ಪ್ರಚಲಿತ

ಡಿಜಿ-ಪೇ ಕಾರ್ಯಕ್ರಮ ಗ್ರಾಮೀಣ ಭಾಗದ ಜನರಿಗೆ ವರದಾನ – ಎ ಬಾಬು ನಾಯ್ಕ

ಗ್ರಾಮೀಣ ಭಾಗದ ಜನರು ತಮ್ಮ ಖಾತೆಯಿಂದ ಹಣವನ್ನು ATM ಮೂಲಕ ಪಡೆಯಲು ದೂರದ ಪ್ರದೇಶಗಳಿಗೆ ತೆರಳ ಬೇಕಾಗಿದ್ದು, ಇದರ ಬದಲಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ C.S.C. ಕೇಂದ್ರಗಳಲ್ಲಿ ಡಿಜಿ-ಪೇ ಮೂಲಕ ತಮ್ಮ ಹಳ್ಳಿಯಲ್ಲಿಯೇ ಖಾತೆಯಿಂದ ಹಣ ಹಿಂಪಡೆಯುವ ಅವಕಾಶವಿದ್ದು, ಇದೊಂದು ಗ್ರಾಮೀಣ ಭಾಗದ ಜನರಿಗೆ ವರದಾನವಾಗಲಿದೆ ಎಂದು ಜಿಲ್ಲಾ ನಿರ್ದೇಶಕರಾದ ಶ್ರೀ ಎ ಬಾಬು ನಾಯ್ಕ ರವರು ಅಭಿಪ್ರಾಯಪಟ್ಟರು.

ಡಿಜಿ-ಪೇ ಕಾರ್ಯಕ್ರಮ ಗ್ರಾಮೀಣ ಭಾಗದ ಜನರಿಗೆ ವರದಾನ – ಎ ಬಾಬು ನಾಯ್ಕ Read More »

ಜುಲೈ 6 ; ಸುಳ್ಯದಲ್ಲಿ ಆರೋಗ್ಯ ಸಚಿವರಾದ ಯು. ಟಿ ಖಾದರ್ ರವರಿಗೆ ಸಾರ್ವಜನಿಕ ಸನ್ಮಾನ

ಕರ್ನಾಟಕ ಸರ್ಕಾರದ ಅರೋಗ್ಯ, ಕುಟುಂಬ ಕಲ್ಯಾಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿ ಸುಳ್ಯಕ್ಕೆ ಪ್ರಪ್ರಥಮ ಬಾರಿಗೆ ಆಗಮಿಸುತ್ತಿರುವ ಯು. ಟಿ. ಖಾದರ್ ಫರೀದ್ ರವರನ್ನು ಸಾರ್ವಜನಿಕ ಅಭಿನಂದನಾ ಸಮಿತಿ ಯಿಂದ ಆಯೋಜಿಸಲಾದ ಸಾರ್ವಜನಿಕ ಅಭಿನಂದನಾ ಸಮಾರಂಭ ದ ಆಮಂತ್ರಣ ಪತ್ರಿಕೆಯನ್ನು ಸುಳ್ಯ ತಹಶೀಲ್ದಾರ್ ಕು| ಮಂಜುಳಾ ಬಿಡುಗಡೆ ಗೊಳಿಸಿದರುಸುಳ್ಯ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ, ಎಲ್ಲಾ ಧರ್ಮಗಳ ಧಾರ್ಮಿಕ ನಾಯಕರುಗಳ, ವಿವಿಧ ಇಲಾಖೆಗಳ ಅಧಿಕಾರಿಗಳ, ವಿವಿಧ ಸಂಘ ಸಂಸ್ಥೆಗಳ ಪಾಲ್ಗೊಳ್ಳುವಿಕೆ ಯೊಂದಿಗೆ ನಡೆಯುವ ಈ ಸಮಾರಂಭ ಯಶಸ್ವಿ ಯಾಗಲಿ

ಜುಲೈ 6 ; ಸುಳ್ಯದಲ್ಲಿ ಆರೋಗ್ಯ ಸಚಿವರಾದ ಯು. ಟಿ ಖಾದರ್ ರವರಿಗೆ ಸಾರ್ವಜನಿಕ ಸನ್ಮಾನ Read More »

