ದಬ್ಬಡ್ಕ ಕಾಂತಬೈಲು ಶ್ರೀ ರಾಮ ಯುವಕ ಸಂಘ ಇವರ ನೇತ್ರತ್ವದಲ್ಲಿ ಜು.12ರಂದು ವಿದ್ಯುತ್ ತಂತಿಗಳಿಗೆ ತಾಗಿಕೊಂಡಿರುವಂತಹ ಮರದ ಕೊಂಬೆಗಳನ್ನು ಹಾಗೂ ರಸ್ತೆಯ ಎರಡು ಬದಿಯ ಬೆಳೆದಿರುವ ಚಿಕ್ಕ ಗಿಡಗಳನ್ನು ಕಡೆಯುವ ಶ್ರಮ ಸೇವೆ ನಡೆಸಲಾಯಿತು.
ಗ್ರಾಮ ಪಂಚಾಯತ್ ಚೆಂಬು ಸದಸ್ಯರುಗಳ, ಸಹಕಾರಿ ಸಂಘದ ನಿರ್ದೇಶಕರುಗಳ, ಹಾಗೂ ಅರಣ್ಯ ಸಮಿತಿ ಚೆಂಬು ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಸಂಪಾಜೆ ಹಾಗೂ ಊರಿನ ಎಲ್ಲಾ ಜನರ ಸಹಯೋಗದೊಂದಿಗೆ ನಡೆದ ಶ್ರಮ ಸೇವೆಯಲ್ಲಿ ಜನರು ಪ್ರತ್ಯಕ್ಷ ಹಾಗೂ ಕೆಲವು ಜನರು ಪರೋಕ್ಷವಾಗಿ ಸಹಕರಿಸಿದರು.
ದಬ್ಬಡ್ಕ ಕಾಂತಬೈಲು : ಶ್ರೀ ರಾಮ ಯುವಕ ಸಂಘ (ರಿ) ನೇತೃತ್ವದಲ್ಲಿ ಶ್ರಮ ಸೇವೆ

































































