ಪ್ರಚಲಿತ

ನಾಳೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಹಂಚಿಕೆ ಮತ್ತು ಹಸಿರುವಾಣಿ ಸಂಗ್ರಹಣೆ ಕುರಿತು ಪೂರ್ವಭಾವಿ ಸಭೆ

ಸುಳ್ಯ ಸೀಮಾಧಿಪತಿ ತೊಡಿಕಾನ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಕಾಲಾವದಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಹಂಚಿಕೆ ಮತ್ತು ಹಸಿರುವಾಣಿ ಸಂಗ್ರಹಣೆ ಕುರಿತು ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದ್ದು ದಿನಾಂಕ 23-03-2026 ನೇ ಸೋಮವಾರ ಮಂಡೆಕೋಲು ಮತ್ತು ತೊಡಿಕಾನ ದಲ್ಲಿ ಸಭೆ ನಡೆಯಲಿದೆ. ಗ್ರಾಮ /ಬೈಲಿಗೆ ಸಂಬಂಧಪಟ್ಟ ಮನೆಯವರು ಕೆಳಗೆ ತಿಳಿಸಿದ ಸ್ಥಳದಲ್ಲಿ ಸೇರಬೇಕಾಗಿ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ವಿನಂತಿಸಿಕೊಂಡಿದ್ದಾರೆ.ಈ ಕೆಳಗಿನ ನಿವಾಸಿಗಳು ಕೆಳಗೆ ನಿಗದಿಪಡಿಸಿದ ಸ್ಥಳದಲ್ಲಿ ಸಮಯಕ್ಕೆ ಸರಿಯಾಗಿ ಹಾಜರಿರಬೇಕೆಂದು‌ ಮನವಿ ಮಾಡಲಾಗಿದೆ.ಮಂಡೆಕೋಲು1) ಮಂಡೆಕೋಲು ಪ್ರಾಥಮಿಕ ಕೃಷಿ […]

ನಾಳೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಹಂಚಿಕೆ ಮತ್ತು ಹಸಿರುವಾಣಿ ಸಂಗ್ರಹಣೆ ಕುರಿತು ಪೂರ್ವಭಾವಿ ಸಭೆ Read More »

ಶ್ರದ್ಧಾ ಭಕ್ತಿಯಿಂದ ದೊಡ್ಡಡ್ಕ ಕೊರಗಜ್ಜ ದೈವದ ಕೋಲ

ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಗೂನಡ್ಕ ದೊಡ್ಡಡ್ಕ ಶ್ರೀ ಆದಿಬ್ರಹ್ಮ ಮೊಗೇರ್ಕಳ ದೈವಸ್ಥಾನ ೪೫ನೇ ವರ್ಷದ ಆದಿಬ್ರಹ್ಮ ಮೊಗೇರ್ಕಳ ನೇಮೋತ್ಸವ ಹಾಗೂ ಸ್ವಾಮಿ ಕೊರಗಜ್ಜ ನೇಮೋತ್ಸವ ಮಾ.21ರಂದು ಮತ್ತು ಮಾ.22ರಂದು ನಡೆಯಿತು.ಮಾ.೨೧ರಂದು ಬೆಳಗ್ಗೆ ಸ್ಥಳ ಶುದ್ದೀಕರಣ ೭ ತಂಡಗಳಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಂತ್ರಮೂರ್ತಿ ಗುಳಿಗ ದೈವದ ನೇಮ, ರಾತ್ರಿ ಅನ್ನಸಂತರ್ಪಣೆ, ರಾತ್ರಿ ಶ್ರೀ ಮೊಗೇರ್ಕಳ ದೈವಗಳು ಗರಡಿ ಇಳಿಯುವುದು, ರಾತ್ರಿ ಗಂಟೆ ೧೨ಕ್ಕೆ ಮಾಯೆದ ದೇವಿ ತನ್ನಿಮಾನಿ ಗರಡಿ ಇಳಿದು, ಬಟ್ಟಲು ಕಾಣಿಕೆ ಹೂವಿನ ಹಾರ

ಶ್ರದ್ಧಾ ಭಕ್ತಿಯಿಂದ ದೊಡ್ಡಡ್ಕ ಕೊರಗಜ್ಜ ದೈವದ ಕೋಲ Read More »

