Uncategorized

ಸಂಪಾಜೆ ವಲಯ ಜನಜಾಗೃತಿ ಸಮಿತಿ ನೂತನ ವಲಯ ಅಧ್ಯಕ್ಷ ರಾಗಿ ಸತೀಶ್ ರಾವ್ ಆಯ್ಕೆ

ಸಂಪಾಜೆ ವಲಯ ಜನಜಾಗೃತಿ ಸಮಿತಿ ನೂತನ ವಲಯ ಅಧ್ಯಕ್ಷ ರಾಗಿ ಮರ್ಕಂಜ ಗ್ರಾಮದ ಸತೀಶ್ ರಾವ್ ದಾಸರಬೈಲ್ ಆಯ್ಕೆಗೊಂಡಿದ್ದಾರೆ.

ಸಂಪಾಜೆ ವಲಯ ಜನಜಾಗೃತಿ ಸಮಿತಿ ನೂತನ ವಲಯ ಅಧ್ಯಕ್ಷ ರಾಗಿ ಸತೀಶ್ ರಾವ್ ಆಯ್ಕೆ Read More »

ಕೊಡಿಯಾಲಬೈಲು : ಮೇ.23ಕ್ಕೆ ಗೌಡ ಸಮುದಾಯ ಭವನದಲ್ಲಿ ವಧು ವರರ ನವೀಕೃತ ಗೃಹ ಉದ್ಘಾಟನೆ

ಸುಳ್ಯದ ಗೌಡರ ಯುವ ಸೇವಾ ಸಂಘ, ಗೌಡ ಸಮುದಾಯ ಭವನ ನಿರ್ವಹಣಾ ಸಮಿತಿ ಮತ್ತು ಮಹಿಳಾ ಘಟಕ, ತರುಣ ಘಟಕ, ನಗರ ಹಾಗೂ ಗ್ರಾಮ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಲಕ್ಷ್ಮೀ ಸಹಿತ ಸತ್ಯನಾರಾಯಣ ದೇವರ ಪೂಜೆ, ಡಾ| ರೇಣುಕಾಪ್ರಸಾದ್‌ ಕೆ.ವಿ. ಮತ್ತು ಮನೆಯವರು ಕೊಡುಗೆ ನೀಡಿದ ವಧು – ವರರ ನವೀಕೃತ ಗೃಹದ ಶುಭಾರಂಭ, ಮೇ ೨೩ರಂದು ಸುಳ್ಯದ ಕೊಡಿಯಾಲಬೈಲಿನಲ್ಲಿರುವ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್.

ಕೊಡಿಯಾಲಬೈಲು : ಮೇ.23ಕ್ಕೆ ಗೌಡ ಸಮುದಾಯ ಭವನದಲ್ಲಿ ವಧು ವರರ ನವೀಕೃತ ಗೃಹ ಉದ್ಘಾಟನೆ Read More »

ಪೆರಾಜೆ : ಕಾರು ಪಲ್ಟಿ ಹೊಡೆದು ಮೂವರಿಗೆ ಗಾಯ

ಅರಂತೋಡು : ಪೆರಾಜೆ ಸಮೀಪ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ಮೂವರು ಗಾಯಗೊಂಡ ಘಟನೆ ಮೇ.16ರಂದು ವರದಿಯಾಗಿದೆ.ಕಾರು ಸುಳ್ಯ ಕಡೆಯಿಂದ ಮಡಿಕೇರಿ ಕಡೆ ತೆರಳುತ್ತಿತ್ತು.ಕಾರಿನಲ್ಲಿದ್ದ ಮೂವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.ಕಾರಿನ ಟಯರ್ ಒಡೆದು ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಪೆರಾಜೆ : ಕಾರು ಪಲ್ಟಿ ಹೊಡೆದು ಮೂವರಿಗೆ ಗಾಯ Read More »

