ಪ್ರಚಲಿತ

ಅಂಜಲಿ ಮಾಂಟೆಸ್ಸರಿ ಸ್ಕೂಲ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ ಕಾರ್ಯಕ್ರಮ

ಅಂಜಲಿ ಮಾಂಟೆಸ್ಸರಿ ಸ್ಕೂಲ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಅತ್ಯಂತ ಸಂಭ್ರಮ ಹಾಗೂ ಸಾಂಪ್ರದಾಯಿಕ ರೀತಿಯಲ್ಲಿ ಜ.14ರಂದು ಆಚರಿಸಲಾಯಿತುಮ ಈ ಸಂದರ್ಭದಲ್ಲಿ ಮಕ್ಕಳು ಬಣ್ಣಬಣ್ಣದ ಸಾಂಪ್ರದಾಯಿಕ ಉಡುಪು ಧರಿಸಿ ಹಬ್ಬದ ವೈಭವವನ್ನು ಹೆಚ್ಚಿಸಿದರು. ಸಂಕ್ರಾಂತಿಯ ಮಹತ್ವವನ್ನು ಶಾಲಾ ಸಂಚಾಲಕಿ ಶ್ರೀಮತಿ.ಗೀತಾಂಜಲಿ ಮೇಡಂ ಮಕ್ಕಳಿಗೆ ಸರಳವಾಗಿ ವಿವರಿಸಿದರು.ಕಾರ್ಯಕ್ರಮದ ಅಂಗವಾಗಿ ಎಳ್ಳು-ಬೆಲ್ಲ ಹಂಚಿ ಎಳ್ಳು ಬೆಲ್ಲ ತಿಂದು ಒಳ್ಳೆಯದನ್ನೇ ಮಾತನಾಡಿ ಎಂದು ಹಾರೈಸಿದರು. ಕಾರ್ಯಕ್ರಮದ ಕೊನೆಗೆ ಸಂಕ್ರಾಂತಿ ಹಾಡಿಗೆ– ಮಕ್ಕಳು ಉತ್ಸಾಹದಿಂದ ಕುಣಿದು ಸಂತೋಷಪಟ್ಟರು. ಶಿಕ್ಷಕರು ಹಾಗೂ ಸಿಬ್ಬಂದಿಯ ಸಹಕಾರದಿಂದ ಕಾರ್ಯಕ್ರಮ […]

ಅಂಜಲಿ ಮಾಂಟೆಸ್ಸರಿ ಸ್ಕೂಲ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ ಕಾರ್ಯಕ್ರಮ Read More »

ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ ಪಡೆದ ಅಯ್ಯಪ್ಪ ಭಕ್ತರು

ಶಬರಿಮಲೆಯಲ್ಲಿ ಮಕರ ಸಂಕ್ರಾಂತಿಯ ಪ್ರಯುಕ್ತ ಮಕರ ಜ್ಯೋತಿಯ ಅದ್ಭುತ ದರ್ಶನವಾಯಿತು. ಸಂಜೆ ಸುಮಾರು 6.30ರಿಂದ 6.45ರ ಸುಮಾರಿಗೆ ಪೊನ್ನಂಬಲಮೇಡುವಿನಲ್ಲಿ ಗೋಚರಿಸಿದ ಜ್ಯೋತಿಯನ್ನು ಕಂಡು ಲಕ್ಷಾಂತರ ಅಯ್ಯಪ್ಪ ಭಕ್ತರು ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಘೋಷಣೆಯೊಂದಿಗೆ ಭಕ್ತಿ ಪರವಶರಾದರು. ಪ್ರತಿ ವರ್ಷದಂತೆ ಈ ಬಾರಿಯೂ ಶಬರಿಗಿರಿಯಲ್ಲಿ ದೈವಿಕ ಕಳೆ ತುಂಬಿದ್ದು, ಭಕ್ತಗಣವು ಈ ಪವಿತ್ರ ಕ್ಷಣವನ್ನು ಕಣ್ಣುಂಬಿಕೊಂಡು ಪುನೀತರಾದರು.

ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ ಪಡೆದ ಅಯ್ಯಪ್ಪ ಭಕ್ತರು Read More »

ಪಂಜ : ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದದಲ್ಲಿ ಧನುಪೂಜೆ ಸಂಪನ್ನ

ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದದಲ್ಲಿ ಡಿ.16ರಿಂದ ಆರಂಭ ಗೊಂಡ ಧನು ಪೂಜೆ ಜ. 14 ರಂದು ಸಂಪನ್ನ ಗೊಂಡಿತು.ಶ್ರೀ ದೇವರಿಗೆ ಪ್ರಾತಃ ಕಾಲ ರುದ್ರಾಭಿಷೇಕ, ಧನು ಪೂಜೆ,ಮಹಾಪೂಜೆ ಸೇವೆಗಳು, ಭಜನಾ ಸಂಕೀರ್ತನೆ ನಡೆಯಿತು. ಸೀಮೆಯ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ಪ್ರತೀ ದಿನ ಬೆಳಗ್ಗಿನ ಫಲಾಹಾರದ ವ್ಯವಸ್ಥೆ ಇತ್ತು .ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂ‌ರ್ ವ್ಯವಸ್ಥಾಪನಾ ಸಮಿತಿ ಸದಸ್ಯರಾದ,ಧರ್ಮಣ್ಣ ನಾಯ್ಕ ಗರಡಿ,ಮಾಯಿಲಪ್ಪ ಗೌಡ ಪಟ್ಟೆ ಎಣ್ಮರು, ಸಂತೋಷ್ ಕುಮಾರ್ ರೈ ಪಲ್ಲತ್ತಡ್ಕ,

ಪಂಜ : ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದದಲ್ಲಿ ಧನುಪೂಜೆ ಸಂಪನ್ನ Read More »

ತೊಡಿಕಾನ : ಮಲ್ಲಿಕಾರ್ಜುನ ದೇವಳದಲ್ಲಿ ಒಂದು ತಿಂಗಳ ಕಾಲ ಶ್ರದ್ದಾ ಭಕ್ತಿಯಿಂದ ನಡೆದ ಧನುಪೂಜೆ ಸಂಪನ್ನ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದಲ್ಲಿ ಕಳೆದ ಡಿ.16ರಿಂದ ಆರಂಭಗೊಂಡ ಧನು ಧನುಪೂಜೆ ಇಂದು ಮಕರ ಸಂಕ್ರಣದಂದು (ಜ.14)ರಂದು ಸಂಪನ್ನಗೊಂಡಿತು. ಸಾವಿರಾರು ಭಕ್ತರು ಧನುಪೂಜೆಯಲ್ಲಿ ಭಾಗವಹಿಸಿದರು.ಪ್ರತಿವರ್ಷ ಧನುಪೂಜೆಯ ಕೊನೆಯ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುತ್ತಾರೆ.ಅಂತೆಯೇ ಈ ವರ್ಷವು ಧನುಪೂಜೆಯ ಕೊನೆಯ ದಿನದಲ್ಲಿ ಭಕ್ತರು‌ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದರು.ಧನುಪೂಜೆಯ ಅಂಗವಾಗಿ ದೇವಳದಲ್ಲಿ ದಿನ ನಿತ್ಯ ಮುಂಜಾನೆ ಭಜನಾ ಸತ್ಸಂಗ ನಡೆಯಿತು. ಮಕರ ಸಂಕ್ರಮಣ ಪ್ರಯುಕ್ತ ಆಯಿರಕೊಡ ಅಭಿಷೇಕ ಮತ್ತು ಸಿಯಾಳಾಭಿಷೇಕ ಹಾಗೂ ಶತರುದ್ರಾಭಿಷೇಕ ರಾತ್ರಿ ರಂಗಪೂಜೆ

