ಪ್ರಚಲಿತ

ಕೊಲ್ಲಮೊಗ್ರು : ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕು ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಸುಬ್ರಹ್ಮಣ್ಯ ವಲಯ. ಇವುಗಳ ಸಂಯುಕ್ತ ಆಶ್ರಯದಲ್ಲಿ ಕೊಲ್ಲಮೊಗ್ರು ಎ, ಕೊಲ್ಲಮೊಗ್ರು ಬಿ, ಕಟ್ಟ ಗೋವಿಂದನಗರ ಮತ್ತು ಕಲ್ಮಕಾರು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜಾ ಕಾರ್ಯಕ್ರಮ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಕೊಲ್ಲಮೊಗ್ರು ಶ್ರೀ ಮಯೂರ ಕಲಾ ಮಂದಿರದಲ್ಲಿ ಅಧ್ಯಕ್ಷರಾದ ಮಾಧವ ಚಾಂತಳರವರ ಅಧ್ಯಕ್ಷತೆಯಲ್ಲಿ ಜೂ.19ರಂದು […]

ಕೊಲ್ಲಮೊಗ್ರು : ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ. Read More »

ಪಂಜ : ವೀಲ್ ಕೇರ್ ಸೆಂಟರ್ ಶುಭಾರಂಭ

ಪಂಜದ ಕೃಷ್ಣ ನಗರದಲ್ಲಿ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಬಳಿ ಯತೀಶ್ ಜಾಲ್ತಾರು ರವರ ಮಾಲಕತ್ವದ ಶಿವದುರ್ಗಾ ವೀಲ್ ಕೇರ್ ಜೂ. 18 ರಂದು ಶುಭಾರಂಭಗೊಂಡಿತು.ಇಲ್ಲಿ 3D ವೀಲ್ ಅಲೈನ್ ಮೆಂಟ್ ಆಟೋಮೆಟಿಕ್ ಟೈಯರ್ ಚಾರ್ಜಿಂಗ್, ವೀಲ್ ಬ್ಯಾಲೆನ್ಸಿಂಗ್, ನೈಟ್ರೋಜನ್ ಫಿಲ್ಲಿಂಗ್ ಮತ್ತು ಟೈಯರ್ ಮಾರಾಟ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್ ಟೈರ್ ಅಂಗಡಿಯನ್ನು ಉದ್ಘಾಟಿಸಿದರು. ವೀಲ್ ಅಳ್ಳಿನ್ಸೆಂಟ್ ಹಿರಿಯ ವೈದ್ಯರಾದ ಡಾ. ರಾಮಯ್ಯ ಭಟ್ ಉದ್ಘಾಟಿಸಿದರು. ಸಂತೋಷ್

ಪಂಜ : ವೀಲ್ ಕೇರ್ ಸೆಂಟರ್ ಶುಭಾರಂಭ Read More »

ತೊಡಿಕಾನ : ಸಹಾಯಧನ ಹಸ್ತಾಂತರ

ಶ್ರೀ ಕ್ಷೇ.ಧ.ಗ್ರಾ.ಯೋಜನೆ (ರಿ) ಬಿಸಿ. ಟ್ರಸ್ಟ್ ‘ಸುಳ್ಯದ.ಕ. ಸಂಪಾಜೆ ವಲಯದ ತೊಡಿಕಾನ ಕಾಯ೯ ಕ್ಷೇತ್ರದ ಮ೦ಜುಭಾಷಿಣಿ ಸಂಘದ ಸದಸ್ಯರಾದ ನಮೀತ ರವರ ಮನೆಗೆ ವಿಪರೀತ ಗಾಳಿಮಳೆಗೆ ಪಕ್ಕದ ತೆಂಗಿನ ಮರ ಬಿದ್ದ ಪರಿಣಾಮ ಮನೆ ಸಂಪೂರ್ಣ ಹಾನಿಯಾಗಿ, ಪುನರ್ ನಿರ್ಮಣ ಕ್ಕಾಗಿ ಶ್ರೀ. ಕ್ಷೇತ್ರಧರ್ಮಸ್ಥಳದಿಂದ ಮುಂಜೂರಾದ ಸಹಾಯಧನ ರೂ7,500 ರ ಮಂಜೂರಾತಿ ಪತ್ರವನ್ನು ಒಕ್ಕೂಟದ ಅಧ್ಯಕ್ಷರಾದ ಜನಾರ್ಧನ ಬಾಳೆಕಜೆ ರವರು ವಿತರಣೆ ಮಾಡಿದರು.ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕರಾದ ಹರೀಶ್ ಆಚಾರ್ಯ, ವಲಯ ಅಧ್ಯಕ್ಷರಾದ ಹೂವಯ್ಯ ಗೌಡ, ನೂತನಒಕ್ಕೂಟದ

