ಸುಳ್ಯ ನಾವೂರು ಕಾರಣಿಕ ದೈವ ಶ್ರೀ ಕಲ್ಕುಡ, ಶ್ರೀ ಕಲ್ಲುರ್ಟಿ, ಶ್ರೀ ಗುಳಿಗ ದೈವಗಳ ಪುನರ್ ಪ್ರತಿಷ್ಠಾ ಕಲಶೋತ್ಸವದ ಅಂಗವಾಗಿ ಜೂ.15 ರಂದು ಕ್ಷೇತ್ರದಲ್ಲಿ ಕೇರಳದ ಕಾಂಞಂಗಾಡ್ ನಾರಾಯಣ ಮೂರ್ತಿ ಮತ್ತು ಬಾಲಕೃಷ್ಣ ನಂಬೋದರಿ ಯವರ ನೇತೃತ್ವದಲ್ಲಿ ಭಾಗವತ ದಶಮ ಸ್ಕಂದ ಪಾರಾಯಣ ಜರುಗಿತು.
ಈ ಸಂದರ್ಭದಲ್ಲಿ ಆಡಳಿತಧರ್ಮದರ್ಶಿಗಳಾದ ಪಿ.ಕೆ ಉಮೇಶ ಮತ್ತು ಧರ್ಮದರ್ಶಿ ಮಂಡಳಿಯ ಸದಸ್ಯರು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಕೃಷ್ಣ ಕಾಮತ್ ಅರಂಬೂರು ಮತ್ತು ಸದಸ್ಯರು ಭಕ್ತಾದಿಗಳುಉಪಸ್ಥಿತರಿದ್ದರು.
ಸುಳ್ಯ : ನಾವೂರು ಕಾರಣಿಕ ದೈವ ಶ್ರೀ ಕಲ್ಕುಡ, ಶ್ರೀ ಕಲ್ಲುರ್ಟಿ, ಶ್ರೀ ಗುಳಿಗ ದೈವಗಳ ಪುನರ್ ಪ್ರತಿಷ್ಠಾ ಕಲಶೋತ್ಸವಕ್ಕೆ ಚಾಲನೆ



























































