ಪ್ರಚಲಿತ

ಗೂನಡ್ಕ ಹಾಡುಹಗಲೇ ಕಳ್ಳತನ ಮಸೀದಿಯ ಕಾಣಿಕೆ ಹುಂಡಿ ಕಳವು

ಗೂನಡ್ಕ: ಬದ್ರಿಯಾ ಜುಮ್ಮಾ ಮಸೀದಿಯ ಹರಕೆ ಹುಂಡಿಯನ್ನು ಕಳವು ಮಾಡಿರುವ ಘಟನೆ ಮಾ.30 ರಂದು ಗೂನಡ್ಕ ದಿಂದ ವರದಿಯಾಗಿದೆ .ಮದ್ಯಾಹ್ನ ಹೊತ್ತಿಗೆ ವ್ಯಕ್ತಿ ಯೊಬ್ಬರು ಮಸೀದಿ ಒಳಗೆ ನುಗ್ಗಿ ಕಾಣಿಕೆ ಹುಂಡಿ ಹೊಡೆದು ಹಣವನ್ನು ದೋಚಿದಾನೆ.ಸಿಸಿಟಿವಿ ದೃಶ್ಯ ದಲ್ಲಿ ವ್ಯಕ್ತಿಯ ಚಹರೆ ಗುರುತು ಪತ್ತೆಯಾಗಿದೆ. ನಡೆದಿದ್ದು, ಕಳ್ಳತನದ ಪಕ್ಕಾ ಮಾಹಿತಿ ಲಭ್ಯವಾಗಿದೆ.ಸೋಮವಾರ ಮಧ್ಯಾಹ್ನ ಸರಿಯಾಗಿ 12:10 ಗಂಟೆಗೆ ವ್ಯಕ್ತಿಯೊಬ್ಬ ಮಸೀದಿಯ ಆವರಣ ಪ್ರವೇಶಿಸಿ ಹರಕೆ ಹುಂಡಿಯನ್ನು ಕಳವು ಮಾಡಿದ್ದಾನೆ. ಈ ಸಂಪೂರ್ಣ ಕೃತ್ಯವು ಮಸೀದಿಯ ಸಿಸಿಟಿವಿ ಕ್ಯಾಮೆರಾದಲ್ಲಿ […]

ಗೂನಡ್ಕ ಹಾಡುಹಗಲೇ ಕಳ್ಳತನ ಮಸೀದಿಯ ಕಾಣಿಕೆ ಹುಂಡಿ ಕಳವು Read More »

ಇಂದು (ಮಾ.31) ಸುಳ್ಯ ಮತ್ತು ಅರಂತೋಡಿನಲ್ಲಿ ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವದ ಹಸಿರುವಾಣಿ ಸಂಗ್ರಹಣೆ ಮತ್ತು ಆಮಂತ್ರಣ ಪತ್ರಿಕೆ ಹಂಚಿಕೆಯ ಪೂರ್ವಭಾವಿ ಸಭೆ

ಸುಳ್ಯ ಸೀಮಾಧಿಪತಿ ತೊಡಿಕಾನ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಕಾಲಾವದಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಹಂಚಿಕೆ ಮತ್ತು ಹಸಿರುವಾಣಿ ಸಂಗ್ರಹಣೆ ಕುರಿತಾದ ಸಭೆ ಇಂದು(ಮಾ.31) ಮಂಗಳವಾರ ಸುಳ್ಯ ಮತ್ತು ಅರಂತೋಡು ಗ್ರಾಮದಲ್ಲಿ ನಡೆಯಲಿದ್ದು ಗ್ರಾಮ /ಬೈಲಿಗೆ ಸಂಬಂಧಪಟ್ಟ ಮನೆಯವರು ಕೆಳಗೆ ತಿಳಿಸಿದ ಸ್ಥಳದಲ್ಲಿ ಸೇರಬೇಕಾಗಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಯು.ಕೆ ಹಾಗೂ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ವಿನಂತಿಸಿಕೊಂಡಿದ್ದಾರೆ.ಸುಳ್ಯಕಾಯರ್ತೋಡಿಸ್ಥಳ: ಶ್ರೀ ಮಹಾವಿಷ್ಣು ದೇವಸ್ಥಾನಸಮಯ :ಸಂಜೆ 4:00ಕ್ಕೆಅರಂತೋಡುಅರಂತೋಡು ಪೇಟೆ -ಕಲ್ಲುಗದ್ದೆ -ಶುಂಟ್ಯಡ್ಕಸ್ಥಳ :ಶ್ರೀ ದುರ್ಗಾಮಾತಾ ಭಜನಾ