ಪೆರಾಜೆ : ಸ್ಕೂಟಿ ಕಾರು ಅಪಘಾದಲ್ಲಿ ಸ್ಕೂಟಿ ಸವಾರ ಗಂಭೀರ

ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಪೆರಾಜೆ ಸಮೀಪ ಕಾರು ಮತ್ತು ಸ್ಕೂಟಿ ನಡುವೆ ಅಪಘಾತವಾಗಿ ಸ್ಕೂಟಿ ಸವಾರನಿಗೆ ಗಂಭೀರ ಗಾಯವಾದ ಘಟನೆ ಮೇ 15ರಂದು ವರದಿಯಾಗಿದೆ.ಗಾಯಗೊಂಡ ವ್ಯಕ್ತಿಯ ಸ್ಥಳೀಯ ಬಿಳಿಯಾರು ನಿವಾಸಿಯಾಗಿದ್ದು ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ತಂದು ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆಯೊಯ್ಯಲಾಗಿದೆ ಎಂದು ತಿಳಿದುಬಂದಿದೆ.ಮಂಡ್ಯ ಮೂಲದವರ ಕಾರು ಮಡಿಕೇರಿ ಕಡೆಯಿಂದ ಸುಳ್ಯದತ್ತ ಬರುತ್ತಿದ್ದ ಸಂದರ್ಭ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಪೆರಾಜೆ : ಸ್ಕೂಟಿ ಕಾರು ಅಪಘಾದಲ್ಲಿ ಸ್ಕೂಟಿ ಸವಾರ ಗಂಭೀರ Read More »

ಮೇ.17ಕ್ಕೆ ಅರಮನೆಗಯ ನೂತನ ಸೇತುವೆ ಉದ್ಘಾಟನೆ

ಬಹು ವರ್ಷಗಳ ಬೇಡಿಕೆಯಾದ ಅರಂತೋಡು ಸಮೀಪದಅರಮನೆಗಯ ಬಲ್ನಾಡ್ ಹೊಳೆಗೆ ಶಾಸಕರ ಅನುಮೋದನೆಯಿಂದ ರಾಜ್ಯ ಸರ್ಕಾರದ ವಿಪತ್ತು ಸಂಚಯನ ನಿಧಿಯಿಂದ (SDMF) ಅನುದಾನದಿಂದ ನಿರ್ಮಾಣವಾದ ನೂತನ ಸೇತುವೆಯ ಉದ್ಘಾಟನಾ ಕಾರ್ಯಕ್ರಮ ಮೇ.17ರಂದು ನಡೆಯಲಿದೆ ಎಂದು ಅರಂತೋಡು ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಕೇಶವ ಅಡ್ತಲೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಸುಳ್ಯ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದಕು. ಭಾಗೀರಥಿ ಮುರುಳ್ಯ ಅವರು ಸೇತುವೆಯನ್ನು ಉದ್ಘಾಟಿಸಲಿದ್ದು ಈ ಕಾರ್ಯಕ್ರಮದಲ್ಲಿ ವಿವಿಧ ಪಕ್ಷ ದ ಪ್ರಮುಖರು, ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಮೇ.17ಕ್ಕೆ ಅರಮನೆಗಯ ನೂತನ ಸೇತುವೆ ಉದ್ಘಾಟನೆ Read More »