ಮಾ.31ಕ್ಕೆ ಬೆಳ್ಳಾರೆಯ ಐತಿಹಾಸಿಕ ಸ್ಥಳ ಬಂಗ್ಲೆಗುಡ್ಡೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಬೆಳ್ಳಾರೆಯ ಐತಿಹಾಸಿಕ ಸ್ಥಳ ಬಂಗ್ಲೆಗುಡ್ಡೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಸಂಸ್ಮರಣಾ ದಿನಾಚರಣೆಯನ್ನು ಮಾ.31 ರಂದು ಆಚರಿಸುವ ಬಗ್ಗೆ ಪೂರ್ವಭಾವಿ ಸಭೆಯು ಮಾ.21 ರಂದು ಬೆಳ್ಳಾರೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿದ್ದವರು ತಮ್ಮ ತಮ್ಮ ಭಿಪ್ರಾಯಗಳನ್ನು ತಿಳಿಸಿದರು.ಅಮರ ಸುಳ್ಯ ಸಮರ ಸಮಿತಿ ತಾಲೂಕು ಅಧ್ಯಕ್ಷ ಚಂದ್ರಾಕೋಲ್ಟಾರ್ ಮಾತನಾಡಿ ಐತಿಹಾಸಿಕ

ಮಾ.31ಕ್ಕೆ ಬೆಳ್ಳಾರೆಯ ಐತಿಹಾಸಿಕ ಸ್ಥಳ ಬಂಗ್ಲೆಗುಡ್ಡೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮ Read More »

ಗೂನಡ್ಕದ ಹೋಮ್ ಸ್ಟೇಯಲ್ಲಿ ಯುವಕ ಆತ್ಮಹತ್ಯೆ

ಗೂಡ್ಕದ ಹೋಮ್ ಸ್ಟೇ ಒಂದರಲ್ಲಿ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.ಕಲ್ಲಡ್ಕ ಮೂಲದ ಯುವಕ ತಿಲಕರಾಜ್ ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ಗುರುತಿಸಲಾಗಿದೆ.ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಮೃತದೇಹವನ್ನು ಪೊಲೀಸರು ಆಗಮಿಸಿದ ಬಳಿಕ ಹೊರತೆಗೆಯಲಾಯಿತು.ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಗೂನಡ್ಕದ ಹೋಮ್ ಸ್ಟೇಯಲ್ಲಿ ಯುವಕ ಆತ್ಮಹತ್ಯೆ Read More »

ಅರಂತೋಡು ಸಂಭ್ರಮದ ಈದುಲ್ ಫಿತ್ರ್ ಆಚರಣೆ

ಅರಂತೋಡು ಬದ್ರಿಯಾ ಜುಮಾ ಮಸೀದಿ ಯಲ್ಲಿ ಈದುಲ್ ಫಿತ್ರ್ ನ್ನು ಬಹಳ ಸಂಭ್ರಮ ದಲ್ಲಿ ಆಚರಿಸಲಾಯಿತುಖತಿಬ್ ರಾದ ಬಹು, ಇಸ್ಮಾಯಿಲ್ ಪೈಝಿ ರವರ ನೇತೃತ್ವ ದಲ್ಲಿ ಈದ್ ನಮಾಜ್ ನೆರೆವೇರಿಸಲಾಯಿ, ಮುಸ್ಲಿಂ ಭಾಂದವರು ಮನೆ ಮನೆ ಗಳಿಗೆ ತೆರಳಿ ಈದ್ ವಿನಯ ಮಾಡಿದರು

ಅರಂತೋಡು ಸಂಭ್ರಮದ ಈದುಲ್ ಫಿತ್ರ್ ಆಚರಣೆ Read More »