ಜುಲೈ 2; ಸುಳ್ಯ ರೋಟರಿ ಸಿಟಿಯ ಪದ ಪ್ರದಾನ ಸಮಾರಂಭ

2026-27ನೇ ಸಾಲಿನ ರೋಟರಿ ಕ್ಲಬ್‌‌ ಸುಳ್ಯ ಸಿಟಿಯ ಪದಗ್ರಹಣ ಸಮಾರಂಭವು ಜುಲೈ.07ರಂದು ಸುಳ್ಯದ ರೋಟರಿ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ನೂತನ ಅಧ್ಯಕ್ಷ ರಾಗೇಶ್ ರಾಘವ್‌ ತಿಳಿಸಿದರು.ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಜು.02ರಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.2026-2026-27ನೇ ಸಾಲಿನ ಅಧ್ಯಕ್ಷರಾಗಿ ಪಿ.ಎಚ್.ಎಫ್ ರಾಗೇಶ್ ರಾಘವ್‌, ಕಾರ್ಯದರ್ಶಿಯಾಗಿ ಪುರಂದರ ರೈ.ಪಿ, ಖಜಾಂಜಿಯಾಗಿ ನವೀನ್ ಚಂದ್ರ, ಕ್ಲಬ್ ಲರ್ನಿಂಗ್ ಫೆಸಿಲಿಟೇಟರ್ ಆಗಿ ಪಿ.ಎಚ್.ಎಫ್ ಪ್ರೀತಮ್ ಡಿ.ಕೆ, ಪ್ರಧಾನ ಕಾರ್ಯದರ್ಶಿಯಾಗಿ ಮಧು ಕಿರಣ್ ಕೆ.ಎನ್, ಸರ್ಜೆಂಟ್-ಅಟ್-ಆರ್ಮ್ಸ್ ಆಗಿ ಪಿ.ಎಚ್‌.ಎಫ್ ಮುರಳೀಧರ್ ರೈ,

ಜುಲೈ 2; ಸುಳ್ಯ ರೋಟರಿ ಸಿಟಿಯ ಪದ ಪ್ರದಾನ ಸಮಾರಂಭ Read More »

ಅರಂತೋಡಿನಲ್ಲಿ ನಾಳೆ ಉಚಿತ ಕಣ್ಣಿನ ಪರೀಕ್ಷೆ

ಜೂ.3ರಂದು ಬೆಳಗ್ಗೆ 10ರಿಂದ 12 pm ವರೆಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಅರಂತೋಡು ನಲ್ಲಿ ಕೆವಿಜಿ ಆಸ್ಪತ್ರೆಯ ವೈದ್ಯರಿಂದ ಕಣ್ಣಿನ ತಪಾಸಣೆ ನಡೆಸಲಾಗುತ್ತದೆ. .ತಪಾಸಣೆಯ ನಂತರ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಯ ಅವಶ್ಯಕತೆ ಇರುವುದಾದರೆ ಉಚಿತವಾಗಿ ನೀಡಲಾಗುತ್ತದೆ…….ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ತಿಳಿಸಲಾಗಿದೆ.

ಅರಂತೋಡಿನಲ್ಲಿ ನಾಳೆ ಉಚಿತ ಕಣ್ಣಿನ ಪರೀಕ್ಷೆ Read More »