ಗೌಡರ ಯುವ ಸೇವಾ ಸಂಘದ ಮಾಧ್ಯಮ ಸಂಯೋಜಕರಾಗಿ ಸುಪ್ರೀತ್ ಮೋಂಟಡ್ಕ ಆಯ್ಕೆ

ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘದ ಮಾಧ್ಯಮ ಸಂಯೋಜಕರಾಗಿ ಸುಪ್ರೀತ್ ಮೋoಟಡ್ಕರವರನ್ನು ಆಯ್ಕೆ‌ಮಾಡಲಾಗಿದೆ. ಮೇ 14ರಂದು ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್. ಗಂಗಾಧರ್ ಇವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಮಾಧ್ಯಮ ಸಂಯೋಜಕರ ಆಯ್ಕೆ ಮಾಡಲಾಗಿದೆ.ಸುಪ್ರೀತ್ ಮೋಂಟಡ್ಕ ಅವರು ಚಿತ್ರರಂಗ,ರಾಜಕೀಯ ಕ್ಷೇತ್ರ ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಸಾಮಾಜಿಕ ಚಟುವಟಿಕೆಗಳಲ್ಲಿಯೂ ಗುರುತಿಸಿಕೊಂಡಿದ್ದಾರೆ.

ಗೌಡರ ಯುವ ಸೇವಾ ಸಂಘದ ಮಾಧ್ಯಮ ಸಂಯೋಜಕರಾಗಿ ಸುಪ್ರೀತ್ ಮೋಂಟಡ್ಕ ಆಯ್ಕೆ Read More »

ಮನುಷ್ಯರು ಪರೋಪಕಾರಿಯಾಗಿ ಬಾಳಬೇಕು : ಶೃಂಗೇರಿ ಜಗದ್ಗುರುಗಳಾದ ವಿಧುಶೇಖರ ಭಾರತೀ ಸ್ವಾಮೀಜಿಗಳು

ಮನುಷ್ಯರು ಪರೋಪಕಾರಿಯಾಗಿ ಬಾಳಬೇಕು,ಹಿಂದು ಧರ್ಮ ಅತ್ಯಂತ ಶ್ರೇಷ್ಠ ಅದನ್ನು ಆಚರಣೆ ಮಾಡಿ ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದುಶೃಂಗೇರಿ ಜಗದ್ಗುರುಗಳಾದ ವಿಧುಶೇಖರ ಭಾರತೀ ಸ್ವಾಮೀಜಿಗಳು ಹೇಳಿದರು.ಅಜ್ಜಾವರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಸುಮಾರು74 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಶ್ರೀ ಮಾತಾ ಸಭಾಭವನದ ಲೋಕಾರ್ಪಣೆ ಸಮಾರಂಭದಲ್ಲಿ ದೀಪ ಪ್ರಜ್ವಲನೆ ಮಾಡಿ ಆಶೀರ್ವಾಚನ ಮಾಡಿದರು.ಈ ಸಂದರ್ಭದಲ್ಲಿ ಸಂಸದರಾದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ಕು.ಭಾಗೀರಥಿ ಮುರುಳ್ಯ, ಕರ್ನಾಟಕ ಬ್ಯಾಂಕ್ ಅಧ್ಯಕ್ಷ ಪ್ರದೀಪ್ ಕುಮಾ‌ರ್ ಪಂಜ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರ ಪುತ್ರಿ ಉಮಾದೇವಿ

ಮನುಷ್ಯರು ಪರೋಪಕಾರಿಯಾಗಿ ಬಾಳಬೇಕು : ಶೃಂಗೇರಿ ಜಗದ್ಗುರುಗಳಾದ ವಿಧುಶೇಖರ ಭಾರತೀ ಸ್ವಾಮೀಜಿಗಳು Read More »