ಅಂಜಲಿ ಮಾಂಟೆಸ್ಸರಿ ಶಾಲೆಯಲ್ಲಿ ಯುಗಾದಿ ಮತ್ತು ರಮ್ಜಾನ್ ಹಬ್ಬದ ಸಂಭ್ರಮಾಚರಣೆ

ಅಂಜಲಿ ಮಾಂಟೆಸ್ಸರಿ ಶಾಲೆಯಲ್ಲಿ ಮಾ.18ರಂದು ಯುಗಾದಿ ಹಾಗೂ ರಮ್ಜಾನ್ ಹಬ್ಬಗಳನ್ನು ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು.ಈ ವಿಶೇಷ ದಿನದ ಅಂಗವಾಗಿ ಶಾಲೆಯಲ್ಲಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹಬ್ಬದ ವಾತಾವರಣವನ್ನು ಸೃಷ್ಟಿಸಿ ಎಲ್ಲೆಡೆ ಹರ್ಷೋದ್ಗಾರ ಮೂಡಿಸಿದರು.ವಿದ್ಯಾರ್ಥಿಗಳು ಸಂಪ್ರದಾಯಬದ್ಧ ವೇಷಭೂಷಣಗಳನ್ನು ಧರಿಸಿ ಹಬ್ಬದ ವೈಭವವನ್ನು ಹೆಚ್ಚಿಸಿದರು. ಯುಗಾದಿ ಹಬ್ಬದ ಮಹತ್ವ, ಅದರ ಸಂಪ್ರದಾಯಗಳು ಹಾಗೂ ಬೆಲ್ಲ-ಬೇವು ಸೇವಿಸುವುದರ ಅರ್ಥವನ್ನು ಶಾಲೆಯ ಸಂಚಾಲಕಿ ಗೀತಾಂ ಜಲಿ ಟಿ. ಜಿ. ಯವರು ವಿವರಿಸಿದರು. ಅದೇ ರೀತಿ ರಮ್ಜಾನ್ ಹಬ್ಬದ ಮಹತ್ವ, ಉಪವಾಸದ ಆಚಾರ

ಅಂಜಲಿ ಮಾಂಟೆಸ್ಸರಿ ಶಾಲೆಯಲ್ಲಿ ಯುಗಾದಿ ಮತ್ತು ರಮ್ಜಾನ್ ಹಬ್ಬದ ಸಂಭ್ರಮಾಚರಣೆ Read More »

ಮಂಡೆಕೋಲು ಗ್ರಂಥಾಲಯದಲ್ಲಿ ಮಹಿಳಾ ದಿನಾಚರಣೆ

ಮಂಡೆಕೋಲು ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಮಹಿಳಾ ದಿನಾಚರಣೆ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಅಧ್ವೈತ್ ಹುಂಡೈ ಸುಳ್ಯ ಶಾಖಾ ಮೆನೇಜರ್ ಸುಮನಾ ಬೆಳ್ಳಾರ್ಕರ್ ನೆರವೇರಿಸಿದರು.ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಸಾಹಿತಿಗಳಾದ ವಿಮಲಾರುಣ ಪಡ್ಡಂಬೈಲು ಸಾಮಾಜಿಕ ಕ್ಷೇತ್ರದಲ್ಲಿ ಮಹಿಳೆಯ ಒಳಿತು ಕೆಡುಕುಗಳ ಬಗ್ಗೆ ಮಾತನಾಡಿದರು. ಗ್ರಂಥಾಲಯದ ಸ್ಪೋಕನ್‌ ಇಂಗ್ಲಿಷ್ ಶಿಕ್ಷಕಿ ಗೀತಾಂಜಲಿ ಟಿ.ಜಿ ಅಧ್ಯಕ್ಷತೆ ವಹಿಸಿದ್ದರು. ನಿವೃತ ಶಿಕ್ಷಕಿ ಲಕ್ಷ್ಮಿ ಬಿ.ಎಸ್, ಮಂಡೆಕೋಲು ಶಾಲಾ ಶಿಕ್ಷಕಿ ಭವಾನಿ ಮುಡೂರು ಉಪಸ್ಥಿತರಿದ್ದರು. ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಿ ಕಣೆಮರಡ್ಕ ಪ್ರಾಸ್ತಾವಿಕ ಮಾತನ್ನಾಡಿದರು.ಸಭಾ

ಮಂಡೆಕೋಲು ಗ್ರಂಥಾಲಯದಲ್ಲಿ ಮಹಿಳಾ ದಿನಾಚರಣೆ Read More »