ಇಂದು (ಮಾ.31) ಸುಳ್ಯ ಮತ್ತು ಅರಂತೋಡಿನಲ್ಲಿ ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವದ ಹಸಿರುವಾಣಿ ಸಂಗ್ರಹಣೆ ಮತ್ತು ಆಮಂತ್ರಣ ಪತ್ರಿಕೆ ಹಂಚಿಕೆಯ ಪೂರ್ವಭಾವಿ ಸಭೆ Read More »

ಆರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಾಸಿಕ ಸ್ವಚ್ಛತಾ ಕಾರ್ಯಕ್ರಮ

ಮಾ.29 ರಂದು ಗ್ರಾಮ ಪಂಚಾಯತ್ ಅರಂತೋಡು ಮತ್ತು ದುರ್ಗಾ ಮಾತಾ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಅರಂತೋಡು ಇವುಗಳ ಸಹಯೋಗದಲ್ಲಿ ಪ್ರತಿ ತಿಂಗಳ ಕೊನೆಯ ಭಾನು ವಾರದಂದು ನಡೆಯುತ್ತಿರು ವ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.ಪೂ 7.30 ಯಿಂದ 9 30ರ ವರೆಗೆ ನಡೆದ ಹೆದ್ದಾರಿ ಸ್ಫಚತೆ ಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಗ್ರಾಮ ಪಂಚಾಯತ್ ನ ನಿಕಟ ಪೂರ್ವ ಅಧ್ಯಕ್ಷರು ಕೇಶವ ಅಡ್ತಲೆ,ಸಿಬ್ಬಂದಿಗಳು. ಸ್ವಚ್ಛತಾ ತಂಡದ ಸಿಬ್ಬಂದಿಗಳು ಹಾಗೂ ಸಂಜೀವಿನಿ ಒಕ್ಕೂಟದವರು ಭಾಗವಹಿಸಿದರು.

ಆರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಾಸಿಕ ಸ್ವಚ್ಛತಾ ಕಾರ್ಯಕ್ರಮ Read More »

ದಕ್ಷಿಣ ಕನ್ನಡ ಸಾಹಿತ್ಯ ನಿರಂತರ ಸ್ಥಿತ್ಯಂತರಗಳ ಪಯಣ-ಡಾ.ಅನುರಾಧಾ ಕುರುಂಜಿ:

ಬಂಟ್ವಾಳ:ಸಾಹಿತ್ಯವು ನಿರಂತರ ಸ್ಥಿತ್ಯಂತರಗಳ ಪಯಣವಾಗಿದ್ದು,ಇಲ್ಲಿನ ಸಾಹಿತ್ಯ ಕೇವಲ ಪುಸ್ತಕದಲ್ಲಿ ಉಳಿಯದೆ,ಜನಪದ, ಯಕ್ಷಗಾನದ ಮೂಲಕ ಜನಜೀವನದಲ್ಲಿ ಬೆರೆತು ಹೋಗಿದೆ ಎಂದು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಅನುರಾಧಾ ಕುರುಂಜಿ ಹೇಳಿದರು. ಬಂಟ್ವಾಳದಲ್ಲಿ ನಡೆದ ದ.ಕ.ಜಿಲ್ಲಾಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲೆಯ ಸಾಹಿತ್ಯ-ಸಂಸ್ಕೃತಿ ವಿಚಾರಗೋಷ್ಠಿಯಲ್ಲಿ ಸಾಹಿತ್ಯದ ಸ್ಥಿತ್ಯಂತರಗಳು ಎಂಬ ವಿಚಾರದ ಕುರಿತು ಮಾತನಾಡಿದರು. ಆಧುನಿಕ ಯುಗದಲ್ಲಿ ನವೋದಯದಿಂದ ಪ್ರಾರಂಭಗೊಂಡು ಸಾಮಾಜಿಕ ಚಿಂತನೆ, ಮಹಿಳಾ ಧ್ವನಿ, ಯುವ ಲೇಖಕರ ಮೂಲಕ ಸಾಹಿತ್ಯ ಹೊಸ ರೂಪಗಳನ್ನು ಪಡೆದುಕೊಂಡಿದೆ. ರತ್ನಾಕರ ವರ್ಣಿಯಾದಿಯಾಗಿ ಮುದ್ದಣ, ಗೋವಿಂದ

ದಕ್ಷಿಣ ಕನ್ನಡ ಸಾಹಿತ್ಯ ನಿರಂತರ ಸ್ಥಿತ್ಯಂತರಗಳ ಪಯಣ-ಡಾ.ಅನುರಾಧಾ ಕುರುಂಜಿ: Read More »

ಮದುವೆಗೆ ಸಿಗಲಿದೆ ರೂ.60,000 ಸಹಾಯಧನ!