ಮೇನಾಲ : ರಾಜಕೀಯ ಧುರೀಣ ನವೀನ್ ರೈ ಸ್ಮರಣಾರ್ಥ ಬಸ್ಸು ತಂಗುದಾಣ ಉದ್ಘಾಟನೆ

ರಾಜಕೀಯ ಧುರೀಣ, ಪಕ್ಷದ ಕಾರ್ಯಕರ್ತ,ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ದಿ.ನವೀನ್ ರೈ ಮೇನಾಲ ಅವರ ಸ್ಮರಣಾರ್ಥ ಅವರ ಅಭಿಮಾನಿಗಳು ನಿರ್ಮಿಸಿದ ಪ್ರಯಾಣಿಕರ ಬಸ್ಸು ತಂಗುದಾಣವನ್ನು ಮೇ 14ರಂದು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಸಂಸದರಾದ ಕ್ಯಾ ಬ್ರಿಜೇಶ್ ಚೌಟ, ಸುಳ್ಯ ಭಾಜಪಾ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಪಕ್ಷದ ಹಿರಿಯರು,ಪ್ರಮುಖ ಕಾರ್ಯಕರ್ತರು,ನವೀನ್ ರೈ ಅವರ ಕುಟುಂಬದ ಸದಸ್ಯರು, ಅಭಿಮಾನಿಗಳು ಉಪಸ್ಥಿತರಿದ್ದರು.

ಮೇನಾಲ : ರಾಜಕೀಯ ಧುರೀಣ ನವೀನ್ ರೈ ಸ್ಮರಣಾರ್ಥ ಬಸ್ಸು ತಂಗುದಾಣ ಉದ್ಘಾಟನೆ Read More »

ಸುಳ್ಯ ತಾಲೂಕಿನ ನೂತನ ಜನಜಾಗೃತಿ ವೇದಿಕೆಯ ಅಧ್ಯಕ್ಷರಾಗಿ ವೆಂಕಪ್ಪ ಗೌಡ ಆಯ್ಕೆ

ಸುಳ್ಯ ತಾಲೂಕಿನ ನೂತನ ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷರಾಗಿ ವಕೀಲರಾದ ವೆಂಕಪ್ಪ ಗೌಡ ಯವರು ಸರ್ವಾನುಮತ ದಿಂದ ಆಯ್ಕೆಯಾಗಿರುತ್ತಾರೆ.

ಸುಳ್ಯ ತಾಲೂಕಿನ ನೂತನ ಜನಜಾಗೃತಿ ವೇದಿಕೆಯ ಅಧ್ಯಕ್ಷರಾಗಿ ವೆಂಕಪ್ಪ ಗೌಡ ಆಯ್ಕೆ Read More »

ಮೇ 17ಕ್ಕೆ ಅರಮನೆಗಯ ಬಲ್ನಾಡ್ ಹೊಳೆಗೆ ನಿರ್ಮಾಣವಾದ ನೂತನ ಸೇತುವೆ ಶಾಸಕರಿಂದ ಉದ್ಘಾಟನೆ

ಬಹು ವರ್ಷಗಳ ಬೇಡಿಕೆಯಾದ ಅರಂತೋಡು ಸಮೀಪದಅರಮನೆಗಯ ಬಲ್ನಾಡ್ ಹೊಳೆಗೆ ಶಾಸಕರ ಅನುಮೋದನೆಯಿಂದ ರಾಜ್ಯ ಸರ್ಕಾರದ ವಿಪತ್ತು ಸಂಚಯನ ನಿಧಿಯಿಂದ (SDMF) ಅನುದಾನದಿಂದ ನಿರ್ಮಾಣವಾದ ನೂತನ ಸೇತುವೆಯ ಉದ್ಘಾಟನಾ ಕಾರ್ಯಕ್ರಮ ಮೇ.17ರಂದು ನಡೆಯಲಿದೆ. ಸುಳ್ಯ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಕು. ಭಾಗೀರಥಿ ಮುರುಳ್ಯ ಅವರು ಸೇತುವೆಯನ್ನು ಉದ್ಘಾಟಿಸಲಿದ್ದಾರೆ.ಈ ಕಾರ್ಯಕ್ರಮದಲ್ಲಿ ವಿವಿಧ ಪಕ್ಷ ದ ಪ್ರಮುಖರು, ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಮೇ 17ಕ್ಕೆ ಅರಮನೆಗಯ ಬಲ್ನಾಡ್ ಹೊಳೆಗೆ ನಿರ್ಮಾಣವಾದ ನೂತನ ಸೇತುವೆ ಶಾಸಕರಿಂದ ಉದ್ಘಾಟನೆ Read More »

error: Content is protected !!
Scroll to Top