ತೋಟದಲ್ಲಿ ಕೆಲಸ ಮಾಡುತ್ತಿದ್ದ ಕ್ರಷಿ ಕಾರ್ಮಿಕರೊಬ್ಬರಿಗೆ ಕಣಜದ ಹುಳ ಕಚ್ಚಿ ಗಂಭೀರ ಗಾಯವಾದ ಘಟನೆ ಜು.15ರಂದು ವರದಿಯಾಗಿದೆ.
ತೊಡಿಕಾನ ದೊಡ್ಡಕುಮೇರಿ ನಿವಾಸಿ ಕೇಪು ಎಂಬುವರು ಕಣಜದ ಹುಳ ಕಡಿತಕೊಳಗಾದ ವ್ಯಕ್ತಿಯಾಗಿದ್ದಾರೆ.
ಅವರು ಇಂದು ಮಧ್ಯಾಹ್ನ ತೋಟದಲ್ಲಿ ಕೆಲಸ ಕಾಡು ಕಡಿಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇವರು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ತೊಡಿಕಾನ : ಕಣಜದ ಹುಳ ಕಡಿದು ವ್ಯಕ್ತಿ ಗಂಭೀರ




































































