ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಲ್ಲಿ ರೈತರ ಖಾತೆಗಳಿಗೆ ನಿರೀಕ್ಷೆಗಿಂತ ಕಡಿಮೆ ಮೊತ್ತ ಬಂದ ಕಾರಣ ವಿಮಾ ಕಂಪನಿಯ ವಿರುದ್ಧ ಮಾನ್ಯ ಪ್ರಧಾನಿ, ಮುಖ್ಯಮಂತ್ರಿ, ಕೃಷಿ ಸಚಿವರು, ಜಿಲ್ಲಾಧಿಕಾರಿ, ಜಂಟಿ ಕೃಷಿ ನಿರ್ದೇಶಕರಿಗೆ ಸುಳ್ಯ ತಾಲೂಕು ತಹಶೀಲ್ದಾರ್ ಮೂಲಕ ಕರ್ನಾಟಕ ರಾಜ್ಯ ರೈತ ಸಂಘದವರು ಡಿ.12ರಂದು
ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷರಾದ ಲೋಲಜಾಕ್ಷ ಭೂತಕಲ್ಲು, ಉಪಾಧ್ಯಕ್ಷರಾದ ತೀರ್ಥರಾಮ ಪರ್ನೋಜಿ (ಉಳುವಾರು)
ರೈತ ನಾಯಕರಾದ ದೇವಪ್ಪ ಗೌಡ ಕುಂದಲ್ಪಾಡಿ.ಮಾಧವ ಗೌಡ.ದೊಡ್ಡ ಹಿತ್ಲು ಮರ್ಕಂಜ.ತೀರ್ಥ ರಾಮ ಬಾಳೆಕಜೆ, ಮಂಜುನಾಥ ಮಡ್ತಿಲ ಉಪಸ್ಥಿತರಿದ್ದರು.
ಬೆಳೆ ವಿಮೆಯಲ್ಲಿ ರೈತರ ಖಾತೆಗಳಿಗೆ ನಿರೀಕ್ಷೆಗಿಂತ ಕಡಿಮೆ ಹಣ ಜಮೆ, ರೈತ ಸಂಘದಿಂದ ಕಂಪೆನಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿಗೆ ಮನವಿ





















