ತೊಡಿಕಾನ : ಸಹಾಯಧನ ಹಸ್ತಾಂತರ Read More »

ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಮಹಿಳೆಗೆ ಮನೆ ಹಸ್ತಾಂತರ ಕಾರ್ಯಕ್ರಮ

ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದಹಾಲೆಮಜಲು ಒಕ್ಕೂಟದ ಮಹಾಲಕ್ಷ್ಮಿ ಸಂಘದ ಸದಸ್ಯರಾದ ಒಂಟಿ ಮಹಿಳೆ ಯಮುನಾ ಅವರಿಗೆ ಮನೆ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್( ರಿ )ಗುತ್ತಿಗಾರು ವಲಯದ ನಾಲ್ಕೂರು ಗ್ರಾಮದ ಹಾಲೆಮಜಲು ಒಕ್ಕೂಟದ ಮಹಾಲಕ್ಷ್ಮಿ ಸಂಘದ ಸದಸ್ಯರಾದ ಯಮುನಾ ಅಮೆ ರವರು ಒಂಟಿ ಮಹಿಳೆಯಾಗಿದ್ದು, ಕಳೆದ ಕೆಲವು ವರ್ಷಗಳಿಂದ ಸ್ವಂತ ಮನೆ ನಿರ್ಮಾಣಕ್ಕೆ ಪ್ರಯತ್ನಿಸುತ್ತಿದ್ದರು, ಈ ಬಗ್ಗೆ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪೂಜ್ಯ ಖಾವಂದರಿಗೆ ಮನವಿ ಮಾಡಿಕೊಂಡ

ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಮಹಿಳೆಗೆ ಮನೆ ಹಸ್ತಾಂತರ ಕಾರ್ಯಕ್ರಮ Read More »

ಸುಳ್ಯ : ಶ್ರದ್ಧಾ ಭಕ್ತಿಯಿಂದ ನಡೆದ ಶ್ರೀ ಕಲ್ಕುಡ ಪರಿವಾರ ದೈವಗಳ ಪುನ‌ರ್ ಪ್ರತಿಷ್ಠಾ ಕಲಶೋತ್ಸವ

ಸುಳ್ಯ ನಾವೂರು ಕಾರಣಿಕ ದೈವ ಶ್ರೀ ಕಲ್ಕುಡ ಕ್ಷೇತ್ರದ ನವೀಕೃತ ಶಿಲಾಮಯ ಗುಡಿಯಲ್ಲಿ ಶ್ರೀ ಕಲ್ಕುಡ, ಕಲ್ಲುರ್ಟಿ ದೈವಗಳ ಹಾಗು ಗುಳಿಗ ದೈವದ ಕಟ್ಟೆಯಲ್ಲಿ ಗುಳಿಗ ದೈವದ ಪುನ‌ರ್ ಪ್ರತಿಷ್ಠಾ ಕಲಶೋತ್ಸವ ಶ್ರದ್ಧಾ ಭಕ್ತಿಯಿಂದ ನಡೆಯಿತು. ತಂತ್ರಿಗಳಾದ ಬ್ರಹ್ಮಶ್ರೀ ವೇ.ಮೂ ಗಣೇಶ ತಂತ್ರಿ ದೇಲಂಪಾಡಿಯ ಮಾರ್ಗದರ್ಶನದಲ್ಲಿ ಬೆಳಿಗ್ಗೆ ಗಣಪತಿ ಹೋಮ, ಬ್ರಹ್ಮಕಲಶ ಪೂಜೆ ನಡೆದು 8.08 ರಿಂದ 9.06ರ ಕರ್ಕಾಟಕ ಲಗ್ನದ ಶುಭ ಮುಹೂರ್ತದಲ್ಲಿ ಶ್ರೀ ಕಲ್ಕುಡ, ಕಲ್ಲುರ್ಟಿ, ಗುಳಿಗ ದೈವಗಳ ಪುನ‌ರ್ ಪ್ರತಿಷ್ಠಾ ಕಲಶಾಭಿಷೇಕ ನೆರವೇರಿತು.