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ನೋಂದಾಯಿತ ಕಾರ್ಮಿಕರ ಅಥವಾ ಅವರ ಮಕ್ಕಳ ಮದುವೆಗೆ ₹60,000 ಆರ್ಥಿಕ ನೆರವು ನೀಡುತ್ತಿದೆ.ಕನಿಷ್ಠ ಒಂದು ವರ್ಷ ಹಳೆಯದಾದ ಚಾಲ್ತಿಯಲ್ಲಿರುವ ಲೇಬ‌ರ್ ಕಾರ್ಡ್ ಹೊಂದಿರುವವರು ಈ ಸೌಲಭ್ಯಕ್ಕೆ ಅರ್ಹರು. ವಧುವಿಗೆ 18 ಹಾಗೂ ವರನಿಗೆ 21 ವರ್ಷ ತುಂಬಿರಬೇಕು. ಒಂದು ಕುಟುಂಬದ ಇಬ್ಬರು ಮಕ್ಕಳಿಗೆ ಮಾತ್ರ ಈ ಧನಸಹಾಯ ಸಿಗಲಿದ್ದು, ಸೇವಾ ಸಿಂಧು ಕೇಂದ್ರ ಅಥವಾ ಮಂಡಳಿಯ ಅಧಿಕೃತ ವೆಬ್‌ಸೈಟ್‌ ಮೂಲಕ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.

ಮದುವೆಗೆ ಸಿಗಲಿದೆ ರೂ.60,000 ಸಹಾಯಧನ! Read More »

ಐಪಿಎಲ್ : ಕೆ.ಕೆ.ಆರ್ ವಿರುದ್ಧ ಗೆದ್ದು ಬೀಗಿದ ಮುಂಬೈ!

ಕೆಕೆಆರ್ ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆದ್ದು ಬೀಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆ‌ರ್, ಅಜಿಂಕ್ಯ ರಹಾನೆ (67) ಮತ್ತು ರಘುವಂಶಿ (51) ಅವರ ಅರ್ಧಶತಕಗಳ ನೆರವಿನಿಂದ 220 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಗುರಿ ಬೆನ್ನಟ್ಟಿದ ಮುಂಬೈಗೆ ರೋಹಿತ್ ಶರ್ಮಾ (78 ರನ್, 38 ಎಸೆತ) ಮತ್ತು ರಯಾನ್ ರಿಕೆಲ್ಟನ್ (81 ರನ್, 43 ಎಸೆತ) ಮೊದಲ ವಿಕೆಟ್‌ಗೆ 148 ರನ್‌ಗಳ ಸ್ಫೋಟಕ ಜೊತೆಯಾಟ ನೀಡಿದ್ದರು. 19.1 ಓವರ್‌ಗಳಲ್ಲಿ ಮುಂಬೈ 4 ವಿಕೆಟ್ ಕಳೆದುಕೊಂಡು

ಐಪಿಎಲ್ : ಕೆ.ಕೆ.ಆರ್ ವಿರುದ್ಧ ಗೆದ್ದು ಬೀಗಿದ ಮುಂಬೈ! Read More »