ತೊಡಿಕಾನ : ಮಲ್ಲಿಕಾರ್ಜುನ ದೇವಳದಲ್ಲಿ ಒಂದು ತಿಂಗಳ ಕಾಲ ಶ್ರದ್ದಾ ಭಕ್ತಿಯಿಂದ ನಡೆದ ಧನುಪೂಜೆ ಸಂಪನ್ನ Read More »

ಪರಂಪರಾಗತ ಕೃಷಿ ವಿಕಾಸ ಯೋಜನೆ ಮಾಹಿತಿ ಕಾರ್ಯಗಾರ

ತೋಟಗಾರಿಕೆ ಇಲಾಖೆ ದಕ್ಷಿಣ ಕನ್ನಡ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು ಸುಳ್ಯ ಹಾಗೂ ಪರಿವಾರ ಪಂಜ ರೈತ ಉತ್ಪಾದಕ ಕಂಪನಿ ಲಿಮಿಟೆಡ್ ಇವರ ಸಹಯೋಗ ದಲ್ಲಿ ಪರಂಪರಾಗತ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ಗುಚ್ಛ ದ ರೈತರಿಗೆ ಸಾವಯವ ಕೃಷಿ, ಪಿ ಜಿ ಎಸ್ ದೃಡೀಕರಣ ಹಾಗೂ ಬೆಳೆ ರೋಗ ನಿರ್ವಹಣೆ ಬಗ್ಗೆ ತರಬೇತಿ ಕಾರ್ಯಕ್ರಮ ಹಾಗೂ ಮಾಹಿತಿ ಕಾರ್ಯಾಗಾರ ಪಂಜ ಲಯನ್ಸ್ ಸಭಾಭವನ ದಲ್ಲಿ ಜ.13 ರಂದು ನಡೆಯಿತು. ಪರಿವಾರ ಪಂಜ ರೈತ ಉತ್ಪಾದಕ ಕಂಪನಿ

ಪರಂಪರಾಗತ ಕೃಷಿ ವಿಕಾಸ ಯೋಜನೆ ಮಾಹಿತಿ ಕಾರ್ಯಗಾರ Read More »

ರಾಜ್ಯದಲ್ಲಿ ಮತ್ತೆ ಎರಡು ದಿನ ಭಾರೀ ಮಳೆ!

ತಮಿಳುನಾಡಿನ ಕರಾವಳಿ ಭಾಗದ ಮನ್ನಾರ್ ಕೊಲ್ಲಿಯಲ್ಲಿ ಸಮುದ್ರ ಮಟ್ಟದಿಂದ 1 ಕಿ.ಮೀ ಎತ್ತರದಲ್ಲಿ ಚಂಡಮಾರುತ ಪ್ರಸರಣ ಉಂಟಾಗಿದೆ. ಚಂಡಮಾರುತದ ಪರಿಣಾಮವಾಗಿ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ನಿನ್ನೆ ಭಾರೀ ಮಳೆಯಾಗಿದ್ದು, ಮುಂದಿನ ಎರಡು ದಿನ ಮಳೆಯಾಗುವ ಮುನ್ಸೂಚನೆಯನ್ನ ಹವಾಮಾನ ಇಲಾಖೆ ನೀಡಿದೆ. ಬೆಂಗಳೂರು, ಮೈಸೂರು, ಬೆಳಗಾವಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನಿನ್ನೆ ಮತ್ತೆ ಮಳೆ ಸಿಂಚನವಾಗಿದೆ. ಉತ್ತರ ಕನ್ನಡ, ಉಡುಪಿ, ಹಾಸನ, ಕೊಡಗು, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇಂದು ಸಾಧಾರಣ ಮಳೆಯಾಗಲಿದ್ದು, ಉತ್ತರ

ರಾಜ್ಯದಲ್ಲಿ ಮತ್ತೆ ಎರಡು ದಿನ ಭಾರೀ ಮಳೆ! Read More »

