮಧ್ಯೆ ರಸಪಾಕ ಹೋಟೆಲ್ ಬಳಿಯಲ್ಲಿ ನಿರ್ಮಿಸಿರುವ ಸಾಜ್ ಸ್ಪೋರ್ಟ್ಸ್ ರವರ ನೇತೃತ್ವದ ಅರಂಬೂರು ಟರ್ಫ್ ಗ್ರೌಂಡ್ ಇಂದು (ಜು.11, ಸಂಜೆ 6.30ಕ್ಕೆ) ಉದ್ಘಾಟನೆಗೊಳ್ಳಲಿದೆ.ಹಿರಿಯ ಉದ್ಯಮಿ ಕೃಷ್ಣ ಕಾಮತ್ ಅರಂಬೂರು ಮತ್ತು ಟೀಮ್ ಸಾಜ್ ಸ್ಪೋರ್ಟ್ಸ್ ನ ಶರತ್ ಅರಂಬೂರು ರವರ ನೇತೃತ್ವದಲ್ಲಿ ಸುಳ್ಯದಲ್ಲಿ ಪ್ರಥಮ ಬಾರಿಗೆ ನಿರ್ಮಿಸಿದ ಟರ್ಫ್ ಗೌಂಡ್ ಇದರ ಉದ್ಘಾಟನೆಯು ಸಂಜೆ ಗಂಟೆ 6.30 ನಡೆಯಲಿರುವುದು.ಸುಮಾರು 9 ಸಾವಿರ ಚದರ ಅಡಿಯ ಮೈದಾನದಲ್ಲಿ ಫುಟ್ ಬಾಲ್,ಕ್ರಿಕೆಟ್‌ ಪಂದ್ಯಾಟವನ್ನು ಆಡಲು ಅವಕಾಶ

ಅರಂಬೂರು : ಸಾಜ್ ಸ್ಪೋರ್ಟ್ಸ್ ರವರ ನೇತೃತ್ವದ ಟರ್ಫ್ ಗ್ರೌಂಡ್ ಇಂದು ಉದ್ಘಾಟನೆ Read More »

ಅಂಗವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅಂಗವಾಡಿ ಕಾರ್ಯಕರ್ತೆಯಾಗಬಯಸುವರಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ. ಸುಳ್ಯ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯ ಸುಳ್ಯ ಮತ್ತು ಕಡಬ ತಾಲೂಕಿನಲ್ಲಿ ತೆರವಾಗಿರುವ ಮರ್ಕಂಜ ಗ್ರಾಮದ ಮಿತ್ತಡ್ಕ, ಅಮರ ಮುಡ್ನೂರು ಗ್ರಾಮದ ದೊಡ್ಡತೋಟ, ಮತ್ತು ಕಡಬ ತಾಲೂಕಿನ ಐನೆಕಿದು ಗ್ರಾಮದ ಐನೆಕಿದು ಅಂಗನವಾಡಿ ಕೇಂದ್ರಗಳಿಗೆ ಕಾರ್ಯಕರ್ತೆಯರ ಹುದ್ದೆಗೆ ಮತ್ತು ಸುಳ್ಯ ಕಸಬಾ ಗ್ರಾಮದ ವಾರ್ಡ್-13ರ ಬೂಡು, ವಾರ್ಡ್-16ರ ಕಾಯರ್ತೋಡಿ, ವಾರ್ಡ್-4ರ ಬೆಟ್ಟಂಪಾಡಿ, ಮರ್ಕಂಜ ಗ್ರಾಮದ ದಾಸರಬೈಲು, ದೇವಚಳ್ಳ ಗ್ರಾಮದ ಸೇವಾಜೆ, ವಾಲ್ತಾಜೆ, ಕಂದ್ರಪ್ಪಾಡಿ, ಮುಪ್ಪೇರಿಯ ಗ್ರಾಮದ ಇಂದ್ರಾಜೆ, ನಾಲ್ಕೂರು

ಅಂಗವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ Read More »

error: Content is protected !!
Scroll to Top