ಪೆರುವಾಜೆ: ಡಿಜಿ ಪೇ ಸೇವೆ ಉದ್ಘಾಟನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ ಸುಳ್ಯಬೆಳ್ಳಾರೆ ವಲಯದ ಪೆರುವಾಜೆ ಕಾರ್ಯಕ್ಷೇತ್ರದಲ್ಲಿ ಈ ದಿನ ಪ್ರಥಮವಾಗಿ ಪೆರುವಾಜೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಡಿಜಿ ಪೇ ಕಾರ್ಯಕ್ರಮವನ್ನು ಜಲದುರ್ಗದೇವಿ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಸುನಿಲ್ ರೈ ರವರು ಉದ್ಘಾಟನೆಯನ್ನು ಮಾಡಿದರು.ಇವರು ಯೋಜನೆಯ ಕಾರ್ಯಕ್ರಮದ ಬಗ್ಗೆ, ಡಿಜಿ ಪೇ ಸೌಲಭ್ಯ ಪಡೆದುಕೊಳ್ಳುವಂತೆ ಮತ್ತು ಸ್ವ-ಉದ್ಯೋಗ ಮಾಡಿ ಸ್ವಂತ ಕೆಲಸ ಮಾಡುವಂತೆ ತಿಳಿಸಿದರು,ಈ ಸಂದರ್ಭದಲ್ಲಿ ಸಿ.ಎಸ್. ಸಿ ನೋಡೆಲ್ ಅಧಿಕಾರಿಯಾದ ಹೇಮಂತ್ ಸರ್ ರವರು ಡಿಜಿ

ಪೆರುವಾಜೆ: ಡಿಜಿ ಪೇ ಸೇವೆ ಉದ್ಘಾಟನೆ Read More »

ಬೆಳ್ಳಾರೆ : ಡಿ.ಜಿ ಪೇ ಉದ್ಘಾಟನೆ

ಸುಳ್ಯ ತಾಲೂಕಿನ ಬೆಳ್ಳಾರೆ CSC ಕೇಂದ್ರದಲ್ಲಿ Digi Pay ಕಾರ್ಯ ಕ್ರಮವನ್ನು ಡಾ. ಜೀವನ್ ಪ್ರಕಾಶ್ ಕೆ ಅವರು ಜು.2ರಂದು ದೀಪ ಬೆಳಗುವ ಮೂಲಕ ಉದ್ಘಾಟನೆ ಮಾಡಿದರುಇವರು ಡಿ ಜಿ ಪೇ ಸೇವೆಯು ನಮ್ಮ ಗ್ರಾಮೀಣ ಪ್ರದೇಶದ ಜನರಿಗೆ ಬಹಳ ಉಪಯುಕ್ತವಾದ ಕಾರ್ಯಕ್ರಮವಾಗಿದೆ ,ಇದರಿಂದ ಬ್ಯಾಂಕಿಗೆ ಹೋಗುವ ಸಮಯ ಮತ್ತು ಬ್ಯಾಂಕ್ ನಲ್ಲಿ ಕಾಯುವ ವೇಳೆಯಲ್ಲಿ, ಅತೀ ಸುಲಭವಾಗಿ ಫಲಾನುಭವಿಯ ಖಾತೆಯಿಂದ ಹಣವನ್ನು ತೆಗೆಯಬಹುದು ಈ ಸೇವೆಯ ಉಪಯೋಗವನ್ನು ನಾವೆಲ್ಲರೂ ಪಡೆದುಕೊಳ್ಳಬೇಕು ಎಂಬ ಆಸೆಯ ನುಡಿಗಳನ್ನು ಆಡಿದರು.

ಬೆಳ್ಳಾರೆ : ಡಿ.ಜಿ ಪೇ ಉದ್ಘಾಟನೆ Read More »

ಅಮರ ಮುಡ್ನೂರು : ಡಿಜಿ ಪೇ ಕಾರ್ಯಕ್ರಮಕ್ಕೆ ಚಾಲನೆ

ಶ್ರೀ. ಕ್ಷೇ. ಧ. ಗ್ರಾ. ಯೋಜನೆ ಜಾಲ್ಸೂರು ವಲಯದ ಅಮರ ಮುಡ್ನೂರು Csc ಕೇಂದ್ರದಲ್ಲಿ ಡಿಜಿ ಪೇ ಕಾರ್ಯಕ್ರಮಕ್ಕೆ ಮಹಾ ವಿಷ್ಣು ಭಜನೆ ಮಂಡಳಿ ಗೌರವ ಸಲಹೆಗಾರರಾದ & csc ಕೇಂದ್ರ ದ ಕಟ್ಟಡ ಮಾಲಿಕರಾದ ಕೃಷ್ಣಕುಮಾರ್ ಭಟ್ ಪೈಲೂರು ಅವರು ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು*.*ತಾಲ್ಲೂಕು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಉಪಾಧ್ಯಕ್ಷರಾದ ನಾರಾಯಣ ಕೊಡ್ತುಗುಳಿ, ಕುಕ್ಕುಜಡ್ಕ ಒಕ್ಕೂಟದ ಅಧ್ಯಕ್ಷರು ಹರಿಶ್ಚಂದ್ರ ಕಟ್ಟಾ,ಪೈಲಾರು ನೂತನ ಒಕ್ಕೂಟದ ಅಧ್ಯಕ್ಷರಾದ ಯಾದವೇಂದ್ರ ಕಡಪಳ, ಕುಕು ಜಡ್ಕನೂತನ ಒಕ್ಕೂಟ