ಸುಳ್ಯ : ಶ್ರದ್ಧಾ ಭಕ್ತಿಯಿಂದ ನಡೆದ ಶ್ರೀ ಕಲ್ಕುಡ ಪರಿವಾರ ದೈವಗಳ ಪುನ‌ರ್ ಪ್ರತಿಷ್ಠಾ ಕಲಶೋತ್ಸವ Read More »

ನಿವೃತ್ತ ಶಿಕ್ಷಕ ವೆಂಕಟ್ರಮಣ ಗೌಡ ಅಡ್ಡನಪಾರೆ ನಿಧನ

ದೇವಚಳ್ಳ ಗ್ರಾಮದ ಅಡ್ಡನಪಾರೆ (ಪುಳಿಕುಕ್ಕು) ನಿವೃತ್ತ ಶಿಕ್ಷಕ ವೆಂಕಟ್ರಮಣ ಗೌಡ ಅಡ್ಡನಪಾರೆ ಅಲ್ಪ ಕಾಲದ ಅಸೌಖ್ಯದಿಂದ ಇಂದು (ಜೂ.18) ನಿಧನರಾದರು. ಶಿಕ್ಷಕರಾಗಿ ಸೇವೆ ದರ್ಬೆತಡ್ಕ ಶಾಲೆಯಲ್ಲಿ ಸೇವೆ ಆರಂಭಿಸಿದ ಅವರು ಕಂದ್ರಪ್ಪಾಡಿ, ದೊಡ್ಡತೋಟ, ಅರಂತೋಡು, ಗಾಂಧಿನಗರ ಹಾಗೂ ಸುಳ್ಯ ಜೂನಿಯರ್ ಕಾಲೇಜಿನಲ್ಲಿ ಹೈಸ್ಕೂಲ್ ಶಿಕ್ಷಕರಾಗಿ ಸೇವೆ ಸಲ್ಕಿಸಿ ನಿವೃತ್ತರಾಗಿದ್ದರು.ಕೆಲ ವರ್ಷದಿಂದ ಪುತ್ರೂರಿನ ಕಲ್ಚರ್ಪೆಯಲ್ಲಿ ನೆಲೆಸಿದ್ದ ಅವರು ಅನಾರೋಗ್ಯಕ್ಕೆ ಒಳಗಾಗಿ ಮಣಿಪಾಲ ಕೆಎಂಸಿ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ನಿವೃತ್ತ ಶಿಕ್ಷಕಿ

ನಿವೃತ್ತ ಶಿಕ್ಷಕ ವೆಂಕಟ್ರಮಣ ಗೌಡ ಅಡ್ಡನಪಾರೆ ನಿಧನ Read More »

ಸುಳ್ಯ ಪೊಲೀಸ್ ಠಾಣೆಯಲ್ಲಿ ಜೇಸಿಐ ಸುಳ್ಯ ಪಯಶ್ವಿನಿ ವತಿಯಿಂದ ಮಹಾತ್ಮಾ ಗಾಂಧಿ ಮಲ್ನಾಡ್ ವಿದ್ಯಾರ್ಥಿಗಳಿಗೆ ತೆರೆದ ಮನೆ ಕಾರ್ಯಕ್ರಮ