ಆರಂತೋಡು ಗ್ರಾಮ ಪಂಚಾಯತ್ ನ 2025-26ನೇ ಸಾಲಿನ ಮಕ್ಕಳ ಗ್ರಾಮ ಸಭೆ

ಆರಂತೋಡು ಗ್ರಾಮ ಪಂಚಾಯತ್ ನ 2025-26ಸಾಲಿನ ಮಕ್ಕಳ ಗ್ರಾಮ ಸಭೆಯು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಆರಂತೋಡು ಶಾಲೆಯ ಸಭಾ ಭವನದಲ್ಲಿ ಅಡ್ತಲೆ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಕುl ಧ್ವನಿ ಯವರ ಅಧ್ಯಕ್ಷತೆಯಲ್ಲಿ ಜ.13ರಂದು ನಡೆಯಿತು. ಮಕ್ಕಳ ಗ್ರಾಮ ಸಭೆಯಲ್ಲಿ ಶಿಕ್ಷಣ ಇಲಾಖೆಯ ಸಿ. ಆರ್. ಪಿ. ಮಮತ ಮಹಿಳಾ ಮತ್ತು ಮಕ್ಕಳ ಇಲಾಖೆ ದೀಪಿಕಾ ಮತ್ತು ಅರೋಗ್ಯ ಇಲಾಖೆ ಭಾಗೀರಥಿ. ಇಲಾಖಾ ಮಾಹಿತಿ ನೀಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷರು ಮಕ್ಕಳ ಪ್ರಶ್ನೆಗಳು ಮತ್ತು

ಆರಂತೋಡು ಗ್ರಾಮ ಪಂಚಾಯತ್ ನ 2025-26ನೇ ಸಾಲಿನ ಮಕ್ಕಳ ಗ್ರಾಮ ಸಭೆ Read More »

ಲಾರಿ‌ ಸ್ಕೂಟಿ ಅಪಘಾತದಲ್ಲಿ‌ ಪೆರಂಗೋಡಿ ಮನೆಯ ನಿಶಾಂತ್ ಮೃತ್ಯು

ಕೊಯನಾಡು ಗಣಪತಿ ಗುಡಿ ಸಮೀಪ ಸ್ಕೂಟಿ ಮತ್ತು ಟ್ಯಾಂಕರ್ ನಡುವೆ ಅಪಘಾತವಾಗಿ ಸ್ಕೂಟಿ ಸವಾರ ಮೃತಪಟ್ಟ ಘಟನೆ ಜ.13ರಂದು ವರದಿಯಾಗಿದೆ.ಮೃತಪಟ್ಟ ಸ್ಕೂಟಿ ಸವಾರ ಕೊಯನಾಡು ಪೆರಂಗೋಡಿ ಮನೆಯ ದಿ.ದೇವರಾಜ ಅವರ ಮಗ ನಿಶಾಂತ್ (30) ಎಂದು ಗುರುತಿಸಲಾಗಿದೆ‌.ಸುಳ್ಯ ಕಡೆಯಿಂದ ಮಡಿಕೇರಿ ಕಡೆ ಹೋಗುತ್ತಿದ್ದ ಟ್ಯಾಂಕ‌ರ್ ನ ಹಿಂಬಾಗಕ್ಕೆ ಸ್ಕೂಟಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.ಡಿಕ್ಕಿಯ ರಭಸಕ್ಕೆ ಸ್ಕೂಟಿ ಸವಾರ ಗಂಭೀರ ಗಾಯಗೊಂಡಿದ್ದು ಗಾಯಾಳುವನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸ್ಕೂಟಿ ಸವಾರ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.ಯುವಕನ

ಲಾರಿ‌ ಸ್ಕೂಟಿ ಅಪಘಾತದಲ್ಲಿ‌ ಪೆರಂಗೋಡಿ ಮನೆಯ ನಿಶಾಂತ್ ಮೃತ್ಯು Read More »