ಅಮರ ಮುಡ್ನೂರು : ಡಿಜಿ ಪೇ ಕಾರ್ಯಕ್ರಮಕ್ಕೆ ಚಾಲನೆ Read More »

ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಧಾರಾವಾಹಿ, ಸಿನಿಮಾ ಚಿತ್ರೀಕರಣ ನಿಷೇಧ

ವಿದ್ಯಾರ್ಥಿಗಳ ಸುರಕ್ಷತೆ, ಗೌಪ್ಯತೆ, ಶೈಕ್ಷಣಿಕ ಅಡಚಣೆ ಮತ್ತು ಮಾನಸಿಕ ಆರೋಗ್ಯದ ಹಿತದೃಷ್ಟಿಯಿಂದ, ಸರ್ಕಾರಿ ಶಾಲೆಗಳ ಆವರಣದಲ್ಲಿ ಸಿನಿಮಾ, ಕಿರುಚಿತ್ರ, ಧಾರಾವಾಹಿ ಸೇರಿದಂತೆ ಯಾವುದೇ ರೀತಿಯ ಚಿತ್ರೀಕರಣವನ್ನು ಶಿಕ್ಷಣ ಇಲಾಖೆ ಸಂಪೂರ್ಣವಾಗಿ ನಿಷೇಧಿಸಿದೆ. ಈ ಕುರಿತು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಅಧಿಕೃತ ಸುತ್ತೋಲೆ ಹೊರಡಿಸಿದ್ದು, ಪೋಷಕರ ಆಕ್ಷೇಪವನ್ನೂ ಪರಿಗಣಿಸಲಾಗಿದೆ. ಈ ನಿಯಮವನ್ನು ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಕಡ್ಡಾಯವಾಗಿ ಪಾಲಿಸುವಂತೆ ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಧಾರಾವಾಹಿ, ಸಿನಿಮಾ ಚಿತ್ರೀಕರಣ ನಿಷೇಧ Read More »

ಗುತ್ತಿಗಾರು ಪ್ರೌಢಶಾಲೆಯಲ್ಲಿ ಕ್ರಾಫ್ಟ್ ವರ್ಕ್ ತರಬೇತಿ ಕಾರ್ಯಕ್ರಮ

ಗುತ್ತಿಗಾರು ಪ್ರೌಢಶಾಲೆಯಲ್ಲಿ ಕ್ರಾಫ್ಟ್ ವರ್ಕ್ ತರಬೇತಿ ಕಾರ್ಯಕ್ರಮವನ್ನು ಪ್ರದೀಪ್ ಕ್ರಾಫ್ಟ್ ವರ್ಕ್ ಸಂಸ್ಥೆಯ ಮುಖ್ಯಸ್ಥರಾದ ಪ್ರದೀಪ್ ಕರಿಕೆ ಜು.1ರಂದು ನಡೆಸಿಕೊಟ್ಟರು. ತೆಂಗಿನ ಗೆರಟೆಯಲ್ಲಿ ವಿವಿಧ ಗೃಹ ಉಪಯೋಗಿ ಮತ್ತು ಅಲಂಕಾರಿಕ ವಸ್ತುಗಳನ್ನು ತಯಾರಿಸುವ ವಿಧಾನವನ್ನು ಪ್ರಾತ್ಯಕ್ಷಿತೆ ಮೂಲಕ ತೊರಿಸಲಾಯಿತು. ಸ್ವದೇಶಿ ನಿರ್ಮಿತ ವಸ್ತುವಿನ ಬಳಕೆಯಿಂದ ಪರಿಸರ ಸಂರಕ್ಷಣೆಯ ಜೊತೆಗೆ ದೇಹದ ಆರೋಗ್ಯಕ್ಕೆ ಮತ್ತು ದೇಶದ ಆರ್ಥಿಕತೆಗೆ ಅದ್ಭುತ ಶಕ್ತಿಯನ್ನು ನೀಡಬಹುದು ಎಂಬುದಾಗಿ ಅವರು ಅಭಿಪ್ರಾಯಪಟ್ಟರು. ಈ ಕಾರ್ಯಕ್ರಮದಲ್ಲಿ ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು ಪ್ರದೀಪ್ ಕರಿಕೆ ಅವರನ್ನು