ಐವರ್ನಾಡು : ಅಸಾಯಕ ಮಹಿಳೆಗೆ ಶೌಚಾಲಯ ಮತ್ತು ಸ್ನಾನ ಗ್ರಹ ನಿರ್ಮಾಣ ಹಸ್ತಾಂತರ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ತಾಲೂಕು ವತಿಯಿಂದ ಪೂಜ್ಯ ಡಾ.ಡಿ.ವಿರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ ದಂತೆ. ಮಾತೃಶ್ರೀ ಹೇಮಾವತಿ ಅಮ್ಮನವರ ಪ್ರೀತಿಯ ಕನಸಿನ ಕಾರ್ಯಕ್ರಮವಾದ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಐರ್ವನಾಡು ವಲಯದಲ್ಲಿ ಐರ್ವನಾಡಲ್ಲಿ ಈಗಾಗಲೇ ಪ್ರತಿ ತಿಂಗಳು ಮಾಸಾಶನವನ್ನು ಪಡೆಯುತ್ತಿರುವ ವಾತ್ಸಲ್ಯ ಸದಸ್ಯರಾದ ಲಲಿತಾ ಇವರಿಗೆ ಶೌಚಾಲಯ ಮತ್ತು ಸ್ನಾನ ಗ್ರಹವನ್ನು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷರಾದ ಎಸ್.ಎನ್ ಮನ್ಮಥ ಹಸ್ತಾಂತರ ಮಾಡಿದರು. ಬಳಿಕ ಮಾತನಾಡಿದ ಅವರು

ಐವರ್ನಾಡು : ಅಸಾಯಕ ಮಹಿಳೆಗೆ ಶೌಚಾಲಯ ಮತ್ತು ಸ್ನಾನ ಗ್ರಹ ನಿರ್ಮಾಣ ಹಸ್ತಾಂತರ ಕಾರ್ಯಕ್ರಮ Read More »

ನಾಳೆ (ಮಾ.30) ಅಡ್ಯಡ್ಕ,ಪೆತ್ತಾಜೆ,ಶೆಟ್ಯಡ್ಕ,ಮೂಡಣಕಜೆ,ಮೊಟ್ಟೆಂಗಾರ್,ಚೂರ್ನಾಡು, ಕಲ್ಲಗದ್ದೆ ಭಾಗದಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಕಾಲಾವಧಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಹಂಚಿಕೆ ಮತ್ತು ಹಸಿರುವಾಣಿ ಸಂಗ್ರಹಣೆಯ ಪೂರ್ವಭಾವಿ ಸಭೆ

ಸುಳ್ಯ ಸೀಮಾಧಿಪತಿ ತೊಡಿಕಾನ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಕಾಲಾವಧಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಹಂಚಿಕೆ ಮತ್ತು ಹಸಿರುವಾಣಿ ಸಂಗ್ರಹಣೆ ಕುರಿತಾದ ಸಭೆ ನಾಳೆ ಮಾ.30ರಂದು ತೊಡಿಕಾನ ಗ್ರಾಮದಲ್ಲಿ ನಡೆಯಲಿದ್ದು ಗ್ರಾಮ /ಬೈಲಿಗೆ ಸಂಬಂಧಪಟ್ಟ ಮನೆಯವರು ಕೆಳಗೆ ತಿಳಿಸಿದ ಸ್ಥಳದಲ್ಲಿ ಸೇರಬೇಕಾಗಿ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವ ಯು.ಕೆ,ಮತ್ತು ಜಾತ್ರೋತ್ಸವ ವಿನಂತಿ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ ವಿನಂತಿಸಿಕೊಂಡಿದ್ದಾರೆ.1) ಪೆತ್ತಾಜೆ- ಶೆಟ್ಯಡ್ಕ – ಮೂಡನಕಜೆಸ್ಥಳ: ಭಾನುಪ್ರಕಾಶ್ ಮೂಡನಕಜೆ ರವರ ಮನೆಸಮಯ :ಸಂಜೆ 6:00ಕ್ಕೆ 2)ಮೊಟ್ಟೆoಗಾರ್ – ಚೂರ್ನಾಡ್- ಕಲ್ಲಗದ್ದೆಸ್ಥಳ

ನಾಳೆ (ಮಾ.30) ಅಡ್ಯಡ್ಕ,ಪೆತ್ತಾಜೆ,ಶೆಟ್ಯಡ್ಕ,ಮೂಡಣಕಜೆ,ಮೊಟ್ಟೆಂಗಾರ್,ಚೂರ್ನಾಡು, ಕಲ್ಲಗದ್ದೆ ಭಾಗದಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಕಾಲಾವಧಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಹಂಚಿಕೆ ಮತ್ತು ಹಸಿರುವಾಣಿ ಸಂಗ್ರಹಣೆಯ ಪೂರ್ವಭಾವಿ ಸಭೆ Read More »

ಕಲ್ಲುಗುಂಡಿ : ಶ್ರದ್ಧಾ ಭಕ್ತಿಯಿಂದ ನಡೆದ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ