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಕೊಡಿಯಾಲ ಬೈಲ್ ಮಹಾತ್ಮ ಗಾಂಧಿ ಮಲ್ನಾಡ್‌ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತೆರೆದ ಮನೆ ಕಾರ್ಯಕ್ರಮವನ್ನು ಸುಳ್ಯ ಪೊಲೀಸ್ ಠಾಣೆಯಲ್ಲಿ ಜೂ 18 ರಂದು ಆಯೋಜಿಸಲಾಗಿತ್ತು.ಮಕ್ಕಳಿಗೆ ಸಂಬಂಧಿತ ಕಾನೂನುಗಳು ಹಾಗೂ ಪೊಲೀಸ್ ಠಾಣಾ ಕಾರ್ಯ ವೈಖರಿ ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ ಕಾರ್ಯಾಗಾರ ನಡೆಯಿತು.ಠಾಣಾ ಉಪನಿರೀಕ್ಷಕರಾದ ಸಂತೋಷ್ ಕುಮಾರ್ ಬಿ. ಪಿ ರವರು  ಪೊಲೀಸ್ ಠಾಣೆಯಲ್ಲಿ ನಡೆಯುವ ಕಾರ್ಯಗಳ ಬಗ್ಗೆ ಠಾಣೆಯಲ್ಲಿನ ಎಲ್ಲಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಕೊಠಡಿ ಮತ್ತು ಉಪಕರಣ, ಬಂದಿಕಾನ ಮುಂತಾದ ವಿಷಯಗಳ

ಸುಳ್ಯ ಪೊಲೀಸ್ ಠಾಣೆಯಲ್ಲಿ ಜೇಸಿಐ ಸುಳ್ಯ ಪಯಶ್ವಿನಿ ವತಿಯಿಂದ ಮಹಾತ್ಮಾ ಗಾಂಧಿ ಮಲ್ನಾಡ್ ವಿದ್ಯಾರ್ಥಿಗಳಿಗೆ ತೆರೆದ ಮನೆ ಕಾರ್ಯಕ್ರಮ Read More »

ದೇವಸ್ಥಾನಗಳು ಸಂಸ್ಕತಿಯ ಕೇಂದ್ರವಾದರೆ ದೈವಸ್ಥಾನಗಳು ಸಂಸ್ಕಾರದ ಕೇಂದ್ರಗಳಾಗಿವೆ :ಎಡನೀರು ಶ್ರೀ

ಸುಳ್ಯ : ದೇವಸ್ಥಾನಗಳು ಸಂಸ್ಕತಿಯ ಕೇಂದ್ರವಾದರೆ ದೈವಸ್ಥಾನಗಳು ಸಂಸ್ಕಾರದ ಕೇಂದ್ರಗಳಾಗಿವೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಮಹಾಸ್ವಾಮಿಗಳು ಹೇಳಿದರು.ಸುಳ್ಯ ನಾವೂರು ನವೀಕ್ರತ ಶಿಲಾಮಯ ಗುಡಿಯಲ್ಲಿ ಶ್ರೀ ಕಲ್ಕುಡ ಕಲ್ಲುರ್ಟಿ ಹಾಗೂ ಗುಳಿಗ ದೈವದ ಕಟ್ಟೆಯಲ್ಲಿ ಪುನರ್ ಪ್ರತಿಷ್ಠಾ ಕಲಶೋತ್ಸವ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.ಆಧುನಿಕ ಕಾಲಘಟ್ಟದಲ್ಲಿ ಯುವ ಜನತೆ ಧಾರ್ಮಿಕ ನಂಬಿಕೆಯಿಂದ ವಿಮುಖವಾಗುತ್ತಿರುವುದು ವಿಷಾಧದ ವಿಷಯ.ಧಾರ್ಮಿಕ ಪ್ರಜ್ಞೆ ಯೊಂದಿಗೆ ರಾಷ್ಟ್ರೀತೆಯತೆ ಭಾವನೆ ಮೂಡಿಸುವ ಜವಾಬ್ದಾರಿಯೂ ಶ್ರದ್ಧಾ ಕೇಂದ್ರಗಳಿಂದ ನಡೆಯಬೇಕು.ಇಂದು

ದೇವಸ್ಥಾನಗಳು ಸಂಸ್ಕತಿಯ ಕೇಂದ್ರವಾದರೆ ದೈವಸ್ಥಾನಗಳು ಸಂಸ್ಕಾರದ ಕೇಂದ್ರಗಳಾಗಿವೆ :ಎಡನೀರು ಶ್ರೀ Read More »

ಬಿಜೆಪಿ ಸುಳ್ಯ ಮಂಡಲ ಓಬಿಸಿ ಮೋರ್ಚಾದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