ಗುತ್ತಿಗಾರು ಪ್ರೌಢಶಾಲೆಯಲ್ಲಿ ಕ್ರಾಫ್ಟ್ ವರ್ಕ್ ತರಬೇತಿ ಕಾರ್ಯಕ್ರಮ Read More »

ಸುಳ್ಯ ಪಿ.ಎಲ್.ಡಿ ಬ್ಯಾಂಕ್ ನಿಂದ ಜಾಲ್ಸೂರು ಪಯಸ್ವಿನಿ ಪ್ರೌಢ ಶಾಲೆಯಲ್ಲಿ “ಸಹಕಾರ ವಾರ” ಆಚರಣೆ- ಶಾಲಾ ಮಕ್ಕಳಿಗೆ ಸಿಹಿ ತಿಂಡಿ ವಿತರಣೆ

ಸುಳ್ಯ ಪಿ ಎಲ್ ಡಿ ಬ್ಯಾಂಕ್ ವತಿಯಿಂದ ಕೇಂದ್ರ ಸರ್ಕಾರದ ” ಸಹಕಾರ ವಾರ” ಕಾರ್ಯಕ್ರಮದ ಅಂಗವಾಗಿ ಶಾಲಾ ಅವರಣದಲ್ಲಿ ನಾನಾ ಹಣ್ಣಿನ ಗಿಡಗಳನ್ನು ನೆಡಲಾಯಿತು.ಸುಳ್ಯ ಪಿ.ಎಲ್. ಡಿ ಬ್ಯಾಂಕಿನ ಅಧ್ಯಕ್ಷ ಜಯರಾಮ ರೈ ಜಾಲ್ಸೂರು ಗಿಡ ನೆಟ್ಟು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಬ್ಯಾಂಕಿನ ಜಿಲ್ಲಾ ವ್ಯವಸ್ಥಾಪಕ ದಿಲೀಪ್ ಹೆಚ್. ಹೆಚ್, ಸುಳ್ಯ ವ್ಯವಸ್ಥಾಪಕಿ ಉಷಾ ಸುವರ್ಣ, ಸಿಬ್ಬಂದಿಗಳಾದ ದಾಮೋದರ, ಅಶ್ವಿತ್, ಶಾಲಾ ಮುಖ್ಯಶಿಕ್ಷಕಿ ಜಯ ಲತಾ ಕೆ.ಆರ್., ಶಿಕ್ಷಕ ವೃಂದ, ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು. ಬಳಿಕ ವಿದ್ಯಾರ್ಥಿಗಳಿಗೆ ಬ್ಯಾಂಕಿನ

ಸುಳ್ಯ ಪಿ.ಎಲ್.ಡಿ ಬ್ಯಾಂಕ್ ನಿಂದ ಜಾಲ್ಸೂರು ಪಯಸ್ವಿನಿ ಪ್ರೌಢ ಶಾಲೆಯಲ್ಲಿ “ಸಹಕಾರ ವಾರ” ಆಚರಣೆ- ಶಾಲಾ ಮಕ್ಕಳಿಗೆ ಸಿಹಿ ತಿಂಡಿ ವಿತರಣೆ Read More »

error: Content is protected !!
Scroll to Top