ಅಂಜಲಿ ಮಾಂಟೆಸ್ಸರಿ ಶಾಲೆಯಲ್ಲಿ ಈದ್ ಮಿಲಾದ್ ಆಚರಣೆಯನ್ನು ಸಂತೋಷ, ಸೌಹಾರ್ದತೆ ಮತ್ತು ಭಕ್ತಿಭಾವದಿಂದ ಆಚರಿಸಲಾಯಿತು.
ನಾವು “ವೈವಿಧ್ಯತೆಯಲ್ಲಿ ಏಕತೆ” ಎಂಬ ಸಂದೇಶವನ್ನು ನಂಬುತ್ತೇವೆ. ಪ್ರತಿಯೊಂದು ಧರ್ಮಕ್ಕೂ ತನ್ನದೇ ಆದ ಮಹತ್ವವಿದೆ. ಹಿಂದೂಗಳು ಭಗವದ್ಗೀತೆಯನ್ನು, ಮುಸ್ಲಿಮರು ಖುರಾನ್ನ್ನು, ಕ್ರೈಸ್ತರು ಬೈಬಲ್ನ್ನು ಓದುತ್ತಾರೆ. ಮಾರ್ಗಗಳು ಬೇರೆಬೇರೆ ಆದರೂ, ದೇವರು ಒಬ್ಬನೇ ಎಂಬ ಸಂದೇಶವನ್ನು ಮಕ್ಕಳಿಗೆ ತಿಳಿಸಲಾಯಿತು.
ಈ ಸಂದರ್ಭದಲ್ಲಿ ನಮ್ಮ ಪುಟ್ಟ ಮಕ್ಕಳು ಪ್ರವಾದಿ ಮುಹಮ್ಮದ್ (ಸ) ಅವರ ಮಹತ್ವವನ್ನು ಸಾರುವ ಹಾಡುಗಳನ್ನು ಹಾಡಿ, ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಹಾಗೂ ಪರಸ್ಪರ ಸಿಹಿಯನ್ನು ಹಂಚಿಕೊಂಡರು.
ಈ ಆಚರಣೆಯ ಮೂಲಕ ಮಕ್ಕಳಲ್ಲಿ ಪ್ರೀತಿ, ಶಾಂತಿ, ಸಹೋದರತ್ವ, ಸೌಹಾರ್ದತೆ ಮತ್ತು ಎಲ್ಲ ಧರ್ಮಗಳ ಬಗ್ಗೆ ಗೌರವ ಬೆಳೆಸುವ ಸುಂದರ ಸಂದೇಶವನ್ನು ನೀಡಲಾಯಿತು.
ಅಂಜಲಿ ಮಾಂಟೆಸ್ಸರಿ ಶಾಲೆಯಲ್ಲಿ ಈದ್ ಮಿಲಾದ್ ಆಚರಣೆ


