ಬಿಜೆಪಿ ಸುಳ್ಯ ಮಂಡಲದ ಓಬಿಸಿ ಮೋರ್ಚಾದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಸುಳ್ಯ ಭಾಜಪ ಕಚೇರಿಯಲ್ಲಿ ಜೂ.17 ರಂದು ನಡೆಯಿತು.ಈ ಸಭೆಯಲ್ಲಿ ಓಬಿಸಿ ಮೋರ್ಚಾದ ಜಿಲ್ಲಾ ಅಧ್ಯಕ್ಷರಾದ ಮಹೇಶ್ ಜೋಗಿ ಪ್ರಧಾನ ಕಾರ್ಯದರ್ಶಿಯಾದ ಮೋಹನ ದೇವಸ್ಯ, ಜಿಲ್ಲಾ ಉಪಾಧ್ಯಕ್ಷರಾದ ರಾಘವೇಂದ್ರ, ಸುಳ್ಯಮಂಡಲದ ಪ್ರಭಾರಿಯಾದ ವಿನೋದ್ ಮತ್ತು ಅಧ್ಯಕ್ಷರಾದ ವೆಂಕಟ್ ವಳಂಬೆ, ಪ್ರಧಾನ ಕಾರ್ಯದರ್ಶಿಯಾದ ಶಶಿಧರ ಕಲ್ಮಂಜ ಮಂಡಲ ಪ್ರಧಾನ ಕಾರ್ಯದರ್ಶಿಯಾದ ವಿನಯಕುಮಾರ್ ಕಂದಡ್ಕ, ಜಿಲ್ಲಾ ಕಾರ್ಯದರ್ಶಿ ಪುಷ್ಪಾ ಮೇದಪ್ಪ, ಸುಳ್ಯ ಮಂಡಲದ ಓಬಿಸಿ ಮೋರ್ಚಾದ ಪ್ರಭಾರಿಯಾದ ಭಾರತಿ ಪುರುಷೋತ್ತಮ,

ಬಿಜೆಪಿ ಸುಳ್ಯ ಮಂಡಲ ಓಬಿಸಿ ಮೋರ್ಚಾದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ Read More »

ಸುಳ್ಯ : ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ,ತರಬೇತಿ ಕಾರ್ಯಗಾರ ಉದ್ಘಾಟನೆ

ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರ ನೋಂದಣಾಧಿಕಾರಿಯವರ ಉಪಸ್ಥಿತಿಯಲ್ಲಿ ಸುಳ್ಯ ತಾಲೂಕು ಆಡಳಿತ ವತಿಯಿಂದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ 2026 ಮತ್ತು ಮತಗಟ್ಟೆ ಮಟ್ಟದ ಅಧಿಕಾರಿಯವರಿಗೆ,ಮತಗಟ್ಟೆ ಮಟ್ಟದ ಏಜೆಂಟ್ ಗಳಿಗೆ ತರಬೇತಿ ಕಾರ್ಯಗಾರ ಸುಳ್ಯದ ಬಂಟರ ಭವನದಲ್ಲಿ ಜೂ.17ರಂದು ಆರಂಭಗೊಂಡಿದೆ.ಮತದಾರರ ನೋಂದಣಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಜಯಲಕ್ಷ್ಮಿ ಕಾರ್ಯಗಾರ ಉದ್ಘಾಟಿಸಿದರು.ಮತದಾರರ ಉಪನೋಂದಣಾಧಿಕಾರಿ ಮತ್ತು ಸುಳ್ಯ ತಹಶೀಲ್ದಾರ್ ಮಂಜುಳ,ಉಪ ತಹಶೀಲ್ದಾರ್ ಚಂದ್ರಕಾಂತ,ಮಾಸ್ಟರ್ ತರಬೇತಿದಾರರಾದ ಸತೀಶ್ ಕುಮಾರ್ ಕೊಂಗೈಜೆ,ಲಿಂಗಪ್ಪ ಬೆಳ್ಳಾರೆ ತರಬೇತಿ ನೀಡಿದರು‌.

ಸುಳ್ಯ : ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ,ತರಬೇತಿ ಕಾರ್ಯಗಾರ ಉದ್ಘಾಟನೆ Read More »

error: Content is protected !!
Scroll to Top