ಸುಳ್ಯದಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ

ಸುಳ್ಯದಲ್ಲಿ ಜ.13ರಂದು ರಾತ್ರಿ ಭಾರೀ ಮಳೆ ಸುರಿಯುತ್ತಿರುವ ಘಟನೆ ವರದಿಯಾಗಿದೆ.ಸಂಜೆ ಸ್ವಲ್ಪ ಪ್ರಮಾಣದಲ್ಲಿ ಸುರಿದ ಮಳೆ ರಾತ್ರಿ ತನ್ನ ಅಬ್ಬವರನ್ನು ಹೆಚ್ಚಿಸಿಕೊಂಡಿತು.ಗುಡುಗು ಮಿಂಚಿನೊಂದಿಗೆ ಮಳೆ ಸುರಿಯುತ್ತಿದೆ.ಸಂತೆಗೆ ವಸ್ತುಗಳನ್ನು ಖರೀದಿಸಲು ಬಂದಿದ್ದ ಸಾವಿರಾರು ಜನರು ಮಳೆಯಲ್ಲಿ ಒದ್ದೆಯಾದರು.

ಸುಳ್ಯದಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ Read More »

ಕತ್ತಮಯವಾದ ಸುಳ್ಯ ಕೆ.ಎಸ್.ಆರ್.ಟಿ ಸಿ ಬಸ್ಸು ನಿಲ್ದಾಣಕ್ಕೆ ಮತ್ತೆ ಬಂತು ವಿದ್ಯುತ್

ಕೆ.ಎಸ್.ಆರ್.ಟಿ.ಸಿಯವರು ಮೆಸ್ಕಾಂ ಗೆ ಮುಂಗಡ ಹಣ ಪಾವತಿಸದ ಕಾರಣ ಜ.13ರಂದು ರಾತ್ರಿ 8 ಗಂಟೆಯ ತನಕ ಮೆಸ್ಕಾಂ ವಿದ್ಯುತ್ ಸಂಪರ್ಕ ಕಡಿತಗೊಳಿಸಿ,ಡಿಪೋ ಮ್ಯಾನೇಜರ್ ಅವರ ವಿನಂತಿ ಮೇರೆಗೆ ಮತ್ತೆ ವಿದ್ಯುತ್ ಸಂಪರ್ಕ ನೀಡಿದೆ.ಕೆ.ಆರ್.ಟಿ.ಸಿಯವರು ಮೆಸ್ಕಾಂಗೆ ವಿದ್ಯುತ್ ಬಿಲ್ ಮಂಗಡ ಪಾವತಿಸದ ಕಾರಣದಿಂದಾಗಿ ಮೆಸ್ಕಾಂ ಸಿಬ್ಬಂದಿಗಳು ಇಂದು ಪೀಸ್ ಕಳಚಿಕೊಂಡು ಹೋಗಿದ್ದರು. ಇದರಿಂದ ಪ್ರಯಾಣಿಕರು ಕತ್ತಲಲ್ಲಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿತ್ತು. .ಎಸ್.ಆರ್.ಟಿ.ಸಿ ಡಿಪೋ ಮ್ಯಾನೇಜರ್ ಅವರು‌ ಸಂಬಂಧಪಟ್ಟ ಅಧಿಕಾರಿಯನ್ನು ಸಂಪರ್ಕಿಸಿ‌ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದ್ದು ವಿದ್ಯುತ್ ಸಂಪರ್ಕ ನೀಡುವಂತೆ ವಿನಂತಿಸಿಕೊಂಡಿದ್ದರು.ಬಳಿಕ

ಕತ್ತಮಯವಾದ ಸುಳ್ಯ ಕೆ.ಎಸ್.ಆರ್.ಟಿ ಸಿ ಬಸ್ಸು ನಿಲ್ದಾಣಕ್ಕೆ ಮತ್ತೆ ಬಂತು ವಿದ್ಯುತ್ Read More »

error: Content is protected !!
Scroll to Top