ಇತಿಹಾಸ ಪ್ರಸಿದ್ಧ ಕಲ್ಲುಗುಂಡಿ ಶ್ರೀ ಮಹಾವಿಷ್ಣು ಮೂರ್ತಿ ದೈವದ ಒತ್ತೆಕೋಲ ಹಾಗೂ ಪಂಜುರ್ಲಿ, ಕಲ್ಲುರ್ಟಿ ಹಾಗೂ ಗುಳಿಗ ದೈವಗಳಿಗೆ ಸಮ್ಮಾನ ಕಾರ್ಯಕ್ರಮವು ಮಾರ್ಚ್ 28,29,ರಂದು ಶ್ರದ್ಧಾ ಭಕ್ತಿಯಿಂದ ನಡೆಯಿತು.ಮಾ 21 ರಂದು ಮಹೂರ್ತದ ಗೊನೆ ಕಡಿಯಲಾಯಿತು‌‌27 ರಂದು ಬೆಳಿಗ್ಗೆ 5:30 ಕ್ಕೆ ದೈವಸ್ಥಾನದಲ್ಲಿ ಗಣಹೋಮ ನಡೆಯಿತು.ಮಾ 28 ರಂದು ರಾತ್ರಿ 7 ಗಂಟೆಗೆ ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನದಿಂದ ಭಂಡಾರ ಹೊರಟಿತು.ರಾತ್ರಿ 8:30 ಕ್ಕೆ ಮೇಲೇರಿಗೆ ಅಗ್ನಿ ಸ್ಪರ್ಶ, ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.ಬಳಿಕ ರಾತ್ರಿ 12

ಕಲ್ಲುಗುಂಡಿ : ಶ್ರದ್ಧಾ ಭಕ್ತಿಯಿಂದ ನಡೆದ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ Read More »

ಅರಂತೋಡು :ಸತ್ಯ ಜ್ಯಾನವು ಉತ್ತಮ ನಾಳೆ ಗಾಗಿ ಮಿಹ್ರಜಾನುಲ್ ಬಿದಾಯಿ ಮದರಸ ಪ್ರಾರಂಭೋತ್ಸವ

ಸತ್ಯ ಜ್ಯಾನವು ಉತ್ತಮ ನಾಳೆಗಾಗಿ ಎಂಬ ವೇದ ವಾಕ್ಯದೊಂದಿಗೆ ಮಿಹ್ರಜಾನುಲ್ ಬಿದಾಯಿ ಮದರಸ ಪ್ರಾರಂಭೋತ್ಸವು ಮಾ 29ರಂದು ಅರಂತೋಡು ನುಸ್ರತುಲ್ ಇಸ್ಲಾಂ ಮದರಸ ದಲ್ಲಿ ನಡೆಯಿತು, ಖತಿಬರಾದ ಬಹು, ಆಸೀಫ್ ಅಝ್ ಹರಿ ದುವಾ ನೆರವೇರಿಸಿ ಮಾತನಾಡಿ ದೇಶ ವಿದೇಶ ದಲ್ಲಿ ಸಮಸ್ತದ ಮದ್ರಸ ಗಳು ಇಂದು ಪ್ರಾರಂಭಗೊಳ್ಳಲಿದೆ, ಮದ್ರಸ ದಲ್ಲಿ ಪ್ರಥಮವಾಗಿ ವಿದ್ಯಾರ್ಥಿಗಳಿಗೆ ಅದಬನ್ನು (ಶಿಸ್ತು )ಕಲಿಸಲಾಗುತ್ತದೆ ಮತ್ತು ಆದುನಿಕ ಶಿಕ್ಷಣಕ್ಕೆ ತಕ್ಕಂತೆ ಧಾರ್ಮಿಕ ಶಿಕ್ಷಣವನ್ನು ನೀಡಲಾಗುತ್ತದೆ ಎಂದರು, ಅಧ್ಯಕ್ಷತೆ ಯನ್ನು ಜಮಾ ಅತ್ ಅಧ್ಯಕ್ಷ

ಅರಂತೋಡು :ಸತ್ಯ ಜ್ಯಾನವು ಉತ್ತಮ ನಾಳೆ ಗಾಗಿ ಮಿಹ್ರಜಾನುಲ್ ಬಿದಾಯಿ ಮದರಸ ಪ್ರಾರಂಭೋತ್ಸವ Read More »

error: Content is protected !!
Scroll to Top