ಚಾಂದ್ರಮಾನ ಯುಗಾದಿ – ಸಂಪ್ರದಾಯ, ಸಂಸ್ಕೃತಿ ಮತ್ತು ನವಚೈತನ್ಯದ ಹಬ್ಬ

ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಜೀವನದ ಅವಿಭಾಜ್ಯ ಅಂಗ. ಅವು ಕೇವಲ ಸಂಭ್ರಮ-ಸಡಗರಕ್ಕೆ ಮಾತ್ರ ಸೀಮಿತವಾಗದೆ, ಬದುಕಿನ ಮೌಲ್ಯಗಳನ್ನು ತಿಳಿಸಿಕೊಡುವ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಭಾಗವಾಗಿವೆ. ಅಂತಹ ಹಬ್ಬಗಳಲ್ಲಿ ಯುಗಾದಿ ವಿಶೇಷ ಸ್ಥಾನವನ್ನು ಹೊಂದಿದೆ.“ಯುಗ + ಆದಿ” ಎಂಬ ಪದಗಳಿಂದ ರೂಪುಗೊಂಡ ಯುಗಾದಿ, ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ದೇಶದ ವಿವಿಧ ಭಾಗಗಳಲ್ಲಿ ಈ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಗುತ್ತದೆ. ವಿಶೇಷವಾಗಿ ವಸಂತ ಋತುವಿನಲ್ಲಿ ಬರುವ ಈ ಹಬ್ಬ ಪ್ರಕೃತಿಯ ನವಚೈತನ್ಯವನ್ನು ಪ್ರತಿಬಿಂಬಿಸುತ್ತದೆ. ಮರಗಳು ಚಿಗುರಿ, ಹೂವು-ಹಣ್ಣುಗಳಿಂದ ಹಸಿರಾಗಿ ಕಂಗೊಳಿಸುವ

ಚಾಂದ್ರಮಾನ ಯುಗಾದಿ – ಸಂಪ್ರದಾಯ, ಸಂಸ್ಕೃತಿ ಮತ್ತು ನವಚೈತನ್ಯದ ಹಬ್ಬ Read More »

ನಾಳೆ ಸಾರ್ವತ್ರಿಕ ರಜೆ ಘೊಷಿಸಿ ಜಿಲ್ಲಾಧಿಕಾರಿ ಆದೇಶ

ದ.ಕ – ಉಡುಪಿ ಜಿಲ್ಲೆಗಳಲ್ಲಿ ಈದುಲ್ ಫಿತ್ ಹಬ್ಬವನ್ನು ನಾಳೆ (ಮಾ.20, ಶುಕ್ರವಾರ) ಆಚರಿಸಲಾಗುವುದು ಎಂದು ಜಿಲ್ಲಾ ಖಾಝಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಚಂದ್ರ ದರ್ಶನ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈದುಲ್‌ ಫಿತ‌ರ್ ಹಬ್ಬವು ಶುಕ್ರವಾರ ನಡೆಯಲಿರುವುದರಿಂದ ಜಿಲ್ಲೆಯಾದ್ಯಂತ ಸಾರ್ವತ್ರಿಕ ರಜೆ ಘೋಷಿಸಿ ಜಿಲ್ಲಾಧಿಕಾರಿ ಎಚ್ ವಿ ದರ್ಶನ್ ಆದೇಶಿಸಿದ್ದಾರೆ.

ನಾಳೆ ಸಾರ್ವತ್ರಿಕ ರಜೆ ಘೊಷಿಸಿ ಜಿಲ್ಲಾಧಿಕಾರಿ ಆದೇಶ Read More »

ಸುಳ್ಯ ಸೀಮೆ ತೊಡಿಕಾನ‌ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಸುಳ್ಯ ಸೀಮೆ ತೊಡಿಕಾನ ಶ್ರೀ‌ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವ ಏಪ್ರಿಲ್ 13 ರಿಂದ 20 ರ ತನಕ ವೈಭವದಿಂದ ನಡೆಯಲಿದ್ದು ಜಾತ್ರೋತ್ಸವವನ್ನು ಅದ್ದೂರಿಯಾಗಿ ನಡೆಸಲು ಜಾತ್ರೋತ್ಸವದ ಪೂರ್ವಭಾವಿ ಸಭೆ ಹಾಗೂ ಆಮಂತ್ರಣ ಬಿಡುಗಡೆ ಸಮಾರಂಭ ದೇವಳದ ಅಕ್ಷಯ ಮಂದಿರದಲ್ಲಿ ಮಾ.19ರಂದು ನಡೆಯಿತು.ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ ಸಭೆಯ ಅಧ್ಯಕ್ಷತೆ ವಹಿಸಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿದರು.ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಮಾತನಾಡಿ ಜಾತ್ರೋತ್ಸವಕ್ಕೆ ಉಪಸಮಿತಿಗಳು ಯಾವ ರೀತಿ ತಯಾರಿ ನಡೆಸಬೇಕೆಂದು ಮಾಹಿತಿ

ಸುಳ್ಯ ಸೀಮೆ ತೊಡಿಕಾನ‌ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ Read More »

error: Content is protected !!
Scroll to Top